Tuesday, 11 March 2025

ಯಾವುದು ಸಾಬ್ರ ಬಜೆಟ್?





ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟನ್ನು ಸಾಬ್ರ ಬಜೆಟ್, ಹಲಾಲ್ ಬಜೆಟ್, ಪಾಕಿಸ್ತಾನಿ ಬಜೆಟ್  ಎಂದು ಟೀಕಿಸುವ ಮೂಲಕ ಬಿಜೆಪಿ ಮತ್ತು ಅದರ ಬಾಲಬಡುಕ ಮಾಧ್ಯಮಗಳು ಮಾಡಿರುವ ಅತಿದೊಡ್ಡ ಉಪಕಾರ ಏ ನೆಂದರೆ, ಮಾತಾಡುವಾಗ ತಾವು ಮೆದುಳು ಉಪಯೋಗಿಸಲ್ಲ ಎಂಬುದನ್ನು ಸಾಬೀತುಪಡಿಸಿರುವುದು. ಈ ಬಾರಿಯ  ಬಜೆಟ್‌ನ ಒಟ್ಟು ಗಾತ್ರ ೪,೦೯,೫೪೯ ಕೋಟಿ ರೂಪಾಯಿ. ಇದರಲ್ಲಿ ಅಲ್ಪಸಂಖ್ಯಾತರಿಗೆ ಕೊಡಲಾದ ಮೊತ್ತ ಬರೇ ೪೫೦೦  ಕೋಟಿ ರೂಪಾಯಿ. ಇದು ಒಟ್ಟು ಬಜೆಟ್ ಮೊತ್ತಕ್ಕೆ ಹೋಲಿಸಿದರೆ ಬರೇ ಒಂದು ಶೇಕಡಾ ಮಾತ್ರ ಆಗುತ್ತದೆ. ಅದರಲ್ಲೂ  ಅಲ್ಪಸಂಖ್ಯಾತರೆಂದರೆ ಬರೇ ಮುಸ್ಲಿಮರು ಮಾತ್ರ ಎಂದಾಗುವುದಿಲ್ಲ. ಕ್ರೈಸ್ತರು, ಜೈನರು, ಬೌದ್ಧರು, ಸಿಕ್ಖರು ಎಲ್ಲರೂ  ಇದೇ ಅಲ್ಪಸಂಖ್ಯಾತ ಚೌಕಟ್ಟಿನೊಳಗೆ ಬರುತ್ತಾರೆ. ಇದೇವೇಳೆ,

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ೪೨,೦೧೮ ಕೋಟಿ ರೂಪಾಯಿಯನ್ನು ನೀಡಲಾಗಿದೆ. ಹಿಂದುಳಿದ ವರ್ಗಗಳಿಗೆ  ೩೫೦೦ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಅಲ್ಲದೇ ಹಿಂದುಳಿದ ವರ್ಗಗಳಲ್ಲೇ  ಬೇರೆ ಬೇರೆ ನಿಗಮಗಳಿವೆ.  ಅವುಗಳಿಗೂ ಪ್ರತ್ಯೇಕ ಅನುದಾನವನ್ನು ನೀಡಲಾಗಿದೆ. ಈಗಾಗಲೇ ೨ ಕೋಟಿ ರೂಪಾಯಿ ವರೆಗಿನ ಸರ್ಕಾರಿ  ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಇದೆ. ಅದನ್ನು ಪ್ರಶ್ನಿಸದ ಈ ಬಿಜೆಪಿ ಮತ್ತು  ಅದರ ಬಾಲಬಡುಕರು ಇದೀಗ ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ  ಮೀಸಲಾತಿ ನೀಡಿರುವುದನ್ನು ಪ್ರಶ್ನಿಸುತ್ತಿz್ದÁರೆ. ಈ ಬಾರಿಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಗೆ ೨೯,೯೯೨  ಕೋಟಿ ರೂಪಾಯಿಯ ಅನುದಾನ ಘೋಷಿಸಲಾಗಿದೆ. ಜೊತೆಗೇ ಬುಡಕಟ್ಟು ಉಪಯೋಜನೆಗಾಗಿ ೧೨,೦೨೬ ಕೋಟಿ  ರೂಪಾಯಿ ಅನುದಾನ ನೀಡಲಾಗಿದೆ. ಪರಿಶಿಷ್ಟ ಜಾತಿಗೆ ಸಂಬAಧಿಸಿ ಪ್ರಗತಿ ಕಾಲನಿ ಎಂಬ ಯೋಜನೆಯನ್ನು  ಹಮ್ಮಿಕೊಳ್ಳಲಾಗಿದ್ದು, ಅದರ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ೨೨೨ ಕೋಟಿ ರೂಪಾಯಿ ಮೀಸಲಿಡಲಾಗಿದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು ೩೧ ವಸತಿ ಶಾಲೆಗಳನ್ನು ಪಿಯು ಶಾಲೆಗಳಾಗಿ ಉ ನ್ನತೀಕರಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ೨೫ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡದ ವಸತಿ ಶಾಲೆಗಳನ್ನು ಪ್ರಾರಂಭಿಸುವುದಾಗಿ ಹೇಳಲಾಗಿದೆ. ೨೧೩ ಕೋಟಿ ರೂಪಾಯಿಯ ವೆಚ್ಚದಲ್ಲಿ ಕ್ರೈಸ್ ವಸತಿ  ಶಾಲೆಗಳಿಗೆ ಡೆಸ್ಕ್, ಬೆಂಚ್, ಪೀಠೋಪಕರಣ ಮತ್ತು ಇತರ ಅಗತ್ಯ ಶೈಕ್ಷಣಿಕ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ  ಬಜೆಟ್‌ನಲ್ಲಿ ಹೇಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿ ನಿಲಯಗಳಲ್ಲಿನ ಆಹಾರ ವ್ಯವಸ್ಥೆಯ ಪಾರದ ರ್ಶಕತೆಗಾಗಿ ಸಾಮಾಜಿಕ ಪರಿಶೋಧನೆ ನಡೆಸುವುದಾಗಿ ಹೇಳಲಾಗಿದೆ. ದೇಶದ ಪ್ರತಿಷ್ಠಿತ ೧೦೦ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ  ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು  ಸಿದ್ದರಾಮಯ್ಯ ಘೋಷಿಸಿದ್ದಾರೆ. ಸರಕಾರಿ ಮತ್ತು ಖಾಸಗಿ ಮೆಡಿಕಲ್, ಎಂಜಿನಿಯರಿAಗ್ ಕಾಲೇಜುಗಳಲ್ಲಿ ವ್ಯಾಸಂಗ  ಮಾಡುತ್ತಿದ್ದು, ಅದೇ ಕಾಲೇಜಿನ ವಸತಿ ನಿಲಯ ಗಳಲ್ಲಿ ಪ್ರವೇಶ ಪಡೆದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು  ೩೫೦೦ ರೂಪಾಯಿ ನೆರವು ನೀಡಲಾಗುತ್ತದೆ. ಹೈನುಗಾರಿಕೆ ಕೈಗೊಳ್ಳುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ  ಸಮುದಾಯದವರಿಗೆ ನಿಗಮದ ಮೂಲಕ ಘಟಕ ವೆಚ್ಚವಾಗಿ ಶೇ. ೫೦ರಷ್ಟು ಸಹಾಯ ಧನ ನೀಡಲಾಗುವುದು ಅಥವಾ ೧  ಲಕ್ಷದ ೨೫ ಸಾವಿರ ಸಹಾಯ ಧನ ನೀಡಲಾಗುವುದು. ೨೦೨೫-೨೬ರಲ್ಲಿ ೭೮ ಬುಡಕಟ್ಟು ವಸತಿ ಶಾಲೆಗಳಲ್ಲಿ ೭ನೇ ತರಗತಿ  ಪ್ರಾರಂಭಿಸಲಾಗುವುದು. ಪರಿಶಿಷ್ಟ ಪಂಗಡದ ೨೦ ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು  ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಂದಹಾಗೆ,

ಮುಸ್ಲಿಮರೂ ಸೇರಿದಂತೆ ಇಡೀ ಅಲ್ಪಸಂಖ್ಯಾತ ಸಮುದಾಯಕ್ಕೆ ಬರೇ ೪೫೦೦ ಕೋಟಿ ರೂಪಾಯಿ ಕೊಟ್ಟಿದ್ದನ್ನೇ ಹಲಾಲ್  ಬಜೆಟ್, ಸಾಬ್ರ ಬಜೆಟ್ ಎನ್ನುವುದಾದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲಾಗಿರುವ ೪೨,೦೧೮ ಕೋಟಿ ರೂ ಪಾಯಿ ನೀಡಿರುವುದನ್ನು ಏನೆನ್ನ ಬೇಕು? ಈ ಬಿಜೆಪಿ ಮತ್ತು ಅದರ ಬಾಲಬಡುಕ ಮಾಧ್ಯಮಗಳು ಆಗಾಗ ‘ಹಿಂದೂ’  ಎಂಬ ಐಡೆಂಟಿಟಿ ಕಾರ್ಡನ್ನು ಪ್ರದರ್ಶಿಸುತ್ತದಲ್ಲ? ಪರಿಶಿಷ್ಟ ಮಾತ್ರವಲ್ಲ, ಜಾತಿ-ಪಂಗಡ ಮತ್ತು ಬುಡಕಟ್ಟು  ಸಮುದಾಯಗಳನ್ನೂ ಅದು ಹಿಂದೂ ಎಂಬ ವಿಶಾಲ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುತ್ತಲ್ಲ? ಹಾಗಿದ್ದ ಮೇಲೆ ಜುಜುಬಿ  ೪೫೦೦ ಕೋಟಿ ರೂಪಾಯಿಯನ್ನು ಮುಸ್ಲಿಮರು, ಜೈನರು, ಕ್ರೈಸ್ತರೂ ಸೇರಿದಂತೆ ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿದ್ದಕ್ಕಾಗಿ  ಇದು ಸಾಬ್ರ ಬಜೆಟ್ ಆಗುವುದಾದರೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿರಿಸಲಾದ ೪೨,೦೧೮ ಕೋಟಿಗಾಗಿ  ಯಾಕೆ ಇದನ್ನು ಹಿಂದೂ ಬಜೆಟ್ ಎಂದು ಬಿಜೆಪಿ ಕರೆಯುತ್ತಿಲ್ಲ?

ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚೆಂದರೆ ೧೮% ಇದ್ದಾರೆ. ಆದರೆ ಎಸ್‌ಸಿ, ಎಸ್‌ಟಿ ಸಮುದಾಯದ ಸಂಖ್ಯೆ ೨೬% ಇದೆ. ಜ ನಸಂಖ್ಯೆಯ ಈ ಶೇಕಡಾವಾರನ್ನು ಹೋಲಿಸಿದರೆ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಮೊತ್ತ ನಗಣ್ಯ ಅನ್ನುವಷ್ಟು ಸಣ್ಣದು. ೨೬%  ಇರುವ ಸಮುದಾಯಕ್ಕೆ ೪೨,೦೧೮ ಕೋಟಿ ರೂಪಾಯಿ ಕೊಡುವಾಗ ೧೮% ಇರುವ ಸಮುದಾಯಕ್ಕೆ ಬರೇ ೪೫೦೦ ಕೋಟಿ  ರೂಪಾಯಿ ಕೊಡುವುದು ಯಾವ ನ್ಯಾಯ? ನಿಜಕ್ಕೂ, ಬಿಜೆಪಿ ಮತ್ತು ಅದರ ಮಡಿಲ ಮಾಧ್ಯಮಗಳು ಪ್ರಶ್ನಿಸಬೇಕಾದದ್ದು  ಈ ತಾರತಮ್ಯವನ್ನು. ಆದರೆ, ಬಿಜೆಪಿಯಾದರೋ ರಾಜಕೀಯ ಪಕ್ಷ. ಅಲ್ಪಸಂಖ್ಯಾತರೆAದರೆ ಮುಸ್ಲಿಮರು ಮಾತ್ರ ಎಂಬAತೆ  ನಟಿಸುತ್ತಾ ಮತ್ತು ನಂಬಿಸುತ್ತಾ ಬರುತ್ತಿರುವ ಆ ಪಕ್ಷಕ್ಕೆ ಅಧಿಕಾರದ ಗುರಿಯಿದೆ. ಅದಕ್ಕೆ ಪೂರಕವಾಗಿ ಏನೆಲ್ಲ ಸುಳ್ಳುಗಳನ್ನು  ಹೆಣೆಯಬೇಕೋ ಅವೆಲ್ಲವನ್ನೂ ಅದು ಹೆಣೆಯುತ್ತಿದೆ. ಆದರೆ, ಈ ಟಿವಿ ಮಾಧ್ಯಮಕ್ಕೆ ಏನಾಗಿದೆ? ಅದೇಕೆ ಈ ಮಟ್ಟದಲ್ಲಿ  ಸುಳ್ಳಿಗೆ ನೇತೃತ್ವವನ್ನು ನೀಡುತ್ತಿದೆ? ಅಂದಹಾಗೆ,

ಅಲ್ಪಸAಖ್ಯಾತರಲ್ಲಿ ಉಳಿದೆಲ್ಲ ಸಮುದಾಯಗಳನ್ನು ಬಿಟ್ಟು ಕೇವಲ ಮುಸ್ಲಿಮರನ್ನು ಮಾತ್ರ ಎತ್ತಿಕೊಂಡರೂ ಮತ್ತು ಈ  ಸಮುದಾಯ ಸರಕಾರಕ್ಕೆ ಸಲ್ಲಿಸುವ ನೇರ ಮತ್ತು ಪರೋಕ್ಷ ತೆರಿಗೆಗಳೆಷ್ಟು ಎಂಬುದನ್ನು ಲೆಕ್ಕ ಹಾಕಿದರಂತೂ ಬಜೆಟ್‌ನಲ್ಲಿ  ಘೋಷಿಸಲಾಗಿರುವುದು ಜುಜುಬಿಯಲ್ಲೇ  ಜುಜುಬಿ ಎಂದು ಗೊತ್ತಾಗುತ್ತದೆ. ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ,  ಮುಸ್ಲಿಮ್ ಸಮುದಾಯ ೨೯ ಸಾವಿರ ಕೋಟಿ ರೂಪಾಯಿಯನ್ನು ಪರೋಕ್ಷ ತೆರಿಗೆಯಾಗಿ ಸರಕಾರಕ್ಕೆ ಪಾವತಿಸುತ್ತಿದೆ.  ಅಲ್ಲದೇ, ಮುಸ್ಲಿಮ್ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಗ್ರಾಹಕ ಸಮುದಾಯವಾಗಿದೆ. ಅಬಕಾರಿಯನ್ನು  ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳೂ ಮುಸ್ಲಿಮ್ ಸಮುದಾಯದಿಂದ ಧಾರಾಳ ಲಾಭ ಪಡೆಯುತ್ತಿದೆ. ವಿದೇಶಿ  ವಿನಿಮಯದ ವಿಚಾರದಲ್ಲಂತೂ ಸರಕಾರದ ಬೊಕ್ಕಸಕ್ಕೆ ಮುಸ್ಲಿಮ್ ಸಮುದಾಯದ ಕೊಡುಗೆ ಬಹಳ ದೊಡ್ಡದು. ಜವಳಿ,  ಮೀನುಗಾರಿಕೆ, ಕೈಗಾರಿಕೆ, ಚರ್ಮೋದ್ಯಮ ಸಹಿತ ಹಲವು ಕ್ಷೇತ್ರಗಳಿಗೆ ಮುಸ್ಲಿಮ್ ಕೊಡುಗೆ ಸಣ್ಣದೇನಲ್ಲ. ಮುಸ್ಲಿಮರ ನೇರ  ಮತ್ತು ಪರೋಕ್ಷ ತೆರಿಗೆಗಳು ಈ ಎಲ್ಲ ಕ್ಷೇತ್ರಗಳಿಂದ ಸರಕಾರಕ್ಕೆ ಪ್ರತಿದಿನ ಸಲ್ಲಿಕೆಯಾಗುತ್ತಿದೆ. ಒಂದುರೀತಿಯಲ್ಲಿ,

ಮುಸ್ಲಿಮ್ ಸಮುದಾಯ ನೇರವಾಗಿ ಮತ್ತು ಪರೋಕ್ಷವಾಗಿ ಈ ಸರಕಾರಕ್ಕೆ ನೀಡುತ್ತಿರುವ ಹಣವನ್ನು ಲೆಕ್ಕ ಹಾಕಿದರೆ,  ಸರಕಾರದಿಂದ ಸಮುದಾಯ ಪಡಕೊಳ್ಳುತ್ತಿರುವುದು ಶೂನ್ಯಾತಿಶೂನ್ಯ ಎಂದೇ ಹೇಳಬೇಕು. ತಾವು ಕೊಟ್ಟಿರುವುದರಿಂದ  ೧%ದಷ್ಟನ್ನು ಮಾತ್ರ ಪಡೆಯುತ್ತಿರುವ ಮತ್ತು ಮಿಕ್ಕುಳಿದ ೯೯%ವನ್ನೂ ಸರ್ವರ ಅಭಿವೃದ್ಧಿಗಾಗಿ ಬಿಟ್ಟು ಕೊಡುತ್ತಿರುವ  ಸಮುದಾಯದ ಬಗ್ಗೆ ಹೆಮ್ಮೆ ಪಡಬೇಕಾದ ಈ ಬಿಜೆಪಿ ಮತ್ತು ಬಾಲಬಡುಕ ಮಾಧ್ಯಮಗಳು ಇದೀಗ ಅವೆಲ್ಲವನ್ನೂ  ಮರೆಮಾಚಿ ಅಪ್ಪಟ ಸುಳ್ಳನ್ನು ಹರಡುತ್ತಿರುವುದಕ್ಕೆ ನಾಚಿಕೆಯಾಗಬೇಕು. ನಿಜವಾಗಿ, ಹೆಚ್ಚಿನ ಅನುದಾನಕ್ಕಾಗಿ ಮುಸ್ಲಿಮರು  ಬೀದಿಗಿಳಿಯಬೇಕಿತ್ತು. ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು.  ತಾವು ಸರಕಾರಕ್ಕೆ ಪಾವತಿಸುತ್ತಿರುವುದರಿಂದ ೧೦%ವನ್ನಾದರೂ ನಮಗೆ ಮರಳಿಸಿ ಎಂದು ಒತ್ತಾಯಿಸಬೇಕಿತ್ತು. ಆದರೆ, ಅದರ  ಬದಲು ಈ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ರೀತಿಯ ಮಾತುಗಳನ್ನು ಬಿಜೆಪಿ ಆಡುತ್ತಿದೆ ಎಂದಾದರೆ  ಅದರೊಳಗೆ ಮುಸ್ಲಿಮ್ ದ್ವೇಷವೆಂಬ ವಿಷ ತುಂಬಿದೆ ಎಂದಷ್ಟೇ ಹೇಳಬೇಕಾಗಿದೆ.

No comments:

Post a Comment