Friday, 24 September 2021

2014ರ ಮೊದಲಿನ ಚಿತ್ರಗಳು ಹೇಳುತ್ತಿರುವ ಕತೆ

 


ಸನ್ಮಾರ್ಗ ಸಂಪಾದಕೀಯ 

2020 ಮೇ ತಿಂಗಳಿನಲ್ಲಿ ಈ ದೇಶದಲ್ಲಿ ಅಡುಗೆ ಅನಿಲದ ಬೆಲೆ 581 ರೂಪಾಯಿಯಿತ್ತು. ಈಗ 925 ರೂಪಾಯಿ. 2014ರಲ್ಲಿ ಅಡುಗೆ  ಅನಿಲದ ಬೆಲೆ 414 ರೂಪಾಯಿಯಷ್ಟೇ ಇತ್ತು. ಆಗ ಮನ್‌ಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಇದೇ ಅವಧಿಯಲ್ಲಿ ಪೆಟ್ರೋಲ್ ಬೆಲೆ  71 ರೂಪಾಯಿ ಇತ್ತು. ಇವತ್ತು 106 ರೂಪಾಯಿಯನ್ನೂ ದಾಟಿ ಹೋಗಿದೆ. 2014ರಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ  ಬೆಲೆ ಬ್ಯಾರಲೊಂದಕ್ಕೆ 109 ಡಾಲರ್‌ಗಳಿದ್ದಾಗಲೂ ಪ್ರಧಾನಿ ಮನ್‌ಮೋಹನ್ ಸಿಂಗ್‌ರು ಅದರ ಹೊರೆಯನ್ನು ಭಾರತೀಯರ ಮೇಲೆ  ಹೊರಿಸದೆಯೇ 71 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ದಕ್ಕುವಂತೆ ಮಾಡಿದ್ದರು. ಇವತ್ತು ಅಂತಾರಾಷ್ಟ್ರೀ ಯ ತೈಲ  ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬರೇ 78 ಡಾಲರ್. ಆದರೆ, ಅದರ ಲಾಭವನ್ನು ಭಾರತೀಯರಿಗೆ ವರ್ಗಾಯಿಸುವ ಬದಲು  ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರಕಾರ 100 ರೂಪಾಯಿಯ ಗಡಿ ದಾಟಿಸಿ ಖಜಾನೆ ತುಂಬಿಸುತ್ತಿದೆ. ಪ್ರಶ್ನಿಸಿದರೆ ಎಲ್ಲ ಆರೋಪವನ್ನೂ  ಮನ್‌ಮೋಹನ್ ಸಿಂಗ್ ಸರಕಾರದ ಮೇಲೆ ಹೊರಿಸಿ ತಾನು ಶುದ್ಧ ಹಸ್ತ ಎಂದು ಬಿಂಬಿಸಿಕೊಳ್ಳುತ್ತಿದೆ. ಮನ್‌ಮೋಹನ್ ಸಿಂಗ್ ಸರ್ಕಾರ  ಆಯಿಲ್ ಬಾಂಡ್‌ನ ಹೆಸರಲ್ಲಿ ಮಾಡಿರುವ ಸಾಲವನ್ನು ಸಂದಾಯಿಸಲು ಈ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ ಎಂಬ ಸಬೂಬು ಕೇಂದ್ರ  ಸರಕಾರದ್ದು. ಆದರೆ, 

ಅದೂ ನಿಜವಲ್ಲ. ಆಯಿಲ್ ಬಾಂಡ್‌ನ ಹೆಸರಲ್ಲಿ ಇದ್ದ ಸಾಲ ಹೆಚ್ಚೆಂದರೆ 1.34 ಲಕ್ಷ  ಕೋಟಿ ರೂಪಾಯಿ. ಅಲ್ಲದೇ,  ಈ ಆಯಿಲ್ ಬಾಂಡ್ ಪದ್ಧತಿಯನ್ನು ಆರಂಭಿಸಿದ್ದೂ ಮನ್‌ಮೋಹನ್ ಸಿಂಗ್ ಸರಕಾರವಲ್ಲ, ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ  ಎಂಬ ವಾದವೂ ಇದೆ. ಅದೇನಿದ್ದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಿಂದ ಕಳೆದ 7 ವರ್ಷಗಳಲ್ಲಿ ಸುಂಕದ ರೂಪದಲ್ಲಿ 25 ಲಕ್ಷ   ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರ ಈಗಾಗಲೇ ಸಂಗ್ರಹಿಸಿದೆ. ಆದರೆ ಇಷ್ಟು ಅಗಾಧ ಮೊತ್ತ ಸಂಗ್ರಹಿಸಿದ್ದರೂ ಬರೇ 35  ಸಾವಿರ ಕೋಟಿ ರೂಪಾಯಿಯನ್ನು ಮಾತ್ರ ಆಯಿಲ್ ಬಾಂಡ್ ಸಾಲದ ಮರುಪಾವತಿ ಮಾಡಿದೆ. ಹಾಗಿದ್ದರೆ ಇಷ್ಟು ಬೃಹತ್  ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿರುವ ತೆರಿಗೆ ಹಣ ಏನಾದುವು? ಆಯಿಲ್ ಬಾಂಡ್‌ನ ಸಾಲದ 25 ಪಟ್ಟು ಅಧಿಕ ಹಣವನ್ನು ತೆರಿಗೆ  ರೂಪದಲ್ಲಿ ಸಂಗ್ರಹಿಸಿದ ಹೊರತಾಗಿಯೂ ತೈಲ ಬೆಲೆಯನ್ನು ಇಳಿಸದಿರುವುದು ಏಕೆ?

2020 ಮೇ ತಿಂಗಳಿನಿಂದ  ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರಕಾರ ಯಾವ ಸೂಚನೆಯನ್ನೂ ನೀಡದೆಯೇ  ದಿಢೀರಿರ್ ಸ್ಥಗಿತಗೊಳಿಸಿದೆ. ದೇಶದಲ್ಲಿ ಸುಮಾರು 29 ಕೋಟಿ ಅಡುಗೆ ಅನಿಲದ ಗ್ರಾಹಕರಿದ್ದಾರೆ. 2016ರಲ್ಲಿ ಕೇಂದ್ರ ಸರಕಾರವು  ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತಂದಿತು. ಅದರ ಮುಖ್ಯ ಗುರಿ ಇದ್ದುದು ತೆರೆದ ಒಲೆಯ ಮೂಲಕ ಅಡುಗೆ  ಮಾಡುವ ಸಾಂಪ್ರದಾಯಿಕ ವಿಧಾನಕ್ಕೆ ಇತಿಶ್ರೀ ಹಾಡುವುದು. ಗ್ರಾಮೀಣ ಪ್ರದೇಶದ ಮಂದಿ ಅಡುಗೆ ಅನಿಲಕ್ಕಿಂತ ಉರುವಲು ಮತ್ತು  ಕಟ್ಟಿಗೆಗಳನ್ನು ಉರಿಸಿಯೇ ಅಡುಗೆ ಮಾಡುವುದರಿಂದ ಅದರ ಹೊಗೆಯು ಅವರ ಹೃದಯ, ಶ್ವಾಸಕೋಶಗಳ ಮೇಲೆ ಅಡ್ಡಪರಿಣಾಮವನ್ನು ಬೀರುತ್ತಿದೆ, ಇದರಿಂದಾಗಿಯೇ ಭಾರತದಲ್ಲಿ ಪ್ರತಿವರ್ಷ 5 ಲಕ್ಷ  ಮಂದಿ ಸಾವನ್ನಪ್ಪುತ್ತಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆಯ  ವರದಿಯನ್ನೂ ಆ ಸಂದರ್ಭದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಆದ್ದರಿಂದ,

 ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಕಾರ 8  ಕೋಟಿ ಗ್ರಾಮೀಣ ಭಾರತದ ಬಡ ಜನರಿಗೆ ಅಡುಗೆ ಅನಿಲ ತಲುಪಿಸುವುದನ್ನು ಕೇಂದ್ರ ಸರಕಾರ ಗುರಿಯಾಗಿ ಇಟ್ಟುಕೊಂಡಿತ್ತು. ಆದರೆ  ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಕಂಡ ಈ ಯೋಜನೆಯು ಬರಬರುತ್ತಾ ಜನರ ಆಕರ್ಷಣೆಯನ್ನು ಕಳಕೊಂಡಿದೆ. ಈ ಯೋಜನೆಯನ್ವಯ ಸಿಲಿಂಡರ್ ಪಡೆದವರು ಮರು ಭರ್ತಿ ಮಾಡುವ ಪ್ರಕ್ರಿಯೆಯನ್ನೇ ನಿಲ್ಲಿಸುತ್ತಾ ಬಂದಿದ್ದಾರೆ ಮತ್ತು ಉರುವಲು ಆಧಾರಿತ  ಅಡುಗೆಗೆ ಮರಳಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅನ್ವಯ ಸಿಲಿಂಡರ್ ಪಡೆದ ಒಟ್ಟು 3.18 ಕೋಟಿ ಗ್ರಾಹಕರ ಪೈಕಿ ಶೇ.  17.4ರಷ್ಟು ಮಂದಿ ಒಮ್ಮೆಯೂ ಮರು ಬುಕಿಂಗ್ ಮಾಡಿಲ್ಲ. ಅಲ್ಲದೇ, ಇಡೀ ಒಂದು ವರ್ಷದಲ್ಲಿ ಶೇ. 34ರಷ್ಟು ಮಂದಿ ಬರೇ 1ರಿಂದ 3  ಸಿಲಿಂಡರ್‌ನಷ್ಟು ಮಾತ್ರ ಮರು ಬುಕಿಂಗ್ ಮಾಡಿದ್ದಾರೆ. ಅಂದರೆ ವರ್ಷವೊಂದರಲ್ಲಿ ಅತೀ ಹೆಚ್ಚೆಂದರೆ 3 ಸಿಲಿಂಡರ್‌ಗೆ ಬುಕಿಂಗ್  ಮಾಡಿದ್ದಾರೆ. ಇದರರ್ಥ ಅವರು ಉರುವಲು ಆಧಾರಿತ ಅಡುಗೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದೇ ಆಗಿದೆ. ಇದಷ್ಟೇ ಅಲ್ಲ,

2014ರ ಚುನಾವಣಾ ಭಾಷಣಗಳ ವೇಳೆ ನರೇಂದ್ರ ಮೋದಿ ದೊಡ್ಡದೊಂದು ನಿರೀಕ್ಷೆ ಹುಟ್ಟಿಸಿ ದ್ದರು. ಅದರಲ್ಲಿ ವರ್ಷಂಪ್ರತಿ 2 ಕೋಟಿ  ಉದ್ಯೋಗ ಸೃಷ್ಟಿ ಒಂದಾದರೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಮರಳಿ ತಂದು ಪ್ರತಿ ಭಾರತೀಯನ ಖಾತೆಗೆ 15 ಲಕ್ಷ  ತುಂಬುವುದೂ ಸೇರಿತ್ತು. ಇದಾಗಿ 7 ವರ್ಷಗಳು ಸಂದಿವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಬಿಡಿ, ಇರುವ ಉದ್ಯೋಗಗಳೇ  ಇವತ್ತು ನಷ್ಟ ಹೊಂದುತ್ತಿವೆ. ಇತ್ತೀಚಿನ ಬೆಳವಣಿಗೆ ಏನೆಂದರೆ, ಜನಪ್ರಿಯ ಕಾರು ತಯಾರಿಕಾ ಕಂಪೆನಿಯಾದ ಫೋರ್ಡ್, ಭಾರತದ ತನ್ನ  ಉತ್ಪಾದನಾ ಘಟಕವನ್ನು ಮುಚ್ಚುವುದಾಗಿ ಘೋಷಿಸಿದೆ. ಇದರಿಂದಾಗಿ ಸುಮಾರು 4 ಸಾವಿರ ಮಂದಿ ನೇರ ಉದ್ಯೋಗ ಕಳಕೊಳ್ಳಲಿದ್ದಾರೆ.  ಕೊರೋನಾ ಪೂರ್ವದಲ್ಲಿ ಮಾಡಲಾದ ನೋಟ್‌ಬ್ಯಾನ್, ಜಿಎಸ್‌ಟಿಗಳು ಮತ್ತು ಹಾಗೆಯೇ, ಕೊರೋನಾ ಕಾಲದ ಸಂಕಷ್ಟಗಳೂ  ಸೇರಿಕೊಂಡು ಲಕ್ಷಾಂತರ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಈ ಮೂಲಕ ಅಸಂಖ್ಯ ಮಂದಿ ನಿರುದ್ಯೋಗಿಗಳಾಗಿದ್ದಾರೆ. 2014ರಲ್ಲಿ  ರೈಲ್ವೆಯಲ್ಲಿ ಮಾತ್ರ ಸುಮಾರು 14 ಲಕ್ಷ ಉದ್ಯೋಗಿಗಳಿದ್ದರು. ಆದರೆ, ಈಗ ಈ ಉದ್ಯೋಗಿಗಳ ಸಂಖ್ಯೆಯು ಸುಮಾರು 12.53 ಲಕ್ಷಕ್ಕೆ  ಇಳಿಕೆಯಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ 7 ವರ್ಷಗಳ ಹಿಂದೆ 4 ಲಕ್ಷ  ಇದ್ದ ಉದ್ಯೋಗಿಗಳ ಪೈಕಿ ಈಗ 3.66 ಲಕ್ಷ  ಮಂದಿಯಷ್ಟೇ ಇದ್ದಾರೆ.  ವರ್ಷದಲ್ಲಿ ಎರಡು ಕೋಟಿ ಉದ್ಯೋಗ ಎಂಬ ಭರವಸೆಯಂತೆ ಕೇಂದ್ರ ಸರಕಾರವು ಈ ಕಳೆದ 7 ವರ್ಷಗಳಲ್ಲಿ 14 ಕೋಟಿ  ಉದ್ಯೋಗವನ್ನು ಸೃಷ್ಟಿ ಮಾಡಬೇಕಿತ್ತು. ಆದರೆ, ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 36 ಲಕ್ಷ  ಹುದ್ದೆಗಳು ಖಾಲಿ  ಇವೆ ಎಂಬುದು ಈಗಿನ ಅಂಕಿಅಂಶ. ಇನ್ನು ಸ್ವಿಸ್ ಬ್ಯಾಂಕ್‌ನಿಂದ  ಭಾರತಕ್ಕೆ ಕಪ್ಪು ಹಣವನ್ನು ತರುವುದು ಬಿಡಿ, ಭಾರತದ ಬ್ಯಾಂಕುಗಳಿಗೆ  ಸಾವಿರಾರು ಕೋಟಿ ರೂಪಾಯಿ ವಂಚಿಸಿ ಈ ಸರಕಾರದ ಕಣ್ಣ ಮುಂದೆಯೇ ವಿದೇಶಕ್ಕೆ ತೆರಳಿದವರನ್ನೂ ಮರಳಿ ಇಲ್ಲಿಗೆ ಕರೆತರಲು  ಸಾಧ್ಯವಾಗಿಲ್ಲ. ದಿನಬಳಕೆಯ ವಸ್ತುಗಳ ಬೆಲೆ ಬಡಜನರ ಕೈಗೆ ಎಟುಕದಷ್ಟು ಎತ್ತರಕ್ಕೆ ಹೋಗಿದೆ. 7 ವರ್ಷಗಳ ಹಿಂದೆ ಇದೇ ಬಿಜೆಪಿಯ  ನಾಯಕರು ಮತ್ತು ಕಾರ್ಯಕರ್ತರು ಬೆಲೆ ಏರಿಕೆಯನ್ನು ಪ್ರಶ್ನಿಸಿ ಮಾಡಿರುವ ಪ್ರತಿಭಟನೆಗಳಿಗೆ ಲೆಕ್ಕ ಮಿತಿಯಿಲ್ಲ. ಖಾಲಿ ಸಿಲಿಂಡರನ್ನು  ರಸ್ತೆಯಲ್ಲಿಟ್ಟು, ನಿತ್ಯ ಬಳಕೆಯ ವಸ್ತುಗಳ ಹಾರವನ್ನು ತಯಾರಿಸಿ, ಕೊರಳಿಗೆ ತೂಗು ಹಾಕಿ ಪ್ರತಿಭಟಿಸಿದ ಚಿತ್ರಗಳೆಲ್ಲ ಗೂಗಲ್‌ನಲ್ಲಿ  ಹುಡುಕಾಡಿದರೆ ರಾಶಿಗಟ್ಟಲೆ ಸಿಗುತ್ತಿವೆ. ಇವತ್ತು ಅದೇ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸುತ್ತಾ ತಿರುಗಾಡುತ್ತಿದ್ದಾರೆ. ದುರಂತ ಏ ನೆಂದರೆ,

2014ರಲ್ಲಿ ಯಾವುದನ್ನು ಜನದ್ರೋಹಿಯೆಂದು ಇದೇ ನಾಯಕರು ಹೇಳಿದ್ದರೋ ಅದನ್ನೇ ಈ 2021 ರಲ್ಲಿ ಅನಿವಾರ್ಯವೆಂದು  ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವತ್ತು ಈ ದೇಶ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತೆರಿಗೆ ವಿಧಿಸುತ್ತಿರುವ ದೇಶವಾಗಿ ಮಾರ್ಪಟ್ಟಿದೆ. 2014ರಲ್ಲಿ  ಅತೀವ ನಿರೀಕ್ಷೆಯನ್ನು ಹುಟ್ಟಿಸಿ ಅಧಿಕಾರಕ್ಕೆ ಬಂದ ಮೋದಿ ಸರಕಾರವು ಕಳೆದ 7 ವರ್ಷಗಳಲ್ಲಿ ಆ ನಿರೀಕ್ಷೆಗೆ ನ್ಯಾಯ ನೀಡುವಲ್ಲಿ ಸಂ ಪೂರ್ಣ ವಿಫಲವಾಗಿದೆ. ಸರಕಾರವನ್ನು ಈವರೆಗೆ ಉಳಿಸಿರುವುದು ಹಿಂದೂ-ಮುಸ್ಲಿಮ್, ಮಂದಿರ-ಮಸೀದಿ ಸುತ್ತ ಹೆಣೆದಿರುವ  ಧ್ರುವೀಕರಣ ರಾಜಕಾರಣವೇ ಹೊರತು ಅಭಿವೃದ್ಧಿ ರಾಜಕಾರಣವಲ್ಲ. ಧ್ರುವೀಕರಣ ರಾಜ ಕೀಯವು ಉನ್ಮಾದ ಆಧಾರಿತವಾದುದು. ಅದು  ಹೊಟ್ಟೆ ತುಂಬಿಸಲ್ಲ. ಅದು ಹೊಟ್ಟೆ ತುಂಬಿದವರಂತೆ  ನಟಿಸುವವರನ್ನಷ್ಟೇ ತಯಾರಿಸಬಲ್ಲುದು. ಈ ನಟನೆಗೂ ದೀರ್ಘಾಯುಷ್ಯವಿಲ್ಲ.

ಸನ್ಮಾರ್ಗಕ್ಕೆ 43: ಸಾಗಿ ಬಂದ ಹಾದಿ ಮತ್ತು ಸಾಗಬೇಕಾದ ಕಠಿಣ ಹಾದಿ

 



ವಿಶೇಷ ಸಂಪಾದಕೀಯ


ಕುರ್‌ಆನನ್ನು ಧಾರಾವಾಹಿಯಾಗಿ ಕನ್ನಡದಲ್ಲಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಬುಖಾರಿ ಹದೀಸ್ ಗ್ರಂಥವನ್ನು ಕನ್ನಡ ದಲ್ಲಿ  ಧಾರಾವಾಹಿಯಾಗಿ ಪ್ರಕಟಿಸಿದ ಮೊತ್ತಮೊದಲ ಪತ್ರಿಕೆ, ಪ್ರವಾದಿ ಚರಿತ್ರೆಯನ್ನು, ಇಸ್ಲಾಮೀ ಇತಿಹಾಸವನ್ನು, ಖಲೀಫರುಗಳ ಇತಿಹಾಸವನ್ನು.. ಹೀಗೆ ಹತ್ತು ಹಲವು ಪ್ರಥಮಗಳ ಮೈಲಿಗಲ್ಲನ್ನು ನೆಟ್ಟ ಹೆಮ್ಮೆ ಸನ್ಮಾರ್ಗಕ್ಕಿದೆ ಮತ್ತು ಕನ್ನಡದ ಮಣ್ಣಿನಲ್ಲಿ ಈ ಗರಿ ಸನ್ಮಾರ್ಗಕ್ಕೆ  ಮಾತ್ರವೇ ಇದೆ.

1978 ಎಪ್ರಿಲ್ 23ರಂದು ಹುಟ್ಟಿಕೊಂಡ ಸನ್ಮಾರ್ಗ ಕಳೆದ ನಾಲ್ಕು ದಶಕಗಳಲ್ಲಿ ಮಾಧ್ಯಮ ರಂಗಕ್ಕೆ ಕೊಟ್ಟಿರುವ ಕೊಡುಗೆಗಳ ಪಟ್ಟಿ  ಬಹುದೊಡ್ಡದಿದೆ. ಅದರಲ್ಲಿ ಅತ್ಯಂತ ಎತ್ತರದಲ್ಲಿರುವುದು- ಸತ್ಯ, ಮೌಲ್ಯಾಧಾರಿತ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ  ಆಧಾರಿತ ಪತ್ರಿಕೋದ್ಯಮ. ಇಬ್ರಾಹೀಮ್ ಸಈದ್, ನೂರ್ ಮುಹಮ್ಮದ್, ಸಾದುಲ್ಲಾರಿಂದ ಹಿಡಿದು ಅನೇಕ ಪತ್ರಕರ್ತರನ್ನು ಅದು  ತಯಾರಿಸಿದೆ. ತಜ್ಞ ಪತ್ರಕರ್ತರನ್ನು ಮಾಧ್ಯಮ ರಂಗಕ್ಕೆ ಧಾರೆಯೆರೆದಿದೆ. ಅನೇಕಾರು ಬರಹಗಾರರನ್ನು ಅದು ಸೃಷ್ಟಿಸಿದೆ.

ಮುಸ್ಲಿಮ್ ಮಹಿಳೆಯರು ಮಾಧ್ಯಮ ರಂಗದಲ್ಲಿ ಬೆರಳೆಣಿಕೆಯಷ್ಟಿದ್ದ ಕಾಲದಲ್ಲೇ  ಮಹಿಳಾ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬಂದ  ಸನ್ಮಾರ್ಗವು ಅಂತಿಮವಾಗಿ ಎರಡು ದಶಕಗಳ ಹಿಂದೆ ಅನುಪಮ ಎಂಬ ಮಹಿಳೆಯರಿಂದಲೇ ನಡೆಸಲ್ಪಡುವ ಪತ್ರಿಕೆಗೂ ಜನ್ಮ ನೀಡಿದೆ.  ಬರಹಗಳಿಗೆ ವಿಫುಲ ಅವಕಾಶಗಳನ್ನು ಒದಗಿಸಿರುವ ಸಾಮಾಜಿಕ ಜಾಲತಾಣಗಳ ಇಂದಿನ ದಿನಗಳಲ್ಲಿ ಇವ್ಯಾವುವೂ ಇಲ್ಲದ ಕಾಲಕ್ಕೆ  ಹೊರಳಿ ನೋಡುವಾಗ ಸನ್ಮಾರ್ಗ ಯುವ ಪ್ರತಿಭೆಗಳಿಗೆ ನೀಡಿದ ಬೆಂಬಲ ಮತ್ತು ಅವಕಾಶ ಖಂಡಿತ ಸ್ಮರಣೀಯ.

ಅಂದು ಮುಖ್ಯ ವಾಹಿನಿಯ ಕನ್ನಡ ಪತ್ರಿಕೆಗಳಂತೂ ಹೊಸಬರ ಬರಹಗಳಿಗೆ ಜಾಗ ನೀಡುತ್ತಿದ್ದುದು ಅಪರೂಪದಲ್ಲಿ ಅಪರೂಪ. ಏನೇ ಬರೆದರೂ ಪತ್ರ ವಿಭಾಗಕ್ಕಿಂತ ಮೇಲೇರಲು ಬಿಡದ ಅಲಿಖಿತ ಸಂಪಾದಕೀಯ ನಿಯಮವೊಂದು ಆ ಪತ್ರಿಕೆಗಳಲ್ಲಿತ್ತು. ಅದರಲ್ಲೂ  ಮುಸ್ಲಿಮ್ ಬರಹಗಾರರಂತೂ ಇಂಥ ಅಲಿಖಿತ ನಿಯಮದಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾದರು. ಬರೆಯುವ ಹುರುಪಿದ್ದರೂ  ಮತ್ತು ಪ್ರತಿಭೆ ಇದ್ದರೂ ಅದನ್ನು ಪ್ರಕಟಿಸಿ ಬೆನ್ನುತಟ್ಟಿ ಪ್ರೋತ್ಸಾಹಿಸುವಂತಹ ಪತ್ರಿಕೆಗಳ ಅಭಾವ ಸಾಕಷ್ಟಿತ್ತು. ಮುಸ್ಲಿಮರ ಆಚಾರ,  ವಿಚಾರ, ಧಾರ್ಮಿಕ ನಿಯಮಗಳು, ಸಂಸ್ಕೃತಿ, ಸಾಂಪ್ರದಾಯಿಕತೆ, ಧರ್ಮಗ್ರಂಥ.. ಇತ್ಯಾದಿಗಳ ಬಗ್ಗೆ ತಿಳಿದಿಲ್ಲದ ಮತ್ತು ತಿಳಿಯಲೂ  ಪ್ರಯತ್ನಿಸದ ಪತ್ರಕರ್ತರು ಸನ್ಮಾರ್ಗ ಹುಟ್ಟಿಕೊಂಡ ಕಾಲದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಅವರಿಂದಾಗಿ ಮುಸ್ಲಿಮರ ವರ್ಚಸ್ಸಿಗೆ ಆಗಾಗ  ಹಾನಿಯಾಗುತ್ತಲೂ ಇತ್ತು. ಅವರು ಮಾಡುತ್ತಿದ್ದ ವರದಿ, ಸುದ್ದಿ, ವಿಶ್ಲೇಷಣೆ ಎಲ್ಲವುಗಳೂ ಇಸ್ಲಾಮಿಗೆ ಸಂಬಂಧಿಸಿ ಶತದಡ್ಡತನವಾಗಿದ್ದರೂ  ಅದಕ್ಕೆ ಬರಹದಲ್ಲೇ  ಉತ್ತರ ಕೊಡಬಲ್ಲ ಸಮರ್ಥರು ಮುಸ್ಲಿಮರಲ್ಲಿ ಕಡಿಮೆಯಿದ್ದರು. ಇದಕ್ಕೆ ಪತ್ರಿಕೋದ್ಯಮದಲ್ಲಿ ಕಲಿಯುತ್ತಿರುವ  ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದುದು ಒಂದು ಕಾರಣವಾದರೆ, ಕುರ್‌ಆನನ್ನು ಮತ್ತು ಇಸ್ಲಾಮೀ ತತ್ವಸಂಹಿತೆಯನ್ನು ಕನ್ನಡದಲ್ಲಿ ಅಧ್ಯಯನ ನಡೆಸುವುದಕ್ಕೆ ಬೇಕಾದ ವ್ಯವಸ್ಥೆ ಇಲ್ಲದಿರುವುದು ಇನ್ನೊಂದು ಕಾರಣವಾಗಿತ್ತು. ಹಾಗೆಯೇ,

ಒಂದುವೇಳೆ, ಯಾರಾದರೂ ಬರೆದರೂ ಅದನ್ನು ಪ್ರಕಟಿಸುವ ಸೌಜನ್ಯವನ್ನು ಆ ಪತ್ರಿಕೆಗಳು ತೋರುತ್ತಲೂ ಇರಲಿಲ್ಲ. ಪತ್ರಿಕಾ ರಂಗದಲ್ಲಿ  ಸನ್ಮಾರ್ಗದ ಕೊಡುಗೆ ಏನು ಎಂಬುದು ಸ್ಪಷ್ಟವಾಗುವುದೇ ಇಲ್ಲಿ.

ಸನ್ಮಾರ್ಗ ಹುಟ್ಟಿಕೊಂಡಾಗ ಇದ್ದ ಎಣಿಕೆಯ ನಾಲ್ಕೈದು  ಬರಹಗಾರರ ಸಂಖ್ಯೆ ಪತ್ರಿಕೆ ಹುಟ್ಟಿ ವರ್ಷವಾಗುತ್ತಲೇ ದ್ವಿಗುಣವಾಯಿತು.  ಅದ್ಭುತ ಎನ್ನಬಹುದಾದ ಪ್ರತಿಭೆಗಳು ಸನ್ಮಾರ್ಗದ ಮೂಲಕ ಬೆಳಕಿಗೆ ಬಂದುವು. ಲೇಖನ, ವಿಶ್ಲೇಷಣೆ, ಪ್ರಬಂಧ, ಕತೆ, ಕವನ, ವಿಮರ್ಶೆ  ಇತ್ಯಾದಿಗಳನ್ನು ಮುಖ್ಯವಾಹಿನಿ ಪತ್ರಿಕೆಗಳಿಗೆ ಸಡ್ಡು ಹೊಡೆಯುವಷ್ಟು ಪ್ರಬುದ್ಧವಾಗಿ ಬರೆಯುವ ಬರಹಗಾರರು  ನಿರ್ಮಾಣವಾಗತೊಡಗಿದರು. ಅಲ್ಲಲ್ಲಿ ಬರಹಗಾರರನ್ನು ತಯಾರಿಸುವ ಕಮ್ಮಟಗಳೂ ನಡೆಯತೊಡಗಿದುವು. ಇದರ ಜೊತೆಗೇ ಕನ್ನಡ  ಭಾಷೆಯಲ್ಲಿ ಪವಿತ್ರ ಕುರ್‌ಆನ್‌ನ ಅನುವಾದವೂ ಸನ್ಮಾರ್ಗದಲ್ಲಿ ಧಾರಾವಾಹಿಯಾಗಿ ಬರತೊಡಗಿತು.

ಆವರೆಗೆ ಕನ್ನಡ ಮಣ್ಣಿಗೆ ಅರಬಿ ಭಾಷೆಯ ಕುರ್‌ಆನ್ ತಲುಪಿತ್ತೇ ಹೊರತು ಅದರ ಅನುವಾದ ತಲುಪಿರಲಿಲ್ಲ. ಅರಬಿಯಲ್ಲಿರುವ  ಕುರ್‌ಆನ್ ಹೇಳುವುದೇನು ಎಂಬುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳುವುದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳಿರಲಿಲ್ಲ. ಸನ್ಮಾರ್ಗ ಆ  ಬರವನ್ನು ನೀಗಿಸುವ ಮೂಲಕ ಮುಖ್ಯವಾಹಿನಿ ಪತ್ರಿಕೆಗಳಲ್ಲಿದ್ದ ಹಲವು ಪತ್ರಕರ್ತರ ಅಜ್ಞಾನವನ್ನು ನೀಗಿಸಲೂ ಯಶಸ್ವಿಯಾಯಿತು.  ಅದಕ್ಕಿಂತಲೂ ಮುಖ್ಯವಾಗಿ ಮುಸ್ಲಿಮರಲ್ಲಿದ್ದ ಅಜ್ಞಾನವನ್ನೂ ನೀಗಿಸಿತು. ಅವರಲ್ಲಿ ಅಕ್ಷರ ಪ್ರೀತಿಯನ್ನು ಕಲಿಸಿತು. ಮಾಧ್ಯಮ ಕ್ಷೇತ್ರಕ್ಕೆ ಮುಸ್ಲಿಮರನ್ನು ಸನ್ಮಾರ್ಗ  ಕೈಬೀಸಿ ಕರೆಯಿತು. ಅವರ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿತು. ಜೊತೆಗೇ ಮುಸ್ಲಿಮೇತರ ಬರಹಗಾರರಿಗೂ ಸರಿಸಮಾನ ಅವಕಾಶಗಳನ್ನು ಕೊಟ್ಟು ನಿಜ ಪತ್ರಿಕಾ ಗುಣವನ್ನು ಮೆರೆಯಿತು. ಮುಸ್ಲಿಮೇತರರನ್ನು ಅಂಕಣ ಬರಹಗಾರರಾಗಿಯೂ ಅದು ಗೌರವಿಸಿತು.

ಹೀಗೆ ಸಾಗಿ ಬಂದ ಸನ್ಮಾರ್ಗಕ್ಕೆ ಇದೀಗ 43 ವರ್ಷಗಳು ತುಂಬಿವೆ. ಇದು 44ನೇ ವರ್ಷದ ಪ್ರಥಮ ಸಂಚಿಕೆ. ಮುಖ್ಯವಾಹಿನಿಯ  ಪತ್ರಿಕೆಗಳಿಗೆ ಹೋಲಿಸಿದರೆ, ಅನೇಕ ‘ಇಲ್ಲ’ಗಳನ್ನು ತನ್ನ ಮೌಲ್ಯವಾಗಿ ಆರಂಭದಿಂದಲೂ ನೆಚ್ಚಿಕೊಂಡು ಬಂದಿರುವುದರಿಂದಲೋ ಏನೋ  ಇವತ್ತೂ ಕೆಲವು ಪ್ರಶ್ನೆ ಮತ್ತು ಸವಾಲುಗಳ ಜೊತೆಗೆಯೇ ಸನ್ಮಾರ್ಗ ಬದುಕುತ್ತಿದೆ. ಈ ಪತ್ರಿಕೆ ನಂಬಿಕೊಂಡ ಮೌಲ್ಯದ ಕಾರಣಕ್ಕಾಗಿ  ಹೆಚ್ಚಿನ ಜಾಹೀರಾತುಗಳು ತಿರಸ್ಕೃತವಾಗುತ್ತಾ ಬಂದಿವೆ. ಬ್ಯಾಂಕ್, ಮದ್ಯದ ಜಾಹೀರಾತು, ತಂಬಾಕು, ಜೂಜು, ಸಿನಿಮಾ ಜಾಹೀರಾತು,  ಅಶ್ಲೀಲತೆ, ಜ್ಯೋತಿಷ್ಯ ಮತ್ತು ವಿಶ್ವಾಸಾರ್ಹವೆಂದು ಮೇಲ್ನೋಟಕ್ಕೆ ಸ್ಪಷ್ಟವಾಗದ ಯಾವುದನ್ನೂ ಸನ್ಮಾರ್ಗ ಜಾಹೀರಾತಾಗಿ  ಸ್ವೀಕರಿಸಿಕೊಂಡೇ ಇಲ್ಲ. ಬಡ್ಡಿ, ಮದ್ಯ, ಜೂಜು, ಅಶ್ಲೀಲತೆಯ ವಿರುದ್ಧ ಸನ್ಮಾರ್ಗ ತನ್ನ ಆರಂಭ ಕಾಲದಿಂದ ಇಂದಿನವರೆಗೂ ಸಮರ  ಸಾರುತ್ತಲೇ ಬಂದಿದೆ. ಹಾಗಂತ,

ಮೌಲ್ಯಕ್ಕೆ ಇಷ್ಟೂ ನಿಷ್ಠವಾಗಿ ಅಂಟಿ ಕುಳಿತರೆ ಅದರ ಪರಿಣಾಮ ಏನು ಅನ್ನುವುದು ಎಲ್ಲರಿಗೂ ಗೊತ್ತು. ಆದಾಯದ ಮೇಲೆ ಅದು ತೀವ್ರ  ಅಡ್ಡ ಪರಿಣಾಮವನ್ನು ಬೀರುತ್ತದೆ. ಹೆಚ್ಚಿನ ಜಾಹೀರಾತುಗಳು ಮೌಲ್ಯನಿಷ್ಠೆಯೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಾಯಿಸುವ ರೂಪದ್ದಾಗಿರುವುದರಿಂದ ಅವನ್ನು ತಿರಸ್ಕರಿಸದೆ ಅನ್ಯ ದಾರಿಯೇ ಇಲ್ಲ. ಆದರೆ ಇಂಥ ಮೌಲ್ಯನಿಷ್ಠೆಯು ಅಂತಿಮವಾಗಿ ಪತ್ರಿಕೆಯ ಆಯುಷ್ಯದ  ಮೇಲೆ ಏಟು ಕೊಡತೊಡಗುತ್ತದೆ. ಮತ್ತೆ ಮತ್ತೆ ಬೀಳುವ ಇಂಥ ಏಟುಗಳು ಪತ್ರಿಕೆಯನ್ನು ದಣಿಯುವಂತೆ ಮಾಡಬಲ್ಲಷ್ಟು ಪ್ರಬಲವಾಗುತ್ತಾ  ಹೋಗುತ್ತದೆ. ಇಂಥ ಸ್ಥಿತಿಯಲ್ಲಿ ಸನ್ಮಾರ್ಗಕ್ಕೆ ಆಸರೆಯಾಗುವುದು- ಸಹೃದಯಿ ಬೆಂಬಲಿಗರು ಮತ್ತು ಓದುಗರು ಮಾತ್ರ.

ಇವತ್ತಿನ ದಿನಗಳಲ್ಲಂತೂ ಜನರಲ್ಲಿ ಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಕೊರೋನಾ ಈ ಅಸಾಮರ್ಥ್ಯದ ಮೇಲೆ ಇನ್ನಷ್ಟು  ಬರೆಯನ್ನು ಎಳೆದಿದೆ. ಈ ಬರೆ ಸನ್ಮಾರ್ಗದ ಮೇಲೂ ಪರಿಣಾಮ ವನ್ನು ಬೀರಿದೆ. ಇದರಿಂದ ಪಾರಾಗುವುದಕ್ಕೆ ಓದುಗರ ಬೆಂಬಲದ  ಅಗತ್ಯ ಇದೆ. ಮೌಲ್ಯದೊಂದಿಗೆ ರಾಜಿ ಮಾಡಿಕೊಳ್ಳದೇ ಪತ್ರಿಕೆಯೊಂದನ್ನು ನಡೆಸಲು ಸಾಧ್ಯ ಎಂಬುದನ್ನು ಕಳೆದ 4 ದಶಕಗಳಿಂದ ಸಾಧಿಸಿ  ತೋರಿಸುತ್ತಾ ಬಂದ ಸನ್ಮಾರ್ಗವು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಸವಾಲುಗಳನ್ನು ಎದುರಿಸಬೇಕಾದಂಥ ವಾತಾವರಣ ಇದೆ.  ಇದನ್ನು ಮೆಟ್ಟಿ ನಿಲ್ಲುವುದಕ್ಕಾಗಿ ಸನ್ಮಾರ್ಗ ಹಿತೈಷಿಗಳು ಜಾಹೀರಾತು ಮತ್ತು ಬೆಂಬಲ ಧನವನ್ನು ನೀಡುವ ಮೂಲಕ ಊರುಗೋಲಾಗಿ  ನಿಲ್ಲಬೇಕಾದ ಅಗತ್ಯ ಇದೆ.

ಕಳೆದುಹೋದ ನಾಲ್ಕು ದಶಕಗಳು ಸನ್ಮಾರ್ಗ ಮತ್ತು ಅದರ ಓದುಗರ ಪಾಲಿಗೆ ವೈಭವಯುತವಾದದ್ದು. ಈ ಅವಧಿಯಲ್ಲಿ ಅದು  ಪ್ರಭುತ್ವವನ್ನು ಎದುರು ಹಾಕಿಕೊಂಡಿದೆ. ಹಲವು ಕೇಸುಗಳನ್ನು ಜಡಿಸಿಕೊಂಡಿದೆ. ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರು ವರ್ಷಗಟ್ಟಲೆ  ನ್ಯಾಯಾಲಯಕ್ಕೆ ಅಲೆದಿದ್ದಾರೆ. ಸ್ಥಾಪಿತ ಹಿತಾಸಕ್ತಿಗಳ ಕೆಂಗಣ್ಣಿಗೆ ಪತ್ರಿಕೆ ಗುರಿಯಾಗಿದೆ. ಅಂಧಶ್ರದ್ಧೆ ಮತ್ತು ಅಸತ್ಯವನ್ನು ಪ್ರಶ್ನಿಸಿದ್ದಕ್ಕಾಗಿ  ಸಂಪಾದಕರ ಮೇಲೆ ಹಲ್ಲೆಯೂ ನಡೆದಿದೆ. ಸಂಪಾದಕೀಯ ಬಳಗ ಜೀವ ಬೆದರಿಕೆಯನ್ನೂ ಎದುರಿಸಿದೆ. ಹಾಗೆಯೇ, ಸನ್ಮಾರ್ಗ  ಪತ್ರಿಕೆಯನ್ನು ಕಟ್ಟಿ ಬೆಳೆಸಿದ ಮತ್ತು ಈ ಪತ್ರಿಕೆಗಾಗಿ ಎಲ್ಲವನ್ನೂ ಧಾರೆಯೆರೆದ ಸಂಪಾದಕರುಗಳಾದ ಇಬ್ರಾಹೀಮ್ ಸಈದ್ ಮತ್ತು  ನೂರ್ ಮುಹಮ್ಮದ್‌ರನ್ನೂ ಈ ಪಯಣದಲ್ಲಿ ಅದು ಕಳಕೊಂಡಿದೆ. ಇವರ ಜೊತೆಗೇ ಈ ಪತ್ರಿಕೆಯ ಏಳಿಗೆಗಾಗಿ ಹಗಲೂ ರಾತ್ರಿ ದುಡಿದ  ಮತ್ತು ತನು-ಮನ-ಧನದಿಂದ ಬೆಂಬಲಿಸಿದ ಹಲವರನ್ನೂ ಪತ್ರಿಕೆ ಕಳಕೊಂಡಿದೆ. ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸನ್ಮಾರ್ಗ  ಸ್ಮರಿಸುತ್ತದೆ. ಅವರೆಲ್ಲರಿಗೆ ಅಲ್ಲಾಹನು ಸೂಕ್ತ ಪ್ರತಿಫಲ ನೀಡಲಿ ಎಂದು ಪ್ರಾರ್ಥಿಸುತ್ತದೆ. ಜೊತೆಗೇ,

ಈ ನಾಲ್ಕು ದಶಕಗಳ ಅವಧಿಯಲ್ಲಿ ಸನ್ಮಾರ್ಗ ಇನ್ನೆರಡು ಮಹತ್ವಪೂರ್ಣ ಹೆಜ್ಜೆಗಳನ್ನೂ ಇರಿಸಿದೆ. ಒಂದು- ಸನ್ಮಾರ್ಗ ವೆಬ್‌ ಪೋರ್ಟಲ್, ಇನ್ನೊಂದು- ಸನ್ಮಾರ್ಗ ನ್ಯೂಸ್ ಚಾನೆಲ್. ತೀರಾ ಸಣ್ಣ ಅವಧಿಯಲ್ಲಿ ಅತ್ಯಂತ ದೊಡ್ಡ ಪರಿಣಾಮವನ್ನು ಬೀರಿದ ಮತ್ತು ಬೀರುತ್ತಿರುವ  ಇವೆರಡೂ ಸನ್ಮಾರ್ಗದ ಬಹುನಿರೀಕ್ಷೆಯ ಹೆಜ್ಜೆಗಳು. ಇವನ್ನೂ ಓದುಗರಾದ ಮತ್ತು ಸಹೃದಯಿ ದಾನಿಗಳಾದ ನೀವೇ ಬೆಳೆಸಬೇಕಾಗಿದೆ.  ಸನ್ಮಾರ್ಗ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ಕಾರ್ಯಕ್ರಮವನ್ನು ಪ್ರತಿದಿನ ವೀಕ್ಷಿಸುತ್ತಾ ಮತ್ತು ಗೆಳೆಯರಲ್ಲಿ ಹಂಚುತ್ತಾ ಸಬ್‌ ಸ್ಕ್ರೈಬ್   ಆಗುವಂತೆ ಒತ್ತಾಯಿಸಬೇಕಾಗಿದೆ. ಸನ್ಮಾರ್ಗ ಪತ್ರಿಕೆಯನ್ನೂ ಅವರಿಗೆ ಪರಿಚಯಿಸಬೇಕಾಗಿದೆ.

ಕಳೆದ 4 ದಶಕಗಳು ಸನ್ಮಾರ್ಗದ ಪಾಲಿಗೆ ಸಿಹಿಯನ್ನಷ್ಟೇ ನೀಡಿರುವುದಲ್ಲ, ಕಹಿಯನ್ನೂ ನೀಡಿದೆ. ಈ ಸಂದರ್ಭದಲ್ಲಿ ಓದುಗರು ನೀಡಿದ  ಬೆಂಬಲದಿಂದಲೇ ಕಹಿಯನ್ನು ಸಿಹಿಯಾಗಿ ಪರಿವರ್ತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಈ ಬೆಂಬಲ ನಿರಂತರವಾಗಿರಲಿ ಎಂಬ  ಹಾರೈಕೆಯೊಂದಿಗೆ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು.

Thursday, 23 September 2021

ಆತ್ಮಹತ್ಯೆ: ಮುಸ್ಲಿಮ್ ಸಮುದಾಯದ ಬಗ್ಗೆ ಅಧ್ಯಯನ ನಡೆಯಲಿ





ಹೊಸದಿಲ್ಲಿ


ಚಿಕ್ಕಮಗಳೂರು

ಈ ಎರಡೂ ನಗರಗಳ ನಡುವೆ ನೂರಾರು ಕಿಲೋ ಮೀಟರ್‌ಗಳಷ್ಟು ಅಂತರವಿದೆ. ಭಾಷೆ, ಆಹಾರ, ವೇಷ- ಭೂಷಣ ಮತ್ತು  ಸೌಲಭ್ಯಗಳ ದೊರಕುವಿಕೆಯಲ್ಲೂ ವ್ಯತ್ಯಾಸವಿದೆ. ವಾತಾವರಣವೂ ಭಿನ್ನವಾಗಿದೆ. ದೆಹಲಿಯಲ್ಲಿ ಸಿಗುವ ಪತ್ರಿಕೆಗಳ ಮುಖಪುಟ  ವಿಷಯಕ್ಕೂ ಚಿಕ್ಕಮಗಳೂರಿನಲ್ಲಿ ಲಭ್ಯವಾಗುವ ಪತ್ರಿಕೆಗಳ ಮುಖಪುಟ ಸಹಿತ ಬಹುತೇಕ ಎಲ್ಲ ಪುಟಗಳ ವಿಷಯಕ್ಕೂ ವ್ಯತ್ಯಾಸವಿರುತ್ತದೆ.  ಇಂಥ ಹಲವು ವ್ಯತ್ಯಾಸಗಳು ಹೊರತಾಗಿಯೂ ಒಂದು ವಿಷಯದಲ್ಲಿ ಮಾತ್ರ ಸಮಾನತೆಯಿದೆ. ಅದುವೇ ಆತ್ಮಹತ್ಯೆ. ಆಗಸ್ಟ್ 16 ರಂದು  ಸುಪ್ರೀಮ್ ಕೋರ್ಟಿನ ಹೊರಗೆ ಜೋಡಿಯೊಂದು ಆತ್ಮಹತ್ಯೆಗೆ ಪ್ರಯತ್ನಿಸಿತು. ಮೈಗೆ ಬೆಂಕಿ ಹಚ್ಚಿಕೊಂಡಿತು. ಬಳಿಕ ಆಗಸ್ಟ್ 21 ರಂದು  ಯುವಕ ಮೃತಪಟ್ಟ. ಆಗಸ್ಟ್ 24 ರಂದು ಯುವತಿಯೂ ಮೃತಪಟ್ಟಳು. ಇದಾಗಿ ಎರಡು ದಿನಗಳ ಬಳಿಕ ಚಿಕ್ಕಮಗಳೂರಿನಿಂದ  ಹೃದಯವಿದ್ರಾವಕ ಘಟನೆಯೊಂದು ವರದಿಯಾಯಿತು. ರಾತ್ರಿ ಕಾರಿನಲ್ಲಿ ನಿದ್ರೆಗೆ ಜಾರಿದ್ದ ಕುಟುಂಬವನ್ನು ಮಂಜುನಾಥ ಎಂಬವರು  ಭದ್ರಾನಾಲೆಗೆ ಚಲಾಯಿಸಿದ್ದಾರೆ. ಘಟನೆಯಲ್ಲಿ ಮಂಜುನಾಥ್ ಮತ್ತು ಅವರ ಅತ್ತೆ ಸುನಂದಮ್ಮ ಸಾವಿಗೀಡಾಗಿದ್ದಾರೆ. ಪತ್ನಿ ಮತ್ತು 12  ವರ್ಷದ ಪುಟ್ಟ ಮಗ ಈಜಿ ದಡ ಸೇರಿದ್ದಾರೆ. ಹೀಗೆ ಕಾರನ್ನು ನಾಲೆಗೆ ಧುಮುಕಿಸುವ ಮೊದಲ ಮಂಜುನಾಥ್ ಅವರು ತನ್ನ ಅಣ್ಣನ  ಪತ್ನಿ ಮತ್ತು ಮಗನಲ್ಲಿ ಸಾಯುವ ನಿರ್ಧಾರವನ್ನು ತಿಳಿಸಿದ್ದಾರೆ. ದಯವಿಟ್ಟು ಅಂತಹ ನಿರ್ಧಾರ ಮಾಡಬೇಡಿ ಎಂದು ಪರಿಪರಿಯಾಗಿ  ಅವರು ಗೋಗರೆದ ಸಂಗತಿಯನ್ನೂ ಮಾಧ್ಯಮಗಳು ವರದಿ ಮಾಡಿವೆ.

ರಾಷ್ಟ್ರೀಯ ಕ್ರೈಮ್  ರೆಕಾರ್ಡ್ ಬ್ಯೂರೋದ ಪ್ರಕಾರ, 2019ರಲ್ಲಿ ದೇಶದಲ್ಲಿ 1,39,123 ಆತ್ಮಹತ್ಯೆ ಗಳು ನಡೆದಿವೆ. ಅಂದರೆ ಪ್ರತಿದಿನ 381  ಮಂದಿ ಆತ್ಮಹತ್ಯೆಯ ಮೂಲಕ ಜೀವ ಕಳಕೊಂಡಿದ್ದಾರೆ. 2018 ರಲ್ಲಿ ಆತ್ಮಹತ್ಯೆಯ ಪ್ರಮಾಣ- 1,34,516 ಮತ್ತು 2017 ರಲ್ಲಿ 1,29,887  ಆಗಿತ್ತು. ಇದು ಆತಂಕಕಾರಿ. ಯಾಕೆಂದರೆ ವರ್ಷಂಪ್ರತಿ ಆತ್ಮಹತ್ಯೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇದೆ. ಪ್ರತಿ ವರ್ಷ ಜಾಗತಿಕವಾಗಿ 8  ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಿದೆ. ಅದರಲ್ಲಿ
17% ಪಾಲು ಭಾರತದ್ದೇ ಆಗಿದೆ. 1987 ರಿಂದ 2007ರ ನಡುವೆ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ 7.9 ರಿಂದ 10.30ಕ್ಕೆ   ಏರಿಕೆಯಾಗಿದೆ. 18 ರಿಂದ 30 ವರ್ಷದ ಒಳಗಿನ 48 ಸಾವಿರ ಮಂದಿ 2019 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗೆಯೇ  

ವಿದ್ಯಾರ್ಥಿಗಳ ಪಾಲಿಗಂತೂ 2019 ಘನಘೋರ. ರಾಷ್ಟ್ರೀಯ ಕ್ರೈಮ್  ರೆಕಾರ್ಡ್ ಬ್ಯೂರೋದ ವರದಿಯಂತೆ, 2019 ರಲ್ಲಿ  ಪ್ರತಿ ಒಂದು ಗಂಟೆಗೆ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 10,335 ವಿದ್ಯಾರ್ಥಿಗಳು 2019ರಲ್ಲಿ ಆತ್ಮಹತ್ಯೆ  ಮಾಡಿಕೊಂಡಿದ್ದು ಕಳೆದ 25 ವರ್ಷಗಳಲ್ಲೇ ಇದು ಅತ್ಯಧಿಕ ಎಂದು ಹೇಳಲಾಗಿದೆ. 1995 ರಿಂದ 2019ರ ನಡುವೆ ಒಂದು ಲಕ್ಷದ 70  ಸಾವಿರ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನಲ್ಲಿ 1995 ರಿಂದ 2008ರ ನಡುವೆ ಆತ್ಮಹತ್ಯೆ ಮಾಡಿಕೊಂಡವರ  ಸಂಖ್ಯೆಯೇ 85,824 ಆಗಿದೆ. ಅಷ್ಟಕ್ಕೂ,

ಈ ವರದಿಗಳೆಲ್ಲವೂ ಕೊರೋನಾ ಕಾಲಕ್ಕಿಂತ ಮೊದಲಿನವು. ಕೊರೋನಾ ಕಾಲವಂತೂ ಜನರನ್ನು ಎಲ್ಲಾ ರೀತಿಯಲ್ಲೂ ಹೈರಾಣಾಗಿಸಿದೆ.  ಆರ್ಥಿಕವಾಗಿಯೂ ಆರೋಗ್ಯದ ದೃಷ್ಟಿಯಿಂದಲೂ ಜನರನ್ನು ಒಗೆದೆಸೆದ ಅಪಕೀರ್ತಿ ಕೊರೋನಾಕ್ಕಿದೆ.
ಹೆಚ್ಚಿನ ಆತ್ಮಹತ್ಯೆಗಳು ಕ್ಷಣದ ಭಾವಾತಿರೇಕದ ಫಲಿತಾಂಶಗಳಾಗಿವೆ. ಆ ಕ್ಷಣದಲ್ಲಿ ಅವರನ್ನು ಸಕಾರಾತ್ಮಕ ಸಲಹೆಗಳು ಮತ್ತು ಸಾಂತ್ವನಗಳು  ಲಭ್ಯವಾದರೆ ಅದರಲ್ಲಿ ಆತ್ಮಹತ್ಯೆಯಿಂದ ವಿಮುಖಗೊಳಿಸ ಬಹುದು ಎಂದು ತಜ್ಞರೇ ಹೇಳುತ್ತಾರೆ. ಹಾಗಂತ, ಆತ್ಮಹತ್ಯೆ ಯಾವ  ಸಮಸ್ಯೆಗೂ ಪರಿಹಾರವಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಗೊತ್ತಿಲ್ಲ ಎಂದು ಹೇಳುವಂತಿಲ್ಲ. 

ಕಾಫಿ ಕೆಫೆ ಡೇಯ ಮಾಲಿಕ,  ಖ್ಯಾತ ಉದ್ಯಮಿ ಸಿದ್ಧಾರ್ಥ್ ಅವರು ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೋಟ್ಯಂತರ  ಬೆಲೆಬಾಳುವ ಉದ್ಯಮಗಳನ್ನು ನಡೆಸುತ್ತಿರುವ ಮತ್ತು ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿರುವ ಅವರಿಗೆ ಆತ್ಮಹತ್ಯೆ  ಪರಿಹಾರವಲ್ಲ ಎಂಬುದು ಗೊತ್ತಿರಲಿಲ್ಲ ಎಂದು ಹೇಳುವುದು ಅಪ್ರಬುದ್ಧತೆಯಾಗುತ್ತದೆ. ಮತ್ತೂ ಯಾಕೆ ಆತ್ಮಹತ್ಯೆ ಮಾಡಿಕೊಂಡರೆಂದರೆ,  ಆಪ್ತ ಸಮಾಲೋಚನೆಯ ಕೊರತೆ, ಸಮಸ್ಯೆಯನ್ನು ಇತರರಲ್ಲಿ ಹೇಳಿಕೊಳ್ಳದೇ ಮುಚ್ಚಿಟ್ಟು ಕೊರಗುವುದು ಮತ್ತು ಮರ್ಯಾದೆಗೆ  ಅಂಜುವುದು ಇತ್ಯಾದಿಗಳು ಕಾಣವಾಗಿರಬಹುದು. ಸಮಸ್ಯೆ ಎದುರಾದಾಗ ಸ್ವಯಂ ಕೊರಗುತ್ತಾ ಬದುಕುವುದರ ಬದಲು ಇತರರಲ್ಲಿ ಹಂಚಿಕೊಂಡು  ಪರಿಹಾರಗಳನ್ನು ಹುಡುಕುವುದು ಮತ್ತು ಯಾವ ಕ್ಷಣದಲ್ಲೂ ಧೈರ್ಯಗೆಡದಿರುವುದು ಬಹು ಅಗತ್ಯ. ಹಿರಿಯರನ್ನು  ನೋಡುತ್ತಾ ಕಿರಿಯರು ಬೆಳೆಯುತ್ತಾರೆ. ಹತ್ತನೇ ತರಗತಿಯಲ್ಲಿ ಫೇಲ್ ಅದುದಕ್ಕೋ ಕಡಿಮೆ ಅಂಕ ಪಡೆದುದಕ್ಕೋ ಬೇಸರ ಪಟ್ಟು  ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ದಿನದಲ್ಲಿ ಓರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು 2019ರ ಕ್ರೈಮ್ ವರದಿಯೇ ಹೇಳುತ್ತದೆ. ಹತ್ತನೇ ತರಗತಿ ವಿದ್ಯಾರ್ಥಿಯು ವಯಸ್ಸು ಹೆಚ್ಚೆಂದರೆ 16. ಈ ವಯಸ್ಸು ಆತ್ಮಹತ್ಯೆಯ ಬಗ್ಗೆ ಆಲೋಚಿಸು  ವಂತಹದ್ದೇ ಎಂದು ಒಮ್ಮೆ ಅವಲೋಕಿಸಿದರೂ ಹಿರಿಯರ ಆತ್ಮಹತ್ಯೆಗಳು ಕಿರಿಯರ ಮೇಲೆ ಬೀರುತ್ತಿರುವ ಪರಿಣಾಮವನ್ನು  ಅರಿತುಕೊಳ್ಳಬಹುದು. ಮೊಬೈಲ್ ಕೊಡಲಿಲ್ಲವೆಂದೋ, ಹೆತ್ತವರು ಗದರಿಸಿದರೆಂದೋ ಹೇಳಿಕೊಂಡು ಆತ್ಮಹತ್ಯೆ ಮಾಡುವ ಕಿರಿ  ವಯಸ್ಸಿನ ಮಕ್ಕಳಿದ್ದಾರೆ. ಮಕ್ಕಳಲ್ಲಿ ಸಿಟ್ಟು, ಸೆಡವು, ಹಠ ಸಾಮಾನ್ಯ. ಆದರೆ, ಆತ್ಮಹತ್ಯೆಯಂಥ ಅಪಾಯಕಾರಿ ಆಲೋಚನೆ ಅವರಲ್ಲಿ  ಹುಟ್ಟುವುದು ಹೇಗೆ? ಬಹುಶಃ ಹಿರಿಯರ ಆತ್ಮಹತ್ಯೆಯಿಂದಾದ ಪ್ರೇರಣೆಯೇ ಅವರಲ್ಲಿ ಇಂಥ ಭಯಾನಕ ಆಲೋಚನೆ ಹುಟ್ಟಲು ಸಾಧ್ಯ  ಎಂದೇ ಹೇಳಬೇಕಾಗುತ್ತದೆ. ಅಷ್ಟಕ್ಕೂ,

ಶಿಕ್ಷಿತರು ಹೆಚ್ಚಾದಂತೆಲ್ಲಾ ಆತ್ಮಹತ್ಯೆ ಪ್ರಕರಣಗಳಲ್ಲೂ ಹೆಚ್ಚಳವಾಗುತ್ತಿರುವುದಕ್ಕೆ ಏನು ಕಾರಣ? ಮೂರು ದಶಕಗಳ ಹಿಂದಿನ ಶೈಕ್ಷಣಿಕ  ಮಟ್ಟಕ್ಕೂ ಮತ್ತು ಜೀವನ ಸೌಲಭ್ಯಕ್ಕೂ ಹೋಲಿಸಿದರೆ ಇಂದು ಇವರಡೂ ರಂಗಗಳಲ್ಲೂ ಸಾಕಷ್ಟು ಪ್ರಗತಿಯಾಗಿದೆ. ಬೌದ್ಧಿಕವಾಗಿ  ಸಮಾಜ ಬೆಳೆದಿದೆ. ಆರ್ಥಿಕವಾಗಿ ಸಬಲವಾಗುತ್ತಿದೆ. ಜನರ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣಕ್ಕೆ ಬಹುಮುಖ ಪಾತ್ರ ಇದೆ ಎಂದಾದರೆ,  ಮತ್ತೇಕೆ ಆತ್ಮಹತ್ಯೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತಿದೆ? ಶಿಕ್ಷಣಕ್ಕೂ ಆತ್ಮಹತ್ಯೆಗೂ ಸಂಬಂಧ ಇಲ್ಲವೇ ಅಥವಾ ಶಿಕ್ಷಣವು ವ್ಯಕ್ತಿಯಲ್ಲಿ  ಅಪರಿಮಿತ ಆಸೆಯನ್ನು ಹುಟ್ಟು ಹಾಕುತ್ತಿದೆಯೇ? ಸಲ್ಲದ ಬಯಕೆಗಳಿಗೆ ಪ್ರೇರೇಪಿಸುತ್ತಿದೆಯೇ ಅಥವಾ ವ್ಯಕ್ತಿಗಳನ್ನು ದುರ್ಬಲರ ನ್ನಾಗಿಸುತ್ತಿದೆಯೇ? ಸವಾಲಿನ ಸಂದರ್ಭವನ್ನು ಅನಕ್ಷರಸ್ಥರಾದ ಹಿರಿಯರು ಎದುರಿಸಿದಂತೆ ಇವತ್ತಿನ ಶಿಕ್ಷಿತ ಸಮಾಜ ಎದುರಿಸುವಲ್ಲಿ  ಯಾಕೆ ವಿಫಲವಾಗುತ್ತಿದೆ? ಇಲ್ಲಿ ಪ್ರಮುಖ ಅಂಶವೊಂದನ್ನು ಗಮನಿಸಬೇಕು-

ಮುಸ್ಲಿಮ್ ಸಮುದಾಯದಲ್ಲಿ ಆತ್ಮಹತ್ಯೆಯ ಪ್ರಮಾಣ ತೀರಾ ತೀರಾ ಕಡಿಮೆ. ಇತರ ಸಮುದಾಯ
ಗಳಿಗೆ ಹೋಲಿಸಿದರೆ ಶೈಕ್ಷಣಿಕವಾಗಿ  ಭಾರತೀಯ ಮುಸ್ಲಿಮ್ ಸಮುದಾಯ ತೀರಾ ಕೆಳಮಟ್ಟದಲ್ಲಿದ್ದರೂ ಆತ್ಮಹತ್ಯೆಗೆ ಹೋಲಿಸಿದರೆ, ಇತರೆಲ್ಲಾ ಸಮುದಾಯಗಳಿಗೆ ಮಾದರಿ  ಅನ್ನುವ ರೀತಿಯಲ್ಲಿದೆ. ಈ ಸ್ಥಿತಿಗೆ ಕಾರಣವೇನು? ಇದೊಂದು ಅಧ್ಯಯನಯೋಗ್ಯ ಸಂಗತಿ. ಎಂಥ ಕಷ್ಟಕಾಲ ಎದುರಾದರೂ,  ಸಮಸ್ಯೆಗಳಿಗೆ ಈಡಾದರೂ ಮುಸ್ಲಿಮ್ ಸಮುದಾಯ ಆತ್ಮಹತ್ಯೆಯನ್ನು ಆಯ್ಕೆಯಾಗಿ ಆರಿಸಿಕೊಳ್ಳುತ್ತಿಲ್ಲ. ಇದಕ್ಕೆ ಧಾರ್ಮಿಕ ಕಾರಣವೇ  ಪ್ರಧಾನವಾದುದು ಎಂದು ಹೇಳಬೇಕಾಗುತ್ತದೆ. ಆತ್ಮಹತ್ಯೆಯನ್ನು ಇಸ್ಲಾಮ್ ಪಾಪವೆಂದು ಪರಿಗಣಿಸಿದೆ. ಆತ್ಮಹತ್ಯೆ ಮಾಡಿಕೊಳ್ಳುವವರು  ನರಕವಾಸಿಗಳು ಎಂದು ಅದು ಹೇಳುತ್ತದೆ. ಇಸ್ಲಾಮಿನ ಈ ಕಟ್ಟುನಿಟ್ಟಿನ ನಿಲುವು ಮುಸ್ಲಿಮ್ ಸಮುದಾಯದ ಮೇಲೆ ಗಾಢ ಪರಿಣಾಮ  ಬೀರಿರುವುದನ್ನು ಆತ್ಮಹತ್ಯೆಯ ಗ್ರಾಫೇ ಹೇಳುತ್ತಿದೆ. ಈ ವಿಷಯದಲ್ಲಿ ಅಧ್ಯಯನಗಳು ನಡೆಯಲಿ. ಸಂಶೋಧನಾತ್ಮಕ ಪ್ರಬಂಧಗಳು  ಮಂಡನೆಯಾಗಲಿ. 

Monday, 6 September 2021

ತಾಲಿಬಾನ್ ಪ್ರಶ್ನೆ: ಮುದಸ್ಸಿರ್ ಮತ್ತು ಜಲಾಲ್‌ಗೆ ಅಭಿನಂದನೆಗಳು

 



ಉಡುಪಿಯ ಕೋಟೇಶ್ವರ ಬೀಜಾಡಿ ಗ್ರಾಮದ ಗೋಯಾಡಿಬೆಟ್ಟುವಿನ ಹರೀಶ್ ಬಂಗೇರ ಅವರು ಕಳೆದವಾರ ಮಾಧ್ಯಮಗಳಲ್ಲಿ ಸು ದ್ದಿಗೊಳಗಾಗಿದ್ದಾರೆ. ಅಫಘಾನಿಸ್ತಾನದಿಂದ ಮರಳಿದ ಭಾರತೀಯರ ಅನುಭವಗಳ ಜೊತೆಜೊತೆಗೇ ಈ ಹರೀಶ್ ಬಂಗೇರರ ಅ ನುಭವಗಳನ್ನೂ ಮುದ್ರಣ ಮಾಧ್ಯಮಗಳು ಪ್ರಕಟಿಸಿವೆ. ಚಾನೆಲ್‌ಗಳು ಬಿತ್ತರಿಸಿವೆ. ಉಡುಪಿಗೆ ಆಗಮಿಸಿದ ಅವರು ಪತ್ರಿಕಾಗೋಷ್ಠಿಯನ್ನೂ  ನಡೆಸಿದ್ದಾರೆ. ಹಾಗಂತ,

ಅವರು ಆಗಮಿಸಿರುವುದು ಅಫಘಾನಿಸ್ತಾನದಿಂದ ಅಲ್ಲ, ಸೌದಿ ಅರೇಬಿಯಾದಿಂದ. ಒಂದು ವರ್ಷ ಎಂಟು ತಿಂಗಳ ಕಾಲ ಸೌದಿ  ಅರೇಬಿಯಾದ ಜೈಲಲ್ಲಿದ್ದು ಮರಳಿದ ಅವರಿಗೆ ಹೇಳಿಕೊಳ್ಳುವುದಕ್ಕೆ ಮತ್ತು ತನ್ನ ಒಡಲಿನ ಬೇಗುದಿಯನ್ನು ಇಳಿಸಿಕೊಳ್ಳುವುದಕ್ಕೆ ಸಾಕಷ್ಟು  ಸಂಗತಿಗಳಿದ್ದುವು. ಅವರು ಜೈಲು ಪಾಲಾಗಿರುವುದಕ್ಕೆ ಇಬ್ಬರು ಮುಸ್ಲಿಮ್ ಯುವಕರು ಕಾರಣವಾಗಿದ್ದರೆ, ಅವರು ಜೈಲಿನಿಂದ  ಬಿಡುಗಡೆಗೊಂಡು ಭಾರತಕ್ಕೆ ತಲುಪುವುದಕ್ಕೂ ಇಬ್ಬರು ಮುಸ್ಲಿಮ್ ಗೆಳೆಯರು ಕಾರಣರಾಗಿದ್ದರು. ಇವನ್ನು ಹೇಳಿಕೊಂಡದ್ದೂ ಅವರೇ.  ನಿಜವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಆವೇಶದಿಂದ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮತ್ತು ಇತರರ ಅಭಿಪ್ರಾಯಗಳಿಗೆ ಲೈಕ್  ಮತ್ತು ಕಮೆಂಟ್ ಮಾಡುವ ಬಿಸಿ ರಕ್ತದ ಯುವಕರಿಗೆ ಹರೀಶ್ ಬಂಗೇರ ಪ್ರಕರಣದಲ್ಲಿ ಸಾಕಷ್ಟು ಪಾಠಗಳಿವೆ.

2019 ಡಿಸೆಂಬರ್ 19ರಂದು ಹರೀಶ್ ಬಂಗೇರ ತನ್ನ ಫೇಸ್‌ಬುಕ್ ಪುಟದಲ್ಲಿ ಒಂದು ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಾರೆ.  ಸಿಎಎ-ಎನ್‌ಆರ್‌ಸಿ ಕಾಯ್ದೆಯ ಪರ ಮತ್ತು ವಿರುದ್ಧ ದೇಶದಲ್ಲಿ ಚರ್ಚೆಗಳಾಗುತ್ತಿದ್ದ ದಿನಗಳವು. ಇನ್ನಾರದೋ ವೀಡಿಯೋವನ್ನು ಶೇರ್  ಮಾಡಿದ ಹರೀಶ್ ಬಂಗೇರರಿಗೆ ಬೆದರಿಕೆಯ ಕರೆಗಳು ಬರುತ್ತವೆ. ಅವರಿಗೂ ತಪ್ಪಿನ ಮನವರಿಕೆಯಾಗುತ್ತದೆ. ಆದ್ದರಿಂದ ತಕ್ಷಣ ಅವರು  ಆ ವೀಡಿಯೋವನ್ನು ತನ್ನ ಪುಟದಿಂದ ಡಿಲೀಟ್ ಮಾಡುತ್ತಾರಲ್ಲದೇ, ಕ್ಷಮೆ ಯಾಚಿಸುವ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್  ಮಾಡುತ್ತಾರೆ. ಮಾತ್ರವಲ್ಲ, ಅದೇ ದಿನ ರಾತ್ರಿ ತನ್ನ ಫೇಸ್‌ಬುಕ್ ಖಾತೆಯನ್ನೇ ನಿಷ್ಕ್ರಿಯಗೊಳಿಸುತ್ತಾರೆ. ಇದನ್ನು ಹೇಳಿದ್ದೂ ಅವರೇ.  ಆದರೆ ಮರುದಿನ ಅವರದೇ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿ ಅದರಲ್ಲಿ ಸೌದಿ ದೊರೆ ಮತ್ತು ಮಕ್ಕಾದ ಮಸ್ಜಿದುಲ್  ಹರಮ್‌ನ ಬಗ್ಗೆ ಅವಹೇಳನಕಾರಿಯಾಗಿರುವ ಪೋಸ್ಟ್ ಹಾಕಲಾಗುತ್ತದೆ. ಅದಕ್ಕಾಗಿ ಅವರ ಮೇಲೆ ಕೇಸು ದಾಖಲಾಗುತ್ತದಲ್ಲದೇ, ಬಂಧ ನವಾಗುತ್ತದೆ. ಇದನ್ನು ಹೇಳಿದ್ದೂ ಅವರೇ. ಅಂದಹಾಗೆ,

ಮಾಡದ ತಪ್ಪಿಗೆ ತಾನು ಅನ್ಯಾಯವಾಗಿ ಜೈಲು ಪಾಲಾದೆ ಎಂಬ ನೋವು ಅವರ ಮಾತಿನಲ್ಲಿದೆ. ಅದರ ಜೊತೆಗೇ ತಾನು ಕೆಲಸ  ಮಾಡುತ್ತಿದ್ದ ಸಂಸ್ಥೆಯ ಇಬ್ಬರು ಮುಸ್ಲಿಮ್ ಗೆಳೆಯರು ಮತ್ತು ಇತರರು ತನ್ನ ನೆರವಿಗೆ ಬರದೇ ಇರುತ್ತಿದ್ದರೆ ತಾನು ಜೀವಂತ  ಉಳಿಯುತ್ತಿರಲಿಲ್ಲ ಎಂಬ ಕೃತಜ್ಞತಾ ಭಾವವೂ ಅವರಲ್ಲಿದೆ. ಅವರ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಅವರನ್ನು ಜೈಲು  ಪಾಲಾಗುವಂತೆ ನೋಡಿಕೊಂಡ ಆರೋಪಿಗಳು ಅವರದೇ ಊರಿನ ಇಬ್ಬರು ಮುಸ್ಲಿಮ್ ಯುವಕರಾಗಿದ್ದರೆ, ಸೌದಿಯಲ್ಲಿ ಅವರು ಕೆಲಸ  ಮಾಡುತ್ತಿದ್ದ ಕಂಪೆನಿಗೆ ನುಗ್ಗಿ ಅವರ ಮೇಲೆ ದಾಳಿ ನಡೆಸಲು ಮುಂದಾದ 50ರಷ್ಟಿದ್ದ ಗುಂಪಿನಿಂದ  ರಕ್ಷಿಸಿದ್ದೂ ಇಬ್ಬರು ಮುಸ್ಲಿಮ್  ಯುವಕರೇ ಆಗಿದ್ದಾರೆ. ಒಂದು ರೀತಿಯಲ್ಲಿ,

ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಬಯಸುವ ಪ್ರತಿಯೊಬ್ಬರೂ ಕ್ಷಣ ಹೊತ್ತು ಆಲೋಚಿಸಬೇಕಾದ ಸಂಗತಿ ಇದು.  ಆರೋಪಿ ಮುಸ್ಲಿಮ್ ಯುವಕರನ್ನು ಮತ್ತು ಆಪದ್ಭಾಂಧವರಾದ ಮುಸ್ಲಿಮ್ ಯುವಕರನ್ನು ಪರಸ್ಪರ ಮುಖಾಮುಖಿಯಾಗಿಸಿದಾಗ  ಸಿಗುವ ಫಲಿತಾಂಶವೇನು? ಒಳಿತು ಮತ್ತು ಕೆಡುಕಿಗೆ ಧರ್ಮದ ಭೇದ ಇಲ್ಲ. ಒಳಿತು ಒಂದು ಸಾರ್ವತ್ರಿಕ ಮೌಲ್ಯ. ಕೆಡುಕು ಕೂಡ  ಸಾರ್ವತ್ರಿಕ ಅಪಮೌಲ್ಯ. ಗಾಳಿ, ಬೆಳಕು, ನೀರು ಹೇಗೆ ಸರ್ವರಿಗೂ ಮುಕ್ತವಾಗಿ ಲಭ್ಯವಿದೆಯೋ ಮತ್ತು ಆಯ್ಕೆ ಸ್ವಾತಂತ್ರ‍್ಯವೂ  ಮುಕ್ತವಾಗಿದೆಯೋ ಹಾಗೆಯೇ ಒಳಿತು ಮತ್ತು ಕೆಡುಕುಗಳೂ ಮುಕ್ತ. ಯಾರಿಗೂ ಯಾವುದನ್ನೂ ಆಯ್ಕೆ ಮಾಡಿಕೊಳ್ಳಬಹುದು. ಹರೀಶ್  ಬಂಗೇರರಿಗೆ ಸಂಬಂಧಿಸಿ, ಇಬ್ಬರು ಮುಸ್ಲಿಮ್ ಯುವಕರು ಕೆಡುಕನ್ನು ಆಯ್ಕೆ ಮಾಡಿಕೊಂಡ ಆರೋಪವನ್ನು ಹೊತ್ತುಕೊಂಡರೆ,  ಮುದಸ್ಸಿರ್ ಮತ್ತು ಜಲಾಲ್ ಎಂಬವರು ಒಳಿತನ್ನು ಆಯ್ಕೆ ಮಾಡಿಕೊಂಡರು. ದುರಂತ ಏನೆಂದರೆ, ಕೆಡುಕನ್ನು ಆಯ್ಕೆ ಮಾಡಿಕೊಂಡ ಆ  ಯುವಕರನ್ನು ತರಾಟೆಗೆತ್ತಿಕೊಂಡವರು ಮತ್ತು ಕಟು ಭಾಷೆಗಳಲ್ಲಿ ಟೀಕಿಸಿದವರಲ್ಲಿ ಒಂದು ಶೇಕಡಾ ಮಂದಿಯೂ ಒಳಿತನ್ನು ಆಯ್ಕೆ  ಮಾಡಿಕೊಂಡ ಮುಸ್ಲಿಮ್ ಯುವಕರನ್ನು ಶ್ಲಾಘಿಸಲಿಲ್ಲ. ಕೆಡುಕು ಮಾಡುವುದಕ್ಕೆ ಆ ಯುವಕರ ಧರ್ಮ ಕಾರಣವೆಂದಾದರೆ, ಒಳಿತು  ಮಾಡಿರುವುದಕ್ಕೂ ಆ ಮುಸ್ಲಿಮ್ ಯುವಕರ ಧರ್ಮ ಕಾರಣವಾಗಿರಬೇಕಲ್ಲವೇ? ಈ ಬಗೆಯ ವಿಶ್ಲೇಷಣೆ ನಡೆದಾಗಲೇ ಮನುಷ್ಯ ಪರಿ ಪೂರ್ಣತೆಯತ್ತ ಸಾಗುತ್ತಾನೆ. ನಮ್ಮೊಳಗೆ ಎಲ್ಲೆಲ್ಲಿಂದಲೋ ಹೇಗೇಗೋ ಯಾವ್ಯಾವ ಕಾರಣದಿಂದಲೋ ಸೇರಿಕೊಂಡ ಧರ್ಮದ್ವೇಷ,  ಅಸಹನೆ, ದ್ವೇಷಭಾವಗಳು ಇಂಥ ವಿಶ್ಲೇಷಣೆಗಳಿಂದ ಕರಗಲು ಪ್ರಾರಂಭಿಸುತ್ತದೆ. ನಿಜವಾಗಿ,

ಮುಸ್ಲಿಮ್ ಆಗಿರುವ ಏಕೈಕ ಕಾರಣಕ್ಕಾಗಿ ಓರ್ವ ಒಳಿತು ಮಾಡುವುದಿಲ್ಲ. ಹಿಂದೂ ಆಗಿರುವ ಏಕೈಕ ಕಾರಣಕ್ಕಾಗಿ ಓರ್ವ ಕೆಡುಕೂ  ಮಾಡುವುದಿಲ್ಲ. ಅವೆರಡೂ ಮನುಷ್ಯನ ಆಯ್ಕೆ. ಧರ್ಮ ಹೇಗೆ ಆಯ್ಕೆಯೋ ಹಾಗೆಯೇ ಇದು. ಆದ್ದರಿಂದ ಕೆಡುಕನ್ನು ಕೆಡುಕಾಗಿ  ನೋಡಬೇಕೇ ಹೊರತು ಅದನ್ನು ಹಿಂದೂ ಕೆಡುಕು, ಮುಸ್ಲಿಮ್ ಕೆಡುಕು ಎಂದು ವಿಭಜಿಸುವುದೇ ಕ್ರೌರ್ಯ. ನಿಜವಾಗಿ, ಕೆಡುಕ ನ್ನೆಸಗಿದವರು ಹಿಂದುವೋ ಮುಸ್ಲಿಮೋ ಧರ್ಮದಲ್ಲಿರುವುದು ಆ ಧರ್ಮದ ಪಾಲಿಗೇ ಕೆಡುಕು. ಯಾಕೆಂದರೆ, ಕೆಡುಕನ್ನು ಬಯಸುವುದು  ಧರ್ಮವಾಗಲು ಸಾಧ್ಯವಿಲ್ಲ. ಅಂದಹಾಗೆ,

ತಾಲಿಬಾನನ್ನು ಉಲ್ಲೇಖಿಸುತ್ತಾ ಇಸ್ಲಾಮನ್ನು ಮತ್ತು ಷರಿಯಾವನ್ನು ಪ್ರಶ್ನಿಸುವ ಮತ್ತು ಅತ್ಯಂತ ಅವಹೇಳನಕಾರಿಯಾಗಿ ಟೀಕಿಸುವವರು  ನಮ್ಮ ನಡುವೆಯಿದ್ದಾರೆ. ಪ್ರಶ್ನೆ ತಪ್ಪಲ್ಲ. ಆದರೆ ಇಸ್ಲಾಮ್ ಅಂದರೆ ತಾಲಿಬಾನ್ ಎಂದು ಷರಾ ಬರೆಯುವುದು ತಪ್ಪು. ಜಗತ್ತಿನಲ್ಲಿ  ಇಂಡೋನೇಷ್ಯಾದಿAದ ಹಿಡಿದು ಟರ್ಕಿಯ ವರೆಗೆ 60ಕ್ಕಿಂತಲೂ ಅಧಿಕ ಮುಸ್ಲಿಮ್ ಬಹುಸಂಖ್ಯಾತ ರಾಷ್ಟçಗಳಿವೆ. ಇವುಗಳಲ್ಲಿ ಹೆಚ್ಚಿನವು  ಇಸ್ಲಾಮಿಕ್ ರಾಷ್ಟçಗಳೆಂದು ಘೋಷಿಸಿಕೊಂಡಿವೆ. ಷರಿಯಾವನ್ನು ತಮ್ಮ ಆಡಳಿತ ನೀತಿಯೆಂದು ಹೇಳಿಕೊಳ್ಳುತ್ತಿವೆ. ತಾಲಿಬಾನ್  ಎಸಗುತ್ತಿರುವ ಅನಾಹುತಕ್ಕೆ ಷರಿಯಾವೇ ಕಾರಣ ಎಂದು ತೀರ್ಪು ನೀಡುವವರು ತಾಲಿಬಾನ್ ಮತ್ತು ಈ 60ಕ್ಕಿಂತಲೂ ಅಧಿಕ  ರಾಷ್ಟçಗಳನ್ನು ಯಾಕೆ ಮುಖಾಮುಖಿಯಾಗಿಟ್ಟು ವಿಶ್ಲೇಷಿಸುವುದಿಲ್ಲ? ತಾಲಿಬಾನ್‌ನದ್ದು ಷರಿಯಾ ಎಂದಾದರೆ ಮತ್ತು ಇಸ್ಲಾಮ್ ಅವರನ್ನು  ಬೆಂಬಲಿಸುತ್ತದೆಯೆAದಾದರೆ, ಉಳಿದ ರಾಷ್ಟçಗಳದ್ದು ಏನು?

ಓರ್ವನು ತನ್ನನ್ನು ಮುಹಮ್ಮದ್ ಎಂದೋ ರಘುರಾಮ ಎಂದೋ ಗುರುತಿಸಿಕೊಂಡಾಕ್ಷಣ ಆತ ಅಪ್ಪಟ ಮುಸ್ಲಿಮೋ ಅಪ್ಪಟ ಹಿಂದುವೋ  ಆಗುವುದಿಲ್ಲ. ಹೆಸರು ಒಂದು ಗುರುತು ಮಾತ್ರ. ಆತ ಅಪ್ಪಟ ಹಿಂದುವೋ ಮುಸ್ಲಿಮೋ ಆಗುವುದು ಆತನ ಕರ್ಮದಿಂದ. ಬದುಕುವ  ವಿಧಾನದಿಂದ. ದುರಂತ ಏನೆಂದರೆ, ಈ ದೇಶದ ಸುಮಾರು 15 ಕೋಟಿಯಷ್ಟಿರುವ ಮುಸ್ಲಿಮರನ್ನು ಕೆಡುಕು ಮಾಡುವ ಬೆರಳೆಣಿಕೆಯ  ಮುಸ್ಲಿಮರಿಂದ ಅಳೆಯಲಾಗುತ್ತದೆ. ಅತ್ಯಾಚಾರಿ ಮುಸ್ಲಿಮ್ ಹೆಸರಿನವರಾದರೆ, ದರೋಡೆ, ಕಳ್ಳತನ, ಹತ್ಯೆ, ವಂಚನೆ ಪ್ರಕರಣಗಳಲ್ಲಿ  ಮುಸ್ಲಿಮ್ ಹೆಸರು ಕಾಣಿಸಿಕೊಂಡರೆ ಅದರ ಹೊಣೆಯನ್ನು 15 ಕೋಟಿ ಮುಸ್ಲಿಮರ ತಲೆಗೆ ಕಟ್ಟಲಾಗುತ್ತದೆ. ಅವರ ಧರ್ಮವೇ ಹಾಗೆ,  ಅದುವೇ ಅದಕ್ಕೆ ಕಾರಣ...  ಎನ್ನುತ್ತಾರೆ. ಇದೇವೇಳೆ, ಇಂಥವರ ಮನೆಯ ಅಕ್ಕ-ಪಕ್ಕ ಮತ್ತು ಪರಿಸರ ಪ್ರದೇಶಗಳಲ್ಲಿ ನೂರಾರು ಮುಸ್ಲಿಮ್  ಮನೆಗಳಿರುತ್ತವೆ. ಮುಸ್ಲಿಮ್ ಗೆಳೆಯರೂ ಇಂಥವರಿಗೆ ಇರುತ್ತಾರೆ. ಅವರಾರೂ ಕೆಟ್ಟವರಲ್ಲ ಎಂಬುದೂ ಅವರಿಗೆ ಗೊತ್ತಿರುತ್ತದೆ. ಮತ್ತೇಕೆ  ಇಂಥ ಸಾರ್ವತ್ರಿಕ ಟೀಕೆ ಮಾಡುತ್ತಾರೆಂದಾದರೆ, ಅದರ ಹಿಂದೆ ಒಂದು ಸಂಚಿದೆ. ರಾಜಕೀಯ ಬಿತ್ತಿದ ಈ ಸಂಚಿನಲ್ಲಿ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಭಾಗಿಯಾಗಿದ್ದಾರೆ. ತನಗೆ ಗೊತ್ತಿರುವ ಮತ್ತು ತನ್ನ ಪರಿಚಯದಲ್ಲಿರುವ ಮುಸ್ಲಿಮರೆಲ್ಲ ಒಳ್ಳೆಯವರೇ.  ಆದರೆ ತನಗೆ ಗೊತ್ತಿಲ್ಲದ ಇನ್ನೆಲ್ಲೋ  ಇರುವ ಮುಸ್ಲಿಮರು ಕೆಟ್ಟವರು ಎಂಬ ಈ ಭಾವನೆಯ ಮೂಲ ಅವರಲ್ಲ. ಅವರೊಳಗೆ  ಇಂಥದ್ದೊಂದು  ಭಾವವನ್ನು ಇನ್ನಾರೋ ತುಂಬಿದ್ದಾರೆ ಅಥವಾ ಇನ್ನಾವುದೋ ರೂಪದಲ್ಲಿ ಅವರೊಳಗೆ ಅದು ತುಂಬಿಕೊಂಡಿದೆ. ‘ತಾಲಿಬಾನ್‌ನ ಬಗ್ಗೆ ಏನು ಹೇಳುತ್ತೀರೀ ...’ ಎಂದು ಇಲ್ಲಿನ ಮುಸ್ಲಿಮರಲ್ಲಿ ಪ್ರಶ್ನಿಸುವವರ ಪೈಕಿ ಹೆಚ್ಚಿನವರೊಳಗೂ ಇಂಥದ್ದೊಂದು  ಭಾವವಿದೆ.  ತಾಲಿಬಾನನ್ನು ತೋರಿಸಿ ಇಲ್ಲಿನ ಮುಸ್ಲಿಮರನ್ನು ತಿವಿಯುವುದು ಅವರ ಉದ್ದೇಶ. ಇಂಥ ಕಾಯಿಲೆಗೆ ಹರೀಶ್ ಬಂಗೇರ ಪ್ರಕರಣದಲ್ಲಿ  ಒಳ್ಳೆಯ ಔಷಧವಿದೆ.

ಮುದಸ್ಸಿರ್ ಮತ್ತು ಜಲಾಲ್‌ಗೆ ಅಭಿನಂದನೆಗಳು.

Monday, 23 August 2021

ಜೊಲ್ಲೆಗೆ ವಕ್ಫ್, ಅಫ್ಸರ್ ಗೆ ಥಳಿತ: ಅನ್ಯಾಯವೇ ನ್ಯಾಯವೆನ್ನಿಸುವುದು ಏಕೆ?



 ಸನ್ಮಾರ್ಗ ಸಂಪಾದಕೀಯ 
ಕಳೆದವಾರ ಗಮನಿಸಲೇಬೇಕಾದ ಮೂರು ಘಟನೆಗಳು ನಡೆದುವು.


1. ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಶೇ. 27ರಷ್ಟು ಸ್ಥಾನಗಳನ್ನು ಇತರ ಹಿಂದುಳಿದ ವಿಭಾಗಗಳಿಗೆ (OBC) ಮೀಸ ಲಿಡುವುದಾಗಿ ಒಡಿಸ್ಸಾದಲ್ಲಿ ಆಡಳಿತ ನಡೆಸುತ್ತಿರುವ ಬಿಜು ಜನತಾದಳ ಪಕ್ಷವು ಘೋಷಿಸಿದೆ. ಭಾರತದ ರಾಜಕೀಯ ಪಕ್ಷಗಳಲ್ಲೇ  ಇಂಥ  ಘೋಷಣೆ ಇದೇ ಮೊದಲು.

2. ದೆಹಲಿಯಲ್ಲಿ 9 ವರ್ಷದ ದಲಿತ ಹೆಣ್ಣು ಮಗಳ ಅತ್ಯಾಚಾರ ಮತ್ತು ಕ್ರೂರ ಹತ್ಯೆಯ ವಿರುದ್ಧ ರಾಜಕೀಯ ಪಕ್ಷಗಳೆಲ್ಲ ಧ್ವನಿಯೆತ್ತಿವೆ.  ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಆ ಕುರಿತಾದ ವೀಡಿಯೋವನ್ನು ಟ್ವಿಟರ್‍ ನಲ್ಲಿ  ಅ ಪ್‍ಲೋಡ್ ಮಾಡಿದರು. ಮಾತ್ರವಲ್ಲ, ಕಾಂಗ್ರೆಸ್‍ನ ರಾಷ್ಟ್ರೀಯ ದಲಿತ್ ಮುಖಂಡ ಉದಿತ್ ರಾಜ್ ಅವರು ಪತ್ರಿಕಾಗೋಷ್ಠಿ ನಡೆಸಿ, ಆ  ಘಟನೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಸಂಘಪರಿವಾರದ ಯಾವ ನಾಯಕರೂ ಸಂತ್ರಸ್ತ ಕುಟುಂಬ  ವಾಸವಿರುವ ನಂಗಲ್ ಗ್ರಾಮಕ್ಕೆ ಭೇಟಿ ನೀಡಿಲ್ಲ. ದೆಹಲಿ ಕಂಟೈನ್ಮೆಂಟ್ ವಲಯದಲ್ಲೇ  ಈ ಪ್ರದೇಶವಿದ್ದರೂ ಆ ಕುಟುಂಬವನ್ನು  ಭೇಟಿಯಾಗಿ ಸಾಂತ್ವನ ವ್ಯಕ್ತಪಡಿಸಿಲ್ಲ. ಒಂದುವೇಳೆ, ಗೋವೊಂದು ಹತ್ಯೆಗೀಡಾಗಿದ್ದರೆ ಇವರ ಸಾವಿರಾರು ಮಂದಿ ಅಲ್ಲಿ ಸೇರುತ್ತಿದ್ದರು.  ಬಿಜೆಪಿ ಮತ್ತು ಪರಿವಾರವು ದಲಿತರಿಗೆ ಗೋವಿನಷ್ಟೂ ಬೆಲೆಯನ್ನು ನೀಡುತ್ತಿಲ್ಲ ಎಂದು ಸಿಟ್ಟಾದರು.

3. ಅಫ್ಸರ್ ಅಹ್ಮದ್ ಎಂಬ ರಿಕ್ಷಾ ಚಾಲಕನನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಘಪರಿವಾರಕ್ಕೆ ಸೇರಿದ ಮಂದಿ ಥಳಿಸಿದರು.  ಥಳಿಸುತ್ತಾ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಜೈಶ್ರೀರಾಮ್ ಎಂದು ಆತನಿಂದ ಹೇಳಿಸಿದರು. ಈ ಎಲ್ಲ ಕ್ರೌರ್ಯವೂ ಅಫ್ಸರ್ ಅಹ್ಮದ್‍ರ  7 ವರ್ಷದ ಪುಟ್ಟ ಮಗಳ ಮುಂದೆಯೇ ನಡೆಯಿತು. ಮಗು ಅಪ್ಪನನ್ನು ಅಪ್ಪಿ ಹಿಡಿದು ಅಳುತ್ತಿತ್ತು ಮತ್ತು ಥಳಿಸಬೇಡಿ ಎಂದು  ಹ¯್ಲÉಕೋರರೊಂದಿಗೆ ವಿನಂತಿಸುತ್ತಿತ್ತು. ಆ ಬಳಿಕ ಪೊಲೀಸರು ಅಜಯ್, ರಾಹುಲ್ ಕುಮಾರ್ ಮತ್ತು ಅಮನ್ ಗುಪ್ತಾ ಎಂಬವರನ್ನು  ಬಂಧಿಸಿದರು ಮತ್ತು 24 ಗಂಟೆಯೊಳಗಡೆ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದರು. ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ  ಪೊಲೀಸು ಠಾಣೆಯ ಮುಂದೆ ಸಂಘಪರಿವಾರದ ಮಂದಿ ಪ್ರತಿಭಟನೆಯನ್ನೂ ನಡೆಸಿದ್ದರು.

ಈ ಮೂರೂ ಘಟನೆಗಳಲ್ಲಿ ಎದ್ದು ಕಾಣುವ ಕೆಲವು ಅಂಶಗಳಿವೆ. ಪಾರ್ಲಿಮೆಂಟ್‍ನಲ್ಲಾಗಲಿ, ರಾಜ್ಯ ವಿಧಾನಸಭೆಗಳಲ್ಲಾಗಲಿ ಮುಸ್ಲಿಮರ  ಪ್ರಾತಿನಿಧ್ಯ ಚುನಾವಣೆಯಿಂದ ಚುನಾವಣೆಗೆ ಇಳಿಮುಖವಾಗುತ್ತಾ ಬರುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಮಂದಿ  ಮುಸ್ಲಿಮ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಿದ್ದರೂ ಒಬ್ಬರೂ ಗೆಲ್ಲಲಿಲ್ಲ. ಈಗಿರುವ 27 ಮುಸ್ಲಿಮ್ ಸಂಸದರಲ್ಲಿ 5 ಮಂದಿ ತೃಣಮೂಲ  ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದರೆ, 4 ಮಂದಿ ಕಾಂಗ್ರೆಸ್‍ನಿಂದ ಮತ್ತು ತಲಾ ಮೂರು ಮಂದಿ ಸಮಾಜವಾದಿ ಪಾರ್ಟಿ, ಬಹುಜನ  ಸಮಾಜವಾದಿ ಪಾರ್ಟಿ, ಎನ್‍ಸಿಪಿ ಮತ್ತು ಮುಸ್ಲಿಮ್ ಲೀಗ್‍ನಿಂದ ಆಯ್ಕೆಯಾಗಿದ್ದಾರೆ. 2014ರ ಲೋಕಸಭೆಯಲ್ಲಿ 23 ಮುಸ್ಲಿಮ್  ಸಂಸದರಷ್ಟೇ ಇದ್ದರು ಎಂಬುದನ್ನು ಪರಿಗಣಿಸಿದರೆ ಈಗಿನ 27 ಸಂಖ್ಯೆ ಖಂಡಿತ ಹೆಚ್ಚೇ. ಆದರೂ ಇವರಲ್ಲಿ ಒಬ್ಬರೂ ಆಡಳಿತಾರೂಢ  ಬಿಜೆಪಿ ಪಕ್ಷದವರಿಲ್ಲ ಎಂಬುದೂ ಗಮನಾರ್ಹ ಸಂಗತಿ. ಹಾಗೆಯೇ, ತನ್ನ 303 ಸಂಸದರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದರ  ಇಲ್ಲ ಎಂಬ ಬಗ್ಗೆ ಬಿಜೆಪಿಗೆ ಯಾವ ಕಳವಳದ ಭಾವವೂ ಇಲ್ಲ ಎಂಬುದು ಬಹು ಆತಂಕದ ಸಂಗತಿ. ಇದೇವೇಳೆ,

ವಿಧಾನಸಭೆಗಳಲ್ಲಂತೂ ಮುಸ್ಲಿಮ್ ಶಾಸಕರ ಇಳಿಮುಖವನ್ನು ಪದೇಪದೇ ದಾಖಲಿಸುತ್ತಲೇ ಬರುತ್ತಿದೆ. 2018ರಲ್ಲಿ ಕರ್ನಾಟಕ ವಿಧಾನ  ಸಭೆಗೆ ನಡೆದ ಚುನಾವಣೆಯಲ್ಲಿ ಕೇವಲ 7 ಮುಸ್ಲಿಮ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು.  ಕಳೆದ 10 ವರ್ಷಗಳಲ್ಲೇ  ಅತ್ಯಂತ ಕಡಿಮೆ ಸಂಖ್ಯೆ ಇದು. 90 ಲಕ್ಷದಷ್ಟು ಮುಸ್ಲಿಮರು ರಾಜ್ಯದಲ್ಲಿದ್ದರೂ ಒಬ್ಬನೇ ಒಬ್ಬ ಮುಸ್ಲಿಮ್  ಅಭ್ಯರ್ಥಿಯನ್ನು ಬಿಜೆಪಿ ಸ್ಪರ್ಧೆಗಿಳಿಸಲಿಲ್ಲ. ಕಾಂಗ್ರೆಸ್ 17 ಮಂದಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ ದೇವೇಗೌಡರ ಜನತಾ  ದಳವು 8 ಮಂದಿಗೆ ಟಿಕೆಟ್ ನೀಡಿತ್ತು. 2013ರಲ್ಲಿ 11 ಮುಸ್ಲಿಮ್ ಶಾಸಕರು ರಾಜ್ಯ ವಿಧಾನಸಭೆಯಲ್ಲಿದ್ದರು. ಈಗಿನ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಯಿಲ್ಲ. ಮುಸ್ಲಿಮರಿಗೇ ಸಂಬಂಧಿಸಿದ ಹಜ್ಜ್ ಮತ್ತು ವಕ್ಫ್  ಖಾತೆಯನ್ನು ಶಶಿಕಲಾ ಜೊಲ್ಲೆ  ನಿರ್ವಹಿಸುತ್ತಿದ್ದಾರೆ. ಆದರೂ,

ಕುಸಿಯುತ್ತಿರುವ ಮುಸ್ಲಿಮ್ ಪ್ರಾತಿನಿಧ್ಯದ ಬಗ್ಗೆ ಆತಂಕವನ್ನಾಗಲಿ ಅಥವಾ ಪ್ರಾತಿನಿಧ್ಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಯೋಜನೆಗಳನ್ನು  ಘೋಷಿಸುವುದನ್ನಾಗಲಿ ಯಾವ ಪಕ್ಷವೂ ಮಾಡುತ್ತಿಲ್ಲ. ಇತರ ಹಿಂದುಳಿತ ವರ್ಗಗಳಿಗೆ ಬಿಜು ಜನತಾ ದಳ ಘೋಷಿಸಿದ  ಮೀಸಲಾತಿಯಂತೆ, ಮುಸ್ಲಿಮ್ ಮತ್ತು ಕ್ರೈಸ್ತ ವಿಭಾಗಗಳಿಗೆ ಯಾಕೆ ರಾಜಕೀಯ ಪಕ್ಷಗಳು ಮೀಸಲಾತಿಯನ್ನು ಘೋಷಿಸಬಾರದು? ರಾಜ್ಯ ವಿಧಾ ನಸಭೆಯಲ್ಲಾಗಲಿ ಲೋಕಸಭೆಯಲ್ಲಾಗಲಿ ಮುಸ್ಲಿಮ್ ಜನಪ್ರತಿನಿಧಿಯನ್ನು ಹೊಂದಿರದ ಬಿಜೆಪಿ ಯಾಕೆ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ  ಇಡಬಾರದು? ಹಾಗಂತ,

ಇದು ಕೇವಲ ಮುಸ್ಲಿಮ್ ಪ್ರಾತಿನಿಧ್ಯಕ್ಕೆ ಮಾತ್ರ ಕೇಳಬೇಕಾದ ಪ್ರಶ್ನೆಯಲ್ಲ, ಕಾನ್ಪುರದ ಅಫ್ಸರ್ ಅಹ್ಮದ್‍ಗೆ ಸಂಬಂಧಿಸಿಯೂ ಇವೇ ಪ್ರ ಶ್ನೆಗಳನ್ನು ಕೇಳಬೇಕಾಗುತ್ತದೆ. ದೆಹಲಿಯ ದಲಿತ ಹೆಣ್ಣು ಮಗಳ ಅತ್ಯಾಚಾರ-ಹತ್ಯೆಯನ್ನು ಗಟ್ಟಿ ಧ್ವನಿಯಲ್ಲಿ ಕಾಂಗ್ರೆಸ್‍ನ ದಲಿತ  ಮುಖಂಡರು ಪ್ರಶ್ನಿಸುತ್ತಾರೆ. ಬಿಜೆಪಿಯನ್ನು ತರಾಟೆಗೆ ಎತ್ತಿಕೊಳ್ಳುತ್ತಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಸಂತ್ರಸ್ತ  ಕುಟುಂಬವನ್ನು ಭೇಟಿಯಾಗುತ್ತಾರೆ. ಉತ್ತರ ಪ್ರದೇಶದ ಹಾಥರಸ್ ಘಟನೆಯಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿತ್ತು. ಕಾಂಗ್ರೆಸ್ ಅತ್ಯಂತ  ಮುಂಚೂಣಿಯಲ್ಲಿ ನಿಂತು ಆ ಕ್ರೌರ್ಯವನ್ನು ಪ್ರಶ್ನಿಸಿತು. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರು ಸರ್ವ ತಡೆಯನ್ನೂ ಬೇಧಿಸಿ  ಹಾಥರಸ್‍ಗೆ ಭೇಟಿ ಕೊಟ್ಟರು. ಇದು ಆಗಬೇಕಾದದ್ದೇ. ಆದರೆ ಕಾನ್ಪುರದ ಅಫ್ಸರ್ ಅಹ್ಮದ್ ಸಹಿತ ಮುಸ್ಲಿಮರ ಮೇಲೆ ಪದೇ ಪದೇ ಈ  ದೇಶದ ವಿವಿಧ ಭಾಗಗಳಲ್ಲಿ ಹಲ್ಲೆ, ಥಳಿತ, ಅವಮಾನಗಳಾಗುತ್ತಿದ್ದರೂ ಬಿಜೆಪಿ ಸಹಿತ ರಾಜಕೀಯ ಪಕ್ಷಗಳು ತೀರಾ ನಿರ್ಲಕ್ಷ್ಯ  ಭಾವದಲ್ಲಿ  ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವಂತೆ ಕಾಣಿಸುತ್ತಿದೆ. ಎಲ್ಲ ಅವಮಾನಗಳನ್ನೂ ಸಹಿಸಿಕೊಂಡು ಶರಣಾಗತ ಭಾವದಲ್ಲಿ ಬದುಕಬೇಕಾದ  ಸಮುದಾಯ ಎಂಬ ರೀತಿಯಲ್ಲಿ ಅವು ವರ್ತಿಸುತ್ತಿವೆ. ದೆಹಲಿಯ ಘಟನೆಗೆ ಸಂಬಂಧಿಸಿ ದಲಿತ ಮುಖಂಡ ಉದಿತ್ ರಾಜ್ ವ್ಯಕ್ತ ಪಡಿಸಿದಷ್ಟು ಗಟ್ಟಿ ಧ್ವನಿಯಲ್ಲಿ ಮತ್ತು ಸ್ಪಷ್ಟ ಮಾತಿನಲ್ಲಿ ಅಫ್ಸರ್ ಅಹ್ಮದ್ ಘಟನೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಲು ಯಾವೊಬ್ಬ ಮುಸ್ಲಿಮ್  ಸಂಸದರೂ ಮುಂದೆ ಬಂದಿಲ್ಲವೇಕೆ? ಬಿಜೆಪಿಯೇಕೆ ಮೌನವಾಗಿದೆ? ಮೂವರು ಆರೋಪಿಗಳು 24 ಗಂಟೆಯೊಳಗೆ ಸ್ಟೇಷನ್ ಜಾಮೀನಿನ ಮೂಲಕ ಬಿಡುಗಡೆಗೊಂಡುದುದನ್ನು ಯಾಕೆ ಅದು ಪ್ರಶ್ನಿಸಿಲ್ಲ? ಮುಸ್ಲಿಮರ ಹಿತ ಕಾಯುವ ಮತ್ತು ಓಲೈಕೆ ಮಾಡದ ನೈಜ ಪಕ್ಷ  ತಮ್ಮದು ಎಂದು ಹೇಳಿಕೊಳ್ಳುವ ಬಿಜೆಪಿಯು, ಹಿತ ಕಾಯಬೇಕಾದ ಸಂದರ್ಭದಲ್ಲಿ ಅಹಿತ ಬಯಸುವವರ ಜೊತೆಗೆ  ನಿಂತುಕೊಂಡಿರುವುದೇಕೆ?

ದೇಶದಲ್ಲಿ ಸದ್ಯ ಎಂಥ ವಾತಾವರಣವನ್ನು ಸೃಷ್ಟಿ ಮಾಡಲಾಗಿದೆಯೆಂದರೆ, ಮುಸ್ಲಿಮರ ಮೇಲೆ ಬಹಿರಂಗವಾಗಿ ಅನ್ಯಾಯ  ಮಾಡಲಾಗುತ್ತಿದ್ದರೂ ಅದನ್ನು ಪ್ರಶ್ನಿಸುವ ಹಾಗಿಲ್ಲ. ಪ್ರಶ್ನಿಸಿದರೆ ಅದು ಮುಸ್ಲಿಮ್ ಓಲೈಕೆಯಾಗುತ್ತದೆ. ಯಾವ ರಾಜಕೀಯ ಪಕ್ಷ  ಅಂಥದ್ದೊಂದು  ಪ್ರಯತ್ನ ಮಾಡುತ್ತದೋ ಅದನ್ನು ಮುಸ್ಲಿಮ್ ಪರ ಮತ್ತು ಹಿಂದೂ ವಿರೋಧಿ ಎಂದು ಕರೆಯಲಾಗುತ್ತದೆ. ಇಂಥ  ಮುದ್ರೆಯೊತ್ತುವ ಅಭಿಯಾನವನ್ನು ಆರಂಭಿಸಿರುವುದು ಬಿಜೆಪಿಯೇ. ಅದರದೇ ಬೆಂಬಲಿಗರು ಮುಸ್ಲಿಮರನ್ನು ಥಳಿಸುವ ಮತ್ತು  ಹಿಂಸಿಸುವ ಕೃತ್ಯದ ಆರೋಪಿಗಳಾಗಿರುತ್ತಾರೆ. ದನದ ಹೆಸರಲ್ಲಿ, ಮತಾಂತರ, ಚುಡಾವಣೆ ಮತ್ತಿನ್ನೇನೋ ಸಿದ್ಧ ಆರೋಪಗಳನ್ನು ಹೊರಿಸಿ  ಮುಸ್ಲಿಮರ ಮೇಲೆ ಅನ್ಯಾಯವೆಸಗುತ್ತಾರೆ. ಯಾರಾದರೂ ಈ ಅನ್ಯಾಯವನ್ನು ಪ್ರಶ್ನಿಸಿದರೆ ತಕ್ಷಣ ಅವರಿಗೆ ದೇಶವಿರೋಧಿ, ಮುಸ್ಲಿಮ್  ಓಲೈಕೆಯ ಪಟ್ಟ ಕಟ್ಟುತ್ತಾರೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆ.

ಒಂದು ಸಮುದಾಯವನ್ನು ಅನ್ಯಾಯದ ಬೇಗುದಿಗೆ ತಳ್ಳಿ ಯಾವುದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಲ್ಲಿ  ಸರ್ವ ಸಮುದಾಯಗಳ ಪಾಲು ಅತೀ ಅಗತ್ಯ. ಶಾಸಕಾಂಗದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಸಮುದಾಯಗಳೂ ಸಮಾನ  ಪ್ರಾತಿನಿಧ್ಯವನ್ನು ಹೊಂದುವುದು ಮತ್ತು ಸಮಾನ ನ್ಯಾಯ ಎಲ್ಲ ಸಮುದಾಯಗಳಿಗೂ ದಕ್ಕುವುದು ಬಹುಮುಖ್ಯ. ದೇಶದ ಅಭಿವೃದ್ಧಿಗೆ  ಯಾವುದೇ ಸಮುದಾಯ ಕೊಡುಗೆಯನ್ನು ನೀಡಬೇಕಾದರೆ ನ್ಯಾಯ ವಿತರಣೆಯ ದೃಷ್ಟಿಯಿಂದ ಆ ಸಮುದಾಯ ತೃಪ್ತಿಯಿಂದಿರಬೇಕು.  ಸಂತ್ರಸ್ತ ಭಾವವು ದೇಶಕ್ಕೇ ಹೊರೆ ಮತ್ತು ಅಪಾಯಕಾರಿ.

Tuesday, 17 August 2021

ಪ್ರಧಾನಿಯನ್ನು ನೋಡಿ ನಗುತ್ತಿರುವ 230 ಕೋಟಿ ರೂಪಾಯಿ ಮತ್ತು ಕಪಿಲ್‌ದೇವ್




ಗುಜರಾತ್‌ನ ಮೊಟೇರಾ ಕ್ರಿಕೆಟ್ ಸ್ಟೇಡಿಯಂನಿಂದ ಹಿಡಿದು ಕೊರೋನಾ ವ್ಯಾಕ್ಸಿನೇಶನ್ ಸರ್ಟಿಫಿಕೇಟ್ ವರೆಗೆ ಎಲ್ಲೆಲ್ಲೂ ತನ್ನ ಫೋಟೋ  ಮತ್ತು ಹೆಸರನ್ನು ಛಾಪಿಸಿಕೊಂಡಿರುವ ಪ್ರಧಾನಿ ಮೋದಿಯವರು, ರಾಜೀವ್ ಗಾಂಧಿ ಖೇಲ್ ರತ್ನದ ಹೆಸರನ್ನು ‘ಮೇಜರ್ ಧ್ಯಾನ್‌ಚಂದ್  ಖೇಲ್ ರತ್ನ’ ಎಂದು ಬದಲಾಯಿಸಿರುವುದು ಅಗ್ಗದ ರಾಜಕೀಯವೇ ಹೊರತು ಇದರಲ್ಲಿ ಮುತ್ಸದ್ದಿತನವೂ ಇಲ್ಲ, ಕ್ರೀಡೆಗೆ ಪ್ರೋತ್ಸಾಹವೂ  ಇಲ್ಲ. ತಮಾಷೆ ಏನೆಂದರೆ,

 ಸ್ವತಃ ಮೋದಿಯವರೇ ಈ ಹೆಸರು ಬದಲಾವಣೆಯನ್ನು ಘೋಷಿಸಿದ್ದಾರೆ. ಅದೇವೇಳೆ, ಗುಜರಾತ್‌ನಲ್ಲಿರುವ  ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ತನ್ನದೇ ಹೆಸರಿಟ್ಟುಕೊಳ್ಳುವಾಗ ಈ ದೇಶಕ್ಕೆ ಮೊಟ್ಟಮೊದಲ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು  ತಂದುಕೊಟ್ಟ ಕಪಿಲ್ ದೇವ್ ಅವರ ನೆನಪಿಗೆ ಬಂದಿಲ್ಲ. ಒಂದು ಬಗೆಯ ಅತ್ಮರತಿ ಮನಸ್ಥಿತಿ ಇದು. ಹಾಕಿ ದಂತಕತೆ ಧ್ಯಾನ್‌ಚಂದ್‌ರನ್ನು  ಗೌರವಿಸಬೇಕೆಂದಿದ್ದರೆ ರಾಜೀವ್ ಗಾಂಧಿಯನ್ನು ಅವಮಾನಿಸಬೇಕಿಲ್ಲ. ರಾಜೀವ್ ಗಾಂಧಿಯೇನೂ ವೀರಪ್ಪನ್ ಅಲ್ಲವಲ್ಲ. ಜನರಿಂದಲೇ  ಆರಿಸಿ ಬಂದು ಪ್ರಧಾನಿಯಾದವರು. ದೇಶವನ್ನು ಐದು ವರ್ಷಗಳ ಕಾಲ ಅವರು ಆಳಿದ್ದಾರೆ. ದೂರ ಸಂಪರ್ಕ ಕ್ರಾಂತಿಯಿಂದ ತೊಡಗಿ  ರಾಷ್ಟ್ರೀಯ ಶಿಕ್ಷಣ ನೀತಿ, ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ, ಎಂ.ಟಿ.ಎನ್.ಎಲ್. ಮತ್ತು ವಿಎಸ್‌ಎನ್‌ಎಲ್‌ನಂಥ ಕೊಡುಗೆಗಳನ್ನು  ದೇಶಕ್ಕೆ ನೀಡಿದ್ದಾರೆ. ಮಾಲ್ದೀವ್ಸ್ ಮತ್ತು ಶ್ರೀಲಂಕಾಗಳ ಬಂಡಾಯದಲ್ಲಿ ಕ್ಷಿಪ್ರ ಮಧ್ಯಪ್ರವೇಶ ಮಾಡಿ ಅಮೇರಿಕ ಮತ್ತು ಚೀನಾಗಳ ಉಪಸ್ಥಿತಿಯನ್ನು ತಡೆದು ನೆರೆಯನ್ನು ಭಾರತದ ಪಾಲಿಗೆ ಸುರಕ್ಷಿತಗೊಳಿಸಿದ್ದಾರೆ. ಅವರ ಹತ್ಯೆಯಾಗಿರುವುದು ಕೂಡ ಈ ಕಾರಣಕ್ಕಾಗಿಯೇ.  ಒಂದುವೇಳೆ,

ಶ್ರೀಲಂಕಾದ ಎಲ್‌ಟಿಟಿಇ ಸಂಘರ್ಷದಲ್ಲಿ ಭಾರತ ಮಧ್ಯಪ್ರವೇಶ ಮಾಡದೇ ಇರುತ್ತಿದ್ದರೆ, ಅಮೇರಿಕನ್ ಸೇನೆ ಆ ಕಡಲ ದ್ವೀಪಕ್ಕೆ ತನ್ನ  ಸೇನೆಯನ್ನು ಕಳುಹಿಸಿಕೊಡುವುದಕ್ಕೆ ಸರ್ವ ಸನ್ನದ್ಧವಾಗಿತ್ತು ಎಂಬುದು ಆ ಬಳಿಕ ಬಹಿರಂಗವಾಗಿತ್ತು. ಇದು ನಡೆದಿದ್ದರೆ ಭಾರತದ  ಪಕ್ಕದಲ್ಲಿ ಶತ್ರುವಿನ ಉಪಸ್ಥಿತಿಗೆ ಜಾಗ ಬಿಟ್ಟು ಕೊಟ್ಟಂತಾಗುತ್ತಿತ್ತು. ಆ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾದೊಂದಿಗಿದ್ದ ಸಂಬಂಧದಷ್ಟು ಒಳ್ಳೆಯ  ಸಂಬAಧ ಅಮೇರಿಕದ ಜೊತೆ ಇರಲಿಲ್ಲ ಎಂಬುದನ್ನೂ ಈ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಸ್ಯಾಮ್ ಪಿತ್ರೋಡರನ್ನು  ಬಳಸಿಕೊಂಡು ರಾಜೀವ್ ಗಾಂಧಿ ಈ ದೇಶದಲ್ಲಿ ಮಾಡಿದ ಸಂಪರ್ಕ ಕ್ರಾಂತಿಯ ಫಲವನ್ನೇ ಇವತ್ತು ಭಾರತೀಯರು ಉಣ್ಣುತ್ತಿದ್ದಾರೆ.  ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ರಾಜೀವ್ ಗಾಂಧಿ ಕೊಡುಗೆ ಬಲುದೊಡ್ಡದು. ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ ಮತ್ತು  ವಿದೇಶ್ ಸಂಚಾರ್ ನೆಟ್‌ವರ್ಕ್ ಲಿಮಿಟೆಡ್ ಎಂಬೆರಡು ಯೋಜನೆಗಳ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ದೂರವಾಣಿ  ಕರೆಗಳಿಗೆ ಅವರು ನೀಡಿದ ಕೊಡುಗೆ ಅಪಾರವಾದುದು. ಕಮರ್ಷಿಯಲ್ ಏರ್‌ಲೈನ್ಸನ್ನು ಈ ದೇಶಕ್ಕೆ ಪರಿಚಯಿಸಿದ್ದು ಮತ್ತು ಆರ್ಥಿಕ  ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಪ್ರಾರಂಭಿಸಿದ್ದೂ ಅವರೇ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದುದು ಕೇವಲ 5 ವರ್ಷ. ಒಂದುವೇಳೆ,

ಧ್ಯಾನ್‌ಚಂದ್ ರನ್ನು ಗೌರವಿಸಬೇಕೆಂಬ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದ್ದಿದ್ದೇ  ಆಗಿದ್ದಲ್ಲಿ ಹೊಸ ಕ್ರೀಡಾಂಗಣಗಳಿಗೆ  ಅವರ ಹೆಸರಿಡುವ ಮೂಲಕ ಅದನ್ನು ತೋರ್ಪಡಿಸಬಹುದಿತ್ತು ಅಥವಾ ಹಾಕಿಗೇ ಮೀಸಲಾದ ಪ್ರಶಸ್ತಿಯನ್ನು ಘೋಷಿಸಿ ಅವರ  ಹೆಸರಿಡಬಹುದಿತ್ತು. ಇನ್ನೂ ಹೆಚ್ಚೆಂದರೆ, ಹಾಕಿ ಆಟಗಾರರಿಗೆ ಧನಸಹಾಯ, ಹೊಸ ಕ್ರೀಡಾಂಗಣಗಳ ನಿರ್ಮಾಣ, ಹಾಕಿ ಆಟಗಾರರಿಗೆ  ಮೂಲ ಸೌಕರ್ಯ ಒದಗಿಸುವುದು ಮತ್ತು ಅತ್ಯುತ್ತಮ ಗುಣಮಟ್ಟದ ಕೋಚಿಂಗ್ ವ್ಯವಸ್ಥೆ ಇತ್ಯಾದಿಗಳನ್ನು ಮಾಡಬಹುದಿತ್ತು. ಅದುಬಿಟ್ಟು  ಅಸ್ತಿತ್ವದಲ್ಲಿರುವ ಜನಪ್ರಿಯ ಪ್ರಶಸ್ತಿಯ ಹೆಸರನ್ನು ಬದಲಿಸುವುದೆಂದರೆ, ಅದು ದ್ವೇಷ ರಾಜಕಾರಣದ ಭಾಗವಾಗಿ ಗುರುತಿಸಿಕೊಳ್ಳಬಹುದೇ  ಹೊರತು ಇನ್ನೇನಲ್ಲ. ದುರಂತ ಏನೆಂದರೆ,

2021-22ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರವನ್ನು ಕೇಂದ್ರ ಸರಕಾರ ಕಡೆಗಣಿಸಿದೆ. 2020-21ರ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಮೊತ್ತಕ್ಕಿಂತ ಈ  ಬಾರಿ 230.78 ಕೋಟಿ ರೂಪಾಯಿಯನ್ನು ಕಡಿತಗೊಳಿಸಿದೆ. ಅದೂ ಒಲಿಂಪಿಕ್ಸ್ ನಡೆಯುವ ಈ ವರ್ಷದಲ್ಲೇ. ಒಂದು ಕಡೆ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಿಗೆ ಕರೆ ಮಾಡಿ ಧನ್ಯವಾದ ತಿಳಿಸುವ ಮೋದಿ, ಇನ್ನೊಂದೆಡೆ ಕ್ರೀಡಾಕ್ಷೇತ್ರಕ್ಕೆ ಉತ್ತೇಜನ ನೀಡುವುದರ ಬದಲು  ಹಣವನ್ನು ಕಡಿತಗೊಳಿಸುತ್ತಿದ್ದಾರೆ. ಆದರೆ, ಪದಕ ವಿಜೇತರೊಂದಿಗೆ ನಡೆಯುವ ಮಾತುಕತೆಯನ್ನು ಚಿತ್ರೀಕರಿಸಿಕೊಂಡು ಅಗ್ಗದ ಪ್ರಚಾರಕ್ಕೆ  ಇಳಿದಿದ್ದಾರೆ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ನಿರ್ದಿಷ್ಟ ಹೆಸರು ಬದಲಾವಣೆಯ ಕ್ರಮ ಚಾಲ್ತಿಯಲ್ಲಿದೆ. ವಿಶೇಷವಾಗಿ ಇಸ್ಲಾಮಿಕ್  ಪರಂಪರೆಯ ಹೆಸರುಗಳನ್ನು ದೊಡ್ಡ ಪ್ರಚಾರದೊಂದಿಗೆ ಬದಲಿಸಲಾಗಿದೆ. ಅಲಹಾಬಾದ್‌ನ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸಲಾಗಿದೆ. ಫೈಝಾಬಾದ್ ಜಿಲ್ಲೆಯು ಅಯೋಧ್ಯ ಜಿಲ್ಲೆಯಾಗಿ ಬದಲಾಗಿದೆ. ಮುಗಲ್‌ಸರಾಯಿ ರೈಲ್ವೆ ನಿಲ್ದಾಣವು ದೀನ್‌ದಯಾಳ್ ಉಪಾಧ್ಯಾಯ್ ನಗರವಾಗಿ ಪರಿವರ್ತಿತವಾಗಿದೆ. ಇದಲ್ಲದೇ, ವಾಜಪೇಯಿ ಹೆಸರನ್ನು ಕ್ರೀಡಾಂಗಣಕ್ಕೆ ಮತ್ತಿತರ ಯೋಜನೆಗಳಿಗೂ  ಇಡಲಾಗಿದೆ. ಒಂದುವೇಳೆ, ರಾಜೀವ್ ಗಾಂಧಿಯವರ ಹೆಸರಿನಲ್ಲಿ ಖೇಲ್‌ರತ್ನ ಪ್ರಶಸ್ತಿ ತಪ್ಪು ಎಂದಾದರೆ, ಮೊಟೇರಾ ಕ್ರೀಡಾಂಗಣಕ್ಕೆ  ಪ್ರಧಾನಿ ನರೇಂದ್ರ ಮೋದಿಯವರ ಹೆಸರೂ ತಪ್ಪೇ ಅಲ್ಲವೇ? ಕೊರೋನಾ ವ್ಯಾಕ್ಸಿನನ್ನು ಸಂಶೋಧಿಸಿದ್ದು ಪ್ರಧಾನಿ ಮೋದಿ ಅಲ್ಲವಲ್ಲ.  ಮತ್ತೇಕೆ ಸರ್ಟಿಫಿಕೇಟ್‌ನಲ್ಲಿ ಅವರ ಹೆಸರು? ಪೆಟ್ರೋಲ್ ಪಂಪ್‌ನ ಬಳಿ ತನ್ನ ಆಳೆತ್ತರದ ಕಟೌಟನ್ನು ತೂಗು ಹಾಕುವಂತೆ ಮೋದಿ  ನೋಡಿಕೊಂಡಿರುವುದೇಕೆ? ಪೆಟ್ರೋಲ್ ಸಂಶೋಧನೆಯಲ್ಲಿ ಅವರ ಪಾತ್ರವೇನು? ಪೆಟ್ರೋಲಿಯಂ ಕ್ಷೇತ್ರಕ್ಕೆ ಅವರ ಕೊಡುಗೆಯೇನು?  ವಾಜಪೇಯಿಯವರಿಗೆ ಸಂಬಂಧಿಸಿಯೂ ಇವೇ ಪ್ರಶ್ನೆಗಳನ್ನು ಎತ್ತಬಹುದು. ಒಂದುರೀತಿಯಲ್ಲಿ,

ಅತಿಕೆಟ್ಟ ಪರಂಪರೆಯೊಂದಕ್ಕೆ ಪ್ರಧಾನಿ ಮೋದಿ ನಾಂದಿ ಹಾಡಿದ್ದಾರೆ. ನಾಳೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದು ಈಗಿನ ನಾಮಕರಣಕ್ಕೆ  ಮರು ನಾಮಕರಣ ಮಾಡಲು ಹೊರಟರೆ ಏನಾದೀತು? ಆಗ ಅದನ್ನು ಖಂಡಿಸುವುದಕ್ಕೆ ಬಿಜೆಪಿಗೆ ಏನು ನೈತಿಕತೆಯಿರುತ್ತದೆ? ಈ  ನಡುವೆ ಇಂದಿರಾ ಕ್ಯಾಂಟೀನ್‌ಗೆ ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮರುನಾಮಕರಣ ಮಾಡುವ ಇರಾದೆಯನ್ನು ರಾಜ್ಯ ಬಿಜೆಪಿ  ವ್ಯಕ್ತಪಡಿಸಿದೆ. ಒಂದುಕಡೆ, ಇಂದಿರಾ ಕ್ಯಾಂಟೀನ್‌ನ ಕತ್ತು ಹಿಸುಕುವುದನ್ನು ಮಾಡುತ್ತಲೇ ಇನ್ನೊಂದೆಡೆ ಹೆಸರು ಬದಲಾವಣೆಯ ಪುಕಾರ ನ್ನು ತೇಲಿ ಬಿಡುವುದರ ಅರ್ಥವೇನು? ಸಾಧ್ಯವಿದ್ದರೆ, ಇಂದಿರಾ ಕ್ಯಾಂಟೀನ್‌ಗಿಂತಲೂ ಉತ್ತಮ ಮತ್ತು ಜನಸ್ನೇಹಿಯಾಗಿರುವ ಯೋಜನೆಯನ್ನು ಆರಂಭಿಸಿ ಇದಕ್ಕೆ ತಮ್ಮಿಷ್ಟದ ಹೆಸರಿಡುವುದಕ್ಕೆ ಅರ್ಥವಿದೆ. ಅದುಬಿಟ್ಟು ಇರುವ ಹೆಸರನ್ನೇ ಬದಲಿಸುವುದರಿಂದ ಏನನ್ನೂ ಸಾ ಧಿಸಲು ಸಾಧ್ಯವಿಲ್ಲ. ನಿಜವಾಗಿ,

ದ್ವೇಷ ರಾಜಕಾರಣದ ಆಯುಷ್ಯ ಸಣ್ಣದು. ಯಾಕೆಂದರೆ, ಅದು ಮೆದುಳಿನಿಂದ ಅಲೋಚಿಸುವುದಿಲ್ಲ ಮತ್ತು ಹೃದಯದಿಂದ  ಮಾತಾಡುವುದಿಲ್ಲ. ಇದರಿಂದಾಗಿಯೇ ಬಾರಿಬಾರಿಗೂ ತಪ್ಪುಗಳು ಸಂಭವಿಸುತ್ತಲೇ ಇರುವುದು. ತನ್ನದೇ ಹೆಸರನ್ನು ಗುಜರಾತ್‌ನ  ಮೊಟೇರಾ ಕ್ರೀಡಾಂಗಣಕ್ಕೆ ಇಟ್ಟು ಖೇಲ್‌ರತ್ನ ಪ್ರಶಸ್ತಿಯಿಂದ ರಾಜೀವ್ ಗಾಂಧಿ ಹೆಸರನ್ನು ಮೋದಿ ಕಿತ್ತು ಹಾಕಿರುವುದು ಇದಕ್ಕೊಂದು  ಪುರಾವೆ. ಬಿಜೆಪಿಯ ಭ್ರಷ್ಟ ನಾಯಕರ ವಿರುದ್ಧ ಒಂದೇ ಒಂದು ದಾಳಿಯನ್ನೂ ಮಾಡದ ಕೇಂದ್ರದ ಇ.ಡಿ. ಮತ್ತು ಐಟಿ ಇಲಾಖೆಗಳು  ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಾಯಕರ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವುದೂ ಇದಕ್ಕೆ ಪುರಾವೆ. ಮುಸ್ಲಿಮರ  ತ್ರಿವಳಿ ತಲಾಕ್ ಕ್ರಮವನ್ನು ಕ್ರಿಮಿನಲ್ ರೀತಿಯ ವಿಚಾರಣೆಗೆ ಒಳಪಡಿಸುವ ಕಾನೂನು ತರುತ್ತಲೇ, ಹಿಂದೂಗಳ ವಿಚ್ಛೇದನವನ್ನು ಸಿವಿಲ್  ವಿಚಾರಣಾ ಕ್ರಮದಲ್ಲಿರುವಂತೆ ನೋಡಿಕೊಂಡಿರುವುದೂ ಇದಕ್ಕೆ ಪುರಾವೆ. ವಿದೇಶಕ್ಕೆ ಗೋಮಾಂಸ ರಫ್ತು ಮಾಡುತ್ತಲೇ ದೇಶದಲ್ಲಿ  ಗೋಹತ್ಯಾ ನಿಷೇಧದ ಬಗ್ಗೆ ಮಾತಾಡುತ್ತಿರುವುದೂ ಇದಕ್ಕೆ ಪುರಾವೆ. ತನ್ನದೇ ಆಡಳಿತ ಇರುವ ಈಶಾನ್ಯ ಮತ್ತು ಗೋವಾ ರಾಜ್ಯಗಳಲ್ಲಿ  ಗೋವಧೆ ಮತ್ತು ಗೋಮಾಂಸ ಮಾರಾಟಕ್ಕೆ ಅನುಮತಿ ನೀಡುತ್ತಲೇ ಕರ್ನಾಟಕ, ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಗೋಮಾಂಸ  ನಿಷೇಧದ ಕಠಿಣ ಕಾನೂನನ್ನು ಜಾರಿಗೆ ತಂದಿರುವುದೂ ಇದಕ್ಕೊಂದು ಪುರಾವೆ.

ದ್ವೇಷವೇ ರಾಜಕೀಯವಾದಾಗ ತಪ್ಪುಗಳೇ ಕಾನೂನಾಗಿ ಜಾರಿಯಾಗುತ್ತದೆ. ಗುಜರಾತ್‌ನ ಮೊಟೇರಾಕ್ಕೆ ಹೆಸರಿಡುವಾಗ ಮೋದಿಯವರಿಗೆ  198ರ ಹೀರೋ ಕಪಿಲ್ ದೇವ್ ಕಾಣಿಸಲಿಲ್ಲ. ಆದರೆ, ಖೇಲ್ ರತ್ನಕ್ಕೆ ಧ್ಯಾನ್‌ಚಂದ್ ಕಾಣಿಸಿದರು. ಮೋದಿಯ ಸಣ್ಣತನಕ್ಕೆ ಈ ದ್ವಂದ್ವವೇ  ಸಾಕ್ಷಿ. 

Monday, 9 August 2021

ಬುರ್ಖಾವನ್ನು ಶೋಷಣೆ ಎಂದವರ ದ್ವಂದ್ವವನ್ನು ಬಿಚ್ಚಿಟ್ಟ ಆಟಗಾರ್ತಿಯರು




ಹೆಣ್ಣು-ಗಂಡು ಸಮಾನತೆಯ ಬಗ್ಗೆ ಜಗತ್ತಿಗೆ ಆಗಾಗ ಪಾಠ ಮಾಡುವ ಮುಂದುವರಿದ ರಾಷ್ಟçಗಳು ನಿಜಕ್ಕೂ ಹೆಣ್ಣಿನ ಬಗ್ಗೆ ಯಾವ ಮ ನಸ್ಥಿತಿಯನ್ನು ಹೊಂದಿವೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ದುರ್ಬೀನಿನ ಅಗತ್ಯವೇನೂ ಇಲ್ಲ. ಇದಕ್ಕೆ ಯೂರೋ 2021 ಬೀಚ್  ಹ್ಯಾಂಡ್‌ಬಾಲ್ ಟೂರ್ನಿಯೇ ಸಾಕು ಇಲ್ಲವೇ ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸೂ ಸಾಕು. ಮತ್ತೂ ಬೇಕೆಂದರೆ, 2018ರ ಫ್ರೆಂಚ್  ಓಪನ್ ಟೆನ್ನಿಸನ್ನೂ ಎತ್ತಿಕೊಳ್ಳಬಹುದು. ಬುರ್ಖಾವನ್ನು ಮಹಿಳಾ ಸ್ವಾತಂತ್ರ‍್ಯದ ವಿರೋಧಿಯಾಗಿ, ಹಕ್ಕು ಹರಣವಾಗಿ ಮತ್ತು ಪುರುಷ  ಸಮಾಜದ ಹೇರಿಕೆಯಾಗಿ ಆಗಾಗ ವ್ಯಾಖ್ಯಾನಿಸುತ್ತಾ ಮುಸ್ಲಿಮ್ ಮಹಿಳೆಯರ ಬಗ್ಗೆ ಕರುಣಾಪೂರಿತ ದೃಷ್ಟಿ ಬೀರುವ ಈ ರಾಷ್ಟçಗಳು  ಆಂತರಿಕವಾಗಿ ಎಷ್ಟು ಹೆಣ್ಣು ವಿರೋಧಿಯಾಗಿವೆ ಮತ್ತು ಹೆಣ್ಣನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿವೆ ಎಂಬುದನ್ನು  ಅರಿತುಕೊಳ್ಳುವುದಕ್ಕೂ ಈ ಮೇಲಿನ ಉದಾಹರಣೆಗಳು ಸಾಕು.
2021 ಜುಲೈ 26ರಂದು ಜಪಾನ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗುವುದಕ್ಕಿAತ ವಾರಗಳ ಮೊದಲು ಯೂರೋ 2021  ಬೀಚ್ ಹ್ಯಾಂಡ್‌ಬಾಲ್ 2021 ಪಂದ್ಯಾಟ ನಡೆದಿತ್ತು. ಯುರೋಪಿಯನ್ ರಾಷ್ಟçಗಳ ನಡುವಿನ ಬಹಳ ಪ್ರಸಿದ್ಧ ಮತ್ತು ಭಾರೀ ಪ್ರೇP್ಷÀಕರನ್ನು  ಹೊಂದಿರುವ ಪಂದ್ಯಾಟ ಇದು. ಜುಲೈ 18ರಂದು ಸ್ಪೆÊನ್ ಮತ್ತು ನಾರ್ವೆ ಮಹಿಳಾ ತಂಡಗಳ ನಡುವೆ ಪಂದ್ಯಾಟ ನಡೆಯಿತು. ಆದರೆ ಈ  ಪಂದ್ಯ ಆಟಕ್ಕಿಂತ ಹೆಚ್ಚು ಈ ಆಟದಲ್ಲಿ ನಾರ್ವೆ ಮಹಿಳಾ ಆಟಗಾರ್ತಿಯರು ಧರಿಸಿದ ಬಟ್ಟೆಗಾಗಿ ಸುದ್ದಿಯಾಯಿತು. ಅಂತಾರಾಷ್ಟಿçÃಯ  ಬೀಚ್ ಹ್ಯಾಂಡ್‌ಬಾಲ್ ಫೆಡರೇಶನ್ ನಿಯಮದ ಪ್ರಕಾರ, ಆಟಗಾರ್ತಿಯರು ಬಿಕಿನಿ ಬಾಟಮ್ ದಿರಿಸನ್ನು ಧರಿಸುವುದು ಕಡ್ಡಾಯ.  ದಿರಿಸಿನ ಕೆಳಭಾಗವು ಮೈಗೆ ಆಂಟಿಕೊAಡಿರಬೇಕು. ವಿ ಆಕಾರದಲ್ಲಿ ಈ ಬಿಕಿನಿಯ ಕೆಳಭಾಗ ಇರಬೇಕು. ದಿರಿಸಿದ ಬಗ್ಗೆ ಈ ನಿಯಮ  ಎಷ್ಟು ನಿಖರವಾಗಿದೆಯೆಂದರೆ, ಬಿಕಿನಿಯ ಕೆಳಭಾಗವು ಗರಿಷ್ಠವೆಂದರೆ, 10 ಸೆ.ಮೀಟರ್ ಇರಬಹುದು. ಅದಕ್ಕಿಂತ ಹೆಚ್ಚು ಇರುವುದು ಕಾ ನೂನುಬಾಹಿರ. ವಿಶೇಷ ಏನೆಂದರೆ,
ನಾರ್ವೆ ಆಟಗಾರ್ತಿಯರು ಈ ಬಿಕಿನಿಯಲ್ಲಿ ನಾವು ಆಡುವುದಿಲ್ಲ ಎಂದು ಹಠ ಹಿಡಿದರು. ಬಿಕಿನಿಯ ಬದಲು ಅಥ್ಲೆಟಿಕ್ ಶಾರ್ಟ್ಸ್ ಧರಿಸಿ  ಆಡಿದರು. ಅಷ್ಟಕ್ಕೇ ಮುಗಿಯಲಿಲ್ಲ. ಹೀಗೆ ಬಿಕಿನಿ ಧರಿಸಲು ಒಪ್ಪದ ನಾರ್ವೆಯನ್ ತಂಡದ ಒಬ್ಬೊಬ್ಬ ಆಟಗಾರ್ತಿಗೆ ಹ್ಯಾಂಡ್‌ಬಾಲ್  ಫೆಡರೇಶನ್ 177 ಡಾಲರ್ ದಂಡ ವಿಧಿಸಿ ಸೇಡು ತೀರಿಸಿಕೊಂಡಿತು. ಹಾಗಂತ,
ಈ ಡ್ರೆಸ್ ಕೋಡ್ ಹೆಣ್ಣಿಗೆ ಮಾತ್ರ. ಪುರುಷರ ಹ್ಯಾಂಡ್‌ಬಾಲ್ ಪಂದ್ಯಾಟಕ್ಕೆ ದಿರಿಸಿಗೆ ಸಂಬAಧಿಸಿ ಇಂಥ ಕಠಿಣ ನಿಬಂಧನೆಗಳಿಲ್ಲ. ಅವರು  ಮೈಗೆ ಅಂಟಿಕೊಳ್ಳದ ಶಾರ್ಟ್ಸ್ ಧರಿಸಿ ಆಡಬಹುದು.
2018ರ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಮೆಂಟ್‌ನಲ್ಲೂ ಇಂಥz್ದೆÃ ಒಂದು ಘಟನೆ ನಡೆಯಿತು. ಅತಿ ಕಡಿಮೆ, ಅತಿ ಕಿರಿದು ಮತ್ತು ಅತಿ  ತೆಳು ಬಟ್ಟೆ ಧರಿಸಿ ಆಡುವುದಕ್ಕೆ ಎಂದೂ ಹಿಂಜರಿಕೆ ತೋರದ ಅಮೇರಿಕದ ಮಹಿಳಾ ಟೆನ್ನಿಸ್ ಸ್ಟಾರ್ ಸೆರೆನಾ ವಿಲಿಯಮ್ಸ್ ಅವರು  ಮೊದಲ ಬಾರಿ ಯೆಂಬAತೆ ದೇಹವಿಡೀ ಮುಚ್ಚುವ ಕಪ್ಪು ಕ್ಯಾಟ್-ಸೂಟ್ ಧರಿಸಿ ಆಡಿದ್ದರು. ಇದು ಫ್ರೆಂಚ್ ಓಪನ್ ಆಯೋಜಕರ  ಆಕ್ಷೇಪಕ್ಕೆ ಗುರಿಯಾಯಿತು. ಇಂಥ ಡ್ರೆಸ್ಸನ್ನು ಒಪ್ಪಲಾಗದು ಎಂದ ಫ್ರೆಂಚ್ ಟೆನ್ನಿಸ್ ಫೆಡರೇಶನ್‌ನ ಅಧ್ಯP್ಷÀ ಬರ್ನಾರ್ಡ್ ಗ್ರೆಡಿಸೆಲ್ಲಿ  ಹೇಳಿದರು. ಮುಂದಿನ ವರ್ಷದಿಂದ ಇಂಥ ಡ್ರೆಸ್ ಧರಿಸಿ ಆಡುವುದನ್ನು ನಿಷೇಧಿಸಲಾಗುವುದು ಎಂದೂ ಹೇಳಿದರು.
1985ರಲ್ಲಿ ಇಂಥz್ದÉÃ ಇನ್ನೊಂದು ಘಟನೆ ನಡೆಯಿತು. ಅದು ವಿಂಬಲ್ಡನ್ ಮಹಿಳಾ ಟೆನ್ನಿಸ್ ಟೂರ್ನಮೆಂಟ್. ಅಮೇರಿಕದ ಆಟಗಾತಿ  ಅನ್ನ ವೈಟ್, ಲಂಗ-ಧಾವಣಿಯAಥ ಉದ್ದ ಸ್ಲೀವ್ ಇರುವ ದಿರಿಸು ಧರಿಸಿ ಪ್ರಥಮ ಸುತ್ತಿನ ಪಂದ್ಯಾಟಕ್ಕೆAದು ಅಂಗಣ ಪ್ರವೇಶಿಸಿದ್ದರು.  ಆಗ ಇದನ್ನು ಪಂದ್ಯದ ರೆಫ್ರಿ ಆಕ್ಷೇಪಿಸಿದ್ದರು. ಇದಕ್ಕಿಂತ ಹೆಚ್ಚು ಸೂಕ್ತವಾದ ಧಿರಿಸು ಧರಿಸಿ ಆಡಬೇಕೆಂದು ತಾಕೀತು ಮಾಡಿದ್ದರು.  ನಿಜವಾಗಿ,
ಅತೀವ ಪ್ರಗತಿಪರರೆಂದು ಜಂಭ ಕೊಚ್ಚಿಕೊಳ್ಳುತ್ತಿರುವ ಈ ರಾಷ್ಟçಗಳ ಮಹಿಳಾ ಶೋಷಕ ನೀತಿಗಳು ಈ ಹೊತ್ತಿನಲ್ಲಿ ಚರ್ಚೆಗೆ ಬರಲು  ಬಹುಮುಖ್ಯ ಕಾರಣ- ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ. ಜರ್ಮನಿಯ ಸಾರಾ ವೋಸ್, ಪೌಲಿನ್ ಸ್ನಾಫೆರ್, ಎ ಲಿಝಬೆತ್ ಸೆಟ್ಸ್ ಮತ್ತು ಕಿಮ್ ಬುಯಿ ಎಂಬ ನಾಲ್ವರು ಪ್ಯಾರಾ ಜಿಮ್ನಾಸ್ಟಿಕ್ ಆಟಗಾರ್ತಿಯರು ಮಾಡಿದ ಘೋಷಣೆ. ನಾವೇನು  ಧರಿಸಬೇಕು ಎಂಬುದನ್ನು ನಾವು ನಿರ್ಧರಿಸಬೇಕೇ ಹೊರತು ಇನ್ನಾರೂ ಅಲ್ಲ ಎಂದು ಹೇಳಿದ ಇವರು, ತುಂಡು ಬಟ್ಟೆಯ ಜಿಮ್ನಾಸ್ಟಿಕ್  ನಿಯಮವನ್ನು ಮುರಿದರು ಮತ್ತು ಸಂಪೂರ್ಣ ದೇಹ ಮುಚ್ಚುವ ಬಾಡಿ ಸೂಟ್ ಧರಿಸಿದರು. ಕ್ರೀಡೆಯನ್ನು ಸೆಕ್ಸಿಸಂ ಮಾಡುವುದಕ್ಕೆ ತಮ್ಮ  ವಿರೋಧ ಇದೆ ಎಂದೂ ಹೇಳಿದರು. ಇದು ಒಲಿಂಪಿಕ್ಸ್ನಲ್ಲಿ ಸಂಚಲನ ಸೃಷ್ಟಿಸಿತು. ಮಹಿಳಾ ಕ್ರೀಡೆಯನ್ನು ಕ್ರೀಡೆಯಾಗಿ  ನೋಡುವುದಕ್ಕಿಂತ ಸೆಕ್ಸಿಸಂ ದಂಧೆಯಾಗಿ ಆಯೋಜಕರು ನೋಡುತ್ತಿz್ದÁರೆ ಎಂಬ ಧ್ವನಿಗೆ ಗಟ್ಟಿ ಬಲವೂ ಬಂತು. ಹೆಣ್ಣು-ಗಂಡು  ಸಮಾನವೆಂದ ಮೇಲೆ ಗಂಡಿಗಿಲ್ಲದ ಬಟ್ಟೆ ನಿಯಮ ಹೆಣ್ಣಿಗ್ಯಾಕೆ ಎಂಬ ಆಕ್ಷೇಪಗಳು ಅನೇಕರಿಂದ ಕೇಳಿ ಬಂದುವು. ವಿಶೇಷವಾಗಿ,
ಜಿಮ್ನಾಸ್ಟಿಕ್, ಬೀಚ್ ವಾಲಿಬಾಲ್ ಮತ್ತು ಬೀಚ್ ಹ್ಯಾಂಡ್ ಬಾಲ್ ಆಟದಲ್ಲಿ ಆಟಗಾರ್ತಿಯರಿಗೆ ಇರುವ ಕಠಿಣ ಧಿರಿಸು ನಿಯಮಗಳು  ಆಟಗಾರರಿಗೆ ಸಂಬAಧಿಸಿದAತೆ ಇಲ್ಲವೇ ಇಲ್ಲ. ಅವರು ತಮಗನುಕೂಲವಾದ ಮೈಗಂಟಿಕೊಳ್ಳದ ಶಾಟ್ಸ್ಗಳನ್ನು ಧರಿಸಿ ಆಡುವುದಕ್ಕೆ ಅ ನುಮತಿ ಇದೆ. ಮತ್ತ್ಯಾಕೆ ಹೆಣ್ಣು ಮಾತ್ರ ಬಿಕಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಪ್ರಶ್ನೆ ಚರ್ಚೆಗೆ ಒಳಗಾಯಿತಲ್ಲದೇ ಇದು ಹೆಣ್ಣು  ಶೋಷಣೆಯ ಇನ್ನೊಂದು ರೂಪ ಎಂಬAತಹ ವ್ಯಾಖ್ಯಾನಕ್ಕೂ ಒಳಗಾಯಿತು. ಈ ಎಲ್ಲವುಗಳ ಒಟ್ಟು ಮೊತ್ತವೇ ಜರ್ಮನಿಯ  ಜಿಮ್ನಾಸ್ಟಿಕ್ ತಂಡದ ಹೊಸ ಧಿರಿಸು. ಆದರೆ, ಈ ಬೆಳವಣಿಗೆಗೆ ಸಂಬAಧಿಸಿ ಒಲಿಂಪಿಕ್ಸ್ ಅಧಿಕಾರಿಗಳು ಈ ಬಾರಿ ಜಾಗರೂಕತೆಯಿಂದ  ಪ್ರತಿಕ್ರಿಯಿಸಿದರು. ನಮ್ಮದು ಸೆಕ್ಸ್ ಕೇಂದ್ರಿತ ಕ್ರೀಡೆಯಲ್ಲ ಮತ್ತು ಮಹಿಳಾ ಅಥ್ಲೀಟ್‌ಗಳ ದೇಹವನ್ನು ಹತ್ತಿರದಿಂದ ತೋರಿಸುವ ದೇಹಕೇಂ ದ್ರಿತ ಚಿತ್ರೀಕರಣವನ್ನೂ ನಿಲ್ಲಿಸುತ್ತೇವೆ ಎಂದೂ ಹೇಳಿದರು. ಅಷ್ಟಕ್ಕೂ,
ಯಾವುದು ಮಹಿಳಾ ಶೋಷಣೆ, ಯಾವುದು ಪ್ರಗತಿಪರ ಚಿಂತನೆ ಎಂದು ಜಗತ್ತಿಗೆ ಆಗಾಗ ಬೋಧನೆ ಮಾಡುತ್ತಿರುವುದು ಇವೇ  ರಾಷ್ಟçಗಳು. ಮಹಿಳಾ ಶೋಷಣೆ ಮತ್ತು ಅಸಮಾನತೆಯ ಕಾರಣ ಕೊಟ್ಟು ಬುರ್ಖಾವನ್ನು ವಿರೋಧಿಸುವುದಕ್ಕೆ ಮತ್ತು ನಕಾಬನ್ನು ನಿಷೇ ಧಿಸುವುದಕ್ಕೂ ಮುಂದಾಗಿರುವುದು ಇವೇ ರಾಷ್ಟçಗಳು. ದುರಂತ ಏನೆಂದರೆ,
ಈ ಬೋಧಕರ ಒಳಮನಸ್ಸು ಹೊರಗೆ ಕಾಣುವಷ್ಟು ಬಿಳಿಯಲ್ಲ ಮತ್ತು ಹೆಣ್ಣನ್ನು ಮಾರಾಟದ ಸರಕಾಗಿ ಅವರು ಕಾಣುತ್ತಾರೆಯೇ  ಹೊರತು ಇನ್ನೇನೂ ಅಲ್ಲ. ನಿಜವಾಗಿ, ಯಾವ ಕ್ರೀಡೆಗೆ ಯಾವ ರೂಪದ ಬಟ್ಟೆ ಧರಿಸಬೇಕು ಎಂಬುದನ್ನು ನಿಯಮವಾಗಿ ಹೇರುವುದೇ  ಒಂದು ದೊಡ್ಡ ಶೋಷಣೆ. ದಿರಿಸು ಅವರವರ ಆಯ್ಕೆ ಎಂದ ಮೇಲೆ, ಹೆಣ್ಣಿನ ದಿರಿಸಿನ ಅಳತೆ ಇಷ್ಟೇ ಇರಬೇಕು ಎಂದು  ಆe್ಞÁಪಿಸುವುದು ಯಾವ ರೀತಿಯ ಪ್ರಗತಿಪರತೆ? ದಿರಿಸಿಗೂ ಕ್ರೀಡೆಗೂ ಏನು ಸಂಬAಧ? ಕ್ಯಾತಿ ಫ್ರೀಡ್‌ಮನ್ ಎಂಬ ಓಟಗಾತಿ  ಮೈಮುಚ್ಚುವ ಪೂರ್ಣ ದಿರಿಸು ಧರಿಸಿಯೇ 2000ದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕ್ರೀಡಾ ಆಯೋಜಕರ ನೆಚ್ಚಿನ ದಿರಿಸು ನಿಯಮವನ್ನು  ಚಾಚೂ ತಪ್ಪದೇ ಪಾಲಿಸಿದ
ಓಟಗಾರ್ತಿಯರು ಅವರ ಹಿಂದೆ ಇದ್ದರು. ಪೂರ್ಣ ದಿರಿಸು ಧರಿಸಿ ಕ್ಯಾತಿಗೆ ಸಾಧನೆ ಮಾಡಲು ಸಾಧ್ಯವಾಗಿದ್ದರೆ ಮತ್ತು ಜರ್ಮನಿಯ  ಜಿಮ್ನಾಸ್ಟಿಕ್ ಆಟಗಾರ್ತಿಯರು ಪೂರ್ಣ ಧಿರಿಸು ಧರಿಸಿ ತಮ್ಮ ಪ್ರತಿಭೆ ತೋರಬಲ್ಲ ರೆಂದಾದರೆ, ಈ ಬಿಕಿನಿಯನ್ನು ನಿಯಮವಾಗಿ ಜಾರಿಗೆ  ತಂದವರ ಉz್ದÉÃಶವೇನು? ಯಾಕೆ ಆಟಗಾರರಿಗೆ ಈ ನಿಯಮದ ಬಿಗಿತನವಿಲ್ಲ? ಮಹಿಳಾ ಕ್ರೀಡೆಯನ್ನು ಯಾಕೆ ಒಂದು ಕ್ರೀಡೆ ಯಾಗಿ  ಆಸ್ವಾದಿಸಲು ಇವರಿಗೆ ಸಾಧ್ಯವಾಗುವುದಿಲ್ಲ? ಮಹಿಳಾ ಕ್ರೀಡೆಗೆ ಕನಿಷ್ಠ ಬಟ್ಟೆಯನ್ನು ನಿಯಮ ವಾಗಿ ರೂಪಿಸಿ, ಆ ಮೂಲಕ ಕ್ರೀಡೆಯ  ಬದಲು ಕ್ರೀಡಾಳುವಿನ ದೇಹವನ್ನು ಮಾರಾಟ ಮಾಡುವುದು ಯಾಕೆ ಶೋಷಣೆ ಎಂದು ಅನಿಸು ತ್ತಿಲ್ಲ? ಬುರ್ಖಾ ಧರಿಸುವುದನ್ನು  ಶೋಷಣೆ ಎನ್ನುವವರೇ ಬಿಕಿನಿಯನ್ನು ನಿಯಮವಾಗಿ ಹೇರುವುದು ಏಕೆ? ಮತ್ತು ಇದರಲ್ಲಿ ಒಂದು ಶೋಷಣೆಯೂ ಇನ್ನೊಂದು  ಪ್ರಗತಿಪರವೂ ಆಗುವುದು ಹೇಗೆ? ಬುರ್ಖಾದ ವಿರುದ್ಧ ಮಾತೆತ್ತಿದವರೆಲ್ಲ ಮತ್ತು ಖಂಡನೆ-ಮAಡನೆ ಮಾಡಿ ವ್ಯಾಖ್ಯಾನಿಸಿದವರೆಲ್ಲ  ಮಹಿಳಾ ಕ್ರೀಡೆಯಲ್ಲಿ ರುವ ಈ ನಿಯಮಗಳ ಬಗ್ಗೆ ಯಾಕೆ ಜಾಣ ಕುರುಡು ಪ್ರದರ್ಶಿಸುತ್ತಿz್ದÁರೆ? ಅಂದಹಾಗೆ,
ಆಯ್ಕೆ ಸ್ವಾತಂತ್ರö್ಯವನ್ನು ಎತ್ತಿ ಹಿಡಿದ ನಾರ್ವೆ ಆಟಗಾರ್ತಿಯರು ಮತ್ತು ಜರ್ಮನಿಯ ಜಿಮ್ನಾಸ್ಟಿಕ್ ತಾರೆಯರಿಗೆ ಅಭಿನಂದನೆಗಳು.