Monday, 6 October 2025

ಐ ಲವ್ ಮುಹಮ್ಮದ್‌ಗೆ ವಿರೋಧವೇಕೆ?




ಮುಸ್ಲಿಮ್ ಸಮುದಾಯವನ್ನು ಧಮನಿಸುವ ಪ್ರಕ್ರಿಯೆ ಎಷ್ಟು ಬಹಿರಂಗವಾಗಿ ಮತ್ತು ನಿರ್ಲಜ್ಜವಾಗಿ ನಡೆಯುತ್ತಿದೆ ಅನ್ನುವುದಕ್ಕೆ ಐ ಲವ್ ಮುಹಮ್ಮದ್ ವಿವಾದವೇ ಅತ್ಯುತ್ತಮ ಉದಾಹರಣೆ. ನಾನು ಮುಹಮ್ಮದ್‌ರನ್ನು ಪ್ರೀತಿಸುತ್ತೇನೆ ಎಂಬುದು ನಿಷೇಧಿತ ಪದ ಅಲ್ಲ. ಪ್ರಚೋದನಾತ್ಮಕ ಪದವೂ ಅಲ್ಲ. ಸಮುದಾಯಗಳ ನಡುವೆ ಘರ್ಷಣೆಗೆ ಪ್ರೇರಣೆ ನೀಡುವ ಪದವೂ ಅಲ್ಲ. ಪ್ರವಾದಿ ಮುಹಮ್ಮದ್(ಸ)ರ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ನಿರುಪದ್ರವಿ ಘೋಷಣೆ ಅದು. ಇಂಥ ಘೋಷಣೆಗಳು ಈ ದೇಶಕ್ಕೆ ಹೊಸತೂ ಅಲ್ಲ. ಇಲ್ಲಿ ಜೈ ಶ್ರೀರಾಮ್ ಎಂದು ಕೂಗಲಾಗುತ್ತದೆ. ಜೈ ಹನುಮಾನ್ ಎಂದೂ ಕೂಗಲಾಗುತ್ತದೆ. ಹರಹರ ಮಹಾದೇವ್ ಎಂಬ ಘೋಷಣೆಯನ್ನೂ ಮಾಡಲಾಗುತ್ತದೆ. ಐ ಲವ್ ಮೋದಿ, ಐ ಲವ್ ಯೋಗಿ ಎಂಬಿತ್ಯಾದಿ ಘೋಷಣೆಗಳೂ ಆಗಾಗ ಕೇಳಿ ಬರುತ್ತಿರುತ್ತವೆ. ಈ ಯಾವುದಕ್ಕೂ ಈ ದೇಶದಲ್ಲಿ ವಿರೋಧವೂ ವ್ಯಕ್ತವಾಗಿಲ್ಲ. ಹೀಗಿರುವಾಗ ಐ ಲವ್ ಮುಹಮ್ಮದ್ ಎಂಬ ಘೋಷಣೆಗೆ ಮತ್ತು ಬ್ಯಾನರ್‌ಗಳಿಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆ? ಈ ಘೋಷಣೆಯಿಂದ ಯಾರಿಗೆ ತೊಂದರೆ ಇದೆ? ಯಾಕೆ ತೊಂದರೆಯಿದೆ?

ಮಿಲಾದುನ್ನಬಿ ಪ್ರಯುಕ್ತ ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಥಳೀಯ ಮುಸ್ಲಿಮರು ಐ ಲವ್ ಮುಹಮ್ಮದ್ ಎಂಬ ಬ್ಯಾನರನ್ನು ತಾವು ಮೆರವಣಿಗೆಯಲ್ಲಿ ಸಾಗುವ ದಾರಿಯಲ್ಲಿ ತೂಗು ಹಾಕಿದರು. ಇದರ ವಿರುದ್ಧ ಸಂಘಪರಿವಾರ ಆಕ್ಷೇಪ ಎತ್ತಿತು. ಇದು ಹೊಸ ಪದ್ಧತಿ ಎಂಬುದೇ ಅವರ ತಕರಾರಿಗೆ ಕಾರಣವಾಗಿತ್ತು. ಅವರು ಆಕ್ಷೇಪಿಸಿದ್ದಷ್ಟೇ ಅಲ್ಲ, ಬ್ಯಾನರುಗಳನ್ನು ಕಿತ್ತು ಬಿಸಾಕಿದರು. ಪೊಲೀಸರು ಹೀಗೆ ಕಾನೂನುಬಾಹಿರವಾಗಿ ವರ್ತಿಸಿದವರ ಬದಲು ಬ್ಯಾನರು ತೂಗು ಹಾಕಿದ ಮುಸ್ಲಿಮರ ಮೇಲೆಯೇ ಪ್ರಕರಣ ದಾಖಲಿಸಿದರು. ಆ ಬಳಿಕ ಉತ್ತರ ಪ್ರದೇಶದ ಉನ್ನಾವೋದಲ್ಲೂ ಐ ಲವ್ ಮುಹಮ್ಮದ್ ಬ್ಯಾನರನ್ನು ಮುಸ್ಲಿಮರು ಪ್ರದರ್ಶಿಸಿದರು. ಪೊಲೀಸರು 5 ಮಂದಿಯನ್ನು ಬಂಧಿಸಿದರು. ಆ ಬಳಿಕ ಉತ್ತರ ಪ್ರದೇಶದ ಮಹಾರಾಜ್ ಗಂಜ್‌ನಲ್ಲಿ ಮುಸ್ಲಿಮರು ಮೆರವಣಿಗೆಯಲ್ಲಿ ಸಾಗಲು ಯತ್ನಿಸಿದಾಗ ಅದನ್ನು ಪೊಲೀಸರು ತಡೆದರು. ಬಳಿಕ ವಿಧಾನ ಭವನದ ಎದುರು ಮುಸ್ಲಿಮ್ ಮಹಿಳೆಯರು ಪ್ರತಿಭಟನೆ ನಡೆಸಿದರು. ಇದಾದ ಬಳಿಕ ಬರೇಲ್ವಿಯಲ್ಲಿ ಪ್ರತಿಭಟನೆ ನಡೆಸಲು ಸೇರಿದ್ದ ಮುಸ್ಲಿಮರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಮೌಲಾನಾ ತೌಕೀರ್ ರಝಾ ಖಾನ್ ಸಹಿತ ಹಲವರನ್ನು ಬಂಧಿಸಿದರು. ಆ ಬಳಿಕ ಈ ಐ ಲವ್ ಮುಹಮ್ಮದ್ ಪ್ರತಿಭಟನೆಯು ಉತ್ತರಾಖಂಡ, ಗುಜರಾತ್, ತೆಲಂಗಾಣ, ಕರ್ನಾಟಕದ ದಾವಣಗೆರೆ ಸಹಿತ ವಿವಿಧ ಕಡೆಗಳಿಗೆ ಹರಡಿತು. ಈ ವರೆಗೆ ಪೊಲೀಸರು 40ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. 1340ಕ್ಕಿಂತಲೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. 20ಕ್ಕಿಂತಲೂ ಅಧಿಕ ಎಫ್‌ಐಆರ್‌ಗಳು ದಾಖಲಾಗಿವೆ. ಇವುಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶವೊಂದರಲ್ಲೇ ನಡೆದಿವೆ. ನಿಜವಾಗಿ,

ಐ ಲವ್ ಮುಹಮ್ಮದ್ ಬ್ಯಾನರನ್ನು ಕಿತ್ತು ಹಾಕಿದವರ ಬದಲು ಮುಸ್ಲಿಮರ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ಕಾನ್ಪುರದ ಪೊಲೀಸರು ತಪ್ಪು ಮಾಡಿದ್ದರು. ಅವರನ್ನು ಮೇಲಿನ ಅಧಿಕಾರಿಗಳು ತಿದ್ದಬೇಕಿತ್ತು. ಆದರೆ, ಮಾಡಿದ ತಪ್ಪನ್ನು ತಿದ್ದುವ ಬದಲು ಆ ತಪ್ಪನ್ನೇ ಸಮರ್ಥಿಸುವುದಕ್ಕಾಗಿ ಪೊಲೀಸರು ಇನ್ನಷ್ಟು ತಪ್ಪುಗಳನ್ನು ಎಸಗುತ್ತಾ ಹೋದರು. ಆ ಬಳಿಕ ಅದು ಪ್ರತಿಷ್ಠೆಯ ಸಂಗತಿಯಾಗಿ ಮಾರ್ಪಟ್ಟಿತು. ಇದನ್ನು ಬಿಟ್ಟರೆ, ಅದರಾಚೆಗೆ ಐ ಲವ್ ಮುಹಮ್ಮದ್ ಬ್ಯಾನರ್‌ಗೆ ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ಬೇಕಾದ ಕಾರಣಗಳೇ ಕಾಣಿಸುತ್ತಿಲ್ಲ. ಹಾಗಂತ, ಸಂಘಪರಿವಾರದ ವಿರೋಧವನ್ನು ಗಂಭೀರವಾಗಿ ಪರಿಗಣಿಸಬೇಕಿರಲಿಲ್ಲ. ಮುಸ್ಲಿಮ್ ದ್ವೇಷವನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವವರೇ ಅದರಲ್ಲಿz್ದÁರೆ. ಆದರೆ, ಪ್ರಭುತ್ವ ಹಾಗಲ್ಲವಲ್ಲ. ಅದು ವಿವೇಚನೆಯಿಂದ ವರ್ತಿಸಬೇಕಾಗುತ್ತದೆ. ಧಾರ್ಮಿಕ ತಾರತಮ್ಯದ ಹೊರಗೆ ನಿಂತು ಆಲೋಚಿಸಬೇಕಾಗುತ್ತದೆ. ಆದರೆ, ಪ್ರಭುತ್ವವೇ ಸಂಘಪರಿವಾರದ ವಕ್ತಾರನಂತೆ ವರ್ತಿಸತೊಡಗಿದರೆ ಅದನ್ನು ಏನೆಂದು ಕರೆಯಬೇಕು?

ಸಬ್‌ಕಾ ಸಾಥ್, ಸಬ್‌ಕಾ ವಿಶ್ವಾಸ್ ಎಂಬ ಘೋಷವಾಕ್ಯವನ್ನು ಬಹಿರಂಗದಲ್ಲಿ ಪ್ರದರ್ಶಿಸುತ್ತಾ ಆಂತರಿಕವಾಗಿ ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡಕೊಳ್ಳುತ್ತಿರುವುದಕ್ಕೆ ಈ ಐ ಲವ್ ಮುಹಮ್ಮದ್ ಮತ್ತೊಂದು ಸಾಕ್ಷ್ಯವಾಗಿ ದೇಶದ ಮುಂದಿದೆ. ಕನಿಷ್ಠ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ತಿದ್ದುವ ಪ್ರಯತ್ನವನ್ನು ಬಿಜೆಪಿ ಹೈಕಮಾಂಡ್ ಈವರೆಗೂ ಮಾಡಿಲ್ಲ. ಅಲ್ಲದೇ, ಐ ಲವ್ ಮುಹಮ್ಮದ್ ಬ್ಯಾನರ್‌ನಿಂದ ದೇಶದ ಏಕತೆ, ಸಮಗ್ರತೆ ಮತ್ತು ಕೋಮು ಸೌಹಾರ್ದಕ್ಕೆ ಏನು ತೊಂದರೆ ಇದೆ ಎಂದೂ ಹೇಳುತ್ತಿಲ್ಲ. ಏನಿದರ ಅರ್ಥ? ಒಂದುಕಡೆ, ಕೇಂದ್ರದ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವನಿಲ್ಲ. ಬಿಜೆಪಿಯ ಹಲವು ನಾಯಕರು ಮುಸ್ಲಿಮ್ ವಿರೋಧಿ ಹೇಳಿಕೆಯನ್ನು ಬಹಿರಂಗವಾಗಿಯೇ ನೀಡುತ್ತಿದ್ದಾರೆ. ಇವನ್ನು ಸಮರ್ಥಿಸುವಂತೆ ಕೇಂದ್ರ ಸರಕಾರವೂ ನಡಕೊಳ್ಳುತ್ತಿದೆ. ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಇರುವ ಹಲವಾರು ಅಂಶಗಳು ಈ ಬಗ್ಗೆ ಸಮರ್ಥನೆಯನ್ನು ನೀಡುತ್ತಿದೆ. ಈ ಬಗ್ಗೆ ಮುಸ್ಲಿಮ್ ಸಮುದಾಯ ವಿವರವಾಗಿ ಕೇಂದ್ರ ಸರಕಾರಕ್ಕೆ ತಿಳಿಸಿದರೂ ಅದು ಕೇಳಿಸಿಕೊಂಡಿಲ್ಲ. ಬರೇ ಮುಸ್ಲಿಮ್ ದ್ವೇಷವನ್ನೇ ಆಡಳಿತ ನೀತಿಯಾಗಿಸಿರುವಂತೆ ವರ್ತಿಸುತ್ತಿದೆ. ಅಂದಹಾಗೆ,

ಅನ್ಯಾಯ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ. ಅಸತ್ಯ ಹೆಚ್ಚು ಸಮಯ ಎಲ್ಲರನ್ನೂ ಮರುಳುಗೊಳಿಸಲು ಶಕ್ತವಾಗುವುದೂ ಇಲ್ಲ. ಅಂತಿಮ ಗೆಲುವು ನ್ಯಾಯದ್ದೇ  ಆಗಿರುತ್ತದೆ. ಸತ್ಯವೇ ಅಂತಿಮ ಜಯ ದಾಖಲಿಸುತ್ತದೆ. ಸತ್ಯವಂತರ ಪಾಲಿಗೆ ಎಂದೆಂದಿಗೂ ಆತ್ಮವಿಶ್ವಾಸವನ್ನು ತಂದುಕೊಡುವುದು ಈ ಭರವಸೆಯೇ ಆಗಿದೆ. ತಪ್ಪೇ ಮಾಡದವರನ್ನು ಅಪರಾಧಿಗಳಂತೆ ಬಿಂಬಿಸುವುದಕ್ಕೆ ಮತ್ತು ಒಂದು ಹಂತದವರೆಗೆ ದಂಡಿಸುವುದಕ್ಕೆ ಪ್ರಭುತ್ವಕ್ಕೆ ಸಾಧ್ಯವಿದೆ. ಮಾತ್ರವಲ್ಲ, ತನ್ನೆಲ್ಲಾ ಪ್ರಚಾರ ಮಾಧ್ಯಮವನ್ನು ಬಳಸಿ ಸತ್ಯವನ್ನೇ ಸುಳ್ಳು ಎಂದು ನಂಬಿಸಲೂ ಸಾಧ್ಯವಿದೆ. ಆದರೆ ಇಂಥವುಗಳ ಆಯುಷ್ಯ ದೀರ್ಘವಾಗಿರುವುದಿಲ್ಲ. ದಮನಿತರು ಸದಾಕಾಲ ದಮನಿತರೇ ಆಗಿರುವುದಿಲ್ಲ. ಅವರ ನೆರವಿಗೆ ಸತ್ಯ ಬಂದೇ ಬರುತ್ತದೆ ಮತ್ತು ಅಸತ್ಯವು ಬೆತ್ತಲಾಗಿ ತೆರೆಮರೆಗೆ ಸರಿದೇ ಸರಿಯುತ್ತದೆ. ಇಂಥ ಘಟನಾವಳಿಗಳಿಗೆ ಇತಿಹಾಸವು ಅದೆಷ್ಟೋ ಬಾರಿ ಸಾಕ್ಷ್ಯ ವಹಿಸಿದೆ. ಈ ಐತಿಹಾಸಿಕ ಸತ್ಯಕ್ಕೆ ಬೆನ್ನು ಹಾಕಿದವರೇ ಅನ್ಯಾಯದಲ್ಲಿ ನಿರತರಾಗಿz್ದÁರೆ. ಅಧಿಕಾರದ ಬಲದಲ್ಲಿ ನ್ಯಾಯವನ್ನೇ ಅನ್ಯಾಯವೆಂದು ಮುದ್ರೆಯೊತ್ತಿ ಪ್ರಚಾರ ಮಾಡುತ್ತಿದ್ದಾರೆ. ಪ್ರಶ್ನಿಸಿದವರನ್ನು ದಮನಿಸುತ್ತಿದ್ದಾರೆ. ನಿಜವಾಗಿ,

ಐ ಲವ್ ಮುಹಮ್ಮದ್ ಬ್ಯಾನರನ್ನು ಮತ್ತು ಘೋಷಣೆಯನ್ನು ಪ್ರಭುತ್ವ ಬೆಂಬಲಿಸಬೇಕಿತ್ತು. ಅದರಲ್ಲಿ ಆಕ್ಷೇಪ ವ್ಯಕ್ತಪಡಿಸುವಂಥದ್ದು ಏನೂ ಇರಲಿಲ್ಲ. ಅದು ಪ್ರವಾದಿ ಮುಹಮ್ಮದ್(ಸ)ರ ಮೇಲಿನ ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಸನ್ನಿವೇಶವೇ ಹೊರತು ಬೇರೇನೂ ಅಲ್ಲ. ಪ್ರವಾದಿ ನುಡಿದಂತೆ ನಡೆಯುವುದರಿಂದ ಈ ದೇಶಕ್ಕೆ ಯಾವ ತೊಂದರೆಯೂ ಇಲ್ಲ. `ಘೋಷಣೆ ಮಾತ್ರ ಸಾಲದು, ಅದರಂತೆ ನಡೆಯಿರಿ' ಎಂದು ಹೇಳಿ ಹರಸಬೇಕಾದ ಮತ್ತು ಪೊಲೀಸ್ ರಕ್ಷಣೆ ನೀಡಿ ಬೆನ್ನಿಗೆ ನಿಲ್ಲಬೇಕಾದ ಪ್ರಭುತ್ವವೊಂದು ಹಾಗೆ ಮಾಡದೇ ಆ ವಿಚಾರವನ್ನೇ ದಮನಿಸುವುದೆಂದರೆ ಅದರಲ್ಲಿ ಧರ್ಮದ್ವೇಷವನ್ನಲ್ಲದೇ ಬೇರೇನನ್ನೂ ಕಾಣಲು ಸಾಧ್ಯವಿಲ್ಲ. ಪ್ರವಾದಿ ಮುಹಮ್ಮದ್(ಸ) ಅವರಿಗೆ ಈ ದೇಶದಲ್ಲಿ ಸುಮಾರು 20 ಕೋಟಿ ಅನುಯಾಯಿಗಳಿದ್ದಾರೆ. ಉತ್ತರ ಪ್ರದೇಶದಲ್ಲಿ ದೇಶದಲ್ಲೇ  ಪ್ರಸಿದ್ಧವಾದ ದಾರುಲ್ ಉಲೂಮ್ ದೇವ್‌ಬಂದ್ ಮತ್ತು ಬರೇಲ್ವಿಯಂಥ ಪ್ರಮುಖ ಧಾರ್ಮಿಕ ವಿದ್ಯಾಭ್ಯಾಸ ಕೇಂದ್ರಗಳಿವೆ. ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರೂ ಅಲ್ಲಿದ್ದಾರೆ. ಇವರೆಲ್ಲರ ವಿಶ್ವಾಸವನ್ನು ಪಡಕೊಳ್ಳುವ ಮತ್ತು ಒಳ್ಳೆಯ ಅಭಿಯಾನಕ್ಕಾಗಿ ಮುಸ್ಲಿಮರನ್ನು ಅಭಿನಂದಿಸುವ ಬದಲು ಅದನ್ನು ತಡೆಯುವುದಕ್ಕೆ ಪ್ರಭುತ್ವ ಹೊರಟಿರುವುದು ನಿಜಕ್ಕೂ ಆಘಾತಕಾರಿ. ಪ್ರವಾದಿಯ ಸ್ಮರಣೆಯಲ್ಲಿ ಸಾಗುವ ಮೆರವಣಿಗೆಯನ್ನು ಮತ್ತು ತೀರಾ ಸಹಜ ಘೋಷಣೆಯನ್ನು ಅಪಾಯಕಾರಿಯಂತೆ ಮತ್ತು ದೇಶದ್ರೋಹಿಯಂತೆ ನಡೆಸಿಕೊಂಡ ಉತ್ತರ ಪ್ರದೇಶದ ಸರಕರಾದ ನಿಲುವು ಖಂಡನಾರ್ಹ. ಧರ್ಮದ್ವೇಷದ ಈ ನಡೆಗೆ ಮೌನ ಬೆಂಬಲ ನೀಡುತ್ತಿರುವ ಕೇಂದ್ರ ಸರಕಾರದ ನಿಲುವೂ ಅಷ್ಟೇ ಪ್ರಶ್ನಾರ್ಹ.

Monday, 22 September 2025

ಜಾತಿ ಸಮೀಕ್ಷೆಗೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಬೇಕು?





ಜಾತಿಯೇ ಇಲ್ಲದ ಧರ್ಮದ ಅನುಯಾಯಿಗಳು ಜಾತಿಯಾಧಾರಿತವಾಗಿ ಗುರುತಿಸಿಕೊಂಡರೆ ಅದು ಧರ್ಮದ್ರೋಹ ಆಗದೇ? ಇಸ್ಲಾಮ್‌ನಲ್ಲಿ ಜಾತಿಯೇ ಇಲ್ಲ ಎಂದ ಮೇಲೆ ಉಪಜಾತಿ ಯಾವುದು? ಸರಕಾರ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಥವಾ ಜಾತಿ ಸಮೀಕ್ಷೆಗೆ ಮುಸ್ಲಿಮರು ಹೇಗೆ ಪ್ರತಿಕ್ರಿಯಿಸಬೇಕು? ನಿಮ್ಮ ಧರ್ಮ ಯಾವುದು, ಜಾತಿ ಯಾವುದು ಮತ್ತು ಉಪಜಾತಿ ಯಾವುದು ಎಂದು ಸಮೀಕ್ಷೆಯವರು ಮನೆಗೆ ಬಂದು ಪ್ರಶ್ನಿಸಿದರೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಬರೆಯಬಹುದೇ? ಮುಸ್ಲಿಮ್ ಅನ್ನುವುದು ಜಾತಿ ಅಲ್ಲವಲ್ಲ. ಇಸ್ಲಾಮನ್ನು ಅನುಸರಿಸುವವ ಎಂಬ ಅರ್ಥದಲ್ಲಿರುವ ಮುಸ್ಲಿಮ್ ಅನ್ನು ಜಾತಿ ಎಂದು ಒಪ್ಪಿಕೊಂಡರೆ ಇಸ್ಲಾಮಿನ ‘ಜಾತಿರಹಿತ’ ಬೋಧನೆಗೆ ವಿರುದ್ಧವಾಗಿ ನಡಕೊಂಡಂತಲ್ಲವೇ? ಒಂದುವೇಳೆ, ಜಾತಿ ಎಂಬ ಕಾಲಂನಲ್ಲಿ ಮುಸ್ಲಿಮ್ ಎಂದು ಎಲ್ಲರೂ ತುಂಬಿಸಿದರೂ ಅದರ ನಂತರದ ಉಪಜಾತಿಗೆ ಏನುತ್ತರಿಸಬೇಕು? ಅದನ್ನು ಖಾಲಿ ಬಿಟ್ಟರೆ ಏನು? ತುಂಬಿಸುವುದರಿಂದ  ಪ್ರಯೋಜನವೇನು? ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ, ಕಸಾಬ್, ಬ್ಯಾರಿ, ದಖ್ಖನಿ, ಬಾಗ್ಬಾನ್, ಅಟ್ಟಾರಿ, ಚಪ್ಪರ್‌ಬಂದರ್, ದರ್ಜಿ, ಧೋಬಿ, ಜೋಹಾರಿ, ಪಟ್ಟೆಗಾರ್, ಫೂಲ್‌ಮಾಲಿ, ರಂಗ್ರೆಜ್, ತೇಲಿ... ಇತ್ಯಾದಿ ಇತ್ಯಾದಿಯಾಗಿ ದಾಖಲಿಸುವುದರಿಂದ ಇಸ್ಲಾಮಿನ ಸಮಾನತೆ ಮತ್ತು ಜಾತಿರಹಿತ ಪರಿಕಲ್ಪನೆಗೆ ಬೀಳುವ ಹೊಡೆತವೇನು?

ಜಾತಿ ಸಮೀಕ್ಷೆ ಈಗಾಗಲೇ ಆರಂಭಗೊಂಡಿರುವುದರ ನಡುವೆಯೇ ಮುಸ್ಲಿಮ್ ಸಮುದಾಯದಲ್ಲಿ ಈ ಬಗೆಯ ಚರ್ಚೆಯೂ ಮುಂದುವರಿದಿದೆ. ನಿಜವಾಗಿ, ಈ ಚರ್ಚೆ ಸ್ವಾಗತಾರ್ಹ ಮತ್ತು ಮುಸ್ಲಿಮರಿಗೆ ಒಂದು ಸಮುದಾಯವಾಗಿ ಆತ್ಮಾವಲೋಕನ ನಡೆಸುವುದಕ್ಕೂ ಅತ್ಯುತ್ತಮ ಸಂದರ್ಭ. 2015ರಲ್ಲಿ ನಡೆಸಲಾದ ಜಾತಿ ಸಮೀಕ್ಷೆಯ ಪ್ರಕಾರ ರಾಜ್ಯದ ಒಟ್ಟು ಸುಮಾರು 80 ಲಕ್ಷ ಮುಸ್ಲಿಮರಲ್ಲಿ 99 ಉಪಜಾತಿಗಳಿವೆ ಎಂದು ಪಟ್ಟಿ ಮಾಡಲಾಗಿದೆ. ಇದರಲ್ಲಿ ಶೇಖ್ ಎಂಬುದು ಅತೀ ಹೆಚ್ಚು ಜನಸಂಖ್ಯೆಯಿರುವ ಉಪಜಾತಿ ಎಂದೂ ದಾಖಲಾಗಿದೆ. ಇವರ ಸಂಖ್ಯೆ 5 ಲಕ್ಷದ 50 ಸಾವಿರ. ಅಲ್ಲದೇ ಒಟ್ಟು 80 ಲಕ್ಷ ಜನರಲ್ಲಿ 59 ಲಕ್ಷ ಮಂದಿ ತಮ್ಮನ್ನು ಕೇವಲ ಮುಸ್ಲಿಮ್ ಎಂದು ಗುರುತಿಸಿರುವುದೂ ಗೊತ್ತಾಗಿದೆ. 2025 ಫೆಬ್ರವರಿ 29ರಂದು ಹಿಂದುಳಿದ ಆಯೋಗಗಳ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಸರಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು. ಆ ವರದಿಯ ಬಗ್ಗೆ ಕೇಳಿಬಂದ ಆಕ್ಷೇಪಗಳ ಹಿನ್ನೆಲೆಯಲ್ಲಿ ಹೊಸ ಸಮೀಕ್ಷೆಗೆ ಸರಕಾರ ಕೈಹಾಕಿದೆ. ಅಂದಹಾಗೆ,

ಸರಕಾರವೇ ಹೇಳಿಕೊಂಡಿರುವಂತೆ  ಇದು ಜಾತಿ ಸಮೀಕ್ಷೆ ಅಲ್ಲ. ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅತ್ಯಂತ ಪಾರದರ್ಶಕವಾಗಿ ಅರಿತುಕೊಳ್ಳುವುದಕ್ಕೆ ಮಾಡಲಾಗುವ ಯತ್ನ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ಒಂದು ನಿರಾಕರಿಸಲಾಗದ ಸತ್ಯವಾಗಿರುವುದರಿಂದ ಮತ್ತು ಬಹುಸಂಖ್ಯಾತ ಜನರು ಜಾತಿಯಾಧಾರಿತವಾಗಿಯೇ ವಿಭಜನೆಗೊಂಡಿರುವುದರಿಂದ  ಸಮೀಕ್ಷೆಯ ಕಾಲಂನಲ್ಲಿ ಜಾತಿ ಮತ್ತು ಉಪಜಾತಿಗಳು ಇರಬೇಕಾದುದು ಅನಿವಾರ್ಯ. ಈ ಕಾಲಂಗಳನ್ನು ತುಂಬುವುದು ಐಚ್ಛಿಕವೇ ಹೊರತು ಕಡ್ಡಾಯ ಅಲ್ಲ. ಒಂದುವೇಳೆ, ಧರ್ಮ ಎಂಬ ಕಾಲಂನ್ನು ತುಂಬಿ ಉಳಿದ ಜಾತಿ ಮತ್ತು ಉಪಜಾತಿ ಕಾಲಂಗಳನ್ನು ತುಂಬದೇ ಇದ್ದರೂ ಅಪರಾಧ ಆಗುವುದಿಲ್ಲ. ಆದರೆ,

ಈ ಸಮೀಕ್ಷೆಯ ಉದ್ದೇಶ ಪೂರ್ಣಗೊಳ್ಳಬೇಕಾದರೆ ಪೂರ್ಣ ಪ್ರಮಾಣದಲ್ಲಿ ಈ ಸಮೀಕ್ಷೆಯೊಂದಿಗೆ ಸಹಕರಿಸುವುದು ಅಗತ್ಯ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರಕಾರಿ ದಾಖಲೆಗಳಲ್ಲಿ ಮುಸ್ಲಿಮ್ ಸಮುದಾಯದ ಉಪಜಾತಿಗಳು ಉಲ್ಲೇಖಗೊಂಡಿವೆ. ಮಾತ್ರವಲ್ಲ, ವಿವಿಧ ಸರಕಾರಿ ಖೋಟಾಗಳನ್ನೂ ಮೀಸಲಾತಿಗಳನ್ನೂ ಈ ಉಪಜಾತಿಗಳು ಪಡೆಯುತ್ತಲೂ ಇವೆ. ಈ ಉಪಜಾತಿ ಗುರುತುಗಳೆಲ್ಲ ಬಹುತೇಕ ವೃತ್ತಿಯಾಧಾರಿತ ಗುರುತುಗಳು. ನದಾಫ, ಪಿಂಜಾರ, ಕಸಾಬ್, ಅಟ್ಟಾರಿ, ಬಾಗ್ಬಾನ್, ಚಪ್ಪರ್‌ಬಂದ್ ಸಹಿತ ಜಯಪ್ರಕಾಶ್ ಆಯೋಗ ಪಟ್ಟಿ ಮಾಡಿರುವ ಉಪಜಾತಿಗಳೆಲ್ಲ ವೃತ್ತಿಯ ಹಿನ್ನೆಲೆಯಲ್ಲೇ  ಗುರುತಿಸಿಕೊಂಡಿವೆ. ಹೂಮಾರುವ ವೃತ್ತಿಯಲ್ಲಿರುವವರು, ಕಸಾಯಿ ವೃತ್ತಿ ಮಾಡುವವರು, ಧೋಬಿ ವೃತ್ತಿ, ದರ್ಜಿ ವೃತ್ತಿ, ಚಪ್ಪಲಿ ಹೊಲಿಯುವ ವೃತ್ತಿ.. ಇತ್ಯಾದಿ ವೃತ್ತಿಗಳನ್ನು ಪರಂಪರಾಗತವಾಗಿ ಮಾಡುತ್ತಾ ಬಂದಿರುವವರು ಒಂದು ಗುಂಪಾಗಿ ಗುರುತಿಸಿಕೊಂಡು ಕೊನೆಗೆ ಅವುಗಳೇ ಒಂದು ಉಪಜಾತಿಯಾಗಿ ಮಾರ್ಪಟ್ಟಿವೆ. ವ್ಯಾಪಾರವನ್ನೇ ನೆಚ್ಚಿಕೊಂಡಿದ್ದರಿAದ ಕರಾವಳಿ ಮತ್ತು ಇನ್ನಿತರ ಪ್ರದೇಶದ ಮುಸ್ಲಿಮರು ‘ಬ್ಯಾರಿ’ಯಾಗಿ ಗುರುತಿಸಿಕೊಂಡರು ಎಂಬ ವಾದವನ್ನೂ ಈ ಹಿನ್ನೆಲೆಯಲ್ಲಿಯೇ ನೋಡಬಹುದು. ನಿಜವಾಗಿ,

ಇವೆಲ್ಲ ಹಿಂದೂ ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಜಾತಿಗಳಂಥಲ್ಲ. ಇವು ವೃತ್ತಿಯಾಧಾರಿತ ಕುಲನಾಮಗಳು. ಇಲ್ಲಿ ಬ್ಯಾರಿ, ದಖ್ಖನಿ, ಕಸಾಬ್, ಪಿಂಜಾರ ಸಹಿತ ಎಲ್ಲರೂ ಒಂದೇರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತಾರೆ. ಐದು ಬಾರಿ ನಮಾಝï ಮಾಡುತ್ತಾರೆ. ಉಪವಾಸ ಆಚರಿಸುತ್ತಾರೆ. ಏಕದೇವನನ್ನು ಮತ್ತು ಪ್ರವಾದಿ ಮುಹಮ್ಮದ್‌ರನ್ನು ಅನುಸರಿಸುತ್ತಾರೆ. ಈ ಎಲ್ಲರೂ ಕುರ್‌ಆನನ್ನೇ ಪವಿತ್ರ ಗ್ರಂಥ ಎಂದು ಅಂಗೀಕರಿಸುತ್ತಾರೆ ಮತ್ತು ಅದರಂತೆ ನಡೆಯುತ್ತಾರೆ. ಪರಸ್ಪರ ವೈವಾಹಿಕ ಸಂಬAಧಗಳನ್ನು ಇಟ್ಟುಕೊಂಡಿದ್ದಾರೆ. ಮಸೀದಿಯಲ್ಲಿ ಭುಜಕ್ಕೆ ಭುಜ ತಾಗಿಸಿ ನಮಾಜ್  ಮಾಡುತ್ತಾರೆ. ಹಜ್ಜ್ಗೆಂದು ಮಕ್ಕಾಕ್ಕೆ ಹೋಗುತ್ತಾರೆ. ಅಂದರೆ, ಇಲ್ಲಿ ಉಪಜಾತಿ ಎಂಬ ಕಾಲಂನಲ್ಲಿ ದಾಖಲಿಸಲಾಗುವ ಬ್ಯಾರಿ, ನದಾಫ್, ಪಿಂಜಾರ...ಗಳೆಲ್ಲ ವೃತ್ತಿಯಾಧಾರಿತ ಕುಲನಾಮಗಳೇ ಹೊರತು ಧರ್ಮಾಧಾರಿತ ಜಾತಿಗಳಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಆದರೆ,

ಹಿಂದೂ ಸಮಾಜದಲ್ಲಿರುವ ಜಾತಿ ಮತ್ತು ಉಪಜಾತಿಗಳ ಸ್ವರೂಪ ಹೀಗಲ್ಲ. ಅದು ಧರ್ಮಾಧಾರಿತವಾಗಿಯೇ ಗುರುತಿಸಿಕೊಂಡಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಮತ್ತು ಇವುಗಳ ಪರಿಧಿಗೆ ಒಳಪಡದವರು ದಲಿತರು ಎಂಬ ನೆಲೆಯಲ್ಲಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ಈ ಸಮುದಾಯಗಳು ಬೇರೆ ಬೇರೆ ರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತವೆ. ಇವುಗಳ ನಡುವೆ ನಂಬಿಕೆಗೆ ಸಂಬAಧಿಸಿಯೇ ವ್ಯತ್ಯಾಸಗಳಿವೆ. ವೈರುಧ್ಯಗಳಿವೆ. ದೇಗುಲ ಪ್ರವೇಶ ನಿಷೇಧಕ್ಕಾಗಿ ಇವತ್ತೂ ದಲಿತರು ಸುದ್ದಿಗೆ ಒಳಗಾಗುತ್ತಿದ್ದಾರೆ. ಅಸ್ಪೃಶ್ಯತೆ  ಇದೆ. ಈ ನಾಲ್ಕು ವರ್ಣಗಳ ಒಳಗೆ ಮತ್ತು ಜಾತಿ-ಉಪಜಾತಿಗಳ ನಡುವೆ ವೈವಾಹಿಕ ಸಂಬಂಧಗಳಿಲ್ಲ. ಅನೇಕ ಬಾರಿ ಇಂಥ ಬೇಲಿಯನ್ನು ಮುರಿದ ಕಾರಣಕ್ಕಾಗಿಯೇ ಮರ್ಯಾದಾ ಹತ್ಯೆಗಳಾಗುತ್ತಿರುವುದೂ ಸುದ್ದಿಗೊಳಗಾಗುತ್ತಿದೆ. ಆದ್ದರಿಂದಲೇ,

ಜಾತಿ-ಉಪಜಾತಿ ಎಂಬ ಕಾಲಂ ಕಂಡಾಗಲೇ ಮುಸ್ಲಿಮರಿಗೆ ಈ ಜಾತಿ ಸಂಘರ್ಷಗಳೇ ಕಣ್ಣೆದುರು ಬರುತ್ತದೆ. ನಾವು ಜಾತಿ-ಉಪಜಾತಿ ಕಾಲಂ ಅನ್ನು ತುಂಬಿಸಿದರೆ ಎಲ್ಲಿ ಹಿಂದೂ ಸಮಾಜದಲ್ಲಿರುವ ಜಾತಿಗಳಾಗಿ ಬಿಡುತ್ತೇವೋ ಎಂಬ ಅವ್ಯಕ್ತ ಭಯ ಮುಸ್ಲಿಮರಲ್ಲಿ ಕಾಣಿಸುತ್ತಿದೆ. ಇದು ಅಸಹಜ ಭಯ ಅಲ್ಲ. ಮುಸ್ಲಿಮ್ ಸಮುದಾಯದೊಳಗೆ ಇಂಥದ್ದೊಂದು ಜಾತಿ ವಿಭಜನೆಗೆ ಈ ಸಮೀಕ್ಷೆ ವೇದಿಕೆ ಒದಗಿಸುತ್ತದೋ ಎಂಬ ಭೀತಿಯಲ್ಲಿರುವ ಈ ಕಳಕಳಿಯನ್ನು ತಿರಸ್ಕರಿಸಬೇಕಾಗಿಯೂ ಇಲ್ಲ. ಆದರೆ, 

ಸಾಮಾಜಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯವನ್ನು ಮೇಲೆತ್ತುವುದಕ್ಕೆ ಸರಕಾರದ ಆಶ್ರಯವೂ ಬೇಕಾಗಿದ್ದು, ವೃತ್ತಿಯಾಧಾರಿತ ಕುಲನಾಮಗಳನ್ನು ನಮೂದಿಸುವುದರಿಂದ ಆಯಾ ಕುಲನಾಮಗಳಲ್ಲಿರುವವರ ಒಟ್ಟು ಸಂಖ್ಯೆ ಮತ್ತು ಅವರ ಬದುಕಿನ ಸ್ಥಿತಿ ಸರಕಾರಕ್ಕೆ ಸರಿಯಾಗಿ ಸಿಗುತ್ತದೆ. ಇದರಿಂದ ಅತೀ ಹಿಂದುಳಿದಿರುವ ನಿರ್ದಿಷ್ಟ ಕುಲನಾಮದ ಮುಸ್ಲಿಮ್ ಗುಂಪಿಗೆ ಪ್ರತ್ಯೇಕವಾಗಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವುದಕ್ಕೆ ಮತ್ತು ಮೀಸಲಾತಿಯನ್ನು ಒದಗಿಸುವುದಕ್ಕೂ ಅವಕಾಶ ಸಿಗುತ್ತದೆ. ರಾಜ್ಯದ ಒಟ್ಟು 80 ಲಕ್ಷ  ಮುಸ್ಲಿಮರಿಗೆ ಮೀಸಲಾತಿ ಒದಗಿಸುವುದಕ್ಕೂ ನಿರ್ದಿಷ್ಟ ಕುಲನಾಮಗಳಿಗೆ ಮಾತ್ರ ವಿಶೇಷ ಮೀಸಲಾತಿ, ಅನುದಾನವನ್ನು ಒದಗಿಸಿ ಅವರನ್ನು ಮೇಲೆತ್ತುವುದಕ್ಕೂ ವ್ಯತ್ಯಾಸ ಇದೆ. 80 ಲಕ್ಷ  ಮಂದಿಗೆ ಮೀಸಲಾತಿ ಘೋಷಿಸಿದಾಗ ಆ 80 ಲಕ್ಷದಲ್ಲಿರುವ ಶ್ರೀಮಂತರು ಅದನ್ನು ಪಕ್ಕನೇ ಪಡಕೊಳ್ಳುವುದಕ್ಕೂ ದುರ್ಬಲರು ವಂಚಿತರಾಗುವುದಕ್ಕೂ ಅವಕಾಶ ಇದೆ. ಆದರೆ, ನಿರ್ದಿಷ್ಟ ಕುಲನಾಮದಲ್ಲಿ ಗುರುತಿಸಿಕೊಂಡ ಹಿಂದುಳಿದ ಮುಸ್ಲಿಮರಿಗೆ ವಿಶೇಷ ಮೀಸಲಾತಿ ಒದಗಿಸುವುದರಿಂದ ಆ ಸಮುದಾಯ ಪೂರ್ಣ ಪ್ರಮಾಣದ ಪ್ರಯೋಜನವನ್ನು ಪಡಕೊಳ್ಳುವುದಕ್ಕೆ ದಾರಿ ಸುಗಮವಾಗುತ್ತದೆ. ಆದ್ದರಿಂದ,

ಸರಕಾರದ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಮುಸ್ಲಿಮ್ ಎಂದೂ ಉಪಜಾತಿ ಕಾಲಂನಲ್ಲಿ ನದಾಫ್, ಪಿಂಜಾರ.. ಎಂದು ಮುಂತಾಗಿಯೂ ನಮೂದಿಸುವುದು ಬಹಳ ಅಗತ್ಯ. ಈ ಬಗ್ಗೆ ಗೊಂದಲ ಬೇಡ. ಪ್ರವಾದಿ(ಸ) ಕಾಲದಲ್ಲಿ ನದೀರ್, ಕುರೈಶ್ ಖಝ್ರಜ್ ಸಹಿತ ಹಲವು ಬುಡಕಟ್ಟು ಗುರುತಿನೊಂದಿಗೆ ಮುಸ್ಲಿಮರು ಗುರುತಿಸಿಕೊಂಡಿದ್ದರು ಎಂಬುದೂ ಇಲ್ಲಿ ಗಮನಾರ್ಹ.

Wednesday, 17 September 2025

ಚಾಲಕನ ಧರ್ಮ ಹುಡುಕಿದವರು ಯಾವ ಧರ್ಮದ ರಕ್ಷಕರು?





ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮೇಲೆ ಲಾರಿಯೊಂದು ಹರಿದ ಪ್ರಕರಣ ಕರ್ನಾಟಕದ ಹಾಸನವನ್ನು ಮಾತ್ರವಲ್ಲ, ರಾಜ್ಯವನ್ನೇ ಆಘಾತಕ್ಕೆ ಸಿಲುಕಿಸಿದೆ. ಈ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಎರಡು ಡಜನ್‌ನಷ್ಟು ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಪ್ರವೀಣ್ ಕುಮಾರ್, ಮಿಥುನ್ ಮತ್ತು ಸುರೇಶ್ ಎಂಬವರು ಹಾಸನದ ಎಂಜಿನಿಯರಿಂಗ್  ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು. ಗಾಯಗೊಂಡವರಲ್ಲೂ ವಿದ್ಯಾರ್ಥಿಗಳಿದ್ದಾರೆ. ದುರಂತ ಏನೆಂದರೆ,

ಈ ಅಪಘಾತ ನಡೆದ ಬೆನ್ನಿಗೇ ಲಾರಿ ಚಾಲಕನ ಧರ್ಮವನ್ನು ಹುಡುಕಾಡಲಾಗಿದೆ. ಆತನನ್ನು ಮುಸ್ಲಿಮ್ ಎಂದು ಪ್ರಚಾರ ಮಾಡಲಾಗಿದೆ. ಈ ಅಪಪ್ರಚಾರ ಎಷ್ಟು ಅಪಾಯಕಾರಿ ಹಂತಕ್ಕೆ ತಲುಪಿತ್ತೆಂದರೆ, ಸ್ವತಃ ಸಚಿವ ಕೃಷ್ಣ ಭೈರೇಗೌಡರೇ ಎಚ್ಚರಿಕೆ ನೀಡಬೇಕಾಯಿತು. ಚಾಲಕನ ಹೆಸರು ಭುವನೇಶ್ ಎಂಬುದನ್ನು ಅಡಗಿಸಿಟ್ಟು, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು. ನಿಜವಾಗಿ,

ಈ ಅಪಘಾತ ನಮ್ಮಲ್ಲಿ ಯಾವ ಬಗೆಯ ಚರ್ಚೆಯನ್ನು ಹುಟ್ಟು ಹಾಕಬೇಕಿತ್ತು? ಚಾಲಕನ ಧರ್ಮ ಇಲ್ಲಿ ಮುಖ್ಯವಾಗಬೇಕಿತ್ತೋ ಅಥವಾ ಚಾಲಕ ಸೇವಿಸಿದ ಮದ್ಯ ಮುಖ್ಯವಾಗಬೇಕಿತ್ತೋ? ಅಪಘಾತದಲ್ಲೂ ಚಾಲಕನ ಧರ್ಮವನ್ನು ಹುಡುಕುವ ಮನಸ್ಥಿತಿ ಯಾವುದು? ಇದು ಯಾರ ಅಗತ್ಯ? ಇಂಥದ್ದೊಂದು  ಹುಡುಕಾಟ ನಡೆಸಿದವರ ಉದ್ದೇಶ ಏನು? ಅಪಘಾತದಲ್ಲಿ ತಮ್ಮವರನ್ನು ಕಳಕೊಂಡವರಾಗಲಿ, ಗಾಯಗೊಂಡವರಾಗಲಿ ಯಾರೂ ಚಾಲಕನ ಧರ್ಮದ ಬಗ್ಗೆ ಪ್ರಶ್ನೆಯನ್ನೇ ಎತ್ತಿಲ್ಲ. ಅದರ ಬದಲು ಈ ಸಂತ್ರಸ್ತ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಈ ಬಗೆಯ ಮೆರವಣಿಗೆಯನ್ನೇ ವಿರೋಧಿಸಿದ್ದಾರೆ. ಹೀಗಿರುವಾಗ, ಸಂತ್ರಸ್ತರಿಗೆ ಮತ್ತು ಅವರ ಕುಟುಂಬಕ್ಕೆ ಇಲ್ಲದ ತಕರಾರೊಂದನ್ನು ಅವರಿಗೆ ಸಂಬಂಧಿಸಿಯೇ ಇಲ್ಲದ ಇನ್ನಾರೋ ಎತ್ತಿರುವುದು ಏಕೆ? ಒಂದುವೇಳೆ,

ಹೀಗೆ ಚಾಲಕನ ಧರ್ಮವನ್ನು ಹುಡುಕಿದವರ ಬೆನ್ನು ಹತ್ತುತ್ತಾ ಹೋದರೆ ಅವರು ನಿರ್ದಿಷ್ಟ ರಾಜಕೀಯ ಪಕ್ಷದ ಮತ್ತು ಕೆಲವು ಸಂಘಟನೆಗಳ ವ್ಯಕ್ತಿಗಳಾಗಿ ಪತ್ತೆಯಾಗಬಲ್ಲರು. ಧರ್ಮದ್ವೇಷವನ್ನೇ ಉಸಿರಾಗಿಸಿಕೊಂಡಿರುವ ಮತ್ತು ಹಿಂದೂ ಹಾಗೂ ಮುಸ್ಲಿಮರನ್ನು ವೈರಿಗಳಂತೆ ಬಿಂಬಿಸುವುದನ್ನೇ ಖಾಯಂ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಇವರಿಗೆ ರಾಜಕೀಯ ಅಧಿಕಾರ ಪಡೆಯುವುದನ್ನು ಬಿಟ್ಟರೆ ಬೇರೆ ಯಾವ ಗುರಿಗಳೂ ಇಲ್ಲ. ಮುಸ್ಲಿಮರನ್ನು ಸದಾ ದ್ವೇಷಿಸುವುದರಿಂದ ಅಧಿಕಾರ ಸದಾ ತಮ್ಮ ಸುಪರ್ದಿಯಲ್ಲೇ  ಉಳಿಯಲಿದೆ ಎಂದು ಬಲವಾಗಿ ನಂಬಿರುವ ಸಮುದಾಯ ಇದು. ಇದಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಎಷ್ಟು ಸಾಧ್ಯವೋ ಅಷ್ಟು ವಿಷವನ್ನು ಇವರು ಹರಡುತ್ತಿರುತ್ತಾರೆ. ಪರಸ್ಪರರು ಸೌಹಾರ್ದವಾಗಿ ಬೆರೆಯದಂತೆ ಶ್ರಮಿಸುತ್ತಿರುತ್ತಾರೆ. ಎಲ್ಲೋ  ನಡೆದ ಒಂಟಿ ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಬಿಂಬಿಸುತ್ತಿರುತ್ತಾರೆ. ಈ ಎಲ್ಲದರ ಉದ್ದೇಶ ರಾಜಕೀಯ ಅಧಿಕಾರ ಒಂದೇ ಆಗಿರುತ್ತದೆ. ಇದೇವೇಳೆ,

ಅಪರಾಧಿ ತನ್ನ ಸಮುದಾಯದವನೇ ಎಂದು ಗೊತ್ತಾದ ಕೂಡಲೇ ಇವರು ಬಾಯಿ ಮುಚ್ಚಿಕೊಳ್ಳುತ್ತಾರೆ. ಹಾಸನ ಘಟನೆಯಲ್ಲೂ ನಡೆದಿರುವುದು ಇದುವೇ. ಯಾವಾಗ ಸಚಿವರು ಎಚ್ಚರಿಕೆ ನೀಡಿದರೋ ಮತ್ತು ಭುವನೇಶ್ ಎಂಬವನೇ ಚಾಲಕ ಎಂಬುದು ಸಾರ್ವಜನಿಕವಾಗಿ ಬಹಿರಂಗವಾಯಿತೋ ಈ ಗುಂಪು ಮೌನವಾಗಿದೆ. ಕನಿಷ್ಠ ಸತ್ತವರು ಮತ್ತು ಗಾಯಗೊಂಡವರ ಬಗ್ಗೆ ಸಾಂತ್ವನದ ಮಾತುಗಳನ್ನೂ ಆಡಿಲ್ಲ. ಭುವನೇಶ್‌ನನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿಯೂ ಇಲ್ಲ. ಆತನ ವಿರುದ್ಧ ಒಂದೇ ಒಂದು ಪ್ರತಿಭಟನೆಯನ್ನೂ ಮಾಡಿಲ್ಲ. ಮೆರವಣಿಗೆಯ ಮೇಲೆ ಉದ್ದೇಶಪೂರ್ವಕವಾಗಿಯೇ ಲಾರಿ ಹತ್ತಿಸಲಾಗಿದೆ ಎಂದೂ ಹೇಳಿಲ್ಲ. ಒಂದುವೇಳೆ, ಚಾಲಕ ಮುಸ್ಲಿಮ್ ಆಗಿರುತ್ತಿದ್ದರೆ ಪ್ರತಿಭಟನೆಯ ಮೇಲೆ ಪ್ರತಿಭಟನೆ ನಡೆಯುತ್ತಿತ್ತು. ಆತನನ್ನು ಗಲ್ಲಿಗೇರಿಸುವಂತೆ ಒತ್ತಾಯ ಕೇಳಿಬರುತ್ತಿತ್ತು. ಘಟನೆಯನ್ನು ಉದ್ದೇಶಪೂರ್ವಕ ಕೃತ್ಯ, ದ್ವೇಷದ ಕೃತ್ಯ ಎಂದೆಲ್ಲಾ ಪ್ರಚಾರ ಮಾಡಲಾಗುತ್ತಿತ್ತು. ನಿಜ ಏನೆಂದರೆ,

ಈ ಘಟನೆಯು ಮದ್ಯಪಾನದ ವಿರುದ್ಧ ಸಾರ್ವಜನಿಕ ಆಕ್ರೋಶ ಭುಗಿಲೇಳುವುದಕ್ಕೆ ಕಾರಣ ಆಗಬೇಕಿತ್ತು. ಮದ್ಯ ಮಾರಾಟದ ಆದಾಯದಿಂದ ಸರಕಾರ ನಡೆಯಬೇಕಿಲ್ಲ ಎಂದು ಕೂಗಬೇಕಿತ್ತು. ಮದ್ಯ ಮುಕ್ತ ಕರ್ನಾಟಕ ಮಾಡುವ ಸಂಕಲ್ಪದ ಜನಜಾಗೃತಿ ಅಭಿಯಾನಕ್ಕೆ ಕಾರಣ ಆಗಬೇಕಿತ್ತು. ಸರಕಾರದ ಮದ್ಯನೀತಿಯನ್ನು ಪ್ರಶ್ನಿಸಿ ಸರಣಿ ಕಾರ್ಯಕ್ರಮಗಳಿಗೆ ನಾಂದಿ ಹಾಡುವ ಘಟನೆ ಆಗಬೇಕಿತ್ತು. ಆದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಸಾವು-ನೋವು ಉಂಟಾದ ಬಳಿಕವೂ ಯಾರೊಬ್ಬರಿಂದಲೂ ಸರಕಾರದ ಮದ್ಯ ನೀತಿಯನ್ನು ಪ್ರಶ್ನಿಸುವ ಪ್ರಯತ್ನವೇ ನಡೆದಿಲ್ಲ. ಚಾಲಕನ ಧರ್ಮ ನೋಡಿದವರಲ್ಲಿ ಯಾರೂ ಮದ್ಯಮುಕ್ತ ಕರ್ನಾಟಕಕ್ಕಾಗಿ ಒತ್ತಾಯಿಸಿಲ್ಲ. ಮದ್ಯ ನಿಷೇಧಿಸುವಂತೆ ಒತ್ತಾಯ ಕೇಳಿ ಬಂದಿಲ್ಲ. 2022ರಲ್ಲಿ ಕೇವಲ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕಾಗಿಯೇ 3268 ಅಪಘಾತಗಳು ಸಂಭವಿಸಿವೆ. 150ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. 2024ರಲ್ಲಿ ಈ ಅಂಕಿ-ಅಂಶದಲ್ಲಿ ಇನ್ನಷ್ಟು ಏರಿಕೆ ಉಂಟಾಗಿದೆ. ಅಂದಹಾಗೆ,

ಮದ್ಯಪಾನವು ಕೇವಲ ವಾಹನ ಚಾಲಕರನ್ನು ಮಾತ್ರ ದಾರಿ ತಪ್ಪಿಸುವುದಲ್ಲ, ಸಮಾಜದ ನೆಮ್ಮದಿಯನ್ನೇ ಅದು ಭಂಗಗೊಳಿಸುತ್ತದೆ. ಈ ದೇಶದ ಕೋಟ್ಯಂತರ ಮನೆಗಳನ್ನು ಈ ಮದ್ಯವು ನರಕಮಯಗೊಳಿಸಿದೆ. ಮದ್ಯಪಾನಿಯಾದ ಪುರುಷರು ಮನೆಯ ಮಹಿಳೆಯರ ಮೇಲೆ ಹಲ್ಲೆ  ನಡೆಸುವುದು ಮತ್ತು ಹತ್ಯೆ ನಡೆಸುವುದೆಲ್ಲ ಪ್ರತಿದಿನವೆಂಬಂತೆ  ವರದಿಯಾಗುತ್ತಿದೆ. ರಾತ್ರಿಯಾಗುವುದಕ್ಕೆ ಹೆದರುವ ಕೋಟ್ಯಂತರ ಮಹಿಳೆಯರು ಈ ದೇಶದಲ್ಲಿದ್ದಾರೆ. ಹೆಚ್ಚಿನ ಮನೆಯ ಪುರುಷರು ರಾತ್ರಿ ಮನೆಗೆ ಮರಳುವಾಗ ಮದ್ಯ ಸೇವಿಸುತ್ತಾರೆ. ಕೂಲಿ ಕಾರ್ಮಿಕರಲ್ಲಿ ಈ ಅಭ್ಯಾಸ ಹೆಚ್ಚಿದೆ. ದುಡಿದ ಹಣವನ್ನು ಮದ್ಯದಂಗಡಿಗೆ ಕೊಡುವುದಲ್ಲದೇ ಮನೆಗೆ ಬಂದು ಪತ್ನಿ-ಮಕ್ಕಳ ಮೇಲೆ ಕೈ ಮಾಡುವ ಕ್ರೌರ್ಯಗಳು ಈ ದೇಶದಲ್ಲಿ ಸಾಮಾನ್ಯವಾಗಿದೆ. ಈ ಕ್ರೌರ್ಯವನ್ನು ಮನೆಯ ಮಹಿಳೆಯರು ಮತ್ತು ಮಕ್ಕಳು ಸಹಿಸಿಕೊಳ್ಳುತ್ತಾರೆ. ಮರ್ಯಾದೆಗೆ ಅಂಜಿ ಯಾರಲ್ಲೂ ಹೇಳುವುದಿಲ್ಲ. ಈ ಗುಣವನ್ನೇ ಮದ್ಯಪಾನಿಗಳು ದುರುಯೋಗಿಸಿಕೊಳ್ಳುತ್ತಾರೆ. ಆದರೂ,

ಈ ಬಗ್ಗೆ ಯಾವ ತಕರಾರನ್ನೂ ವ್ಯಕ್ತಪಡಿಸದ ಗುಂಪೊಂದು  ಮುಸ್ಲಿಮರೇ ಇಲ್ಲಿನ ಸಮಸ್ಯೆ ಎಂದು ಬಿಂಬಿಸುವುದಕ್ಕೆ ಶಕ್ತಿಮೀರಿ ಯತ್ನಿಸುತ್ತಿವೆ. ಒಂದುವೇಳೆ, ಇವರಿಗೆ ಹಿಂದೂ ಧರ್ಮೀಯರ ಏಳಿಗೆಯೇ ಮುಖ್ಯ ಎಂದಾಗಿದ್ದರೆ, ಸಂಪೂರ್ಣ ಪಾನ ನಿಷೇಧಕ್ಕಾಗಿ ಒತ್ತಾಯಿಸಬೇಕಿತ್ತು. ಈ ದೇಶದಲ್ಲಿ ಮದ್ಯಪಾನದ ಅಡ್ಡಪರಿಣಾಮಕ್ಕೆ ಅತ್ಯಂತ ಹೆಚ್ಚು ತುತ್ತಾಗುತ್ತಿರುವುದು ಮುಸ್ಲಿಮರಲ್ಲ. ಮದ್ಯಪಾನದ ವಿರುದ್ಧ ಇಸ್ಲಾಮ್‌ನಲ್ಲಿ ಕಟ್ಟುನಿಟ್ಟಿನ ಆದೇಶ ಇರುವುದರಿಂದ ಮುಸ್ಲಿಮರಲ್ಲಿ ಮದ್ಯಪಾನಿಗಳು ತೀರಾತೀರಾ ಕಡಿಮೆಯಿದ್ದಾರೆ. ಆದರೆ,

ಹಿಂದೂ ಸಮುದಾಯ ಇದರಿಂದ ತೀವ್ರ ತೊಂದರೆಯನ್ನು ಎದುರಿಸುತ್ತಿದೆ. ದುಡಿದ ಹಣವನ್ನು ಕುಟುಂಬದ ಖರ್ಚಿಗೆ ಬಳಸುವ ಬದಲು ಮದ್ಯದಂಗಡಿಗೆ ಸುರಿಯುವ ಪುರುಷರು ಧಾರಾಳ ಇದ್ದಾರೆ. ಇವರನ್ನು ಇದರಿಂದ ಮುಕ್ತಗೊಳಿಸಿದರೆ ಕೋಟ್ಯಂತರ ಮನೆಗಳಿಗೆ ನೆಮ್ಮದಿ ಸಿಗಬಹುದು. ಕೋಟ್ಯಂತರ ಮಹಿಳೆಯರು ಮತ್ತು ಮಕ್ಕಳು ಗೃಹಹಿಂಸೆಯಿಂದ  ರಕ್ಷಣೆ ಹೊಂದಬಹುದು. ಇವೆಲ್ಲ ಎಲ್ಲರಿಗೂ ಗೊತ್ತು. ಮದ್ಯಪಾನದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಸಾವುಗಳು, ಹಿಂಸೆಗಳು ಮತ್ತು ಕಾಯಿಲೆಗಳ ಅಂಕಿ-ಅAಶಗಳನ್ನು ಪ್ರತಿವರ್ಷ ಕೇಂದ್ರ ಸರಕಾರ ಬಿಡುಗಡೆಗೊಳಿಸುತ್ತಿರುತ್ತದೆ. ಇಷ್ಟಿದ್ದೂ ಇದರ ವಿರುದ್ಧ ಏನೊಂದೂ ಮಾತಾಡದೇ ಬರೇ ಹಿಂದೂ-ಮುಸ್ಲಿಮ್ ಎಂದು ಹೇಳುತ್ತಾ ದ್ವೇಷ ಬಿತ್ತುವವರನ್ನು ಏನೆಂದು ಕರೆಯಬೇಕು? ಇವರು ಯಾವ ಧರ್ಮದ ರಕ್ಷಕರು? ಇವರು ಯಾರ ಹಿತೈಷಿಗಳು? ಇವರಿಗೆ ಹಿಂದೂ ಸಮುದಾಯದ ಕಲ್ಯಾಣವೇ ಮುಖ್ಯ ಎಂದಾಗಿದ್ದರೆ ಧರ್ಮದ್ವೇಷವನ್ನು ಕೈಬಿಟ್ಟು ಸಂಪೂರ್ಣ ಪಾನ ನಿಷೇಧಕ್ಕೆ ಒತ್ತಾಯಿಸುತ್ತಿದ್ದರು. ಅವರ ಗುರಿ ಬರೇ ರಾಜಕೀಯ ಅಧಿಕಾರ ಅನ್ನುವುದನ್ನು ಹಾಸನದ ಘಟನೆ ಸ್ಪಷ್ಟಪಡಿಸಿದೆ.

Tuesday, 16 September 2025

ಬಾನು ಮುಶ್ತಾಕ್‌ರನ್ನು ಬಿಜೆಪಿ ವಿರೋಧಿಸಿರುವುದಕ್ಕೆ ಧರ್ಮ ಕಾರಣವೇ?


ಸನ್ಮಾರ್ಗ ಸಂಪಾದಕೀಯ 

ನಾಡಹಬ್ಬ ದಸರಾವನ್ನು ಸಾಹಿತಿ ಬಾನು ಮುಶ್ತಾಕ್ ಅವರು ಉದ್ಘಾಟಿಸುವುದು ಸರಿಯೋ ತಪ್ಪೋ ಎಂಬ ಚರ್ಚೆಯೊಂದನ್ನು ಬಿಜೆಪಿ ಕನ್ನಡಿಗರ ಮೇಲೆ ಎತ್ತಿ ಹಾಕಿದೆ. ಮಾಜಿ ಸಂಸದ ಪ್ರತಾಪಸಿಂಹ, ಶಾಸಕ ಯತ್ನಾಳ್ ಅವರು ಬಹಿರಂಗವಾಗಿಯೇ ಬಾನು ಮುಶ್ತಾಕ್ ಅವರ ಉದ್ಘಾಟನೆಯನ್ನು ವಿರೋಧಿಸಿದ್ದಾರೆ. ಬಾನು ಮುಶ್ತಾಕ್ ಅವರ ಧಾರ್ಮಿಕ ನಂಬಿಕೆಯೇ  ಈ ವಿರೋಧಕ್ಕೆ ಕಾರಣ ಎಂದೂ ಹೇಳಿದ್ದಾರೆ. ಬಾನು ಮುಶ್ತಾಕ್ ಅವರ ಧರ್ಮ ಈ ಉದ್ಘಾಟನಾ ವಿಧಾನವನ್ನು ಒಪ್ಪುವುದಿಲ್ಲ ಎಂಬುದು ಈ ಇಬ್ಬರ ವಾದ. ನಿಜವಾಗಿ,

ಈ ಪ್ರತಾಪಸಿಂಹ ಆಗಲಿ, ಯತ್ನಾಳ್ ಆಗಲಿ ನಿನ್ನೆ ಮೊನ್ನೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರಲ್ಲ. 2017ರಲ್ಲಿ ಈ ದಸರಾವನ್ನು ಉದ್ಘಾಟಿಸಿದ್ದು ಕವಿ ನಿಸಾರ್ ಅಹ್ಮದ್. ಆಗ ಪ್ರತಾಪಸಿಂಹ ಸಂಸದರಾಗಿದ್ದರು. ಯತ್ನಾಳ್ ಶಾಸಕರಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೆ ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಬಿಜೆಪಿ ಚಟುವಟಿಕೆಯಲ್ಲಿತ್ತು. ಅಂದೂ ಮುಖ್ಯಮಂತ್ರಿಯಾಗಿದ್ದುದು ಸಿದ್ದರಾಮಯ್ಯ. ಇಂದೂ ಮುಖ್ಯಮಂತ್ರಿಯಾಗಿರುವುದು ಸಿದ್ದರಾಮಯ್ಯರೇ. ಆದರೆ,

2017ರಲ್ಲಿ ನಿಸಾರ್ ಅಹ್ಮದ್‌ರ ಧರ್ಮವನ್ನು ಉಲ್ಲೇಖಿಸಿ ಯಾವ ವಿರೋಧವನ್ನೂ ವ್ಯಕ್ತಪಡಿಸದ ಬಿಜೆಪಿ, 2025ರಲ್ಲಿ ಬಾನು ಮುಶ್ತಾಕ್‌ಗೆ ಧರ್ಮದ ಆಧಾರದಲ್ಲಿ ವಿರೋಧ ವ್ಯಕ್ತಪಡಿಸಲು ಕಾರಣವೇನು? ನಿಸಾರ್ ಅಹ್ಮದ್‌ರಿಗೆ ಹೋಲಿಸಿದರೆ ಬಾನು ಮುಶ್ತಾಕ್ ಅವರ ಆಯ್ಕೆಗೆ ಇನ್ನೂ ಹೆಚ್ಚು ತೂಕವಿದೆ. ಇವರು ಬೂಕರ್ ಪ್ರಶಸ್ತಿ ವಿಜೇತ ಮೊದಲ ಕನ್ನಡ ಸಾಹಿತಿ. ಅರ್ಹತೆ ಮತ್ತು ಆಯ್ಕೆಗೆ ಸಂಬಂಧಿಸಿ ಒಂದಿನಿತೂ ಅನುಮಾನ ಇಲ್ಲದಷ್ಟು ಸೂಕ್ತ ವ್ಯಕ್ತಿತ್ವ ಬಾನು ಮುಶ್ತಾಕ್‌ರದ್ದು. ಇಷ್ಟಿದ್ದೂ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಬಾನು ಮುಶ್ತಾಕ್‌ರ ಧರ್ಮವನ್ನು ಎತ್ತಿಕೊಂಡು ಮತ್ತು ಅವರ ಧರ್ಮದಲ್ಲಿರುವ ಏಕದೇವಾರಾಧನೆಯನ್ನು ಮುಂದು ಮಾಡಿಕೊಂಡು ಬಿಜೆಪಿ ವ್ಯಕ್ತಪಡಿಸುತ್ತಿರುವ ಈ ವಿರೋಧದ ಹಿಂದೆ ನಿಜಕ್ಕೂ ಕೆಲಸ ಮಾಡುತ್ತಿರುವುದು ಅವರ ಧರ್ಮವೋ ಅಥವಾ ಅವರ ನಿಲುವುಗಳೋ?

ಬಾನು ಮುಶ್ತಾಕ್ ಅಂದರೆ ಬಿಜೆಪಿಗೆ ಬಿಸಿ ತುಪ್ಪ. ಯಾಕೆಂದರೆ, ಬಾನು ಮುಶ್ತಾಕ್ ಬರೇ ಓರ್ವ ಸಾಹಿತಿಯಲ್ಲ. ಅವರು ವಕೀಲರು. ಅದಕ್ಕಿಂತಲೂ ಮುಖ್ಯವಾಗಿ ತಾಯಿ ಹೃದಯದ ಹೋರಾಟಗಾರರು. ಬಿಜೆಪಿಯ ಕೋಮುವಾದವನ್ನು ಸದಾ ಎದುರಿಸುತ್ತಲೇ ಬಂದ ಲಂಕೇಶ್ ಅವರ ಶೋಧನೆಯೇ ಈ ಬಾನು ಮುಶ್ತಾಕ್. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಇವರು ಬರಹ ಜಗತ್ತಿನಲ್ಲಿ ಗುರುತಿಸಿಕೊಂಡರು. ಅವರು ಬರೇ ತನ್ನನ್ನು ಬರಹಕ್ಕೆ ಮತ್ತು ವಕೀಲಗಾರಿಕೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗಿಯಾದರು. ಅದರಲ್ಲಿ ಬಾಬಾ ಬುಡನ್‌ಗಿರಿ ಚಳವಳಿಯೂ ಒಂದು.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟ ಕೋಮುವಾದಿಗಳ ವಿರುದ್ಧ 2000 ಇಸವಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹೋರಾಟವನ್ನು ಹುಟ್ಟು ಹಾಕಿತ್ತು. ಬುಡನ್‌ಗಿರಿಗೆ ಭೇಟಿ ನೀಡುವುದರಿಂದ ಮುಸ್ಲಿಮರನ್ನು ಕೋಮುವಾದಿಗಳು ತಡೆದಿದ್ದರು. ‘ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಹಸ್ತಾಂತರಿಸಬೇಕು, ಅಲ್ಲಿನ ಗೋರಿಗಳನ್ನು ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ದತ್ತಾತ್ರೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು...’ ಇತ್ಯಾದಿ ಬೇಡಿಕೆಯೊಂದಿಗೆ ಸಂಘಪರಿವಾರ ಬಲವಂತದ ಹೋರಾಟಕ್ಕೆ ಮುಂದಾದಾಗ ಅದಕ್ಕೆ ವಿರೋಧವನ್ನು ಒಡ್ಡಿ ಕೋಮು ಸೌಹಾರ್ದ ವೇದಿಕೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿತು. 1999ರ ವರೆಗೆ ಸಹಜವಾಗಿದ್ದ ಮತ್ತು ಶಾಂತವಾಗಿದ್ದ ಬಾಬಾ ಬುಡನ್‌ಗಿರಿಯನ್ನು ದಿಢೀರ್ ಆಗಿ ಅಶಾಂತಿಯ ತಾಣವಾಗಿಸಿದುದರ ಹಿಂದೆ ರಾಜಕೀಯ ಕಾರಣ ಇದೆ ಎಂಬುದನ್ನು ಅರಿತುಕೊಂಡ ಕೋಮುಸೌಹಾರ್ದ ವೇದಿಕೆಯು ಬುಡನ್‌ಗಿರಿಯಲ್ಲಿ 1975ಕ್ಕಿಂತ ಮೊದಲಿದ್ದ ಪದ್ಧತಿಗಳನ್ನೇ ಮುಂದುವರಿಸಬೇಕು ಮತ್ತು ದರ್ಗಾದಲ್ಲಿ ಕೋಮುವಾದಿಗಳ ಆಚರಣೆಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಬೀದಿಗಿಳಿಯಿತು. ಅದರಲ್ಲಿ ಭಾಗಿಯಾದವರೇ ಈ ಬಾನು ಮುಶ್ತಾಕ್.

ಶಿವಮೊಗ್ಗದವರಾದ ಮತ್ತು ಹೋರಾಟ ಮನೋಭಾವದ ಬಾನು ಮುಶ್ತಾಕ್‌ರು ವಕೀಲ ವೃತ್ತಿಯ ಅನುಭವದೊಂದಿಗೆ ಹೋರಾಟಕ್ಕೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದರು. ಕೋಮುವಾದಿ ಚಟುವಟಿಕೆಗಳಿಗೆ ವಿರೋಧವನ್ನು ವ್ಯಕ್ತಪಡಿಸಿದರು. ಮುಸ್ಲಿಮ್ ಸಮುದಾಯದಲ್ಲಿದ್ದ ಮಡಿವಂತರು ಮಹಿಳೆಗೆ ಮಸೀದಿ ಪ್ರವೇಶವನ್ನು ನಿರಾಕರಿಸಿದಾಗ ಅವರು ಹೇಗೆ ವಿರೋಧಿಸಿ ಹೋರಾಟಕ್ಕಿಳಿದಿದ್ದರೋ ಅದೇ ರೀತಿಯ ಮನೋಭಾವವನ್ನು ಅವರು ಇಲ್ಲೂ ಪ್ರದರ್ಶಿಸಿದರು. ಈ ಕಾರಣದಿಂದಲೇ ಕೋಮುವಾದಿಗಳಿಗೆ ಬಾನು ಮುಶ್ತಾಕ್ ನುಂಗಲಾರದ ತುತ್ತಾಗಿ ಬಿಟ್ಟರು. ಬರೇ ಕತೆ, ಕವನ, ಬರಹಕ್ಕೆ ಸೀಮಿತವಾಗದೇ ನಾಡಿನ ಸಮಸ್ಯೆಗಳಿಗೆ ದನಿಯಾಗುವ ಬಾನು ಮುಶ್ತಾಕ್ ಅವರಿಗೆ ಬೇಕಾಗಿರಲಿಲ್ಲ. ಧರ್ಮದ್ವೇಷವನ್ನು ಪ್ರಶ್ನಿಸುವ ಬಾನು ಅವರಿಗೆ ಬೇಕಾಗಿರಲಿಲ್ಲ. ಆದ್ದರಿಂದಲೇ, ಬಾನು ಮುಶ್ತಾಕ್‌ರನ್ನು ಗಡಿಯಲ್ಲಿಟ್ಟೇ ಅವರು ನೋಡತೊಡಗಿದರು. ಆದರೆ,

ಬಾನು ಮುಶ್ತಾಕ್ ಇವುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮುಸ್ಲಿಮ್ ದ್ವೇಷಿ ಮತ್ತು ಕೋಮುವಾದಿ ವಿಚಾರಧಾರೆಯನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತಲೇ ಬಂದ ಬಾನು ಮುಶ್ತಾಕ್ ಅವರು ಹಿಜಾಬ್ ವಿವಾದದ ಸಂದರ್ಭದಲ್ಲಿ ಮತ್ತೆ ತನ್ನ ಖಚಿತ ನಿಲುವಿನ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರು. ಶಾಲೆಗಳಲ್ಲಿ ಹಿಜಾಬ್ ಧರಿಸುವ ಹೆಣ್ಣು ಮಕ್ಕಳ ಹಕ್ಕನ್ನು ಅವರು ಬೆಂಬಲಿಸಿದರು. ಸಾಮಾನ್ಯವಾಗಿ,

ಸರಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಸಾಹಿತಿಗಳು ಧ್ವನಿಯೆತ್ತುವುದು ಕಡಿಮೆ ಎಂಬ ಮಾತಿದೆ. ಅದರಲ್ಲೂ ಬಿಜೆಪಿ ಸರಕಾರದ ಅವಧಿಯಲ್ಲಂತೂ ಇಂಥ ನಡವಳಿಕೆ ಹೆಚ್ಚು. ಮನ್‌ಮೋಹನ್ ಸಿಂಗ್ ಸರಕಾರವಿದ್ದಾಗ ಸಿನಿಮಾ ತಾರೆಯರಿಂದ ಹಿಡಿದು ಸಾಹಿತಿಗಳ ವರೆಗೆ ಎಲ್ಲರೂ ಸರಕಾರದ ನೀತಿ-ಧೋರಣೆಗಳನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ನಿಲುವನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸುತ್ತಿದ್ದರು. ಆದರೆ, ಮೋದಿ ಸರಕಾರದ ಕಳೆದ 11 ವರ್ಷಗಳ ಅವಧಿಯಲ್ಲಿ ಈ ಪ್ರಕ್ರಿಯೆಯೇ ನಿಂತು ಹೋಗಿದೆ. ಆದರೆ, ಬಾನು ಮುಶ್ತಾಕ್ ಹಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದಾಗ ಬಾನು ಮುಶ್ತಾಕ್ ತನ್ನ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ‘ಹಿಂದೆ ಸರಿದ ಮುಸ್ಲಿಮ್ ಹುಡುಗಿಯರ ಶಿಕ್ಷಣ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ 2022 ಫೆಬ್ರವರಿ 26ರಂದು ದೀರ್ಘ ಲೇಖನ ಬರೆದರು. ಹಿಜಾಬ್ ನಿಷೇಧದ ರಾಜಕೀಯ ಒಳಸುಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದ ಅವರು, ಇದರಿಂದಾಗಿ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿ ಆತಂಕವನ್ನೂ ವ್ಯಕ್ತಪಡಿಸಿದ್ದರು. ನಿಜವಾಗಿ,

ಬಿಜೆಪಿಗೆ ತಕರಾರಿರುವುದೇ ಇಲ್ಲಿ. ತನಗೆ ವಿನೀತವಾಗಿರದ ಬಾನು ಮುಶ್ತಾಕ್‌ರ ಮೇಲೆ ಬಿಜೆಪಿಗೆ ದ್ವೇಷವಿದೆ. ಅದರಲ್ಲೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವರ ಬಂಡಾಯ ಮತ್ತು ಧರ್ಮದ್ವೇಷ ವಿರೋಧಿ ನೀತಿಯ ಬಗ್ಗೆ ಆಕ್ರೋಶವಿದೆ. ಬೂಕರ್ ಪ್ರಶಸ್ತಿ ಪಡೆದಾಗಲೂ ಬಾನು ಮುಶ್ತಾಕ್‌ರನ್ನು ಬಿಜೆಪಿ ಪೂರ್ಣ ಮನಸ್ಸಿನಿಂದ ಅಭಿನಂದಿಸದೇ ಇರಲೂ ಇದುವೇ ಕಾರಣ. ಇಡೀ ರಾಜ್ಯವೇ ಬಾನು ಮುಶ್ತಾಕ್‌ರನ್ನು ಬೂಕರ್ ಮುಶ್ತಾಕ್ ಎಂದು ಸಂಭ್ರಮಿಸುತ್ತಿದ್ದಾಗಲೂ ಬಿಜೆಪಿ ಮನೆಯನ್ನು ಮೌನ ಹೊದ್ದುಕೊಂಡಿತ್ತು. ಇದೀಗ ಬಿಜೆಪಿ ತನ್ನ ಅಸಲು ಮುಖವನ್ನು ಬಹಿರಂಗಕ್ಕೆ ತಂದಿದೆ. ಧರ್ಮದ ನೆಪವನ್ನು ಮುಂದಿಟ್ಟುಕೊಂಡು  ನಾಡಹಬ್ಬವನ್ನು ಉದ್ಘಾಟಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಒಂದುವೇಳೆ,

ದಸರಾ ಉದ್ಘಾಟಿಸುವುದಕ್ಕೆ ತನ್ನ ಧಾರ್ಮಿಕ ವಿಶ್ವಾಸ ಅಡ್ಡಿ ಬರುತ್ತದೆಂದಾದರೆ ಅದನ್ನು ಹೇಳಬೇಕಾಗಿರುವುದು ಬಾನು ಮುಶ್ತಾಕ್‌ರೇ ಹೊರತು ಬಿಜೆಪಿ ಅಲ್ಲ. ಆದರೆ ಬಾನು ಮುಶ್ತಾಕ್ ದಸರಾ ಉದ್ಘಾಟನೆಗೆ ಒಪ್ಪಿಕೊಂಡಿದ್ದಾರೆ. ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗಿರುವಾಗ, ಬಿಜೆಪಿಗೇನು ತೊಂದರೆ? ಬಾನು ಮುಶ್ತಾಕ್‌ರಿಗೇ ಇಲ್ಲದ ವಿರೋಧವನ್ನು ಬಿಜೆಪಿ ಹುಡುಕುತ್ತಿರುವುದೇಕೆ? ತನ್ನ ನಂಬಿಕೆಗೆ ಚ್ಯುತಿ ಬಾರದಂತೆ ನಾಡಹಬ್ಬವನ್ನು ಹೇಗೆ ಉದ್ಘಾಟಿಸಬೇಕು ಎಂಬುದನ್ನು ಬಾನು ಮುಶ್ತಾಕ್‌ರಿಗೆ ಬಿಜೆಪಿ ಹೇಳಿಕೊಡಬೇಕಾಗಿಲ್ಲ. ಅದನ್ನು ಅವರೇ ನಿರ್ಧರಿಸಿಕೊಳ್ಳಲಿ.

Monday, 11 August 2025

ಧರ್ಮಸ್ಥಳ: ಮುಸ್ಲಿಮರೇ ಪ್ರಚೋದನೆಗೆ ಮರುಳಾಗಬೇಡಿ





ಕಳೆದೆರಡು ತಿಂಗಳುಗಳಿಂದ  ತಣ್ಣಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಧರ್ಮಸ್ಥಳದ ನೆಪದಲ್ಲಿ ಮತ್ತೆ ಬೆಂಕಿ ಹಚ್ಚುವ ಸಂಚುಗಳು ನಡೆಯತೊಡಗಿವೆ. ಇದಕ್ಕೆ ಬಿಜೆಪಿಯೇ ಚಾಲನೆಯನ್ನು ಕೊಟ್ಟಿದೆ.

ಧರ್ಮಸ್ಥಳ ಪ್ರಕರಣದ ಹಿಂದೆ ಮುಸ್ಲಿಮರಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬಿಜೆಪಿಯ ಇನ್ನೋರ್ವ ನಾಯಕ ಅಶ್ವತ್ಥ ನಾರಾಯಣ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ‘ನಿಷೇಧಿತ ಪಿಎಫ್‌ಐ ಸಂಘಟನೆ ಇದರ ಹಿಂದಿದೆ’ ಎಂದು ಹೇಳಿದ್ದಾರೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಮರನ್ನು ಕೇಂದ್ರೀಕರಿಸಿ ಧರ್ಮಸ್ಥಳ ‘ಶವ’ ಪ್ರಕರಣಕ್ಕೆ ಮುಸ್ಲಿಮ್ ಬಣ್ಣವನ್ನು ಕೊಡುವ ಪ್ರಯತ್ನಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ‘ಅಜ್ಞಾತ ದೂರುದಾರನ ಹಿಂದೆ ಮುಸ್ಲಿಮರಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ಸಂಚು ನಡೆಸಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವೊಂದನ್ನು ಬಿಟ್ಟರೆ ಉಳಿದಂತೆ ಅದರ ಸುತ್ತಮುತ್ತಲೆಲ್ಲ ಮಸೀದಿಗಳು ಮಾತ್ರ ಇವೆ..’ ಎಂಬೆಲ್ಲಾ ಅಭಿಪ್ರಾಯಗಳನ್ನು ಹಂಚಿಕೊಳ್ಳುವವರು ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ,

ಇನ್ನಿಬ್ಬರು ನಾಯಕರೂ ಧರ್ಮಸ್ಥಳ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಕ್ಕೆ ಉತ್ತೇಜನ ನೀಡಿದ್ದಾರೆ. ಅವರಲ್ಲಿ ಓರ್ವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ‘ಅನ್ಯಧರ್ಮದ ಜಾಗದಲ್ಲಿ ಶವ ಹೂತಿದ್ದೇವೆ ಎಂದು ಯಾರಾದರೂ ದೂರು ಕೊಟ್ಟರೆ ಧರ್ಮಸ್ಥಳ ಮಾದರಿಯ ಕಾರ್ಯಾಚರಣೆ ಮಾಡುತ್ತೀರಾ..’ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರೂ ಇಂಥದ್ದೇ  ಮಾತನ್ನಾಡಿದ್ದಾರೆ. ‘ಮಸೀದಿಯಲ್ಲಿ ಶವಗಳನ್ನು ಹೂತಿಡಲ್ವಾ..’ ಎಂದವರು ಪ್ರಶ್ನಿಸಿದ್ದಾರೆ. ಈ ಮೂಲಕ ಸ್ಮಶಾನವೇ ಅಲ್ಲದ ಜಾಗಗಳಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪವಿರುವ ಧರ್ಮಸ್ಥಳ ಪ್ರಕರಣವನ್ನು ಮಸೀದಿ ವಠಾರದ ದಫನ ಭೂಮಿಗೆ ಹೋಲಿಸಿದ್ದಾರೆ. ಮಸೀದಿ ಪಕ್ಕದ ದಫನ ಭೂಮಿಯನ್ನು ಅವರು ಅಕ್ರಮ ಎಂದು ಪರೋಕ್ಷವಾಗಿ ಬಿಂಬಿಸುವುದಕ್ಕೆ ಯತ್ನಿಸಿದ್ದಾರೆ. ಅಂದಹಾಗೆ,

ಮುಸ್ಲಿಮರಿಗೂ ಧರ್ಮಸ್ಥಳ ಪ್ರಕರಣಕ್ಕೂ ಏನು ಸಂಬಂಧ ಇದೆ? 13 ವರ್ಷಗಳ ಹಿಂದೆ ಸೌಜನ್ಯ ಕಾಣೆಯಾದಂದಿನಿಂದ  ಈ ಅಜ್ಞಾತ ದೂರುದಾರನ ವರೆಗೆ ಯಾವುದರಲ್ಲೂ ಮುಸ್ಲಿಮರು ಕಾಣಿಸಿಕೊಂಡೇ ಇಲ್ಲ. ಸೌಜನ್ಯ ಪರ ಹೋರಾಟಗಾರರ ಗುಂಪಿನಲ್ಲೂ ಮತ್ತು ಈ ಹೋರಾಟಗಾರರನ್ನು ಪ್ರಶ್ನಿಸುತ್ತಾ ಹುಟ್ಟಿಕೊಂಡ ಗುಂಪಿನಲ್ಲೂ ಇರುವವರೆಲ್ಲಾ  ಹಿಂದೂಗಳೇ. ಧರ್ಮಸ್ಥಳ ಹೋರಾಟದಲ್ಲಿ ಕಾಣಿಸಿಕೊಂಡ ಎರಡೂ ಗುಂಪುಗಳ ಮುಂಚೂಣಿ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಮುಸ್ಲಿಮ್ ಸಮುದಾಯದ ಯಾವೊಬ್ಬ ಮೌಲ್ವಿಯೂ ಈ ವಿಷಯದಲ್ಲಿ ಹೇಳಿಕೆಯನ್ನು ಕೊಟ್ಟಿಲ್ಲ. ಮುಸ್ಲಿಮ್ ಸಮುದಾಯದ ಅಧಿಕೃತ ಧ್ವನಿ ಎಂದು ಗುರುತಿಸಲಾಗುವ ಖಾಝಿಯವರೂ ಈ ಬಗ್ಗೆ ಏನನ್ನೂ ಹೇಳಿಲ್ಲ. ಮುಸ್ಲಿಮ್ ಸಮುದಾಯದ ಪ್ರಮುಖ ಧಾರ್ಮಿಕ ಸಂಘಟನೆಗಳ ಯಾವೊಬ್ಬ ನಾಯಕರೂ ಈ ವಿಷಯದಲ್ಲಿ ಮಧ್ಯಪ್ರವೇಶಿಸಿಲ್ಲ. ವಿದ್ವಾಂಸರಾಗಲಿ, ಪಂಡಿತರಾಗಲಿ ಧರ್ಮಸ್ಥಳಕ್ಕೆ ಸಂಬಂಧಿಸಿ ಯಾವ ಮಾತನ್ನೂ ಆಡಿಲ್ಲ. ಅಜ್ಞಾತ ದೂರುದಾರನ ಪರ ವಹಿಸುವುದಾಗಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿಲ್ಲುವುದಾಗಲಿ ಮಾಡಿಯೇ ಇಲ್ಲ. ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಹೆಣ್ಣು ಮಕ್ಕಳ ಪೈಕಿ ಯಾರೂ ಮುಸ್ಲಿಮರಿಲ್ಲ. ಅಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವವರಲ್ಲೂ ಮುಸ್ಲಿಮರಿಲ್ಲ. ಈ ಇಡೀ ಪ್ರಕರಣ ಮುಸ್ಲಿಮರಿಂದ ಮುಕ್ತವಾಗಿದೆ. ಮುಸ್ಲಿಮರ ಭಾಗೀದಾರಿಕೆಯಿಂದಲೂ ಮುಕ್ತವಾಗಿದೆ. ಇಷ್ಟೆಲ್ಲಾ ಇದ್ದೂ,

ಪದೇಪದೇ ಮುಸ್ಲಿಮರನ್ನು ಈ ವಿಷಯಕ್ಕೆ ಸಂಬಂಧಿಸಿ ಎಳೆದು ತರುತ್ತಿರುವುದೇಕೆ? ಮುಸ್ಲಿಮರನ್ನು ಸಂಚುಕೋರರಂತೆ  ಬಿಂಬಿಸಿ ಹಿಂದೂಗಳನ್ನು ಪ್ರಚೋದಿಸುವುದು ಇದರ ಹಿಂದಿರುವ ಉದ್ದೇಶವೇ? ತಣ್ಣಗಿರುವ ಜಿಲ್ಲೆಗೆ ಮತ್ತೆ ಬೆಂಕಿಯನ್ನು ಕೊಟ್ಟು ಕಾರ್ಯಕರ್ತರನ್ನು ಮತ್ತೆ ಧರ್ಮದ ಅಮಲಿನಲ್ಲಿ ಬೀದಿಗಿಳಿಸುವ ತಂತ್ರವೇ? ಅಥವಾ ಹೇಗಾದರೂ ಮಾಡಿ ಮುಸ್ಲಿಮರನ್ನು ಪ್ರಚೋದಿಸಿ ಅನಗತ್ಯ ಹೇಳಿಕೆಯನ್ನು ಕೊಡುವಂತೆ ಪ್ರೇರೇಪಿಸಿ ಬಲೆಗೆ ಬೀಳಿಸುವ ಕುತಂತ್ರವೇ? ನಿಜವಾಗಿ,

ಈ ದೇಶದಲ್ಲಿ ಹಿಂದೂಗಳಿಗೂ ಮತ್ತು ಮುಸ್ಲಿಮರಿಗೂ ಇರೋದು ಒಂದೇ ಸಂವಿಧಾನ. ಈ ಸಂವಿಧಾನ ನ್ಯಾಯವನ್ನು ಹಿಂದೂ-ಮುಸ್ಲಿಮ್ ಎಂದು ವರ್ಗೀಕರಿಸಿಲ್ಲ. ಹಿಂದೂಗಳಿಗೆ ಅನ್ಯಾಯವಾದಾಗ ಮುಸ್ಲಿಮರು ಮಾತಾಡಬಾರದು ಮತ್ತು ಮುಸ್ಲಿಮರಿಗೆ ಅನ್ಯಾಯವಾದಾಗ ಹಿಂದೂಗಳು ಮಾತಾಡಬಾರದು ಎಂದೂ ಅದು ಹೇಳಿಲ್ಲ. ಅನ್ಯಾಯದ ವಿರುದ್ಧ ಹಿಂದೂ-ಮುಸ್ಲಿಮ್ ಇಬ್ಬರೂ ಜೊತೆಗೂಡಿ ಹೋರಾಡಬೇಕಾದುದು ಸಾಂವಿಧಾನಿಕ ಅಗತ್ಯ. ಆದರೆ ಸಂವಿಧಾನ ಜಾರಿಯಾಗಿ 7 ದಶಕಗಳೇ ಕಳೆದ ಬಳಿಕದ ಭಾರತದ ಪರಿಸ್ಥಿತಿ ಹೇಗಿದೆಯೆಂದರೆ, ಹಿಂದೂಗಳ ವಿಷಯದಲ್ಲಿ ಮುಸ್ಲಿಮರು ಮಾತಾಡಬಾರದು ಎಂಬಲ್ಲಿಗೆ ತಲುಪಿದೆ. ಮುಸ್ಲಿಮರನ್ನು ಬೈದರೆ ಓಟು ಸಿಗುತ್ತದೆ ಎಂಬ ಸ್ಥಿತಿಗೆ ಬಂದು ನಿಂತಿದೆ. ಮುಸ್ಲಿಮರನ್ನು ಅಪರಾಧಿಗಳಂತೆ, ಹಿಂದೂ ವಿರೋಧಿಗಳಂತೆ, ದೇಶದ್ರೋಹಿಗಳಂತೆ, ಭಯೋತ್ಪಾದಕರಂತೆ.. ಬಿಂಬಿಸಿದರೆ ಹಿಂದೂಗಳು ತೃಪ್ತರಾಗುತ್ತಾರೆ ಎಂಬಂಥ  ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಇದು ಸಂವಿಧಾನದ ಬಯಕೆ ಅಲ್ಲವಾದರೂ ಪರಿಸ್ಥಿತಿ ಆ ಮಟ್ಟಕ್ಕೆ ಕೆಟ್ಟು ಹೋಗಿರುವುದರಿಂದ ಮುಸ್ಲಿಮರು ಪ್ರತಿಕ್ರಿಯಿಸುವಾಗ ಜಾಗರೂಕತೆಯನ್ನು ಪಾಲಿಸುವ ಅನಿವಾರ್ಯತೆ ಇದೆ. ಧರ್ಮಸ್ಥಳ ವಿಷಯಕ್ಕೂ ಈ ಎಚ್ಚರಿಕೆ ಅನ್ವಯವಾಗುತ್ತದೆ.

ಮುಸ್ಲಿಮರನ್ನು ಪ್ರಚೋದಿಸಿ ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡುವ ಹುನ್ನಾರವೊಂದು ನಡೆಯುತ್ತಿದೆ. ಒಂದುವೇಳೆ, ಪ್ರಚೋದನೆಗೆ ಬಲಿಯಾಗಿ ಮುಸ್ಲಿಮ್ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಭಾಗಿಯಾದರೆ ಆ ಬಳಿಕ ಈ ಇಡೀ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಮುಖ್ಯ ವಿಷಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸರಿಸುವ ದುರುದ್ದೇಶವೂ ಇದರ ಹಿಂದಿರಬಹುದು. ಮತ್ತೆ ದಕ್ಷಿಣ ಕನ್ನಡವನ್ನು ಧರ್ಮದ್ವೇಷದ ಸಂಘರ್ಷಕ್ಕೆ ದೂಡುವುದೂ ಇದರ ಹಿಂದಿನ ಉದ್ದೇಶವಾಗಿರಬಹುದು. ಅಂದಹಾಗೆ,

ಧರ್ಮಸ್ಥಳದ ಬಗ್ಗೆ ಅಜ್ಞಾತ ದೂರುದಾರ ನೀಡಿರುವ ದೂರಿನ ಮೇಲೆ ಸಿಟ್ ರಚಿಸಿರುವುದು ಸರಕಾರ. ಶವಗಳಿಗೆ ಹುಡುಕಾಡುತ್ತಿರುವುದೂ ಸರಕಾರವೇ ರಚಿಸಿದ ಪ್ರಮುಖ ಪೊಲೀಸ್ ಅಧಿಕಾರಿಗಳು ಮತ್ತು ಅವರ ತಂಡ. ಈ ಸರಕಾರವೂ ಅಷ್ಟೇ, ಸ್ವಯಂ ಘೋಷಿತ ಅಲ್ಲ. ನಾವೇ ಚುನಾಯಿಸಿದ ಸರಕಾರ. ಹೀಗಿರುತ್ತಾ, ಅಜ್ಞಾತ ದೂರುದಾರನನ್ನು, ಆತ ತೋರಿಸಿರುವ ಜಾಗಗಳನ್ನು ಮತ್ತು ಅದರ ಮೇಲೆ ತನಿಖೆಗಿಳಿದಿರುವ ಪೊಲೀಸ್ ಅಧಿಕಾರಿಗಳನ್ನು ನೆಪ ಮಾಡಿಕೊಂಡು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಸದ್ಯ ನಾಗರಿಕರಾದ ನಾವು ಮಾಡಬಹುದಾದದ್ದು ಏನೆಂದರೆ,
ತನಿಖೆಯ ಫಲಿತಾಂಶಕ್ಕಾಗಿ ಕಾಯುವುದು. ದೂರುದಾರ ಸುಳ್ಳು ಹೇಳಿದ್ದರೆ ಆತನಿಗೆ ಶಿಕ್ಷೆಯಾಗಲಿ. ಆತನ ದೂರಿನಲ್ಲಿ ನಿಜ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ಸ್ಪಷ್ಟವಾಗಬೇಕಾದರೆ ತನಿಖೆ ಮುಕ್ತಾಯಗೊಳ್ಳಬೇಕು. ಅದು ಬಿಟ್ಟು ತನಿಖಾ ಹಂತದಲ್ಲೇ  ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಇಡೀ ತನಿಖಾ ಪ್ರಕ್ರಿಯೆಯನ್ನೇ ಬುಡಮೇಲುಗೊಳಿಸುವ ರೀತಿಯ ಹೇಳಿಕೆಗಳು ಸಮಾಜದ ಶಾಂತಿ-ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡಬಲ್ಲುದು. ಜನಸಾಮಾನ್ಯರು ಇಂಥ ಅಪಪ್ರಚಾರಗಳಿಂದ ಪ್ರಭಾವಿತರಾಗಿ ಮುಸ್ಲಿಮರನ್ನು ತಪ್ಪಿತಸ್ಥರಂತೆ ಮತ್ತು ಸಂಚುಕೋರರಂತೆ  ಕಾಣಲು ಪ್ರಾರಂಭಿಸಬಹುದು. ಅಲ್ಲದೇ, ಇದು ಅಪಪ್ರಚಾರ ಮಾಡುವವರ ಉದ್ದೇಶವೂ ಆಗಿರಬಹುದು. ಆದ್ದರಿಂದ,

 ಸರಕಾರ ಈ ಬಗ್ಗೆ ಜಾಗೃತವಾಗಬೇಕು. ಅಪಪ್ರಚಾರದಲ್ಲಿ ತೊಡಗಿರುವವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಸೋಶಿಯಲ್ ಮೀಡಿಯಾದ ಮೇಲೆ ಹದ್ದಿನ ಕಣ್ಣಿಡಬೇಕು. ಪ್ರಚೋದನಾತ್ಮಕ ಬರಹ ಮತ್ತು ವೀಡಿಯೋಗಳನ್ನು ಪತ್ತೆ ಹಚ್ಚಿ, ಅದರ ಹಿಂದಿರುವವರಿಗೆ ಕಾನೂನಿನ ಪಾಠ ಮಾಡಬೇಕು.

Saturday, 9 August 2025

ಕಲಬುರಗಿಯ ಗೋರಿ, ಛತ್ತೀಸ್‌ಗಢದ ನನ್‌ಗಳು ಮತ್ತು ಕುಕ್ಕರಿನಲ್ಲಿರುವ ಜನಸಾಮಾನ್ಯರು





ಸುಳ್ಳುಗಳನ್ನು ಹೇಗೆ ಉತ್ಪಾದಿಸಲಾಗುತ್ತದೆ ಮತ್ತು ದ್ವೇಷವನ್ನು ಹರಡುವುದಕ್ಕೆ ಈ ಸುಳ್ಳುಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ನಮ್ಮದೇ ರಾಜ್ಯದ ಕಲಬುರಗಿ ಮತ್ತು ಛತ್ತೀಸ್‌ಗಢದ ಘಟನೆಗಳನ್ನು ತಾಜಾ ಉದಾಹರಣೆಯಾಗಿ ಎತ್ತಿಕೊಳ್ಳಬಹುದು.

‘ಕಲಬುರಗಿಯ ಅಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ನಲ್ಲಿ ರಾತೋರಾತ್ರಿ ಅಕ್ರಮವಾಗಿ ಗೋರಿಗಳ ನಿರ್ಮಾಣ ಮಾಡಲಾಗಿದೆ, ಕಾಂಪೌಂಡ್  ಕಟ್ಟಲಾಗುತ್ತಾ ಇದೆ ಮತ್ತು ಬಣ್ಣವನ್ನೂ ಬಳಿಯಲಾಗುತ್ತಾ ಇದೆ..’ ಎಂಬಂತಹ ಸುದ್ದಿಗಳು ಕನ್ನಡದ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ದಿನದ ಹಿಂದೆ ಪ್ರಸಾರವಾಗಿತ್ತು. ವಕ್ಫ್ನ ಹೆಸರಲ್ಲಿ ಈಗಾಗಲೇ ಮುಸ್ಲಿಮ್ ದ್ವೇಷಿ ವಾತಾವರಣವನ್ನು ಸೃಷ್ಟಿ ಮಾಡಲು ಮಾಧ್ಯಮಗಳು ಯಶಸ್ವಿಯಾಗಿರುವುದರಿಂದ ಈ ‘ಗೋರಿ’ಯು ಈಗಾಗಲೇ ಆಗಿರುವ ಗಾಯಕ್ಕೆ ಉಪ್ಪು ಸವರಿದಂತಾಗುವುದು ಸಹಜ. ವಕ್ಫ್ ಎಂದರೆ ಹಿಂದೂಗಳ ಭೂಮಿಯನ್ನು ಕಬಳಿಸುವುದರ ಹೆಸರು ಎಂದು ನಂಬಿರುವವರಿಗೆ ಈ ‘ಗೋರಿ’ ಸುದ್ದಿ ಅವರ ನಂಬಿಕೆಗೆ ಇನ್ನಷ್ಟು ಪುಷ್ಠಿಯನ್ನು ಕೊಡುವ ಕೆಲಸ ಮಾಡುತ್ತದೆ. ಅಂದಹಾಗೆ,

650 ಎಕರೆಗಿಂತಲೂ ವಿಸ್ತಾರ ಪ್ರದೇಶವನ್ನು ಹೊಂದಿರುವ ವಿವಿ ಕ್ಯಾಂಪಸ್‌ನಲ್ಲಿ ಗೋರಿಗಳಿಲ್ಲವೇ ಎಂಬ ಪ್ರಶ್ನೆಗೆ, ಇದೆ ಎಂಬುದೇ ಸರಿಯಾದ ಉತ್ತರ. ಕೇವಲ ಗೋರಿಗಳು ಮಾತ್ರವಲ್ಲ, ದೇವಸ್ಥಾನಗಳೂ ಇವೆ. ಇಲ್ಲಿ ಬಂದೇ ನವಾಝï ದರ್ಗಾ ಮತ್ತು ಗೈಬ್‌ಪೀರ್ ದರ್ಗಾಗಳು ಇರುವಂತೆಯೇ, ಬೀರಲಿಂಗೇಶ್ವರ ದೇವಸ್ಥಾನ ಮತ್ತು ಲಕ್ಷ್ಮೀ ದೇವಸ್ಥಾನಗಳೂ ಇವೆ. ಮಾತ್ರವಲ್ಲ, ಈ ಎರಡೂ ಗೋರಿಗಳು ರಾತೋರಾತ್ರಿ ಹುಟ್ಟಿಕೊಂಡವುಗಳಲ್ಲ. ಇವುಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ. ದೇವಸ್ಥಾನಗಳಿಗೂ ಇಂಥz್ದೆÃ ಪುರಾತನ ಹಿನ್ನೆಲೆ ಇದೆ ಎಂಬುದೇ ನಿಜ.

ಛತ್ತೀಸ್‌ಗಢ ಪ್ರಕರಣವಂತೂ ಇದಕ್ಕಿಂತಲೂ ಘೋರವಾಗಿದೆ. ಜಾರ್ಖಂಡಿನ ಮೂರು ಬುಡಕಟ್ಟು ಯುವತಿಯರು ಮತ್ತು ಓರ್ವ ಯುವಕನೊಂದಿಗೆ ಛತ್ತೀಸ್‌ಗಢದ ರೈಲ್ವೇ ನಿಲ್ದಾಣಕ್ಕೆ ಬಂದ ಕ್ರೈಸ್ತ ಭಗಿನಿಯರಾದ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಅವರನ್ನು ರೈಲ್ವೇ ಅಧಿಕಾರಿ ನೋಡುತ್ತಾರೆ. ಇದನ್ನು ಮತಾಂತರದ ಹುನ್ನಾರ ಎಂದು ಅಂದುಕೊAಡ ಅವರು ನೇರ ಸಂಘಪರಿವಾರಕ್ಕೆ ಮಾಹಿತಿ ಕೊಡುತ್ತಾರೆ. ಅದರ ಸ್ಥಳೀಯ ನಾಯಕ ಜ್ಯೋತಿ ಶರ್ಮಾ ತನ್ನ ತಂಡದೊಂದಿಗೆ ಬರುತ್ತಾನೆ. ಪೊಲೀಸರ ಎದುರೇ ಆತ ಆ ಬುಡಕಟ್ಟು ವ್ಯಕ್ತಿಗಳ ಮೇಲೆ ಏರಿ ಹೋಗುತ್ತಾನೆ. ಆತನ ಆದೇಶದಂತೆ ಪೊಲೀಸರು ಮತಾಂತರ ಮತ್ತು ಮಾನವ ಕಳ್ಳಸಾಗಾಣಿಕೆಯ ಕೇಸು ದಾಖಲಿಸುತ್ತಾರೆ. ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿರುವ ಇವರುಗಳು ಇದೀಗ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಆಘಾತಕಾರಿ ಸಂಗತಿಗಳಿವೆ. ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿ ಈ ಯುವತಿಯರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಜ್ಯೋತಿ ಶರ್ಮಾನ ಸೂಚನೆಯಂತೆ ಪೊಲೀಸರು ಕಸ್ಟಡಿಯಲ್ಲಿಟ್ಟು ತಮ್ಮನ್ನು ಥಳಿಸಿದ್ದಾರೆ, ತನ್ನ ಬೆಂಬಲಿಗರಿಂದ  ಅತ್ಯಾಚಾರ ಮಾಡಿಸುವುದಾಗಿ ಆತ ಬೆದರಿಸಿದ್ದಾನೆ. ಆತನ ವಿರುದ್ಧ ನಾವು ಕೊಟ್ಟ ದೂರನ್ನೂ ಪೊಲೀಸರು ದಾಖಲಿಸಿಲ್ಲ, ನಾವು ಮತಾಂತರವಾಗಿಲ್ಲ, ಇದು ಮಾನವ ಕಳ್ಳಸಾಗಾಣಿಕೆಯೂ ಅಲ್ಲ... ಎಂದೆಲ್ಲಾ  ಅವರು ಕ್ಯಾಮರಾಗಳ ಮುಂದೆಯೇ ಮತ್ತು ಅಷ್ಟೂ ಪತ್ರಕರ್ತರ ಎದುರೇ ಹೇಳಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಕೆಲವು ಮೂಲಭೂತ ಪ್ರಶ್ನೆಗಳಿವೆ. ರೈಲ್ವೇ ಅಧಿಕಾರಿಗೆ ಅನುಮಾನ ಬಂದರೆ ಆತ ಮೊದಲು ತಿಳಿಸಬೇಕಾದದ್ದು ಯಾರಿಗೆ? ಪೊಲೀಸರಿಗೋ ಅಲ್ಲ, ಸಂಘಪರಿವಾರಕ್ಕೋ? ಒಂದುವೇಳೆ, ರಾತೋರಾತ್ರಿ ಅಕ್ರಮವಾಗಿ ಗೋರಿ ಕಟ್ಟಲಾಗುತ್ತಿದೆ ಎಂಬ ಸುದ್ದಿ ಓರ್ವ ಪತ್ರಕರ್ತನಿಗೆ ಸಿಕ್ಕರೆ ಮೊದಲಾಗಿ ಆತ ಮಾಡಬೇಕಾದದ್ದೇನು? ಮಾಧ್ಯಮ ಮುಖ್ಯಸ್ಥರಿಗೆ ತಿಳಿಸುವುದು. ಆ ಮುಖ್ಯಸ್ಥ ಮಾಡಬೇಕಾದದ್ದೇನು? ಹಿಂದೆ ಮುಂದೆ ನೋಡದೇ ಬ್ರೇಕಿಂಗ್ ನ್ಯೂಸ್ ಕೊಡೋದೋ ಅಥವಾ ಸತ್ಯ ಏನೆಂದು ಸ್ಪಷ್ಟಪಡಿಸಿ ಮಾಹಿತಿ ಕೊಡುವಂತೆ ಪತ್ರಕರ್ತನಿಗೆ ಸೂಚಿಸುವುದೋ? ಆದರೆ ಈ ವಿವೇಚನೆಯೇ ಇವತ್ತು ಮಾಧ್ಯಮ ಹೊಣೆಗಾರರಿಂದಲೂ ಮತ್ತು ಸರಕಾರಿ ಅಧಿಕಾರಿಗಳಿಂದಲೂ ಕಾಣೆಯಾಗುತ್ತಿದೆ ಎಂಬುದನ್ನೇ ಈ ಎರಡೂ ಘಟನೆಗಳು ಎತ್ತಿ ಹೇಳುತ್ತಿವೆ. ಹಾಗಂತ,

ಇದೊAದು ಪ್ರಮಾದ, ಗೊತ್ತಿಲ್ಲದೇ ಆಗಿರುವಂಥ ಸಹಜ ತಪ್ಪುಗಳು ಎಂದೆಲ್ಲಾ ಸಮರ್ಥಿಸುವ ಹಾಗಿಲ್ಲ. ತಾನು ಯಾರಿಗೆ ದೂರು ಕೊಡಬೇಕು ಎಂಬುದು ಓರ್ವ ರೈಲ್ವೇ ಅಧಿಕಾರಿಗೆ ಗೊತ್ತೇ ಇರುತ್ತದೆ. ತನಗೆ ಸಿಕ್ಕ ಸುದ್ದಿಯನ್ನು ನಿಕಷಕ್ಕೆ ಒಡ್ಡಿ ಪ್ರಸಾರ ಮಾಡಬೇಕು ಎಂಬ ವಿವೇಕ ಪತ್ರಿಕಾ ಮುಖ್ಯಸ್ಥನಿಗೂ ಇರುತ್ತದೆ. ಹಾಗಿದ್ದರೆ ಮತ್ತೇಕೆ ಈ ಬಗೆಯ ನಿರ್ಲಕ್ಷ್ಯಗಳು ನಡೆಯುತ್ತಿವೆ ಎಂಬ ಪ್ರಶ್ನೆ ಇರಬಹುದು. ನಿಜವಾಗಿ, ಇವು ನಿರ್ಲಕ್ಷ್ಯವೂ ಅಲ್ಲ, ಅವಿವೇಕವೂ ಅಲ್ಲ. ಪ್ರಮಾದವೂ ಅಲ್ಲ. ಉದ್ದೇಶಪೂರ್ವಕವಾಗಿಯೇ ಇಂಥವುಗಳು ನಡೆಯುತ್ತಿವೆ ಎಂದೇ ಹೇಳಬೇಕಾಗಿದೆ. ಇದೊಂದು ಸಂಚು. ಯೋಜನಾಬದ್ಧವಾಗಿಯೇ ನಡೆಯುತ್ತಿರುವ ಸಂಚು.

ಮುಸ್ಲಿಮರನ್ನು ಖಳರಂತೆ, ಹಿಂದೂ ವಿರೋಧಿಗಳಂತೆ, ಜನಸಂಖ್ಯಾ ಸ್ಫೋಟ ಮಾಡುವವರಂತೆ, ಹಿಂದೂಗಳ ಭೂಮಿಯನ್ನು ಕಬಳಿಸುವವರಂತೆ, ದೇಶದ್ರೋಹಿಗಳಂತೆ, ಪಾಕಿಸ್ತಾನ ಪ್ರೇಮಿಗಳಂತೆ.. ಇತ್ಯಾದಿ ಇತ್ಯಾದಿಯಾಗಿ ದಿನಾ ಸುದ್ದಿಗಳನ್ನು ಉತ್ಪಾದಿಸುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಒಂದು ಬೃಹತ್ ಜಾಲ ಈ ದೇಶದಲ್ಲಿದೆ. ಮುಸ್ಲಿಮ್ ಯುವಕ ಹಿಂದೂ ಯುವತಿಯನ್ನು ಪ್ರೀತಿಸಿದರೆ ಅದನ್ನು ಲವ್ ಜಿಹಾದ್ ಅನ್ನುವ ಈ ಗುಂಪು, ಮುಸ್ಲಿಮ್ ಯುವತಿ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದರೆ ಸೌಹಾರ್ದ ಎಂದು ಸುದ್ದಿ ಮಾಡುತ್ತವೆ. ಜಾನುವಾರು ಸಾಗಾಟದಲ್ಲಿ ಮುಸ್ಲಿಮ್ ವ್ಯಕ್ತಿ ಇದ್ದರೆ ತಕ್ಷಣ ಅದನ್ನು ‘ಅಕ್ರಮ ಗೋಸಾಗಾಟ’ ಎಂದು ಸುದ್ದಿ ಬರುತ್ತದೆ. ಮುಸ್ಲಿಮ್ ವ್ಯಕ್ತಿಯೋರ್ವ ತಪ್ಪು ಮಾಡುವುದನ್ನು ‘ಧರ್ಮ ಕಲಿಸಿದ ಅಪರಾಧ’ ಎಂದು ಹೇಳುತ್ತಲೇ ಅದೇ ತಪ್ಪನ್ನು ಹಿಂದೂ ವ್ಯಕ್ತಿ ಮಾಡಿದರೆ ಅದನ್ನು ವೈಯಕ್ತಿಕ ತಪ್ಪು ಎಂದು ಸದ್ದಿಲ್ಲದೇ ಸರಿಸಿ ಬಿಡುತ್ತವೆ. ಯಾವುದೇ ಅಪರಾಧ ಕೃತ್ಯಕ್ಕೂ ಧರ್ಮದ ಬಣ್ಣ ಕೊಡುವುದು ಮತ್ತು ಇಸ್ಲಾಮನ್ನು ಕಟಕಟೆಯಲ್ಲಿ ನಿಲ್ಲಿಸುವುದು ಈ ಗುಂಪಿನ ತಂತ್ರವಾಗಿದೆ. ಇಸ್ಲಾಮಿನ ಕುರಿತಂತೆ ಭೀತಿಯನ್ನು ಅಥವಾ ಫೋಬಿಯಾವನ್ನು ಹಬ್ಬಿಸುವುದು ಮತ್ತು ಸಾರ್ವಜನಿಕರಲ್ಲಿ ಮುಸ್ಲಿಮರ ಬಗ್ಗೆ ಅಸಹನೆಯನ್ನು ಸೃಷ್ಟಿಸುವುದಕ್ಕೂ ಈ ಗುಂಪು ಹೇಸುತ್ತಿಲ್ಲ. ಇಂಥ ಸುಳ್ಳುಗಳನ್ನು ದಿನಾ ಓದುತ್ತಾ ಮತ್ತು ವೀಕ್ಷಿಸುತ್ತಾ ಬರುವ ಜನಸಾಮಾನ್ಯರಿಗೆ ನಿಧಾನವಾಗಿ ಇದು ನಿಜ ಇರಬಹುದು ಎಂದೇ ಅನಿಸತೊಡಗುತ್ತದೆ. ಮುಸ್ಲಿಮರೇ ದೇಶದ ಬಹುದೊಡ್ಡ ಸಮಸ್ಯೆ ಎಂದು ಅವರು ಅಂದುಕೊಳ್ಳತೊಡಗುತ್ತಾರೆ. ಹೀಗೆ ಜನಸಾಮಾನ್ಯರು ಭಾವಿಸತೊಡಗಿದ ದಿನದಿಂದ ರಾಜಕಾರಣಿಗಳು ಸುರಕ್ಷಿತರಾಗುತ್ತಾರೆ. ಈ ಜನಸಾಮಾನ್ಯರಿಗೆ ಅವರ ಭ್ರಷ್ಟಾಚಾರಕ್ಕಿಂತ ಮುಸ್ಲಿಮರೇ ಮುಖ್ಯವಾಗುತ್ತಾರೆ. ಅಭಿವೃದ್ಧಿಗಿಂತಲೂ ಮುಸ್ಲಿಮ್ ಇಶ್ಯುಗಳೇ ಜನಸಾಮಾನ್ಯರಿಗೆ ಮುಖ್ಯವಾಗುತ್ತದೆ. ಮುಸ್ಲಿಮರ ಬಗ್ಗೆ ಹೀಗೆ ಸುಳ್ಳು ಸುಳ್ಳೇ ಬಿತ್ತಲಾದ ಭೀತಿಯು ಇದರ ಹಿಂದಿರುವ ರಾಜಕೀಯ ಶಕ್ತಿಗಳಿಗೆ ಮತ ಚಲಾಯಿಸಲೇಬೇಕಾದ ಒತ್ತಡವನ್ನು ಜನಸಾಮಾನ್ಯರ ಮೇಲೆ ಹಾಕುತ್ತಲೇ ಇರುತ್ತದೆ. ಇವರು ಮತ ಚಲಾಯಿಸುತ್ತಾ ಹೋಗುತ್ತಾರೆ. ಮತ ಪಡೆದವರು ಮುಸ್ಲಿಮ್ ಭೀತಿಯನ್ನು ಮಾಧ್ಯಮಗಳ ಮೂಲಕ ಹಂಚುತ್ತಲೇ ಇರುತ್ತಾರೆ.

ಕಲಬುರಗಿಯ ಗೋರಿಗಳಾಗಲಿ ಛತ್ತೀಸ್‌ಗಢದ ನನ್ ಪ್ರಕರಣವಾಗಲಿ ಈ ಎರಡನ್ನೂ ನೋಡಬೇಕಾದದ್ದು ಕಾನೂನಿನ ದೃಷ್ಟಿಯಿಂದಲೇ ಹೊರತು ಮುಸ್ಲಿಮ್ ಮತ್ತು ಕ್ರೈಸ್ತ ಎಂಬ ಕನ್ನಡಿಯಲ್ಲಲ್ಲ. ಓರ್ವ ಪತ್ರಕರ್ತ ಮತ್ತು ಅಧಿಕಾರಿ ಈ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರೆ ಗೋರಿ ಬ್ರೇಕಿಂಗ್ ನ್ಯೂಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಅದೊಂದು ಸುದ್ದಿಯೇ ಅಲ್ಲ. ನೂರಾರು ವರ್ಷಗಳಿಂದ ಅಲ್ಲಿರುವ ಗೋರಿಗಳ ಬಗ್ಗೆ ಯಾರು ಸುಳ್ಳುಗಳನ್ನು ಹರಡಿದ್ದಾರೋ ಅವರನ್ನೇ ಪತ್ರಕರ್ತ ಹುಡುಕಿಕೊಂಡು ಹೋಗುತ್ತಾನೆ. ಅವರನ್ನೇ ಸಮಾಜದ ಮುಂದೆ ಬ್ರೇಕ್ ಮಾಡುತ್ತಾನೆ. ರೈಲ್ವೇ ಅಧಿಕಾರಿಯೂ ಇಂಥದ್ದೇ  ವಿವೇಚನೆಯನ್ನು ಪ್ರದರ್ಶಿಸುತ್ತಾನೆ. ತನ್ನ ಅನುಮಾನವನ್ನು ಪೊಲೀಸರಿಗೆ ತಿಳಿಸಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾನೆ. ಸಾರ್ವಜನಿಕರನ್ನು ಅನಗತ್ಯ ಆತಂಕಕ್ಕೆ ತಳ್ಳದೇ ಕಾನೂನಿನಡಿ ಪರಿಹಾರ ಕಂಡುಕೊಳ್ಳುತ್ತಾನೆ. ಆದರೆ, ಫೋಬಿಯಾದ ಈ ಕಾಲದಲ್ಲಿ ಮಾಧ್ಯಮಗಳೂ ವಿವೇಚನೆಯನ್ನು ಕಳಕೊಂಡು ಬಿಟ್ಟಿವೆ. ಅಧಿಕಾರಿಗಳೂ ಸೂಕ್ಷ್ಮತೆಯನ್ನು ಕಳಕೊಳ್ಳುತ್ತಿದ್ದಾರೆ. ಜನಸಾಮಾನ್ಯರಂತೂ ಸತ್ಯ-ಸುಳ್ಳಿನ ಕುಕ್ಕರಿನಲ್ಲಿ ದಿನಾ ಬೇಯುತ್ತಿದ್ದಾರೆ.

Monday, 28 July 2025

ಗಾಝಾ ನರಮೇಧಕ್ಕೆ ಪ್ರತಿಭಟನೆ ವ್ಯಕ್ತಪಡಿಸಬಾರದೇ?



ಸನ್ಮಾರ್ಗ ಸಂಪಾದಕೀಯ 

ಜುಲೈ 25ರಂದು ಬಾಂಬೆ ಹೈಕೋರ್ಟು ವ್ಯಕ್ತಪಡಿಸಿದ ಪರಾಮರ್ಶೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಪರಾಮರ್ಶೆಗೆ ಕಾರಣವಾದ ಘಟನೆ ಹೀಗಿದೆ-

ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ನಿರ್ಮೂಲನೆಯ ವಿರುದ್ಧ ಪ್ರತಿಭಟನೆ ನಡೆಸಲು ಆಲ್ ಇಂಡಿಯಾ ಪೀಸ್ ಆಂಡ್ ಸಾಲಿಡಾರಿಟಿ ಫೌಂಡೇಶನ್ (AIPSF) ಎಂಬ ಸಂಘಟನೆಯು ಜೂನ್ 13ರಂದು ಮುಂಬೈಯ ಆಝಾದ್ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಕೋರಿತ್ತು. ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ಹತ್ಯೆ ಕೊನೆಗೊಳ್ಳಬೇಕು ಮತ್ತು ಕದನ ವಿರಾಮ ಏರ್ಪಡಬೇಕು ಎಂಬ ಆಗ್ರಹದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಕೋರಿಕೆ ಪತ್ರದಲ್ಲಿ ಪೊಲೀಸರಿಗೆ ತಿಳಿಸಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಜೂನ್ 17ರಂದು ಅನುಮತಿ ನಿರಾಕರಿಸಿ ಪೊಲೀಸರು ಸೂಚನೆ ಹೊರಡಿಸಿದರು. ಆಝಾದ್ ಮೈದಾನದಲ್ಲಿ ಅಂಥ ದ್ದೊಂದು ಪ್ರತಿಭಟನೆಯು ಕಾನೂನು ಸುವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡಬಹುದು ಎಂದು ಅವರು ಕಾರಣವನ್ನು ನೀಡಿದರು. ಇದನ್ನು ಪ್ರಶ್ನಿಸಿ ಸಿಪಿಐಎಂ ಪಕ್ಷವು ಬಾಂಬೆ ಹೈಕೋರ್ಟಿನ ಬಾಗಿಲು ಬಡಿಯಿತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶರಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಖದ್ ಅವರು ವ್ಯಕ್ತಪಡಿಸಿದ ಅಭಿಪ್ರಾಯವೇ ಈಗ ಪ್ರಶ್ನೆಗೆ ಮತ್ತು ಟೀಕೆಗೆ ಒಳಗಾಗಿದೆ.

"ನಮ್ಮ ದೇಶದಲ್ಲೇ  ಬೇಕಾದಷ್ಟು ಸಮಸ್ಯೆಗಳಿವೆ, ಆದರೆ ನಮ್ಮ ದೇಶದ ಸಮಸ್ಯೆಗಳನ್ನು ನಿರ್ಲಕ್ಷಿಸಿ ನೀವು ಗಾಝಾ ಮತ್ತು ಫೆಲೆಸ್ತೀನ್ ಕಡೆ ನೋಡುತ್ತಿದ್ದೀರಿ, ಇದು ಸಂಕುಚಿತ ದೃಷ್ಟಿಕೋನ. ನೀವು ನಿಮ್ಮ ದೇಶದೊಳಗೆ ನೋಡಿ. ದೇಶಪ್ರೇಮಿಗಳಾಗಿ. ಈ ದೇಶದ ನಾಗರಿಕರಿಗಾಗಿ ಕೆಲಸ ಮಾಡಿ ದೇಶಪ್ರೇಮವನ್ನು ಪ್ರಕಟಿಸಿ. ಆದರೆ ನೀವು ಇದರ ಬದಲು ಸಾವಿರಾರು ಮೈಲು ದೂರ ಇರುವ ಫೆಲೆಸ್ತೀನ್ ಮತ್ತು ಗಾಝಾದ ಬಗ್ಗೆ ಗಮನ ಹರಿಸಿದ್ದೀರಿ. ಫೆಲೆಸ್ತೀನ್ ಪರ ನಿಲ್ಲಬೇಕೋ ಇಸ್ರೇಲ್ ಪರ ನಿಲ್ಲಬೇಕೋ ಎಂಬುದು ಭಾರತ ಸರಕಾರದ ಕೆಲಸ. ಇಂಥ ಸ್ಥಿತಿಯಲ್ಲಿ, ಭಾರತ ಸರಕಾರವು ಈ ಎರಡರಲ್ಲಿ ಯಾವುದಾದರೊಂದು ರಾಷ್ಟ್ರದ ಪರ ನಿಲುವು ತೆಗೆದುಕೊಳ್ಳಬೇಕಾದಂಥ ಪರಿಸ್ಥಿತಿಯನ್ನು ನೀವೇಕೆ ನಿರ್ಮಿಸುತ್ತಿದ್ದೀರಿ? ಇದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತಿರಲಿ..’ ಎಂದು ಸಿಪಿಎಂ ಪಕ್ಷದ ನ್ಯಾಯವಾದಿ ಮಿಹಿರ್ ದೇಸಾಯಿ ಅವರಿಗೆ ನ್ಯಾಯಾಧೀಶರು ಹೇಳಿದ್ದಾರೆ. ಅಂದಹಾಗೆ,

ಅಭಿಪ್ರಾಯ ಸ್ವಾತಂತ್ರ‍್ಯ ಮತ್ತು ಪ್ರಜಾತಂತ್ರವನ್ನು ಅತಿಶ್ರೇಷ್ಠವೆಂದು ಬಗೆಯುವ ಸಂವಿಧಾನ ಈ ದೇಶದಲ್ಲಿದೆ. ನ್ಯಾಯಾಲಯ ಅದರ ಅಧೀನದಲ್ಲೇ  ಕೆಲಸ ಮಾಡುತ್ತದೆ. ಈ ದೇಶದಲ್ಲಿ ಪೊಲೀಸರು ಸ್ವತಂತ್ರರಲ್ಲ. ಅದನ್ನು ಸರಕಾರ ನಿಯಂತ್ರಿಸುತ್ತದೆ. ಸರಕಾರ ಯಾವ ಪಕ್ಷದ್ದೋ  ಆ ಪಕ್ಷದ ನಿಲುವುಗಳನ್ನೇ ಪೊಲೀಸರು ವ್ಯಕ್ತಪಡಿಸುತ್ತಾರೆ. ಇಂಥ ಸ್ಥಿತಿಯಲ್ಲಿ, ಪಕ್ಷಾತೀತ ನ್ಯಾಯವನ್ನು ನಾಗರಿಕರು ನಿರೀಕ್ಷಿಸಬೇಕಾದದ್ದು ನ್ಯಾಯಾಲಯಗಳಿಂದ ಮಾತ್ರ. ಆದರೆ ಬಾಂಬೇ ನ್ಯಾಯಾಲಯದ ಪರಾಮರ್ಶೆಯು ಈ ನಿರೀಕ್ಷೆಗೆ ತಕ್ಕುದಾಗಿಲ್ಲ ಮತ್ತು ದೇಶ ಒಪ್ಪಿಕೊಂಡಿರುವ ಪರಂಪರಾಗತ ವಿದೇಶಾಂಗ ನೀತಿಗೂ ಹೊಂದಿಕೊಳ್ಳುತ್ತಿಲ್ಲ.

ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು ತನ್ನ ವಿದೇಶಾಂಗ ನೀತಿಯಾಗಿಯೇ ಒಪ್ಪಿ ಘೋಷಿಸಿದ ರಾಷ್ಟ್ರ ಭಾರತ. ಫೆಲೆಸ್ತೀನಿ ಜನತೆಯನ್ನು ಪ್ರತಿನಿಧಿಸುವ ಅಧಿಕೃತ ಸಂಘಟನೆ ಎಂದು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ(PLO)ನ್ನು 1974ರಲ್ಲೇ  ಅಂಗೀಕರಿಸಿದ ರಾಷ್ಟ್ರವೂ ಭಾರತವೇ. ಆ ಕಾಲದಲ್ಲಿ ಅರಬ್ ರಾಷ್ಟ್ರಗಳನ್ನು ಬಿಟ್ಟರೆ ಪಿಎಲ್‌ಓವನ್ನು ಹೀಗೆ ಘಂಟಾಘೋಷವಾಗಿ ಅಂಗೀಕರಿಸಿದ ಮೊತ್ತಮೊದಲ ಅರಬೇತರ ರಾಷ್ಟçವಾಗಿ ಪ್ರಶಂಸೆಗೆ ಒಳಗಾಗಿರುವುದೂ ಭಾರತವೇ. ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು 1988ರಲ್ಲೇ  ಭಾರತ ಅಂಗೀಕರಿಸಿದೆ. 2024ರ ಮೋದಿ ಸರಕಾರದ ಅವಧಿಯಲ್ಲಿ ಭಾರತ ಇನ್ನೂ ಒಂದು ಹೆಜ್ಜೆಯನ್ನು ಮುಂದಿಟ್ಟಿತು. ಫೆಲೆಸ್ತೀನಿಯರಿಗೆ ತಮ್ಮದೇ ದೇಶವನ್ನು ಹೊಂದುವ ಮತ್ತು ಸ್ವನಿರ್ಧಾರವನ್ನು ಹೊಂದುವ ಹಕ್ಕೂ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ಆಯೋಗದ ಮಂಡಿಸಿದ ಪ್ರಸ್ತಾಪದ ಪರ ಭಾರತ ಮತವನ್ನೂ ಚಲಾಯಿಸಿತು. ಅಲ್ಲದೇ, 1948ರ ನರಮೇಧ ವಿರೋಧಿ ನಿರ್ಣಯಕ್ಕೆ ಸಹಿ ಹಾಕಿದ ದೇಶವೂ ಭಾರತವೇ. ಜೊತೆಗೇ, ಗಾಝಾದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಭಾರತ ಸರಕಾರ ಈಗಾಗಲೇ ವಿರೋಧವನ್ನೂ ವ್ಯಕ್ತಪಡಿಸಿದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ಪ್ರಧಾನಿ ಇಂದಿರಾ ಗಾಂಧಿ, ವಾಜಪೇಯಿ ಮತ್ತು ನರೇಂದ್ರ ಮೋದಿಯವರ ವರೆಗೆ ಫೆಲೆಸ್ತೀನ್ ವಿಷಯದಲ್ಲಿ ಭಾರತದ ನಿಲುವು ಬದಲಾಗಿಲ್ಲ. ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯ ವಿರುದ್ಧ ಭಾರತ ಹೇಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತುತ್ತಾ ಬಂದಿತ್ತೋ ಅದೇರೀತಿಯಲ್ಲಿ ಫೆಲೆಸ್ತೀನ್ ಪರ ನಿಲುವನ್ನೂ ಭಾರತ ತನ್ನ ವಿದೇಶಾಂಗ ನೀತಿಯಾಗಿಯೇ ಘೋಷಿಸುತ್ತಾ ಬಂದಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದಿಂದ 200 ವರ್ಷಗಳ ಕಾಲ ಎದುರಿಸಿದ ದೌರ್ಜನ್ಯದ ಸ್ವಯಂ ಅನುಭವವೇ ಇವತ್ತು ಇಸ್ರೇಲ್‌ನ ಹಿಡಿತದಲ್ಲಿರುವ ಫೆಲೆಸ್ತೀನಿಯರ ನೋವುಗಳನ್ನು ತಿಳಿದುಕೊಳ್ಳಲು ಭಾರತಕ್ಕೆ ಧಾರಾಳ ಸಾಕು. ಸಾಮ್ರಾಜ್ಯಶಾಹಿತ್ವದ ಪ್ರಬಲ ವಿರೋಧಿಯಾಗಿ ಭಾರತ ಮಾರ್ಪಟ್ಟಿರುವುದು ಮತ್ತು ಅದನ್ನೇ ತನ್ನ ವಿದೇಶಾಂಗ ನೀತಿಯಾಗಿ 1947ರಿಂದಲೇ ಪಾಲಿಸುತ್ತಿರುವುದೂ ಈ ಕಾರಣದಿಂದಲೇ. ಆದರೆ,

ಬಾಂಬೆ ಹೈಕೋರ್ಟಿನ ಪರಾಮರ್ಶೆ ಈ ಕುರಿತಂತೆ ತೀರಾ ನಿರಾಶೆಯನ್ನು ಉಂಟು ಮಾಡುವಂಥದ್ದಾಗಿದೆ. ಕೇಂದ್ರ ಸರಕಾರದ ವಿದೇಶಾಂಗ ನೀತಿಯೂ ಸೇರಿದಂತೆ ಯಾವುದೇ ನಿರ್ಧಾರವನ್ನು ಪ್ರಶ್ನಿಸುವ ಮತ್ತು ಬೆಂಬಲಿಸುವ ಸ್ವಾತಂತ್ರ‍್ಯವನ್ನು ಈ ದೇಶದ ಸಂವಿಧಾನವೇ ನಾಗರಿಕರಿಗೆ ನೀಡುತ್ತದೆ. ಸರಕಾರ ಪ್ರಶ್ನಾತೀತವಲ್ಲ. ಅಲ್ಲದೇ ಗಾಝಾ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವು ಗಾಝಾದ ವಿರುದ್ಧವೂ ಇಲ್ಲ. ಗಾಝಾಕ್ಕೆ ಔಷಧ ಮತ್ತು ಇನ್ನಿತರ ನೆರವುಗಳನ್ನು ಭಾರತ ಸರಕಾರವೇ ರವಾನಿಸಿದೆ. ಭಾರತೀಯರು ಸ್ವಯಂಪ್ರೇರಿತವಾಗಿ ಗಾಝಾಕ್ಕೆ ನೆರವಾಗುವುದನ್ನು ಸರಕಾರ ನಿಷೇಧಿಸಿಯೂ ಇಲ್ಲ. ಒಂದುವೇಳೆ, ಗಾಝಾದ ನರಮೇಧವನ್ನು ಪ್ರತಿಭಟಿಸುವುದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದಾಗಿದ್ದರೆ ಗಾಝಾಕ್ಕೆ ನೆರವಾಗುವ ಮೂಲಕ ಕೇಂದ್ರ ಸರಕಾರವೇ ಅದನ್ನು ಉಲ್ಲಂಘಿಸಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ಯಾವುದೇ ದೇಶದ ನಾಗರಿಕರು ಒಂದುಕಡೆ ಸೇರಿ ವ್ಯಕ್ತಪಡಿಸುವ ಅಭಿಪ್ರಾಯವು ಅಲ್ಲಿನ ಸರಕಾರದ ಅಭಿಪ್ರಾಯವಾಗಬೇಕೆಂದಿಲ್ಲ. ಸರಕಾರದ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದೇ ಇರುವ ಸ್ವಾತಂತ್ರ‍್ಯಕ್ಕೆ ಆ ದೇಶದಲ್ಲಿ ಮನ್ನಣೆ ಇದೆ ಎಂಬುದೇ ಅದರ ಅರ್ಥ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ನೇತನ್ಯಾಹು ಪರ ಬಲವಾಗಿ ನಿಂತಿರುವಾಗ ಅಲ್ಲಿನ ನಾಗರಿಕರು ಟ್ರಂಪ್ ವಿರುದ್ಧ ನಿಂತಿದ್ದಾರೆ. ಗಾಝಾದ ನರಮೇಧದ ವಿರುದ್ಧ ರ‍್ಯಾಲಿ ನಡೆಸುತ್ತಿದ್ದಾರೆ. ಪ್ರತಿದಿನವೆಂಬಂತೆ  ಪ್ರತಿಭಟಿಸುತ್ತಿದ್ದಾರೆ. ಯುರೋಪಿನ ಅನೇಕ ರಾಷ್ಟçಗಳಲ್ಲಿ ಆ ರಾಷ್ಟ್ರಗಳ ಅಧಿಕೃತ ವಿದೇಶಾಂಗ ನೀತಿಯ ವಿರುದ್ಧ ಇವತ್ತೂ ಪ್ರತಿಭಟನೆಗಳಾಗುತ್ತಿವೆ. ಇಸ್ರೇಲ್ ನರಮೇಧವನ್ನು ಖಂಡಿಸಿ ಮತ್ತು ಗಾಝಾದ ಜನರ ಪರವಾಗಿ ಅಲ್ಲೆಲ್ಲಾ  ಜನರು ಬೀದಿಗಿಳಿದಿದ್ದಾರೆ. ಇದು ಆ ದೇಶಗಳಲ್ಲಿರುವ ಪ್ರಜಾತಂತ್ರವನ್ನು ಮತ್ತು ನಾಗರಿಕ ಸ್ವಾತಂತ್ರ‍್ಯಕ್ಕಿರುವ ಮಹತ್ವವನ್ನು ಹೇಳುತ್ತದೆ. ಆದರೆ,

ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ವಿದೇಶಾಂಗ ನೀತಿ ತೀರಾ ಸ್ಪಷ್ಟವಿದೆ. ಅದು ಸ್ವತಂತ್ರ ಫೆಲೆಸ್ತೀನ್ ರಾಷ್ಟçದ ಪರ ಮತ್ತು ಸಾಮ್ರಾಜ್ಯಶಾಹಿತ್ವದ ವಿರುದ್ಧವಿದೆ. ಅಲ್ಲದೇ, ವಸುದೈವ ಕುಟುಂಬಕಂ  ಎಂಬ ಉದಾತ್ತ ಪರಿಕಲ್ಪನೆಯಲ್ಲಿ ವಿಶ್ವಾಸ ಇಟ್ಟ ಮತ್ತು ಅದನ್ನು ಪ್ರತಿಪಾದಿಸುವ ರಾಷ್ಟç ನಮ್ಮದು. ಜಗತ್ತಿನ ಎಲ್ಲರೂ ಒಂದು ಕುಟುಂಬವಾಗಿದ್ದಾರೆ ಎಂಬ ನೀತಿಯಲ್ಲಿ ಇಸ್ರೇಲೂ ಬರುತ್ತದೆ, ಫೆಲೆಸ್ತೀನೂ ಬರುತ್ತದೆ. ಈ ಕುಟುಂಬದಲ್ಲಿ ಓರ್ವನ ಮೇಲೆ ದೌರ್ಜನ್ಯವಾಗುತ್ತಿದೆ ಎಂದಾದರೆ ಕುಟುಂಬದ ಸದಸ್ಯನಾಗಿ ಅದನ್ನು ಪ್ರಶ್ನಿಸಬೇಕಾದ ಹೊಣೆಗಾರಿಕೆ ನಮಗಿದೆ. ಆ ದೌರ್ಜನ್ಯವನ್ನು ಬಲವಂತದಿಂದ  ತಡೆಯುವ ಸಾಮರ್ಥ್ಯವಿದ್ದರೆ ಅದನ್ನು ತಡೆಯಬೇಕು. ಒಂದುವೇಳೆ, ಆ ಅವಕಾಶ ಇಲ್ಲವೆಂದಾದರೆ ಅದನ್ನು ಪ್ರಶ್ನಿಸುವ ಸ್ವಾತಂತ್ರ‍್ಯವನ್ನು ಬಳಸಿಕೊಳ್ಳಬೇಕು. ಆ ಮೂಲಕ ದೌರ್ಜನ್ಯ ನಡೆಸುವ ವ್ಯಕ್ತಿಯ ವಿರುದ್ಧ ಉಳಿದ ಸದಸ್ಯರನ್ನು ಒಟ್ಟುಗೂಡಿಸಬೇಕು. ದೌರ್ಜನ್ಯಕೋರನನ್ನು ಶಿಕ್ಷಿಸುವ ಮತ್ತು ಸಂತ್ರಸ್ತನನ್ನು ರಕ್ಷಿಸುವ ಪ್ರಯತ್ನವನ್ನು ಮಾಡಬೇಕು. ಸದ್ಯ ಫೆಲೆಸ್ತೀನ್ ದೌರ್ಜನ್ಯವನ್ನು ಎದುರಿಸುತ್ತಿದೆ. ಇಸ್ರೇಲ್ ಅಪರಾಧಿ ಸ್ಥಾನದಲ್ಲಿದೆ. ಇದನ್ನು ಪ್ರಶ್ನಿಸುವುದನ್ನು ದೇಶಪ್ರೇಮದ ಕೊರತೆ ಎಂಬಂತೆ  ನ್ಯಾಯಾಲಯವೇ ಹೇಳುವುದು ದುರದೃಷ್ಟಕರ.