Saturday 8 October 2022

ಸಲ್ಲಲ್ಲಾಹು ಅಲೈಹಿ ವ ಸಲ್ಲಮ್




ಯಾವುದೇ ಜೀವಂತ ಸಿದ್ಧಾಂತದ ಲಕ್ಷಣ ಏನೆಂದರೆ, ಸದಾ ಚರ್ಚೆಯಲ್ಲಿರುವುದು. ಪ್ರತಿದಿನ ಆ ಸಿದ್ಧಾಂತದ ಸುತ್ತ ಚರ್ಚೆಗಳನ್ನು  ನಡೆಸುವ ವಾತಾವರಣ ನಾಗರಿಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವುದು. 

ಮೃತ ಸಿದ್ಧಾಂತಕ್ಕೆ ಈ ಲಕ್ಷಣ ಇರುವುದಿಲ್ಲ. ಆ ಸಿದ್ಧಾಂತಕ್ಕೂ ಅದರ  ಅನುಯಾಯಿಗಳೆಂದು ಹೇಳಿಕೊಳ್ಳುವವರಿಗೂ ಬಹುತೇಕ ಸಂಪರ್ಕ ಕಡಿದು ಹೋಗಿರುತ್ತದೆ. ಅವರು ತನ್ನಿಚ್ಛೆಯನ್ನು ಅ ನುಸರಿಸುತ್ತಿರುತ್ತಾರೆ. ಸಿದ್ಧಾಂತದಲ್ಲಿ ತಮಗೆ ಅನುಕೂಲಕರವೆಂದು ಅನಿಸಿದ್ದನ್ನು ಮಾತ್ರ ಪಾಲಿಸುತ್ತಾ, ಉಳಿದವುಗಳನ್ನು ತಿರಸ್ಕರಿಸುತ್ತಾ  ಬದುಕುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಸಿದ್ಧಾಂತಕ್ಕಿಂತ  ಅದರ ಅನುಯಾಯಿಗಳ ನಡವಳಿಕೆಗಳೇ ಚರ್ಚೆಗೊಳಗಾಗುವುದು ಹೆಚ್ಚು.  ಹೀಗೆ ತಾವು ನಿರ್ದಿಷ್ಟ ಸಿದ್ಧಾಂತವನ್ನು ಅನುಸರಿಸುವವರು ಎಂದು ಹೇಳಿಕೊಳ್ಳುತ್ತಲೇ ಆ ಸಿದ್ಧಾಂತದ ಬಹು ಅಂಶವನ್ನು ಕೈಬಿಟ್ಟು  ಬದುಕುತ್ತಿರುವವರು ಒಂದು ಕಡೆಯಾದರೆ, ತಮ್ಮ ಸಿದ್ಧಾಂತವೇ ಪರಮ ಸತ್ಯ ಮತ್ತು ಅದರ ಅನುಸರಣೆಯೇ ಇಹ-ಪರ ಯಶಸ್ಸಿನ  ಹಾದಿ ಎಂದು ನಂಬಿ ಬದುಕುತ್ತಿರುವವರು ಇನ್ನೊಂದು ಕಡೆ. ಪ್ರವಾದಿ ಮುಹಮ್ಮದ್(ಸ-ಸಲ್ಲಲ್ಲಾಹು ಅಲೈಹಿ ವ ಸಲ್ಲಮ್- ಅವರ  ಮೇಲೆ ಅಲ್ಲಾಹನ ಕರುಣೆ ಇರಲಿ) ಮತ್ತು ಅವರ ಅನುಯಾಯಿಗಳು ಈ ಎರಡನೇ ಗುಂಪಿನಲ್ಲಿದ್ದಾರೆ.

63 ವರ್ಷಗಳ ವರೆಗೆ ಬದುಕಿದ ಪ್ರವಾದಿ(ಸ), ಎಲ್ಲೂ ತನ್ನ ಚಿತ್ರವನ್ನು ಬಿಡಿಸಲು ಅನುಮತಿಸಿಲ್ಲ. ಎಲ್ಲಿ ಆರಾಧನೆಗೆ ಒಳಪಡುತ್ತೇನೋ  ಎಂಬ ಭೀತಿಯೇ ಇದಕ್ಕೆ ಕಾರಣ ಇರಬೇಕು. ಹೀಗೆ ತನ್ನ ಚಿತ್ರವನ್ನು ಬಿಡಿಸಲು ಒಪ್ಪದ ಪ್ರವಾದಿಯ ಚಿತ್ರವನ್ನು ಅವರು ಕಾಲವಾಗಿ  1500 ವರ್ಷಗಳೇ ಸಂದ ಬಳಿಕವೂ ಅವರ ಅನುಯಾಯಿಗಳು ಅವರ ಚಿತ್ರವನ್ನು ಬಿಡಿಸದೇ ಅನುಸರಿಸುತ್ತಿದ್ದಾರೆ. ಅವರು ಕಲಿಸಿದ  ನಮಾಝï, ಉಪವಾಸ, ಹಜ್ಜ್, ಝಕಾತ್ ಇತ್ಯಾದಿ ಮೂಲಭೂತ ಆರಾಧನಾ ರೀತಿಯನ್ನು ಅವರು ಕಲಿಸಿದಂತೆಯೇ ಇವತ್ತೂ ಅ ನುಸರಿಸುತ್ತಿದ್ದಾರೆ. ಅವರು ಕರಿಯ ಮತ್ತು ಬಿಳಿಯರನ್ನು, ಶ್ರೀಮಂತ ಮತ್ತು ಬಡವರನ್ನು, ರಾಜ ಮತ್ತು ಪ್ರಜೆಯನ್ನು, ಗುರು ಮತ್ತು  ಶಿಷ್ಯನನ್ನು, ವಿದ್ವಾಂಸ ಮತ್ತು ಸಾಮಾನ್ಯನನ್ನು ಭುಜಕ್ಕೆ ಭುಜ ತಾಗಿಸಿ ನಮಾಝï‌ನಲ್ಲಿ ಸರತಿಯಲ್ಲಿ ನಿಲ್ಲಬೇಕೆಂದು ಕಲಿಸಿದ್ದನ್ನು ಅವರ  ಅನುಯಾಯಿಗಳು ಇವತ್ತಿಗೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರು ಕಲಿಸಿದ ಅದೇ ರೀತಿಯಲ್ಲಿ ಉಪವಾಸವನ್ನು  ಆಚರಿಸುತ್ತಿದ್ದಾರೆ. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳಾದ ರಮಝಾನಿನಲ್ಲಿಯೇ ಮತ್ತು ಅದೂ ಮುಂಜಾನೆಯಿಂದ ಮುಸ್ಸಂಜೆಯ  ವರೆಗೆ ಈಗಲೂ ಅವರು ಉಪವಾಸ ಆಚರಿಸುತ್ತಿದ್ದಾರೆ. ಹಜ್ಜ್ ಕರ್ಮವನ್ನು ಕೂಡ ಚಾಂದ್ರಮಾನ ಕ್ಯಾಲೆಂಡರಿನ 12ನೇ ತಿಂಗಳಲ್ಲೇ   ನಿರ್ವಹಿಸುತ್ತಾರೆ ಮತ್ತು ಪ್ರವಾಹ, ಸಾಂಕ್ರಾಮಿಕ ರೋಗ, ಆರ್ಥಿಕ ಹಿಂಜರಿತ, ಯುದ್ಧ ಇತ್ಯಾದಿ ಸಹಜ ಕಾರಣಗಳನ್ನು ಮುಂದೊಡ್ಡಿ  10ನೇ ತಿಂಗಳಲ್ಲೋ  ಅಥವಾ 5ನೇ ತಿಂಗಳಲ್ಲೋ  ಹಜ್ಜ್ ನಿರ್ವಹಿಸುವುದಿಲ್ಲ. ಉಪವಾಸಕ್ಕೆ ಸಂಬಂಧಿಸಿಯೂ ಇವೇ ಮಾತುಗಳು ಅನ್ವಯಿಸುತ್ತವೆ. ಆವರೆಗೆ ಮಕ್ಕಾದ ಕಾಬಾ ಭವನಕ್ಕೆ ಪ್ರವೇಶ ನಿಷಿದ್ಧಗೊಂಡಿದ್ದ ಕರಿಯರನ್ನು ಸಮಾನತೆಯ ದಾರದಲ್ಲಿ ಪೋಣಿಸುವ  ಕ್ರಾಂತಿಕಾರಿ ಘೋಷಣೆಯ ದ್ಯೋತಕವಾಗಿ ಅವರು ಬಿಲಾಲ್ ಎಂಬ ಆಫ್ರಿಕನ್ ನೀಗ್ರೋವನ್ನು ಕಾಬಾ ಭವನದ ಮೇಲ್ಛಾವಣಿಗೆ ಹತ್ತಿಸಿ  ಪ್ರಾರ್ಥನಾ ಕರೆಯನ್ನು ಮೊಳಗಿಸಿದರು. ಅರಬರಿಗೆ ಅರಬೇತರರಿಗಿಂತ, ಬಿಳಿಯರಿಗೆ ಕರಿಯರಿಗಿಂತ, ವಿದ್ವಾಂಸರಿಗೆ ಸಾಮಾನ್ಯರಿಗಿಂತ,  ಶ್ರೀಮಂತರಿಗೆ ಬಡವರಿಗಿಂತ ಮನುಷ್ಯರೆಂಬ ನೆಲೆಯಲ್ಲಿ ಯಾವುದೇ ಮೇಲ್ಮೆಯಾಗಲಿ, ಹೆಚ್ಚುಗಾರಿಕೆಯಾಗಲಿ ಇಲ್ಲ ಎಂದು ಸಾರಿದರು.  ಇವತ್ತಿಗೂ ಈ ಸಮಾನತೆಯ ಸಿದ್ಧಾಂತವನ್ನು ಚಾಚೂ ತಪ್ಪದೇ ಮುಸ್ಲಿಮರು ಪಾಲಿಸುತ್ತಿದ್ದಾರೆ. ಹೆಣ್ಣಿಗೆ ಆಸ್ತಿಯಲ್ಲಿ ಪಾಲು, ವಧುವಿಗೆ  ವಿವಾಹ ಧನ, ವಿಧವೆಗೆ ವಿವಾಹ, ಹೆಣ್ಣು-ಗಂಡಿಗಿಬ್ಬರಿಗೂ ವಿಚ್ಛೇದನ ಸ್ವಾತಂತ್ರ‍್ಯ, ಹೆತ್ತವರನ್ನು ಆರೈಕೆ ಮಾಡುವ ಮಕ್ಕಳಿಗೆ ಸ್ವರ್ಗವಿದೆ  ಎಂಬ ಬೋಧನೆಯ ಅನುಸರಣೆ, ಮದ್ಯಪಾನ ಮತ್ತು ಬಡ್ಡಿಯ ಬಗ್ಗೆ ತಿರಸ್ಕಾರ.. ಇತ್ಯಾದಿ ಪ್ರವಾದಿ ಮೌಲ್ಯಗಳನ್ನು 1500 ವರ್ಷಗಳ  ಬಳಿಕ ಇವತ್ತೂ ಮುಸ್ಲಿಮರು ಸಣ್ಣ-ಪುಟ್ಟ ಲೋಪಗಳ ಹೊರತಾಗಿಯೂ ನಿಷ್ಠೆಯಿಂದ ಪಾಲಿಸುತ್ತಿದ್ದಾರೆ. ನಿಜವಾಗಿ,

ಸಿದ್ಧಾಂತಕ್ಕೆ ಬದ್ಧವಾದ ಮತ್ತು ಪ್ರವಾದಿಗೆ ನಿಷ್ಠವಾದ ಇಂಥದ್ದೊಂದು  ಅನುಯಾಯಿ ವರ್ಗ ಈ ಜಗತ್ತಿನ ಇನ್ನಾವ ಸಿದ್ಧಾಂತಕ್ಕಾಗಲಿ,  ವ್ಯಕ್ತಿಗಳಿಗಾಗಲಿ ಇಲ್ಲ. ಈ ಜಗತ್ತಿನಲ್ಲಿ ಪ್ರವಾದಿ ಮುಹಮ್ಮದರ(ಸ) ಹೊರತಾಗಿ ಅನೇಕ ಸಮಾಜ ಸುಧಾರಕರು, ಮಹಾನ್ ವ್ಯಕ್ತಿಗಳು  ಬಂದು ಹೋಗಿದ್ದಾರೆ. ಅವರೆಲ್ಲರನ್ನೂ ಪ್ರೀತಿಸುವ ಮತ್ತು ಸ್ಮರಿಸುವ ವ್ಯಕ್ತಿಗಳು ಇವತ್ತಿಗೂ ಇದ್ದಾರೆ. ಆದರೆ, ಅವರು ಮಂಡಿಸಿದ  ವಿಚಾರಧಾರೆಯನ್ನು ಅನುಸರಿಸುವ ವಿಷಯಕ್ಕೆ ಬಂದರೆ, ಇವರಲ್ಲಿ ಹೆಚ್ಚಿನವರು ಅನುತ್ತೀರ್ಣರಾಗುತ್ತಾರೆ. ಆದ್ದರಿಂದಲೇ,

ಪ್ರವಾದಿ(ಸ) ಮುಖ್ಯವಾಗುತ್ತಾರೆ. ಅವರು ಮತ್ತು ಅವರು ಮಂಡಿಸಿದ ವಿಚಾರಧಾರೆಗಳು ಈ ಸಮಾಜದಲ್ಲಿ ಪ್ರತಿನಿತ್ಯ ವಿಮರ್ಶೆ, ಟೀಕೆ,  ಪ್ರಶ್ನೆ, ಮೆಚ್ಚುವಿಕೆಗೆ ಪಾತ್ರವಾಗುತ್ತಿರುವುದೇ ಅದು ಜೀವಂತ ಸಿದ್ಧಾಂತ ಎಂಬುದಕ್ಕೆ ಸಾಕ್ಷಿ. ಸಲ್ಲಲ್ಲಾಹು ಅಲೈಹಿ ವ ಸಲ್ಲಮ್.

Tuesday 27 September 2022

ಮುಟ್ಟಿಸಿಕೊಳ್ಳದ ಕಾಯಿಲೆಗೆ ಸಮಾನತೆಯ ಔಷಧ ನೀಡಿ ಯಶಸ್ವಿಯಾದ ಪ್ರವಾದಿ(ಸ)



ಕಾಳಾರಾಮ್ ದೇಗುಳ ಪ್ರವೇಶಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ನಡೆಸಿದ ಚಳುವಳಿ ಮತ್ತು ಚೌದಾಬಿ ಕೆರೆಯ ನೀರಿನ ಸ್ಪರ್ಶಕ್ಕಾಗಿ  ನಡೆಸಿದ ಆಂದೋಲನಕ್ಕೆ ದಶಕಗಳೇ ಕಳೆದಿದ್ದರೂ ಈ ದೇಶದ ಮಲಿನ ಮನಸ್ಸುಗಳು ಇನ್ನೂ ಶುದ್ಧವಾಗಿಲ್ಲ ಎಂಬುದಕ್ಕೆ ಪ್ರತಿದಿ ನವೆಂಬಂತೆ  ಸಾಕ್ಷ್ಯಗಳು ಲಭ್ಯವಾಗುತ್ತಲೇ ಇವೆ. 

ಕಳೆದವಾರ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯ 10ನೇ  ತರಗತಿಯ ದಲಿತ ಬಾಲಕ ಚೇತನ್ ಇದಕ್ಕೆ ಹಸಿಹಸಿ ಸಾಕ್ಷ್ಯವನ್ನು ನೀಡಿದ. ಸೆಪ್ಟೆಂಬರ್ 8ರಂದು ರಾತ್ರಿ ಗ್ರಾಮ ದೇವತೆ ಬೂತ್ಯಾಮ್ಮ  ದೇವಿಯ ಉತ್ಸವದಲ್ಲಿ ದೇವರನ್ನು ಹೊತ್ತುಕೊಂಡು ಹೋಗುವಾಗ ಗುಜ್ಜುಕೋಲು ನೆಲಕ್ಕೆ ಬಿದ್ದಿದ್ದು, ಅದನ್ನು ಗಮನಿಸಿದ ಚೇತನ್,  ತಕ್ಷಣ ಆ ಕೋಲನ್ನು ಎತ್ತಿ ಕೊಟ್ಟಿದ್ದಾನೆ. ಆದರೆ ಮೇಲ್ಜಾತಿಯ ಮಂದಿ ಅದನ್ನು ಕಂಡು ಕೆಂಡವಾದರು. ನ್ಯಾಯ ಪಂಚಾಯಿತಿ ಸೇರಿದರು.  ಬೂತ್ಯಾಮ್ಮ ದೇವಿಗೆ ದಲಿತ ಬಾಲಕನಿಂದ ಮೈಲಿಗೆಯಾಗಿದೆ ಎಂಬ ತೀರ್ಮಾನಕ್ಕೆ ಬಂದರು. ಕೋಲು ಮುಟ್ಟಿ ದೇವಿಗೆ ಮೈಲಿಗೆ  ಮಾಡಿದ ಅಪರಾಧಕ್ಕಾಗಿ ಅಕ್ಟೋಬರ್ 1ರ ಒಳಗೆ 60 ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಫರ್ಮಾನು  ಹೊರಡಿಸಿದರು. ತಪ್ಪಿದರೆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು. ವಿಷಾದ ಏನೆಂದರೆ,

ದಂಡದ ಮೊತ್ತವನ್ನು ಸಂಗ್ರಹಿಸಲು ಚೇತನ್‌ನ ತಾಯಿ ಇದ್ದ ಬದ್ದ ಪ್ರಯತ್ನವನ್ನೆಲ್ಲ ಮಾಡಿದ್ದಾರೆ. ಮನೆಗೆಲಸ ಮಾಡಿ ದಿನದನ್ನ ಉಣ್ಣುವ  ಈ ತಾಯಿ, ಸವರ್ಣೀಯರ ಈ ನ್ಯಾಯ ಪಂಚಾತಿಕೆಗೆ ಬೆದರಿದ್ದಾರೆ. ಬಹಿಷ್ಕಾರ ಹಾಕಿದರೆ ಏನು ಮಾಡುವುದು ಎಂಬ ಭೀತಿಗೆ  ಒಳಗಾಗಿದ್ದಾರೆ. ಪೊಲೀಸರಿಗೆ ದೂರು ಕೊಡುವ ಬದಲು ದಂಡದ ಮೊತ್ತವನ್ನು 5 ಸಾವಿರಕ್ಕೆ ಇಳಿಸಿ ಎಂದು ಸವರ್ಣೀಯರ ಮುಂದೆ  ಅಂಗಲಾಚಿದ್ದಾರೆ. ಆದರೆ, ಅವರ ಮನಸ್ಸು ಕರಗಿಲ್ಲ. ಸೆ. 8ರಂದು ನಡೆದ ಈ ಘಟನೆ 12 ದಿನಗಳ ಬಳಿಕ ಪೊಲೀಸು ಠಾಣೆಯ  ಮೆಟ್ಟಿಲೇರಿದೆ ಎಂಬುದೇ ಆ ತಾಯಿ ಎದುರಿಸಿರಬಹುದಾದ ಮಾನಸಿಕ ಮತ್ತು ಬಾಹ್ಯ ಒತ್ತಡಕ್ಕೆ ಕನ್ನಡಿ ಹಿಡಿಯುತ್ತದೆ. ಅದೂ  ಅಂಬೇಡ್ಕರ್ ಸೇವಾ ಸಮಿತಿಯ ಗಮನಕ್ಕೆ ಈ ಘಟನೆ ಬಾರದೇ ಇರುತ್ತಿದ್ದರೆ, ಇವತ್ತಿಗೂ ಆ ತಾಯಿ ಒಳಗೊಳಗೇ ಕರಗುತ್ತಾ  ಕಾಣೆಯಾಗುತ್ತಿದ್ದರೋ ಏನೋ? ಸೇವಾ ಸಮಿತಿ ತಕ್ಷಣ ಕಾರ್ಯಪ್ರವೃತ್ತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತದೆ. ಆ  ಬಳಿಕ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಗೀಡಾಗುತ್ತದೆ. ಅಷ್ಟಕ್ಕೂ,

ಆರೋಪಿಗಳಾರೂ ಕಾನೂನು, ಕಾಯ್ದೆ, ಸಂವಿಧಾನದ ಗಂಧಗಾಳಿ ಇಲ್ಲದವರಲ್ಲ. ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ನಾರಾಯಣ  ಸ್ವಾಮಿ ಕೂಡಾ 8 ಮಂದಿ ಆರೋಪಿಗಳಲ್ಲಿ ಓರ್ವ. ಅರ್ಚಕ ಮೋಹನ್ ರಾವ್ ಕೂಡಾ ಆರೋಪಿಗಳಲ್ಲಿ ಓರ್ವ. ಅಂದಹಾಗೆ,

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲವು ಒಳ್ಳೆಯ ಬೆಳವಣಿಗೆಗಳಾಗಿವೆ. ವಿವಿಧ ಸಂಘಟನೆಗಳಿಂದ  ‘ಮುಳ್ಳೇರ ಹಳ್ಳಿ ಚಲೋ’ ಎಂಬ  ಹೆಸರಿನಲ್ಲಿ ಬೃಹತ್ ಜಾಥಾ ನಡೆದಿದೆ. ಸುಮಾರು 3 ಸಾವಿರಕ್ಕಿಂತಲೂ ಅಧಿಕ ಮಂದಿ ಈ ಜಾಥಾದಲ್ಲಿ ಭಾಗಿಯಾದರಲ್ಲದೇ, ದಲಿತ  ಸಂಘಟನೆಯ ಸದಸ್ಯರು ಭೂತ್ಯಾಮ್ಮ ದೇವಿಯ ಮಂದಿರದ ಎದುರು ಧರಣಿ ನಡೆಸಿದರು. ಬಳಿಕ ದೇಗುಲದಿಂದ ಗುಜ್ಜಕೋಲು  ಹೊರತಂದರು ಮತ್ತು ದೇಗುಲದ ಮೇಲೆ ಧ್ವಜ ಕಟ್ಟಿದರು. ಇದೇವೇಳೆ, ಸರ್ಕಾರ ಕೂಡಾ ಸಕಾರಾತ್ಮಕವಾಗಿಯೇ ಸ್ಪಂದಿಸಿತು. ಅರಣ್ಯ  ಇಲಾಖೆಗೆ ಸೇರಿದ ಜಾಗದಲ್ಲಿ ಮನೆ ಮಾಡಿಕೊಂಡಿರುವ ಈ ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಡಳಿತ ತಕ್ಷಣವೇ ಹಕ್ಕು ಪತ್ರ ನೀಡಿ ಧೈರ್ಯ  ತುಂಬಿತು. ಜಿಲ್ಲಾಧಿಕಾರಿ ವೆಂಕಟರಾಜು ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 25 ಸಾವಿರ ರೂಪಾಯಿ ಪರಿಹಾರ  ವಿತರಿಸಿದರು. ಸಂಸದ ಮುನಿಸ್ವಾಮಿ 50 ಸಾವಿರ ರೂಪಾಯಿಯ ಚೆಕ್ ನೀಡಿದರು. ನಿಜವಾಗಿ,

ಈ ಬಾಲಕ ಚೇತನ್ ಅಥವಾ ಅವನ ತಾಯಿ ಶೋಭಾ- ಅಸ್ಪೃಶ್ಯ ಆಚರಣೆಗೆ ಒಳಗಾದವರಲ್ಲಿ ಮೊದಲಿಗರಲ್ಲ. 43 ವರ್ಷಗಳ ಹಿಂದೆ  ಇದೇ ಗ್ರಾಮದ ಪಕ್ಕದ ಹುಣಸಿಕೋಟೆಯಲ್ಲಿ ಇಂಥದ್ದೇ  ಪ್ರಕರಣ ನಡೆದಿತ್ತು. ಆಗ ವಿಧಾನಸೌಧ ಚಲೋ ರ‍್ಯಾಲಿ ನಡೆಸಿ ಸಾರ್ವಜನಿಕ  ಗಮನ ಸೆಳೆಯಲಾಗಿತ್ತು. ಆದರೆ, ಮಲಿನ ಮನಸ್ಸುಗಳು ಇನ್ನು ಉಳಿದುಕೊಂಡಿವೆ. ಈ ದೇಶದಲ್ಲಿ 9,315ರಷ್ಟು ಜಾತಿಗಳಿವೆ ಎಂಬ ವರ ದಿಯಿದೆ. ಅದರಲ್ಲೂ 1,600ರಷ್ಟು ಉಪಜಾತಿಗಳು ಪರಿಶಿಷ್ಟರಲ್ಲೇ  ಇವೆ. ಪರಿಶಿಷ್ಟರೊಳಗಿನ ಈ ಉಪಜಾತಿಗಳಲ್ಲೂ ಮೇಲು ಮತ್ತು ಕೀಳು  ಜಾತಿಗಳಿವೆ. ಇದೊಂದು ಸಾಮಾಜಿಕ ಪಿಡುಗು. ಇದು ಧರ್ಮದ ಪೋಷಾಕು ತೊಟ್ಟಿರುವುದರಿಂದ ಸಂತ್ರಸ್ತರಲ್ಲಿ ಪ್ರಶ್ನೆ ಮಾಡುವ  ಧೈರ್ಯವೂ ಕಡಿಮೆ. ಮೇಲು-ಕೀಳು ಎಂಬುದು ಧಾರ್ಮಿಕ ಕಟ್ಟಳೆಯಾಗಿದ್ದು, ಅದನ್ನು ಉಲ್ಲಂಘಿಸುವುದು ಅಪರಾಧ ಎಂಬ ಭಾವ  ಸಾರ್ವಜನಿಕರಲ್ಲಿದೆ. ದರೋಡೆ, ಹತ್ಯೆ, ಕಳ್ಳತನ, ಅತ್ಯಾಚಾರ, ವಂಚನೆ ಇತ್ಯಾದಿಗಳಂತೆ ಇಂಥ ಅಸ್ಪೃಶ್ಯ ಆಚರಣೆಗಳು ಅಪರಾಧವಾಗಿ  ಗುರುತಿಗೆ ಒಳಗಾಗಿಲ್ಲ. ಆದ್ದರಿಂದಲೇ,
ಈ ಉಳ್ಳೇರಹಳ್ಳಿ ಪ್ರಕರಣ ಕೂಡ ಬೆಳಕಿಗೆ ಬರಲು 12 ದಿನಗಳನ್ನೇ ತೆಗೆದುಕೊಂಡಿತು. ಸಾಮಾನ್ಯವಾಗಿ,

 ಇಂಥ ಹೆಚ್ಚಿನ ಪ್ರಕರಣಗಳು  ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದೂ ಇಲ್ಲ. ರಾಜಿ ಸಂಧಾನದಲ್ಲೇ  ಹೆಚ್ಚಿನವು ಕೊನೆಗೊಳ್ಳುತ್ತದೆ. ಸಂತ್ರಸ್ತರು ಬಹುತೇಕ ಬಡ ಜ ನರೇ ಆಗಿರುವುದರಿಂದ ಮತ್ತು ತಾರತಮ್ಯ ಮಾಡುವವರು ಪ್ರಬಲರು ಮತ್ತು ಪ್ರಭಾವಿಗಳಾಗಿರುವುದರಿಂದ ಅವರನ್ನು ಎದುರಿಸಿಕೊಂಡು  ಊರಲ್ಲಿ ಬದುಕುವುದಕ್ಕೆ ಇಂಥ ದುರ್ಬಲ ಕುಟುಂಬಗಳಿಗೆ ಸಾಧ್ಯವಿರುವುದಿಲ್ಲ. ಆದ್ದರಿಂದ, ಅವರು ಎಲ್ಲ ತಾರತಮ್ಯವನ್ನು ಅವುಡುಗಚ್ಚಿ  ಸಹಿಸಿಕೊಂಡು ಬದುಕಬೇಕಾಗುತ್ತದೆ. ಊರಿನ ವಾತಾವರಣ ಹದಗೆಡುವುದು ಬೇಡ ಎಂದು ಹೇಳಿ ಕಾನೂನು ಪಾಲಿಸಬೇಕಾದವರೇ  ಸಂತ್ರಸ್ತರನ್ನು ಸುಮ್ಮನಾಗಿಸುವುದೂ ಇದೆ. ಈ ಮೂಲಕ ತಾರತಮ್ಯಕ್ಕೆ ಒಳಗಾಗುವುದಷ್ಟೇ ಅಲ್ಲ, ಊರ ಗೌರವವನ್ನು ಕಾಪಾಡುವ  ಹೊಣೆಗಾರಿಕೆಯನ್ನೂ ಈ ಸಂತ್ರಸ್ತರ ಮೇಲೆಯೇ ಹೊರಿಸಲಾಗುತ್ತದೆ. ಅಂದಹಾಗೆ,

ದೇಶ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ 2022 ಜುಲೈಯಲ್ಲಿ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಅಜಯ್  ಕುಮಾರ್ ಮಿಶ್ರಾ ಅವರು ಲೋಕಸಭೆಯ ಮುಂದಿಟ್ಟ ಅಂಕಿಅAಶಗಳೇ ಧಾರಾಳ ಸಾಕು. ಪರಿಶಿಷ್ಟ ಜಾತಿಗೆ ಸೇರಿದವರ ಮೇಲೆ  2018ರಲ್ಲಿ 42,793 ಹಲ್ಲೆ  ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಆ ಸಂಖ್ಯೆ 50 ಸಾವಿರವನ್ನೂ ಮೀರಿದೆ. ಅದೇವೇಳೆ, ಪರಿಶಿಷ್ಟ  ಪಂಗಡಗಳ ಮೇಲೆ 2018ರಲ್ಲಿ 6,528ರಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಅದು 8,272ಕ್ಕೆ ಏರಿದೆ. ಈ  ವಿವರಗಳ ಪ್ರಕಾರ, ಪರಿಶಿಷ್ಟ ಜಾತಿಯ ಮಂದಿಯ ಮೇಲೆ ಈ ದೇಶದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ದೌರ್ಜನ್ಯ ನಡೆಯುತ್ತಿದೆ. ಪರಿಶಿಷ್ಟ  ಪಂಗಡಗಳ ಮೇಲಿನ ಹಲ್ಲೆಯಲ್ಲೂ ಏರಿಕೆಯಾಗುತ್ತಲೇ ಇವೆ. ಹಾಗಂತ, ಇವೆಲ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಅಧಿಕೃತ  ಪ್ರಕರಣಗಳು ಅಷ್ಟೇ. ಇನ್ನು, ರಾಜಿ ಸಂಧಾನದಲ್ಲಿ ಮುಗಿಯುವ, ದಂಡ ಪಾವತಿಸಿ ಕೊನೆಗೊಳ್ಳುವ ಮತ್ತು ದೌರ್ಜನ್ಯಕ್ಕೆ ಒಳಗಾದರೂ  ಪೊಲೀಸರಿಗೆ ದೂರು ಕೊಡದೇ ಸತ್ತು ಹೋಗುವ ಪ್ರಕರಣಗಳನ್ನು ಪರಿಗಣಿಸಿದರೆ ಪ್ರತಿ ಸೆಕೆಂಡಿಗೊಂದು  ದೌರ್ಜನ್ಯ ಮತ್ತು ತಾರತಮ್ಯದ  ಲೆಕ್ಕ ಸಿಗಬಹುದೇ ಏನೋ?

ದೇಶ ಸ್ವತಂತ್ರಗೊಂಡು  75 ವರ್ಷಗಳಾದ ಬಳಿಕದ ಸ್ಥಿತಿ ಇದು. ನಿಜವಾಗಿ, ಇದು ಜನರ ಮನಸ್ಸಿನ ಕಾಯಿಲೆ. ಕೇವಲ ಕಾನೂನೊಂದೇ  ಈ ಕಾಯಿಲೆಗೆ ಔಷಧವಾಗಲು ಸಾಧ್ಯವಿಲ್ಲ. ಈಗ ಆಗಬೇಕಾಗಿರುವುದು ಮನಸ್ಸಿಗೆ ಔಷಧ ಕೊಡುವ ಪ್ರಯತ್ನ. ಮಾನವರೆಲ್ಲರೂ ಸಮಾ ನರು ಎಂಬ ಭಾವವನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದಕ್ಕೆ ಎಲ್ಲ ಮಠ-ಮಂದಿರಗಳೂ ಸ್ವಾಮೀಜಿ-ಧರ್ಮಗುರುಗಳೂ ಸಂಕಲ್ಪ  ಮಾಡಬೇಕು. ಹಾಗಂತ, ಇಂಥ ಪರಿವರ್ತನೆ ರಾತ್ರಿ-ಬೆಳಗಾಗುವುದರೊಳಗೆ ಸಾಧ್ಯವಾಗುವಂಥದ್ದಲ್ಲ. ಆದರೆ ಅಸಾಧ್ಯವೂ ಅಲ್ಲ. ಪ್ರವಾದಿ  ಮುಹಮ್ಮದರು ಕೇವಲ 23 ವರ್ಷಗಳೊಳಗೆ ಇಂಥದ್ದೊಂದು ಕ್ರಾಂತಿಯನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ. ಸಮಾಜದ  ಎಲ್ಲರನ್ನೂ ಮನುಷ್ಯರು ಮತ್ತು ಒಂದೇ ತಂದೆ-ತಾಯಿಯ ಮಕ್ಕಳು ಎಂಬ ಪಟ್ಟಿಗೆ ಸೇರಿಸಿ ಎಲ್ಲರೊಂದಿಗೆ ಬೆರೆಯುವ, ಎಲ್ಲರೊಂದಿಗೆ  ವಿವಾಹ ಸಂಬಂಧ  ಏರ್ಪಡಿಸುವ, ಜೊತೆಗೇ ಊಟ ಮಾಡುವ, ಒಟ್ಟಿಗೆ ಮಸೀದಿಯಲ್ಲಿ ಅಂತರವಿಲ್ಲದೇ ಪ್ರಾರ್ಥನೆಗೆ ನಿಲ್ಲುವ ಮತ್ತು  ನಮಾಝï‌ಗೆ ನೇತೃತ್ವ ನೀಡುವಲ್ಲಿಂದ ಹಿಡಿದು ಮಸೀದಿ ಧರ್ಮ ಗುರುವಾಗುವ ವರೆಗೆ ಎಲ್ಲವನ್ನೂ ಎಲ್ಲರಿಗೂ ಮುಕ್ತವಾಗಿಸಿ ಸಮಾನತೆಯನ್ನು ಸಾಧ್ಯವಾಗಿಸಿದ್ದಾರೆ. ಅಂದಹಾಗೆ,

ಅಸಮಾನತೆಯೇ ಮೈವೆತ್ತ ಮಕ್ಕಾದ ಸಾಮಾಜಿಕ ಬದುಕಿನಲ್ಲಿ ಅವರು ತಂದ ಪರಿವರ್ತನೆ ಭಾರತದ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ  ಅಧ್ಯಯನಯೋಗ್ಯ.

Thursday 22 September 2022

ಆಸಕ್ತಿ ಕಳಕೊಂಡ ಪೆನ್ನು-ಕ್ಯಾಮರಾಗಳಿಗೆ ಪಾಠ ಮಾಡಿದ ಪಿಯುಸಿಎಲ್




ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ನಲ್ಲಿ ವಾದ-ಪ್ರತಿವಾದಗಳು ನಡೆಯು ತ್ತಿರುವುದರ ನಡುವೆಯೇ ಪ್ರಮುಖ  ಸರಕಾರೇತರ ಸಂಸ್ಥೆಯಾದ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್) ಅಧ್ಯಯನ ವರದಿಯೊಂದನ್ನು  ಬಿಡುಗಡೆಗೊಳಿಸಿದೆ. 

2021 ಡಿಸೆಂಬರ್ ಕೊನೆಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ  ಈ ಹಿಜಾಬ್ ಪ್ರಕರಣವು 2022 ಫೆಬ್ರವರಿ 5ರಂದು ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಮೂಲಕ  ಬಿಗಡಾಯಿಸಿತು. ಉಡುಪಿಯ 6 ಮಂದಿ ವಿದ್ಯಾರ್ಥಿನಿ ಯರಿಗೆ ಸೀಮಿತವಾಗಿದ್ದ ಹಿಜಾಬ್ ಪ್ರಕರಣವು ರಾಜ್ಯವ್ಯಾಪಿಗೊಳ್ಳುವುದನ್ನು ರಾಜ್ಯ  ಸರ್ಕಾರ ಬಯಸಿತ್ತೇ ಎಂಬ ಅನುಮಾನವನ್ನು ಫೆಬ್ರವರಿ 5ರಂದು ಹೊರಡಿಸಿದ ಸುತ್ತೋಲೆ ಮತ್ತು ಅದಕ್ಕಿಂತ ಮೊದಲು ನಡೆದ ವಿವಿಧ  ಬೆಳವಣಿಗೆಗಳು ಹುಟ್ಟು ಹಾಕಿದ್ದುವು. ಅಂದಹಾಗೆ,

ಉಡುಪಿಯ ವಿದ್ಯಾರ್ಥಿನಿಯರು ಮತ್ತು ಆಡಳಿತ ಮಂಡಳಿಯ ನಡುವಿನ ತೀರಾ ಸ್ಥಳೀಯ ಎಂಬAಥ ಪ್ರಕರಣವೊಂದು ರಾಜ್ಯವ್ಯಾಪಿ  ಶಾಲೆ-ಕಾಲೇಜುಗಳ ಸಮಸ್ಯೆಯಾಗಿ ವಿಸ್ತರಣೆಯಾದುದರಲ್ಲಿ ಯಾವ ಸಂಚೂ ಇಲ್ಲವೇ? ಈ ಪ್ರಕರಣ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು.  ಹೀಗಿದ್ದೂ ರಾಜ್ಯದ ಉಳಿದ ಕಾಲೇಜುಗಳಲ್ಲಿ ಗಂಡು ಮಕ್ಕಳು ಕೇಸರಿ ಶಾಲು ಧರಿಸಿ ಬಂದುದೇಕೆ? ಅವರಿಗೂ ಈ ಹಿಜಾಬ್‌ಗೂ ಏನು  ಸಂಬಂಧ? ಅವರೆಲ್ಲ ಸ್ವಯಂಪ್ರೇರಿತರಾಗಿ ಹೀಗೆ ಕೇಸರಿ ಶಾಲನ್ನು ಕುತ್ತಿಗೆಗೆ ಹಾಕಿಕೊಂಡರೇ ಅಥವಾ ಅದರ ಹಿಂದೆ ಷಡ್ಯಂತ್ರವೇ ನಾದರೂ ಇತ್ತೇ? ಇದ್ದರೆ ಆ ಷಡ್ಯಂತ್ರ ಹೆಣೆದವರು ಯಾರು, ಅವರ ಉದ್ದೇಶವೇನು? ಆವರೆಗೆ ಹಿಜಾಬ್ ಧರಿಸಿ ಬರುತ್ತಿದ್ದ  ವಿದ್ಯಾರ್ಥಿನಿಯರನ್ನು ಏಕಾಏಕಿ ತಡೆದು, ಗೇಟು ಮುಚ್ಚಿ ಹೊರ ಹಾಕಿರುವುದಕ್ಕೆ ಬರೇ ಪ್ರಾಂಶುಪಾಲರು ಮಾತ್ರ ಹೊಣೆಯೇ ಅಥವಾ  ಅವರನ್ನು ನಿರ್ಬಂಧಿಸಲಾಯಿತೇ, ವಿದ್ಯಾರ್ಥಿನಿಯರ ಶಿಕ್ಷಣಕ್ಕಿಂತ ರಾಜಕೀಯ ಲಾಭ-ನಷ್ಟಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿತೇ  ಎಂಬಿತ್ಯಾದಿ ಪ್ರಶ್ನೆಗಳು ಈ ಪ್ರಕರಣದ ಜೊತೆಜೊತೆಗೇ ಹುಟ್ಟಿಕೊಂಡವು. 2022 ಮಾರ್ಚ್ 25ರಂದು ರಾಜ್ಯ ಹೈಕೋರ್ಟ್ ಹಿಜಾಬ್  ನಿರ್ಬಂಧಿಸಿ ತೀರ್ಪು ನೀಡುವುದರೊಂದಿಗೆ ಆವರೆಗೆ ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು  ಆಯ್ಕೆಯ ಕಗ್ಗಂಟಿಗೆ ನೂಕಿತು. ನಿಜವಾಗಿ,

ಹಿಜಾಬ್‌ಗೂ ಮುಸ್ಲಿಮ್ ಹೆಣ್ಣು ಮಕ್ಕಳಿಗೂ ಬಾಲ್ಯದಿಂದಲೇ ನಂಟಿದೆ. ಮನೆಯ ಒಳಗೂ ಹೊರಗೂ ಹಿಜಾಬ್ ಅವರ ಸಂಗಾತಿ.  ಅಲ್ಲದೇ, ಹಿಜಾಬ್ ನಿರ್ಬಂಧಿಸಿ ಫೆಬ್ರವರಿ 5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮುಂಚಿನ ದಿನದ ವರೆಗೂ ಹೆಣ್ಣು ಮಕ್ಕಳು  ಹಿಜಾಬ್ ಧರಿಸಿಯೇ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದರು. ಬಹುತೇಕ ಯಾವ ಶಾಲಾ-ಕಾಲೇಜುಗಳಲ್ಲೂ ಅದಕ್ಕೆ ನಿರ್ಬಂಧ ಇರಲಿಲ್ಲ.  ಆದರೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಮತ್ತು ಮಾರ್ಚ್ 25ರಂದು ಈ ಆದೇಶವನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್  ನೀಡಿದ ತೀರ್ಪು- ಇವೆರಡೂ ಅವರ ಸಹಜ ಕಲಿಕಾ ಬದುಕನ್ನೇ ಅಲ್ಲೋಲ ಕಲ್ಲೋಲಗೊಳಿಸಿತು. ಒಂದೋ ಹಿಜಾಬ್ ಕಳಚಿಟ್ಟು  ಶಾಲಾ-ಕಾಲೇಜುಗಳಿಗೆ ತೆರಳಬೇಕು ಇಲ್ಲವೇ ಶಿಕ್ಷಣವನ್ನೇ ಕೊನೆಗೊಳಿಸಬೇಕು ಅಥವಾ ಹಿಜಾಬ್‌ಗೆ ಅನುಮತಿ ಇರುವ ಖಾಸಗಿ  ಶಾಲೆಗಳಿಗೆ ಸೇರ್ಪಡೆಗೊಳ್ಳಬೇಕು ಎಂಬ ಸೀಮಿತ ಆಯ್ಕೆಯನ್ನು ಅವರ ಮುಂದಿಟ್ಟಿತು. ಇದೊಂದು ರೀತಿಯಲ್ಲಿ ಕತ್ತಿಯ ಅಲುಗಿನ  ಮೇಲಿನ ನಡಿಗೆಯಂಥ ಸ್ಥಿತಿ. ಶಿಕ್ಷಣ ಬೇಕೆಂದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬೇಕು ಮತ್ತು ಗಾಯವನ್ನು ಸಹಿಸಿಕೊಳ್ಳಲೇಬೇಕು  ಎಂಬ ಒತ್ತಡ ಸ್ಥಿತಿ. ಹಿಜಾಬನ್ನು ಕಳಚಿಡುವುದೆಂದರೆ, ಭಾವನಾತ್ಮಕವಾಗಿ ಆಳ ಇರಿತಕ್ಕೆ ಒಳಗಾಗುವುದೆಂದೇ ಅರ್ಥ. ಈ ಇರಿತವನ್ನು  ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬಾರದು ಅಥವಾ ಶಿಕ್ಷಣವನ್ನು ಅರ್ಧದಲ್ಲೇ   ಮೊಟಕುಗೊಳಿಸಬೇಕು. ಆದರೆ,

ಮಾರ್ಚ್ 25ರ ಬಳಿಕ ಇಂಥದ್ದೊಂದು  ಇಕ್ಕಟ್ಟಿಗೆ ಸಿಲುಕಿದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಸದ್ಯ ಹೇಗಿದ್ದಾರೆ ಮತ್ತು ಅವರ ಶೈಕ್ಷಣಿಕ  ಬದುಕು ಏನಾಗಿದೆ ಎಂಬ ಅಧ್ಯಯನಾತ್ಮಕ ವರದಿ ಬಹುತೇಕ ಬಿಡುಗಡೆಯಾದದ್ದೇ  ಇಲ್ಲ. ಹಿಜಾಬ್ ಪ್ರಕರಣ ಕಾವೇರಿದ್ದ ಸಮಯದಲ್ಲಿ  ಚುರುಕಾಗಿದ್ದ ಮಾಧ್ಯಮ ಕ್ಯಾಮರಾ ಮತ್ತು ಪೆನ್ನುಗಳು ಮಾರ್ಚ್ 25ರ ಬಳಿಕ ನಿಧಾನಕ್ಕೆ ತಮ್ಮ ದಿಕ್ಕನ್ನು ಬದಲಿಸಿದುವು. ಹಿಜಾಬ್  ನಿರ್ಬಂಧಿಸಿ ಹೊರಡಿಸಲಾದ ತೀರ್ಪು ವಿದ್ಯಾರ್ಥಿನಿಯರ ಮೇಲೆ, ಅವರ ಶೈಕ್ಷಣಿಕ ಬದುಕಿನ ಮೇಲೆ ಯಾವ ಪರಿಣಾಮವನ್ನು ಬೀರಿದೆ  ಎಂಬ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳಬೇಕಿದ್ದ ಮತ್ತು ವರದಿಯನ್ನು ತಯಾರಿಸಬೇಕಿದ್ದ ಮಾಧ್ಯಮಗಳು ಯಾಕೋ ಏನೋ  ಆಸಕ್ತಿಯನ್ನು ಕಳಕೊಂಡವು. ಇಂಥ ಅಸಮಾಧಾನಗಳ ಸಂದರ್ಭದಲ್ಲೇ  ಪಿಯುಸಿಎಲ್ ಮಧ್ಯಂತರ ವರದಿಯನ್ನು ಬಿಡುಗಡೆಗೊಳಿಸಿದೆ.  ಹಾಸನ ನಗರ, ಮಂಗಳೂರು ನಗರ, ಉಳ್ಳಾಲ, ಉಡುಪಿಯ ಹೂಡೆ, ಉಡುಪಿ ಪಟ್ಟಣ ಹಾಗೂ ರಾಯಚೂರು ಪಟ್ಟಣಗಳಲ್ಲಿ ಮೂರು  ತಿಂಗಳ ಕಾಲ ಅಧ್ಯಯನ ನಡೆಸಿದ ಐಶ್ವರ್ಯ ರವಿಕುಮಾರ್, ಕಿಶೋರ್ ಗೋವಿಂದ, ರಾಮದಾಸ್ ರಾವ್, ನ್ಯಾಯವಾದಿ ಪ್ರಕಾಶ್  ರವಿಶಂಕರ್, ಪಿಯುಸಿಎಲ್ ರಾಜ್ಯ ಜಂಟಿ ಕಾರ್ಯದರ್ಶಿ ಶಶಾಂಕ್ ಮತ್ತು ಪತ್ರಕರ್ತೆ ಸ್ವಾತಿ ಶುಕ್ಲಾ ಅವರಿದ್ದ ಅಧ್ಯಯನ ತಂಡವು ಕೆಲವು  ಮಹತ್ವಪೂರ್ಣ ಮಾಹಿತಿಗಳನ್ನು ಕಲೆ ಹಾಕಿದೆ. ಮುಖ್ಯವಾಗಿ ,

ವಿದ್ಯಾರ್ಥಿನಿಯರ ಹೊರತಾಗಿ ಕಾಲೇಜು ಆಡಳಿತ ಮಂಡಳಿ ಸದಸ್ಯರು,  ಸಂಬAಧಿತ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಮುಸ್ಲಿಮ್ ಜನಸಾಮಾನ್ಯರನ್ನು ಭೇಟಿಯಾಗಿ, ಅವರ  ಮಾತುಗಳಿಗೆ ಕಿವಿಯಾಗಿದೆ. ಮುಸ್ಲಿಮ್ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳೂ ಸಾಮಾಜಿಕ ಪ್ರತ್ಯೇಕತೆಯನ್ನು ಅನುಭವಿಸುತ್ತಿದ್ದು,  ಇತರ ಸಮುದಾಯದ ವಿದ್ಯಾರ್ಥಿಗಳ ಜೊತೆಗಿನ ಸ್ನೇಹ ಮತ್ತು ಸಂಪರ್ಕವನ್ನು ಕಳಕೊಳ್ಳುತ್ತಿದ್ದಾರೆ, ಹಾಗೆಯೇ ಈ ಸ್ಥಿತಿಯು ಅವರಲ್ಲಿ  ಖಿನ್ನತೆಯ ಭಾವವನ್ನು ಮೂಡಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಿಜಾಬ್ ಮತ್ತು ಶಿಕ್ಷಣವನ್ನು ಎರಡಾಗಿ  ವಿಭಜಿಸಿರುವುದನ್ನು ಕೃತಕ ಸೃಷ್ಟಿ ಎಂದಿರುವ ವರದಿಯು ಇದು ವಿದ್ಯಾರ್ಥಿನಿಯರ ಕನಸನ್ನೇ ಚಿವುಟಿ ಹಾಕಿದೆ ಮತ್ತು ಮುಸ್ಲಿಮ್  ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕನ್ನು ಮೊಟಕುಗೊಳ್ಳುವಂತೆ ಮಾಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ, 

ಹಿಜಾಬನ್ನು  ನಿರ್ಬಂಧಿಸಿ ರಾಜ್ಯ ಸರ್ಕಾರ ಫೆಬ್ರವರಿ 5ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಮತ್ತು ವಿದ್ಯಾರ್ಥಿನಿಯರು ಹಾಗೂ  ಅವರ ಕುಟುಂಬ ಅನುಭವಿಸಿರುವ ನಷ್ಟಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಪರಿಹಾರ ನೀಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ  ನಿರ್ದೇಶಿಸಬೇಕು ಎಂದೂ ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತ  ಆಯೋಗವು ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಕಾಲೇಜು ಪ್ರಾಂಶುಪಾಲರು ಮತ್ತು ಕಾಲೇಜು ಅಭಿವೃದ್ಧಿ  ಸಮಿತಿಗಳ ವಿರುದ್ಧ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಬೇಕು ಹಾಗೂ ಈಗಿನ ಕಾಲೇಜು ಅಭಿವೃದ್ಧಿ ಮಂಡಳಿಯನ್ನು ರದ್ದು  ಮಾಡಿ, ಎಲ್ಲ ಸಮುದಾಯಗಳ ಸದಸ್ಯರು, ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಸದಸ್ಯರು ಮತ್ತು  ಮಹಿಳೆಯರೂ ಸೇರಿದಂತೆ ಎಲ್ಲರ ಪ್ರಾತಿನಿಧ್ಯವನ್ನು ಹೊಂದಿರುವ ಹೊಸ ಸಮಿತಿಯನ್ನು ರಚಿಸಬೇಕು ಎಂದೂ ವರದಿಯಲ್ಲಿ ಸಲಹೆ  ನೀಡಲಾಗಿದೆ. ಅಂದಹಾಗೆ,
ಇದು ಮಧ್ಯಂತರ ವರದಿಯಾಗಿದ್ದು, ಪೂರ್ಣ ಪ್ರಮಾಣದ ವರದಿಯಲ್ಲಿ ಇನ್ನಷ್ಟು ಮಾಹಿತಿ ಮತ್ತು ಸಲಹೆಗಳಿರಬಹುದಾದ ಸಾಧ್ಯತೆ  ಇದೆಯಾದರೂ, ಒಂದು ಗಂಭೀರ ಪ್ರಕರಣದ ಮೇಲೆ ಅಧ್ಯಯನ ನಡೆಸಲು ಮುಂದಾದ ಪಿಯುಸಿಎಲ್‌ಗೆ ಕೃತಜ್ಞತೆಯನ್ನು ಸಲ್ಲಿಸಬೇಕು.  ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವ ಉದ್ದೇಶದಿಂದ 1976ರಲ್ಲಿ ಹುಟ್ಟಿಕೊಂಡ ಸಂಸ್ಥೆಯೊAದು ಇಷ್ಟು ದೀರ್ಘಾವಧಿಯ  ಬಳಿಕವೂ ತನ್ನ ಉದ್ದೇಶಿತ ನಿಲುವಿನಲ್ಲಿ ಅಚಲವಾಗಿದೆ ಎಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ. ಅಷ್ಟಕ್ಕೂ,

ಹಿಜಾಬ್- ಸರ್ಕಾರಕ್ಕೆ ಒಂದು ತುಂಡು ಬಟ್ಟೆಯಾಗಿ ಕಾಣಿಸಿರಬಹುದು ಮತ್ತು ಅದನ್ನು ವಿದ್ಯಾರ್ಥಿನಿಯರ ತಲೆಯಿಂದ ಕಳಚುವುದರಿಂದ  ರಾಜಕೀಯವಾಗಿ ಸಿಗುವ ಲಾಭವನ್ನು ಲೆಕ್ಕ ಹಾಕಿರಬಹುದು. ಆದರೆ ಮುಸ್ಲಿಮ್ ಸಮಾಜ ಎಂದೂ ಕೂಡ ಹಿಜಾಬನ್ನು ಒಂದು  ಬಟ್ಟೆಯಾಗಿ ಪರಿಗಣಿಸಿಲ್ಲ ಮತ್ತು ಅದನ್ನು ಧರಿಸದಂತೆ ನಿರ್ಬಂಧಿಸುವ ಸರ್ಕಾರ ಸುತ್ತೋಲೆಯನ್ನು ಇತರೆಲ್ಲ ಸುತ್ತೋಲೆಗಳಂತೆ  ಪರಿಗಣಿಸುವ ಸ್ಥಿತಿಯಲ್ಲೂ ಇಲ್ಲ. ಅಂದಹಾಗೆ, ‘ಯುನಿಫಾರ್ಮ್ ನ  ಭಾಗವಾಗಿ ವಿದ್ಯಾರ್ಥಿನಿಯರ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ  ಹಾಕಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ..’ ಎಂಬ ಒಂದು ಗೆರೆಯ ಸುತ್ತೋಲೆಯನ್ನು ಹೊರಡಿಸುವುದರಿಂದ ಈ ಸರ್ಕಾರ  ಕಳಕೊಳ್ಳುವಂಥz್ದÉÃನೂ ಇರಲಿಲ್ಲ. ಆದರೆ ಸರ್ಕಾರ ಹಠಕ್ಕೆ ಬಿತ್ತು. ವಿದ್ಯಾರ್ಥಿನಿಯರ ಭವಿಷ್ಯಕ್ಕಿಂತ ತನ್ನ ಅಧಿಕಾರದ ಭವಿಷ್ಯಕ್ಕೆ ಆದ್ಯತೆ  ನೀಡಿತು. ಮಾತ್ರವಲ್ಲ, ಹಿಜಾಬನ್ನು ಹಿಂದೂ-ಮುಸ್ಲಿಮ್ ನಡುವಿನ ಸಮಸ್ಯೆ ಎಂಬAತೆ ಬಿಂಬಿಸಿ ಸಾಮಾಜಿಕ ವಿಭಜನೆಗೂ ವೇದಿಕೆ ಕ ಲ್ಪಿಸಿತು.

ಸುಪ್ರೀಮ್ ಕೋರ್ಟಿನ ತೀರ್ಪು ಏನೇ ಬರಲಿ, ಪಿಯುಸಿಎಲ್ ಪ್ರಯತ್ನ ಶ್ಲಾಘನೀಯ.

ಅಪರಾಧಿ `ಅಲ್ಲಾಹು’ ಆಗಿರುತ್ತಿದ್ದರೆ ಅವರಿಗೂ ಪರಿಹಾರ ಸಿಕ್ಕಿರುತ್ತಿತ್ತೋ ಏನೋ?




ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿರುವಂತೆ ಮೃತ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೂ ರಾಜ್ಯ ಸರಕಾರ  ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಮುಸ್ಲಿಮ್ ಐಕ್ಯತಾ ವೇದಿಕೆಯು ಕಳೆದವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ  ನಡೆಸುತ್ತಿದ್ದ ವೇಳೆಯಲ್ಲೇ , ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಯುತ್ತಿತ್ತು. ಇದು ಕೂಡಾ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣ. ಕೊರೋನಾದಿಂದ ಸಾವಿಗೀಡಾದ ಸಾರಿಗೆ ನೌಕರರಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವುದಾಗಿ 2021 ಫೆಬ್ರವರಿ  10ರಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ, ನುಡಿದಂತೆ ಸಾರಿಗೆ ಇಲಾಖೆ ನಡಕೊಂಡಿಲ್ಲ. 2020 ಮಾರ್ಚ್ನಿಂದ  2021 ಜೂನ್‌ವರೆಗೆ ರಾಜ್ಯದ 4 ಸಾರಿಗೆ ನಿಗಮಗಳಿಗೆ ಸೇರಿದ 351 ಮಂದಿ ನೌಕರರು ಕೊರೋನಾಕ್ಕೆ ಬಲಿಯಾಗಿದ್ದರೂ ಈವರೆಗೆ  ಬರೇ 11 ಮಂದಿ ನೌಕರರ ಕುಟುಂಬಗಳಿಗೆ ಮಾತ್ರವೇ ಪರಿಹಾರ ವಿತರಿಸಲಾಗಿದೆ ಎಂದು ಅರ್ಜಿದಾರರಾದ ತಾಹಿರ್ ಹುಸೈನ್ ಮತ್ತು  ಅಝೀಝï ಪಾಶಾ ಅವರು ಹೈಕೋರ್ಟ್ನಲ್ಲಿ ಅರಿಕೆ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ಪ್ರತಿವಾ ದಿಗಳಾದ ರಾಜ್ಯ ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ವಿವರ ಕೋರಿ  ನೋಟೀಸು ಜಾರಿ ಮಾಡಿದೆ. ಅಂದಹಾಗೆ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದು ವಾರದೊಳಗೆ 25 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ರಾಜ್ಯ ಸರಕಾರ, ಮೃತ ಸಾರಿಗೆ  ನೌಕರರ ಕುಟುಂಬಕ್ಕೆ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳುವುದಕ್ಕೆ ಯಾಕೆ ವಿಫಲವಾಗಿದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟದ್ದೇನೂ  ಅಲ್ಲ. 2020 ಮಾರ್ಚ್ನಿಂದ 2021 ಜೂನ್ ವರೆಗಿನ ಅವಧಿಯಲ್ಲಿ 351 ಮಂದಿ ಸಾರಿಗೆ ನೌಕರರು ಕೊರೋನಾದಿಂದಾಗಿ ಮೃತ ಪಟ್ಟಿದ್ದಾರೆ ಎಂಬುದು, ಸರ್ಕಾರವೇ ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಿರುವ ವಿವರ. ಇಷ್ಟಿದ್ದೂ, ಈ ಒಂದು ವರ್ಷದ ಅವಧಿಯಲ್ಲಿ  ಬರೇ 11 ಮಂದಿಗೆ ಮಾತ್ರ ಪರಿಹಾರ ವಿತರಿಸಿ ಉಳಿದವರನ್ನು ನಿರ್ಲಕ್ಷಿಸಲು ಕಾರಣವೇನು? ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದೇ  ವಾರದಲ್ಲಿ ಪರಿಹಾರ ವಿತರಿಸಲು ಸಮರ್ಥವಾಗಿರುವ ಸರ್ಕಾರಕ್ಕೆ, ಮಸೂದ್ ಮತ್ತು ಫಾಝಿಲ್‌ಗೆ ಪರಿಹಾರ ವಿತರಿಸುವುದು ಬಿಡಿ, ಕ ನಿಷ್ಠ ಘೋಷಿಸಲೂ ಸಾಧ್ಯವಾಗಿಲ್ಲವೇಕೆ? ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿಯ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು  ಮುಖ್ಯಮಂತ್ರಿ ವರೆಗೆ ಮತ್ತು ದ.ಕ. ಜಿಲ್ಲೆಗೆ ಸಂಬಂಧವೇ ಇಲ್ಲದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹರೂ ಸೇರಿ ಎಲ್ಲರೂ ಜಿದ್ದಿಗೆ  ಬಿದ್ದವರಂತೆ ಭೇಟಿ ಕೊಟ್ಟಿರುವಾಗ, ಅಲ್ಲೇ  ಪಕ್ಕದಲ್ಲಿರುವ ಮಸೂದ್ ಮನೆಗೆ ಮತ್ತು ಇದೇ ಪ್ರವೀಣ್ ನೆಟ್ಟಾರು ಮನೆಯಿಂದ 30  ಕಿಲೋಮೀಟರ್ ದೂರದಲ್ಲಿರುವ ಫಾಝಿಲ್ ಮನೆಗೆ ಇವರಲ್ಲಿ ಒಬ್ಬರೇ ಒಬ್ಬ ಜನಪ್ರತಿನಿಧಿ ಭೇಟಿ ಕೊಡದಿರುವುದಕ್ಕೆ ಕಾರಣಗಳೇನು?  ನಿಜವಾಗಿ,

ಸರಕಾರ, ಹೇಗೆ ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರದ ಮೊತ್ತದಲ್ಲೂ ರಾಜಕೀಯ ಲಾಭ-ನಷ್ಟವನ್ನು ಲೆಕ್ಕ ಹಾಕುತ್ತದೆ ಎಂಬುದಕ್ಕೆ  ಮೃತ ಸಾರಿಗೆ ನೌಕರರು ಮತ್ತು ಪ್ರವೀಣ್ ನೆಟ್ಟಾರು ಪ್ರಕರಣ ಉತ್ತರವನ್ನು ಹೇಳುತ್ತದೆ. ಸಾರಿಗೆ ನೌಕರರು ರಾಜಕೀಯ  ಕಾರ್ಯಕರ್ತರಲ್ಲ. ಅವರ ಸಾವು ಮತ್ತು ಉಳಿವು ಸರ್ಕಾರದ ವರ್ಚಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ.  ಅಲ್ಲದೇ, ಕೊರೋನಾದಿಂದಾಗುವ ಸಾವಿಗೆ ಸಾಮುದಾಯಿಕ ಭಾವನೆಗಳನ್ನು ಕೆರಳಿಸುವ ಸಾಮರ್ಥ್ಯ ಇಲ್ಲ. ಅಂಥ ಸಾವುಗಳನ್ನು  ವ್ಯಕ್ತಿಗತವಾಗಿ ನೋಡಲಾಗುತ್ತದೆಯಾದ್ದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಿಸುವುದರಿಂದ ಸಾಮಾಜಿಕ ಭಾವನೆಯಲ್ಲಿ ಭಾರೀ  ಬದಲಾವಣೆ ತರಬಹುದಾದ ಸ್ಥಿತಿ ಇಲ್ಲ. ಹಾಗಂತ,

ಒಟ್ಟು 351 ಮಂದಿಯಲ್ಲಿ ಪರಿಹಾರ ಲಭಿಸಿದ 11 ಮಂದಿ ಮಾತ್ರ ಹಿಂದೂಗಳು, ಉಳಿದವರೆಲ್ಲ ಮಸೂದ್ ಮತ್ತು ಫಾಝಿಲ್  ಸಮುದಾಯಕ್ಕೆ ಸೇರಿದವರು ಎಂದು ಇದರರ್ಥವಲ್ಲ. ಮೃತಪಟ್ಟವರ ಪೈಕಿ ಶೇ. 99 ಮಂದಿ ಕೂಡ ಫಾಝಿಲ್ ಮತ್ತು ಮಸೂದ್ ಪ್ರತಿ ನಿಧಿಸುವ ಸಮುದಾಯಕ್ಕೆ ಸೇರಿದವರಲ್ಲ. ಒಂದುವೇಳೆ, ಹಿಂದೂಗಳ ಹಿತರಕ್ಷಣೆಯೇ ಬೊಮ್ಮಾಯಿ ಸರ್ಕಾರದ ಪರಮ ಗುರಿ  ಎಂದಾಗಿರುತ್ತಿದ್ದರೆ, ಇಷ್ಟರಲ್ಲಾಗಲೇ ಮೃತ ಸಾರಿಗೆ ನೌಕರರ ಕುಟುಂಬಗಳೂ ತಲಾ 30 ಲಕ್ಷ  ರೂಪಾಯಿ ಪರಿಹಾರವನ್ನು ಪಡೆ ದಿರಬೇಕಿತ್ತು. ಆದರೆ ಅದಾಗಿಲ್ಲ. ಮಾತ್ರವಲ್ಲ, ಅದೇ ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ ಅಲೆಯುವಂತಾಗಿದೆ. ರಾಜ್ಯ ಸರಕಾರ ಹೇಗೆ  ತಾನು ಹಿಂದೂಗಳ ಸಂರಕ್ಷಕ ಎಂಬ ರೀತಿಯಲ್ಲಿ ಪೋಸು ಕೊಟ್ಟು ಓಟು ರಾಜಕೀಯದಲ್ಲಿ ಬ್ಯುಸಿಯಾಗಿದೆ ಎಂಬುದಕ್ಕೆ ಇದು ಸ್ಪಷ್ಟ  ಉದಾಹರಣೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಪರಿಹಾರ ನೀಡುವ ಮೂಲಕ ಸಾಂತ್ವನ ಒದಗಿಸುವುದು ಈ ಸರ್ಕಾರದ  ಉದ್ದೇಶ ಅಲ್ಲ. ನಿಜವಾಗಿ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿದ್ದರೆ ಅದಕ್ಕೆ ಕಾರಣ ಅವರ ಬಗೆಗಿನ ಕಾಳಜಿ ಅಲ್ಲ, ರಾಜಕೀಯ ದುರುದ್ದೇಶ.  ಮಸೂದ್ ಮತ್ತು ಫಾಝಿಲ್ ಕುಟುಂಬಗಳನ್ನು ನಿರ್ಲಕ್ಷಿಸಿ ಪ್ರವೀಣ್ ಕುಟುಂಬವನ್ನು ಮಾತ್ರ ಆದರಿಸುವುದರಿಂದ ತನ್ನ ‘ಹಿಂದೂ  ಸಂರಕ್ಷಕ’ ಎಂಬ ವರ್ಚಸ್ಸಿಗೆ ಬಲ ಬಂದೀತು ಎಂಬ ನಂಬಿಕೆ ಅದಕ್ಕಿದೆ. ಮುಸ್ಲಿಮರನ್ನು ನಿರ್ಲಕ್ಷಿಸುವುದೇ ಹಿಂದೂಗಳ ಪರ  ನಿಂತಿರುವುದಕ್ಕೆ ಪುರಾವೆ ಎಂಬAತೆ ಬಿಂಬಿಸುವುದು ಅದರ ಉದ್ದೇಶ. ಹಿಂದೂ ಮುಸ್ಲಿಮರನ್ನು ಭಾವನಾತ್ಮಕವಾಗಿ ವಿಭಜಿಸುವುದು ಮತ್ತು  ಹಿಂದೂಗಳ ಪರ ನಿಲ್ಲುವುದು- ಇವೇ ಬಿಜೆಪಿಯ ರಾಜಕೀಯ ತಂತ್ರ. ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ವಿಷಯದಲ್ಲಿ ಈ  ಭಾವನಾತ್ಮಕ ವಿಭಜನೆ ಸಾಧ್ಯವಿಲ್ಲ. ಯಾಕೆಂದರೆ, ಕೊರೋನಾಕ್ಕೆ ‘ಅಲ್ಲಾಹುವೇ’ ಕಾರಣ ಎಂಬುದು ಈವರೆಗೂ ಸಾಬೀತಾಗಿಲ್ಲ.  ಒಂದುವೇಳೆ, ಇಂಥದ್ದೊಂದು  ಪ್ರಚಾರ ನಿಜಕ್ಕೂ ಯಶಸ್ವಿಯಾಗಿರುತ್ತಿದ್ದರೆ ಮೃತಪಟ್ಟ ಎಲ್ಲ ಹಿಂದೂ ಸಾರಿಗೆ ನೌಕರರಿಗೂ ಈಗಾಗಲೇ  ಪರಿಹಾರ ವಿತರಣೆಯಾಗಿರುತ್ತಿತ್ತೋ ಏನೋ?

ಮುಸ್ಲಿಮ್ ಐಕ್ಯತಾ ವೇದಿಕೆಯ ಅಡಿಯಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯು ‘ಮುಸ್ಲಿಮ್ ಸಮುದಾಯದ ಪ್ರತಿಭಟನೆ’ ಎಂಬ  ಚೌಕಟ್ಟನ್ನು ಮೀರಿ ಚರ್ಚೆಗೊಳಗಾಗಬೇಕಾದಷ್ಟು ಮಹತ್ವಪೂರ್ಣವಾದುದು. ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಇಬ್ಬರ  ಮೇಲೂ ಯಾವ ಅಪರಾಧ ಪ್ರಕರಣಗಳೂ ದಾಖಲಾಗಿಲ್ಲ. ಯಾರೊಂದಿಗೂ ಜಗಳವಾಡಿದ, ಯಾವುದಾದರೂ ಪ್ರಕರಣದಲ್ಲಿ ಪೊ ಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿರುವ ಕಪ್ಪು ಚುಕ್ಕೆಯೂ ಅವರ ಮೇಲಿಲ್ಲ. ತಮ್ಮಷ್ಟಕ್ಕೇ ದುಡಿದು ಕುಟುಂಬವನ್ನು ಸಾಕುತ್ತಿದ್ದ ಈ  ಇಬ್ಬರು ಯುವಕರನ್ನು ಕೋಮುದ್ವೇಷದ ಹೊರತು ಹತ್ಯೆ ಮಾಡುವುದಕ್ಕೆ ಬೇರಾವ ಕಾರಣಗಳೂ ಇಲ್ಲ. ಮುಸ್ಲಿಮ್ ಎಂಬುದರ  ಹೊರತಾಗಿ ಅವರ ಹತ್ಯೆಗೆ ಇರಬಹುದಾದ ಇನ್ನಾವ ಕಾರಣಗಳನ್ನೂ ಪೊಲೀಸರು ಬಹಿರಂಗಪಡಿಸಿಲ್ಲ. ಮಸೂದ್ ಹತ್ಯೆಯ ನಂತರ  ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ. ಆ ಬಳಿಕ ಫಾಝಿಲ್ ಹತ್ಯೆ ನಡೆದಿದೆ. ಈ ಮೂರೂ ಹತ್ಯೆಗಳಿಗೆ ಧರ್ಮದ ಹೊರತಾದ ಇನ್ನಾವ  ಕಾರಣಗಳೂ ಇಲ್ಲದೇ ಇರುವುದರಿಂದ ಈ ಮೂರೂ ಹತ್ಯೆಗಳನ್ನು ಸಮಾನವಾಗಿ ಕಾಣಬೇಕಾದುದು ರಾಜಧರ್ಮವನ್ನು ಪಾಲಿಸುವ  ಯಾವುದೇ ಸರ್ಕಾರದ ಪರಮ ಕರ್ತವ್ಯ. ಆದರೆ,

ಬೊಮ್ಮಾಯಿ ಸರ್ಕಾರ ಹಾಗೆ ನಡಕೊಂಡಿಲ್ಲ. ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿಕೊಟ್ಟ ಸರ್ಕಾರ ಉಳಿದೆರಡು  ಪ್ರಕರಣ ತನಿಖೆಯನ್ನು ಮಾತ್ರ ತನ್ನ ಬಳಿಯೇ ಇಟ್ಟುಕೊಂಡಿತು. ಎನ್‌ಐಎಗೆ ವಹಿಸಲಾಗುವ ಪ್ರಕರಣಗಳಲ್ಲಿ ಆರೋಪಿಗಳು ಸುಲಭವಾಗಿ  ಜಾಮೀನು ಪಡೆದು ಹೊರಬರುವುದಕ್ಕೆ ಸಾಧ್ಯವಿಲ್ಲ. ಜಾಮೀನಿಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ, ಎನ್‌ಐಎ ಹೊರತಾದ  ತನಿಖೆಗಳಲ್ಲಿ ಜಾಮೀನು ಪ್ರಕ್ರಿಯೆ ಇಷ್ಟು ಕಠಿಣವಾಗಿಲ್ಲ. ಆದ್ದರಿಂದಲೇ, ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಈಗಾಗಲೇ ಜಾಮೀನು  ಪಡೆದು ಹೊರಬಂದಿದ್ದಾನೆ. ಇದರಾಚೆಗೆ ಹೇಳುವುದಕ್ಕೇನಿದೆ? ಅಂದಹಾಗೆ,

ನರಗುಂದದ ಸಮೀರ್, ಶಿವಮೊಗ್ಗದ ಹರ್ಷ ಮತ್ತು ದಕ್ಷಿಣ ಕನ್ನಡದ ಈ ಮೂರು ಪ್ರಕರಣಗಳ ವಿಷಯದಲ್ಲಿ ಬೊಮ್ಮಾಯಿ ಸರ್ಕಾರ  ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ ಎಂದು ಬಿಜೆಪಿ ಬೆಂಬಲಿಗರೇ ಪರಸ್ಪರ ಹೇಳಿಕೊಳ್ಳುವಷ್ಟು ಸರ್ಕಾರದ ವರ್ಚಸ್ಸು ಕುಸಿದಿದೆ. ಹೀಗೆ ಬಹಿರಂಗ  ಅನ್ಯಾಯ ಮಾಡುವುದರಿಂದ ಯಾವುದೇ ಸರ್ಕಾರದ ಓಟಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ ಎಂದಾದರೆ, ಆ ಓಟು ಹಾಕುವವರ  ನ್ಯಾಯ ಪ್ರಜ್ಞೆಯ ಬಗ್ಗೆಯೂ ವಿಷಾದವಾಗುತ್ತದೆ. ಧರ್ಮ ಯಾವುದೇ ಇರಲಿ, ನ್ಯಾಯ ಸರ್ವರ ಪಾಲಿಗೂ ಸಮಾನ. ಅನ್ಯಾಯವೂ  ಹಾಗೆಯೇ. ಮುಸ್ಲಿಮರಿಗೆ ಅನ್ಯಾಯ ಮಾಡುವುದರಿಂದ ಹಿಂದೂಗಳಿಗೆ ತೃಪ್ತಿಯಾಗುವುದು ಮತ್ತು ಹಿಂದೂಗಳಿಗೆ ಅ ನ್ಯಾಯವಾಗುವುದರಿಂದ ಮುಸ್ಲಿಮರಿಗೆ ತೃಪ್ತಿಯಾಗುವುದು- ಇವೆರಡೂ ಧರ್ಮವಿರೋಧಿ ಭಾವನೆಗಳು. ಅನ್ಯಾಯ ಫಾಝಿಲ್‌ಗಾದರೂ  ನೆಟ್ಟಾರುಗಾದರೂ ಸಮೀರ್‌ಗಾದರೂ ಹರ್ಶನಿಗಾದರೂ ಅನ್ಯಾಯವೇ. ಇವುಗಳಲ್ಲಿ ಒಂದಕ್ಕೆ ದುಃಖಿಸಿ ಇನ್ನೊಂದಕ್ಕೆ ಸಂಭ್ರಮಪಡುವುದು  ಧರ್ಮ ಮತ್ತು ಅದು ಬೋಧಿಸುವ ನ್ಯಾಯ ನೀತಿಯನ್ನೇ ಹತ್ಯೆಗೈದಂತೆ.

Thursday 8 September 2022

ಇಸ್ಲಾಮೀ ಚಿಂತನೆಗೆ ಬೌದ್ಧಿಕ ವಲಯದಲ್ಲಿ ಅಂಗೀಕಾರ ಒದಗಿಸಿಕೊಟ್ಟ ಮೌಲಾನಾ




ಖ್ಯಾತ-ಕುಖ್ಯಾತ ಈ ಎರಡೂ ಪದಗಳ ನಡುವೆ ಒಂದೇ ಒಂದೇ ಅಕ್ಷರದ ವ್ಯತ್ಯಾಸವಷ್ಟೇ ಇದೆ. ಆದರೆ, ಅರ್ಥದ ಮಟ್ಟಿಗೆ ಹೇಳುವುದಾದರೆ, ಇವುಗಳ ನಡುವಿನ ವ್ಯತ್ಯಾಸ ಅಗಾಧವಾದುದು. ಖ್ಯಾತ ವಿದ್ವಾಂಸ, ಖ್ಯಾತ ವೈದ್ಯ, ಖ್ಯಾತ ವಿಜ್ಞಾನಿ, ಖ್ಯಾತ ಸಾಹಿತಿ- ಹೀಗೆ ಗುರುತಿಗೀಡಾದ ಹಲವರು ನಮ್ಮ ನಡುವೆ ಇದ್ದಾರೆ. ಇವರೆಲ್ಲ ರಾತ್ರಿ ಬೆಳಗಾಗುವುದರೊಳಗೆ ಖ್ಯಾತರಾದುದಲ್ಲ. ಅದರ ಹಿಂದೆ ಪರಿಶ್ರಮ, ಸಾಮಾಜಿಕ ಕೊಡುಗೆ, ಸಕಾರಾತ್ಮಕ ಚಿಂತನೆ ಮತ್ತು ಸಾಧನೆಗಳ ಬೆವರು ಇರುತ್ತದೆ. ಇಂಥ ಖ್ಯಾತರಲ್ಲಿ ಒಬ್ಬರು- ಕಳೆದವಾರ ನಿಧನರಾದ ಮೌಲಾನಾ ಜಲಾಲುದ್ದೀನ್ ಉಮರಿ. ಹಾಗಂತ, 2007ರಿಂದ 2019ರ ವರೆಗೆ ಅವರು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಎಂಬುದು ಅವರ ಹೆಸರಿನ ಮೊದಲು ಖ್ಯಾತ ಎಂಬ ಪದವನ್ನು ಸೇರಿಸುವುದಕ್ಕೆ ಕಾರಣ ಅಲ್ಲ. ಸಂಘಟನೆಗಳ ಅಧ್ಯಕ್ಷತೆಯನ್ನು ಹಲವು ದಶಕಗಳ ಕಾಲ ಅಲಂಕರಿಸಿರುವ ಮಂದಿ ನಮ್ಮ ನಡುವೆ ಇದ್ದಾರೆ. ಅವರೆಲ್ಲ ಖ್ಯಾತನಾಮರ ಪಟ್ಟಿಯಲ್ಲಿ ಸೇರಿಕೊಂಡಿಲ್ಲ. ಯಾಕೆಂದರೆ, ಅವರೆಲ್ಲ ಜಲಾಲುದ್ದೀನ್ ಉಮರಿ ಅಲ್ಲ.

87 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಆಗಸ್ಟ್ 26ರಂದು ರಾತ್ರಿ 9 ಗಂಟೆಗೆ ಇಹಲೋಕಕ್ಕೆ ವಿದಾಯ ಕೋರಿದಾಗ ಅವರಿಗಾಗಿ ಮಿಡಿದ ಹೃದಯಗಳು ಅಸಂಖ್ಯ. ದೇಶದ ಬಡವರು ಮತ್ತು ದುರ್ಬಲರ ಏಳಿಗೆಗಾಗಿ ‘ವಿಝನ್ 2016’ ಎಂಬ ಅಭೂತಪೂರ್ವ ಯೋಜನೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರೂಪಿಸಿದಾಗ, ಅದರ ಭಾಗವಾಗಿದ್ದವರು ಇದೇ ಜಲಾಲುದ್ದೀನ್ ಉಮರಿ. ಒಂದು ಸರ್ಕಾರ ಮಾತ್ರ ಮಾಡಬಹುದಾದ ಬಹುಕೋಟಿ ರೂಪಾಯಿಗಳ ಬೃಹತ್ ಕಲ್ಯಾಣ ಯೋಜನೆ ಇದು. ಅತೀ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸುವುದು ಈ ಯೋಜನೆಯ ಉದ್ದೇಶ. ಶಾಲೆ, ಆಸ್ಪತ್ರೆ, ಮನೆ ನಿರ್ಮಾಣ, ಮೂಲಭೂತ ಸೌಲಭ್ಯಗಳ ಒದಗಣೆ, ರೋಗಿಗಳಿಗೆ ನೆರವು, ಚಿಕಿತ್ಸೆ ಸಹಿತ ಒಂದು ಸರ್ಕಾರ ಮಾತ್ರ ಮಾಡಬಹುದಾದ ಯೋಜನೆಯನ್ನು ಒಂದು ಸಂಘಟನೆ ಕೂಡಾ ಮಾಡಬಹುದು ಎಂಬುದನ್ನು ರೂಪಿಸಿದವರಲ್ಲಿ ಇವರೂ ಒಬ್ಬರು. ಈ ಯೋಜನೆ ಕಾರ್ಯಗತಗೊಳ್ಳುವಾಗ ಇವರು ಜಮಾಅತ್‌ನ ಉಪಾಧ್ಯಕ್ಷರಾಗಿದ್ದರು. ಇವರು ಅಧ್ಯಕ್ಷರಾದ ಬಳಿಕ ಈ ಯೋಜನೆಯ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಯಿತು. ಮುಖ್ಯವಾಗಿ, ಉತ್ತರ ಭಾರತದ ಅತೀ ಹಿಂದುಳಿದ ಹಳ್ಳಿ ಮತ್ತು ಗ್ರಾಮಗಳು ಈ ಯೋಜನೆಯ ಪ್ರಯೋಜನವನ್ನು ಪಡಕೊಂಡವು. ಅಂದಹಾಗೆ,

ಯಾವುದೇ ವಿಷಯದ ಮೇಲೆ ಇಸ್ಲಾಮೀ ದೃಷ್ಟಿಕೋನಕ್ಕೆ ಸಂಬAಧಿಸಿ ವಿಶ್ಲೇಷಣೆ ನಡೆಸುವಲ್ಲಿ ಮೌಲಾನಾ ಉಮರಿ ನಿಪುಣರು. ಸಂದರ್ಭಾನುಸಾರ ಅವರು ಮಾಧ್ಯಮಗಳ ಮುಂದೆ ನಿಖರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಐಸಿಸ್‌ನ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯವಾಹಿನಿಯ ಆಂಗ್ಲ ಮಾಧ್ಯಮಗಳು ಅವರನ್ನು ಸಂಪರ್ಕಿಸಿದ್ದುವು. ಸಾಮಾನ್ಯವಾಗಿ, ಮೌಲಾನಾರ ಬಗ್ಗೆ ಮಾಧ್ಯಮಗಳಲ್ಲಿ ಒಂದು ಬಗೆಯ ಕೀಳರಿಮೆ ಇರುತ್ತದೆ. ಭೌತಿಕ ಶಿಕ್ಷಣವನ್ನು ಪಡೆಯದ ಮತ್ತು ಬರೇ ಧಾರ್ಮಿಕ ಶಿಕ್ಷಣವನ್ನಷ್ಟೇ ಕಲಿತಿರುವವರೆಂಬ ಉಡಾಫೆ ಭಾವವೂ ಅವರ ಪ್ರಶ್ನಾವಳಿಯಲ್ಲಿ ಗೋಚರಿಸುತ್ತಿರುತ್ತದೆ. ಆದರೆ ಮೌಲಾನಾರು ಜಾಮಿಯಾ ದಾರುಸ್ಸಲಾಮ್‌ನಿಂದ ಫಾಝಿಲ್ ಪದವಿ ಪಡೆದವರು ಮಾತ್ರವಲ್ಲ, ಅಲಿಘರ್ ವಿವಿಯಿಂದ ಬಿಎ ಪದವಿಯನ್ನೂ ಪಡೆದವರು ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿಪುಣರಾಗಿದ್ದಾರೆ ಎಂಬುದು ಗೊತ್ತಾಗಿ ಪತ್ರಕರ್ತರ ಪ್ರಶ್ನೆಯ ವರಸೆಯೇ ಬದಲಾಗಿತ್ತು. ಮೌಲಾನಾ ಅವರು ಮದ್ರಾಸ್ ವಿವಿಯಿಂದ ಪರ್ಷಿಯನ್ ಭಾಷೆಯಲ್ಲಿ ಮುನ್ಶಿ ಫಾಝಿಲ್ ಪದವಿಯನ್ನು ಕೂಡಾ ಪಡೆದವರಾಗಿದ್ದರು. ಆದ್ದರಿಂದಲೇ,

ಇಸ್ಲಾಮೀ ರಾಷ್ಟ್ರವನ್ನು ಕಟ್ಟುವ ಮೂಲಕ ನಾವು ಸ್ವರ್ಗ ಪ್ರವೇಶಿಸಬಹುದು ಎಂದು ಐಸಿಸ್‌ನ ಮಂದಿ ಭಾವಿಸುತ್ತಾರೆ. ಆದರೆ, ಹತ್ಯೆಗೈದು, ದೌರ್ಜನ್ಯವೆಸಗಿ ಮತ್ತು ಹಿಂಸೆಗೀಡುಮಾಡಿ ಓರ್ವ ಹೇಗೆ ತಾನೇ ಸ್ವರ್ಗ ಪ್ರವೇಶಿಸಲು ಸಾಧ್ಯ? ಹಿಂಸೆಯ ವಿರುದ್ಧ ಮಕ್ಕಳನ್ನು ತರಬೇತುಗೊಳಿಸುವುದು ಎಲ್ಲ ಹೆತ್ತವರ ಕರ್ತವ್ಯವಾಗಿದೆ ಮತ್ತು ಆ ಮೂಲಕ ಇಸ್ಲಾಮ್ ತೋರಿಸಿದ ಸನ್ಮಾರ್ಗದ ಕಡೆಗೆ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ...’ ಎಂದವರು ಮಾಧ್ಯಮಗಳ ಮುಂದೆ ಅಭಿಪ್ರಾಯಪಟ್ಟಿದ್ದರು. ಐಸಿಸನ್ನು ಸಮರ್ಥಿಸುವ ಸಣ್ಣ ಎಳೆಯೇನಾದರೂ ಸಿಗುತ್ತದೆಯೇ ಎಂದು ಕಾದುಕೊಂಡವರನ್ನು ಗಾಢ ನಿರಾಶೆಗೆ ತಳ್ಳಿದ ಹೇಳಿಕೆ ಅದಾಗಿತ್ತು. ಇದೇವೇಳೆ, ಜಮಾಅತೆ ಇಸ್ಲಾಮೀ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿದ ಸಂದರ್ಭದಲ್ಲಿ ಅದರ ಕಮಾಂಡರ್ ಇನ್ ಚೀಫ್ ಎಂದು ಜಲಾಲುದ್ದೀನ್ ಉಮರಿಯವರನ್ನು ತನ್ನ ಸುದ್ದಿ ಪ್ರಸಾರದ ನಡುವೆ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿ.ವಿ. ಬಿಂಬಿಸಿತ್ತು. ಬಳಿಕ ಅದು ನಿಶ್ಶರ್ಥವಾಗಿ ಮೌಲಾನಾರ ಕ್ಷಮೆಯನ್ನೂ ಯಾಚಿಸಿತ್ತು. ಯಾಕೆಂದರೆ ಮೌಲಾನಾ ಉಮರಿ ನಾಲ್ಕು ಗೋಡೆಯೊಳಗಿನ ಅಧ್ಯಕ್ಷ ಆಗಿರಲಿಲ್ಲ. ಬಹುತ್ವದ ಭಾರತದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಒಂದಕ್ಕಿಂತ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಬರೆದು ಬೌದ್ಧಿಕ ವಲಯ ತಲೆದೂಗುವಂತೆ ಮಾಡಿದವರು ಅವರು. ವೈಚಾರಿಕವಾಗಿ ಅವರು ಅತ್ಯಂತ ಬಲಿಷ್ಠರಾಗಿದ್ದರು. ಇಸ್ಲಾಮನ್ನು ಅತ್ಯಂತ ಸಮಗ್ರವಾಗಿ ಯಾವುದೇ ಅಪವಾದಗಳಿಗೆ ಎಡೆಯಾಗದಂತೆ ಪ್ರಬಲ ಪುರಾವೆಯೊಂದಿಗೆ ಬೌದ್ಧಿಕ ವಲಯದಲ್ಲಿ ಮಂಡಿಸುವ ಸಾಮರ್ಥ್ಯ ಅವರಲ್ಲಿತ್ತು. ಸಾಹಿತ್ಯ ಕ್ಷೇತ್ರ ಅವರ ಇಷ್ಟದ ಮಗ್ಗುಲಾದುದರಿಂದ ಭಾಷಣಗಳಿಗೆ ಹೊರತಾಗಿ ತನ್ನ ಚಿಂತನೆಯನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಅವರು ಯಶಸ್ಸು ಕಂಡರು. ಅವರು ಬರೆದಿರುವ ಸುಮಾರು 40ಕ್ಕಿಂತಲೂ ಅಧಿಕ ಪುಸ್ತಕಗಳಲ್ಲಿ ಯಾವುದು ಕೂಡಾ ಇಸ್ಲಾಮ್ ಮುಸ್ಲಿಮ್ ಎಂಬ ಪರಿಧಿಯನ್ನು ಬಿಟ್ಟು ಹೊರ ಹೋಗಿಯೇ ಇರಲಿಲ್ಲ. ಏನನ್ನು ಬರೆಯುವುದಿದ್ದರೂ ಅದರ ಜೊತೆ ಇಸ್ಲಾಮೀ ದೃಷ್ಟಿಕೋನವನ್ನು ದಾಖಲಿಸುವುದು ಅವರ ರೂಢಿಯಾಗಿತ್ತು. ಪಂಡಿತ ವಲಯದಲ್ಲಿ ಹೆಚ್ಚು ವಿಶ್ಲೇಷಣೆಗೆ ಒಳಪಡುವ ಸಂಶೋಧನಾತ್ಮಕ ಬರಹಗಳನ್ನು ಅವರು ಆಸಕ್ತಿಯಿಂದ ಬರೆದುದಷ್ಟೇ ಅಲ್ಲ, ಆ ಎಲ್ಲ ಬರಹಗಳೂ ಇಸ್ಲಾಮನ್ನು ಕೇಂದ್ರೀಕರಿಸಿ ಇದ್ದುವು ಎಂಬುದು ಗಮನಾರ್ಹ. ಅಂದಹಾಗೆ,

ಮೌಲಾನಾ ಉಮರಿಯವರು ವಿದ್ಯಾರ್ಥಿ ಕಾಲದಿಂದಲೇ ಜಮಾಅತ್‌ನೊಂದಿಗೆ ಸಂಬಂಧ ಇಟ್ಟು ಕೊಂಡೇ ಬೆಳೆದವರು. ತನ್ನ ಪ್ರತಿಭೆ ಮತ್ತು ಆಸಕ್ತಿಯ ಕಾರಣದಿಂದಾಗಿ ಬಹಳ ಬೇಗ ಮುಂಚೂಣಿಗೂ ತಲುಪಿದರು. ಜಮಾಅತ್‌ನ ಅಲೀಘರ್ ನಗರಾಧ್ಯಕ್ಷರಾಗಿ ಅವರು ಬಹಳ ಬೇಗ ಆಯ್ಕೆಯಾದರು. ಆದರೆ, ಅವರ ಆಸಕ್ತಿ ಸಂಶೋಧನಾ ಕ್ಷೇತ್ರದ ಮೇಲಿತ್ತು. ಆದ್ದರಿಂದಲೇ, ಜಮಾಅತ್‌ನ ಸಂಶೋಧನಾ ವಿಭಾಗವಾದ ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಭಾಗವಾದರು. ‘ತಹ್ಕಿಕಾತೆ ಇಸ್ಲಾಮೀ’ ಎಂಬ ರಿಸರ್ಚ್ ತ್ರೈಮಾಸಿಕದ ಸಂಪಾದಕರೂ ಆದರು. ಆ ಬಳಿಕ ಜಮಾಅತ್‌ನ ಮುಖವಾಣಿ ಝಿಂದಗಿ-ಏ-ನೌ ಎಂಬ ಮಾಸಿಕದ ಸಂಪಾದಕರಾದರು. ಬಳಿಕ ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿರಂತರ 16 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ 2007ರಿಂದ 2019ರ ವರೆಗೆ ಜಮಾಅತ್‌ನ ಅಧ್ಯಕ್ಷರಾಗಿಯೂ ಹೊಣೆಗಾರಿಕೆ ನಿಭಾಯಿಸಿದರು. ಈ ನಡುವೆ ಅವರು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಸ್ಥಾಪಕ ಸದಸ್ಯರೂ ಉಪಾಧ್ಯಕ್ಷರೂ ಆಗಿದ್ದರು. ತ್ರಿವಳಿ ತಲಾಕ್‌ನ ಚರ್ಚೆಯ ವೇಳೆ ಅತ್ಯಂತ ತಾರ್ಕಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಇದೇ ಮೌಲಾನಾ. ಕೇಂದ್ರ ಸರ್ಕಾರದ ಉದ್ದೇಶ ಶುದ್ಧಿಯನ್ನು ಪ್ರಶ್ನಿಸಿ ಪ್ರಶ್ನೆಗಳನ್ನೆತ್ತಿದವರೂ ಇದೇ ಮೌಲಾನಾ. ಅವರ ಇನ್ನೊಂದು ಬಹುಮುಖ್ಯ ಸಾಧನೆ ಏನೆಂದರೆ, ಭಿನ್ನ ವಿಚಾರಧಾರೆಯ ಉಲೆಮಾಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಿಕೊಂಡದ್ದು. ಜಮಾಅತ್‌ಗಿಂತ ಹೊರತಾದ ವಿವಿಧ ಧಾರ್ಮಿಕ ಸಂಘಟನೆಗಳ ಉಲೆಮಾಗಳು ಮೌಲಾನಾರೊಂದಿಗೆ ಆಪ್ತ ಸಂಬಂಧವನ್ನು ಹೊಂದಿದ್ದರು. ಬಹುತ್ವದ ಸಮಾಜದಲ್ಲಿ ಮುಸ್ಲಿಮರು ಹೇಗಿರಬೇಕು ಮತ್ತು ಇಸ್ಲಾಮಿನ ಪ್ರಚಾರದ ಸ್ವರೂಪ ಏನಿರಬೇಕು ಎಂಬ ಬಗ್ಗೆ ಅತ್ಯಂತ ನಿಖರ ಮತ್ತು ಸಂತುಲಿತ ನಿಲುವನ್ನು ಸಂದರ್ಭಾನುಸಾರ ವ್ಯಕ್ತಪಡಿಸುತ್ತಲೇ ಬಂದವರು ಮೌಲಾನಾ ಉಮರಿ. ನಿಜವಾಗಿ,
ಏಕಕಾಲದಲ್ಲಿ ಉತ್ತಮ ನಾಯಕ, ಶಿಕ್ಷಣ ತಜ್ಞ, ಸಾಹಿತಿ, ಚಿಂತಕ, ಸಂಶೋಧಕ ಇತ್ಯಾದಿ ಗುಣಗಳನ್ನು ಓರ್ವರು ರೂಢಿಸಿಕೊಳ್ಳುವುದು ಸುಲಭ ಅಲ್ಲ. ಅಪಾರ ಪರಿಶ್ರಮ, ನಿರಂತರ ಅಧ್ಯಯನ, ಚಿಂತಕರೊಂದಿಗೆ ಸಂವಾದ, ಸಂಶೋಧನೆ, ಸಕಾರಾತ್ಮಕ ದೃಷ್ಟಿಕೋನ ಮತ್ತು ಅಲ್ಲಾಹನ ಅನುಗ್ರಹ- ಇವೆಲ್ಲವೂ ಜೊತೆಗೂಡಿದಾಗ ಸಿಗುವ ಫಲಿತಾಂಶವೇ ಮೌಲಾನಾ ಜಲಾಲುದ್ದೀನ್ ಉಮರಿ. ಮೃದು ಮಾತಿನ, ಗಂಭೀರ ನಡವಳಿಕೆಯ ಮೌಲಾನಾರು ಬಹುತ್ವದ ಭಾರತಕ್ಕೆ ತನ್ನ ವಿಚಾರಗಳಿಂದ ಮೆರುಗನ್ನು ನೀಡಿದ್ದಾರೆ. ‘ಮೌಲಾನಾರೆಂದರೆ, ಕರ್ಮಶಾಸ್ತ್ರ ಭಿನ್ನಾಭಿಪ್ರಾಯಗಳನ್ನು ಉಬ್ಬಿಸಿ ಜಿದ್ದಾಜಿದ್ದಿನಲ್ಲಿ ತೊಡಗಿರುವವರು...’ ಎಂಬ ಸಾಮಾನ್ಯ ನಿಲುವಿಗೆ ಅಪವಾದವಾಗಿದ್ದರು ಮೌಲಾನಾ ಉಮರಿ. ಅವರು ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿದ್ದಾಗ ಇಂಥ ಕರ್ಮಶಾಸ್ತ್ರ ಭಿನ್ನತೆಗಳನ್ನು ತಗ್ಗಿಸುವ ದೃಷ್ಟಿಯಿಂದಲೇ ರಿಸರ್ಚ್ ತಂಡವನ್ನು ರೂಪಿಸಿದ್ದರು. ಅವರು ತಮ್ಮ ಬರಹದಲ್ಲಿ ಕರ್ಮಶಾಸ್ತ್ರ  ಭಿನ್ನತೆಗೆ ಮಹತ್ವ ಕಲ್ಪಿಸುತ್ತಲೇ ಇರಲಿಲ್ಲ. ಎಲ್ಲ ವಿಚಾರಧಾರೆಯ ಉಲೆಮಾಗಳನ್ನು ಜೊತೆ ಸೇರಿಸಿಕೊಂಡು ಬಹುತ್ವದ ಭಾರತದಲ್ಲಿ ಮುಸ್ಲಿಮರು ನಿರ್ಭಯದಿಂದ ಬದುಕುವುದಕ್ಕೆ ಮತ್ತು ದೇಶದ ಜನರಿಗೆ ಇಸ್ಲಾಮನ್ನು ಪರಿಚಯಿಸುವುದಕ್ಕೆ ಅವರು ಶಕ್ತಿ ಮೀರಿ ಶ್ರಮಿಸಿದರು.

ಅವರನ್ನು ಸೃಷ್ಟಿಕರ್ತನು ಪ್ರೀತಿಸಲಿ.

ಪರಿಹಾರ ಘೋಷಿಸದಂತೆ ಮುಖ್ಯಮಂತ್ರಿಯನ್ನು ತಡೆದವರು ಯಾರು?




ಕಳೆದ ಜುಲೈ 20ರಿಂದ 28ರ ನಡುವೆ ದ.ಕ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿವೆ. ಇವರಾರೂ ನುಸುಳುಕೋರರಲ್ಲ,  ಭಯೋತ್ಪಾದಕರಲ್ಲ, ಒಂದೇ ಒಂದು ಪ್ರಕರಣ ಕೂಡಾ ಇವರ ಮೇಲೆ ದೇಶದ ಯಾವುದೇ ಪೊಲೀಸ್ ಠಾಣೆಯಲ್ಲೂ ದಾಖಲಾಗಿಲ್ಲ.  ಮೂವರಲ್ಲೂ ಆಧಾರ್ ಕಾರ್ಡ್ ಇದೆ, ಮತದಾರರ ಗುರುತಿನ ಚೀಟಿ ಇದೆ, ರೇಶನ್ ಕಾರ್ಡ್ನಲ್ಲಿ ಹೆಸರಿದೆ, ಇಲ್ಲಿಯೇ ಹುಟ್ಟಿ ಇಲ್ಲಿಯೇ  ಬೆಳೆದು ಇಲ್ಲಿಯೇ ದುಡಿಯುತ್ತಿದ್ದ ತರುಣರು ಇವರು. ಇವರು ಶಿಕ್ಷಣ ಪಡೆದ ದಾಖಲೆಗಳೂ ಸ್ಥಳೀಯ ಶಾಲೆಗಳಲ್ಲಿ ಲಭ್ಯ ಇವೆ. ಇವರ  ಹೆತ್ತವರೂ ಸ್ಥಳೀಯರೇ ಆಗಿದ್ದಾರೆ. ಹೀಗಿದ್ದೂ ರಾಜ್ಯ ಸರ್ಕಾರ ಅತ್ಯಂತ ಪಕ್ಷಪಾತಿತನದಿಂದ ವರ್ತಿಸಿತು. ಜುಲೈ 20ರಂದು ಹತ್ಯೆಯಾದ  ಮಸೂದ್‌ನ ಮನೆಗೆ ಭೇಟಿ ಕೊಡದ ಮುಖ್ಯಮಂತ್ರಿಗಳು ಜುಲೈ 26ರಂದು ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕೊಟ್ಟರು.  25 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನೂ ವಿತರಿಸಿದರು. ಪ್ರವೀಣ್ ನೆಟ್ಟಾರು ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನೂ  ನೀಡಿದರು. ಅಲ್ಲದೇ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಗೂ ವಹಿಸಿಕೊಟ್ಟರು. ಬೆಂಗಳೂರಿನಿಂದ  ಪ್ರವೀಣ್ ನೆಟ್ಟಾರು  ಮನೆಗೆ ಸುಮಾರು 400 ಕಿಲೋಮೀಟರ್ ದೂರವಿದ್ದರೆ, ಪ್ರವೀಣ್ ನೆಟ್ಟಾರು ಮನೆಯಿಂದ ಮಸೂದ್ ಮನೆಗೆ ಹತ್ತು-ಹದಿನೈದು  ಕಿಲೋಮೀಟರ್ ದೂರವಷ್ಟೇ ಇದೆ. ಆದ್ದರಿಂದ ಪ್ರವೀಣ್ ಮನೆಗೆ ಭೇಟಿಕೊಟ್ಟ ಮುಖ್ಯಮಂತ್ರಿಗಳು ಮಸೂದ್ ನೆಗೆ ಭೇಟಿ ಕೊಡದೇ  ಇರುವುದಕ್ಕೆ ಎರಡೂ ಮನೆಗಳ ನಡುವಿನ ದೂರ ಕಾರಣ ಅಲ್ಲವೇ ಅಲ್ಲ. ಹಾಗಾದರೆ ಇನ್ನೇನು? ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ  ಇದ್ದಾಗಲೇ ಫಾಝಿಲ್ ಎಂಬ ಯುವಕನ ಹತ್ಯೆಯೂ ನಡೆದಿದೆ. ಆದರೂ ಮುಖ್ಯಮಂತ್ರಿಗಳು ಈ ಇಬ್ಬರಿಗೆ ನಯಾ ಪೈಸೆ ಪರಿಹಾರವ ನ್ನೂ ಘೋಷಿಸಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನವನ್ನೂ ಹೇಳಿಲ್ಲ. ಮಸೂದ್ ಮತ್ತು ಫಾಝಿಲ್ ಕುಟುಂಬದ ಸದಸ್ಯರಿಗೆ ಸರ್ಕಾರಿ  ಉದ್ಯೋಗದ ಭರವಸೆ ನೀಡಲಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆಯನ್ನು NIA ಗೆ  ವಹಿಸಿಕೊಟ್ಟಂತೆ ಈ ಇಬ್ಬರ ಹತ್ಯಾ ಪ್ರಕರಣವನ್ನು NIA ಗೆ  ವಹಿಸಿ ಕೊಡಲಿಲ್ಲ. ಇದು ಅನ್ಯಾಯ. ಬಹಿರಂಗ ಪಕ್ಷಪಾತ. ಆದ್ದರಿಂದಲೇ ಮುಖ್ಯಮಂತ್ರಿಗಳು ಮೇಲಿಂದ ಮೇಲೆ ಪ್ರಶ್ನೆಗೆ ಒಳಗಾದರು.  ಪರಿಹಾರ ಘೋಷಿಸದೇ ಇರುವುದನ್ನು ಮತ್ತು ಸಂತ್ರಸ್ತರ ಮನೆಗೆ ಭೇಟಿ ಕೊಡದೇ ಇರುವುದನ್ನು ಮಾಧ್ಯಮಗಳು ಸಹಿತ ನಾಗರಿಕರು  ಪ್ರಶ್ನಿಸಿದರು. ಸೋಶಿಯಲ್ ಮೀಡಿಯಾದಲ್ಲಂತೂ ಮುಖ್ಯಮಂತ್ರಿಯನ್ನು ತೀವ್ರವಾಗಿಯೇ ತರಾಟೆಗೆ ಎತ್ತಿಕೊಳ್ಳಲಾಯಿತು. ಎಲ್ಲಿಯ  ವರೆಗೆಂದರೆ, ನಾನು ಸಂತ್ರಸ್ತರ ಮನೆಗೆ ಭೇಟಿ ಕೊಡುವೆ ಎಂದವರು ಮಾಧ್ಯಮಗಳ ಮುಂದೆಯೇ ಹೇಳಿಕೊಂಡರು. ಅಂದಹಾಗೆ,

ಈ ಹೇಳಿಕೆಗೆ ಇದೀಗ ಒಂದು ತಿಂಗಳು ತುಂಬಿದೆ. ಆದರೆ ಈವರೆಗೆ ಅವರು ಮಸೂದ್ ಮತ್ತು ಫಾಝಿಲ್ ಮನೆಗೆ ಭೇಟಿ ಕೊಟ್ಟಿಲ್ಲ.  ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಭೇಟಿ ಕೊಡುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಮುಖ್ಯಮಂತ್ರಿಗಳು  ಮಂಗಳೂರಿಗೆ ಆಗಮಿಸಿದ್ದರು. ಫಾಝಿಲ್ ಮನೆ ಮಂಗಳೂರಿನಲ್ಲಿಯೇ ಇದೆ. ಮಸೂದ್ ಮನೆಗೆ ಮಂಗಳೂರಿನಿAದ 30  ಕಿಲೋಮೀಟರ್ ದೂರವಷ್ಟೇ ಇದೆ. ಮುಖ್ಯಮಂತ್ರಿಗಳು ನಿಜಕ್ಕೂ ರಾಜಧರ್ಮವನ್ನು ಪಾಲಿಸುತ್ತಿದ್ದಾರೆ ಎಂದಾದರೆ, ಈ ಸಂದರ್ಭವನ್ನು  ಅವರು ಬಳಸಿಕೊಳ್ಳಲೇ ಬೇಕಿತ್ತು. ಸಂತ್ರಸ್ತರ ಮನೆಗೆ ತೆರಳಿ ಪರಿಹಾರವನ್ನು ಘೋಷಿಸಬೇಕಿತ್ತು. ಒಂದುವೇಳೆ, ಪರಿಹಾರ ಮತ್ತು  ಭೇಟಿಯ ವಿಷಯದಲ್ಲಿ ಅವರಿಗೆ ತಕರಾರು ಇದೆ ಎಂದಾದರೆ, ಅದನ್ನಾದರೂ ಹೇಳಿಕೊಳ್ಳಬೇಕಿತ್ತು. ಇದು ಓರ್ವ ಮುಖ್ಯಮಂತ್ರಿಯ  ಜವಾಬ್ದಾರಿ. ಮಸೂದ್, ಪ್ರವೀಣ್ ಮತ್ತು ಫಾಝಿಲ್ ಸಹಿತ 6 ಕೋಟಿ ಕನ್ನಡಿಗರನ್ನು ಏಕರೀತಿಯಲ್ಲಿ ಪೊರೆಯಬೇಕಾದ  ಮುಖ್ಯಮಂತ್ರಿಯವರು, ಅದರಲ್ಲಿ ವಿಫಲರಾಗುತ್ತಾರೆಂದರೆ ಅದಕ್ಕೆ ಸ್ಪಷ್ಟೀಕರಣ ಕೊಡಬೇಕಾದ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು.  ಆದರೆ ಮುಖ್ಯಮಂತ್ರಿ ಬೊಮ್ಮಾಯಿಯವರು ಈ ಯಾವುದನ್ನೂ ಮಾಡಿಲ್ಲ. ಮಾತ್ರವಲ್ಲ, ಅವರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ  ನಡಕೊಂಡಿದ್ದಾರೆ ಎಂಬುದಕ್ಕೆ ‘ನಾನು ಸಂತ್ರಸ್ತರ ಮನೆಗೆ ಭೇಟಿ ಕೊಡುತ್ತೇನೆ...’ ಎಂಬ ಅವರ ಹೇಳಿಕೆಯೇ ಸಾಕ್ಷಿ. ತಾನು  ನಡಕೊಂಡಿರುವುದು ರಾಜಧರ್ಮ ಅಲ್ಲ ಅನ್ನುವುದು ಅವರಿಗೆ ಗೊತ್ತಿದೆ. ಹಾಗಿದ್ದರೆ, ಆತ್ಮಸಾಕ್ಷಿಯನ್ನು ಕೊಂದುಕೊAಡು ಅವರು ಅ ಧಿಕಾರದಲ್ಲಿರುವುದಾದರೂ ಯಾತಕ್ಕೆ? ಅಧಿಕಾರದ ಆಯುಷ್ಯ ಬಹಳ ಕಡಿಮೆ. ಮುಖ್ಯಮಂತ್ರಿಯಾಗಿ ರಾತ್ರಿ ಮಲಗಿದವರು ಬೆಳಿಗ್ಗೆ  ಏಳುವಾಗ ಮಾಜಿಯಾದ ಇತಿಹಾಸವಿದೆ. ಆದರೆ ಮಾಜಿಯಾದ ಮುಖ್ಯಮಂತ್ರಿಯನ್ನು ಜನರು ಗೌರವಿಸಬೇಕಾದರೆ, ಹಾಲಿಯಾಗಿದ್ದಾಗ  ಆತ್ಮಸಾಕ್ಷಿಯಂತೆ ನಡಕೊಂಡ ಇತಿಹಾಸವೂ ಇರಬೇಕು. ಅಂದಹಾಗೆ,

ಪ್ರಧಾನಿ ಮೋದಿಯವರು ಮಂಗಳೂರಿಗೆ ಆಗಮಿಸುವುದಕ್ಕಿಂತ ಮೊದಲು ಫಾಝಿಲ್ ಕುಟುಂಬ ಪತ್ರಿಕಾಗೋಷ್ಠಿಯನ್ನು ನಡೆಸಿತ್ತು.  ಮುಖ್ಯಮಂತ್ರಿಗಳು ಅನ್ಯಾಯವಾಗಿ ನಡಕೊಂಡಿರುವುದರ ಬಗ್ಗೆ ಅಸಂತೋಷ ವ್ಯಕ್ತಪಡಿಸಿತ್ತು. ಮಾತ್ರವಲ್ಲ, ಈ ಬಗ್ಗೆ ಪ್ರಧಾನಿಯವರ  ಗಮನ ಸೆಳೆಯುವುದಕ್ಕಾಗಿ ಭೇಟಿಗೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಆ ಮನವಿಯನ್ನು  ಜಿಲ್ಲಾಡಳಿತ ಪರಿಗಣಿಸಲಿಲ್ಲ. ಪ್ರಧಾನಿಯವರ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಶಾಸಕರೂ ಹಾಜರಿದ್ದರು. ಮಸೂದ್ ಮನೆಯನ್ನು  ವಿಧಾನ ಸಭೆಯಲ್ಲಿ ಪ್ರತಿನಿಧಿಸುವ ಬಿಜೆಪಿ ಶಾಸಕರೂ ಸಚಿವರೂ ಆದ ಅಂಗಾರ ಹಾಗೂ ಫಾಝಿಲ್ ಕುಟುಂಬವನ್ನು ವಿಧಾನಸಭೆಯಲ್ಲಿ  ಪ್ರತಿನಿಧಿಸುವ ಬಿಜೆಪಿ ಶಾಸಕ ಭರತ್ ಶೆಟ್ಟಿಯವರೂ ಇದ್ದರು. ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಗೆದ್ದಿರುವುದೂ  ಬಿಜೆಪಿ ಅಭ್ಯರ್ಥಿಗಳೇ. ಸಂಸದರೂ ಬಿಜೆಪಿಯವರೇ. ಒಂದುರೀತಿಯಲ್ಲಿ,

ಬಿಜೆಪಿ ಇವತ್ತು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವುದಕ್ಕೆ ಈ ಜಿಲ್ಲೆಯ ಕೊಡುಗೆ ಬಹಳವೇ ಇದೆ. ಇಷ್ಟಿದ್ದೂ, ಈ ಜಿಲ್ಲೆಯ  ನಾಗರಿಕರ ಜೊತೆ ಬಿಜೆಪಿ ಇಷ್ಟು ನಿರ್ಲಜ್ಜ ಅನ್ಯಾಯ ತೋರಿದ್ದು ಯಾಕೆ? ಅದಕ್ಕೆ ಯಾರ ಭಯ? ಮಸೂದ್ ಮತ್ತು ಫಾಝಿಲ್  ಕುಟುಂಬಕ್ಕೆ ಪರಿಹಾರ ಘೋಷಿಸುವುದರಿಂದ ಬಿಜೆಪಿಗೆ ಹಾನಿ ಇದೆಯೇ? ಇದ್ದರೆ ಯಾವ ರೀತಿಯ ಹಾನಿ? ಮುಖ್ಯಮಂತ್ರಿಗಳು ಆ  ಎರಡು ಮನೆಗಳಿಗೆ ಭೇಟಿ ಕೊಡುವುದನ್ನು ಬಿಜೆಪಿ ಇಷ್ಟಪಡುವುದಿಲ್ಲವೇ? ಇಲ್ಲ ಎಂದಾದರೆ ಯಾಕೆ? ಮತದಾರರ ಭಯವೇ? ಪ್ರವೀಣ್  ನೆಟ್ಟಾರು ಮನೆಗೆ ಭೇಟಿ ಕೊಡುವುದನ್ನು ಮತ್ತು ಪರಿಹಾರ ಘೋಷಿಸುವುದನ್ನು ಬೆಂಬಲಿಸುವ ಮತದಾರರು, ಮಸೂದ್ ಮತ್ತು  ಫಾಝಿಲ್ ಮನೆಗೆ ಭೇಟಿ ಕೊಡುವುದನ್ನು ಬೆಂಬಲಿಸದೇ ಇರಲು ಕಾರಣ ಏನು? ಅವರು ಮುಸ್ಲಿಮರು ಎಂದೇ? ಅಲ್ಲ, ಎಂದಾದರೆ  ಬೇರೆ ಕಾರಣ ಯಾವುದು? ಮುಖ್ಯಮಂತ್ರಿಗಳಾದರೂ ಹೇಳಬಹುದಲ್ಲ? ಬಿಜೆಪಿ ರಾಜ್ಯಾಧ್ಯಕ್ಷರಾದರೂ ಹೇಳಬಹುದಲ್ಲ? ಅಷ್ಟಕ್ಕೂ,

ಬಿಜೆಪಿಗೆ ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಸಯ್ಯದ್ ಸಲಾಂ ಅದರ ಅಧ್ಯಕ್ಷರು. ಶಾಂತಕುಮಾರ್ ಕೆನಡಿ ಉಪಾಧ್ಯಕ್ಷರು.  17 ಮಂದಿ ಪದಾಧಿಕಾರಿಗಳ ಪೈಕಿ 14 ಮಂದಿಯೂ ಮುಸ್ಲಿಮರು. 27 ಮಂದಿ ಕಾರ್ಯಕಾರಿಣಿ ಸದಸ್ಯರ ಪೈಕಿ 20 ಮಂದಿಯೂ  ಮುಸ್ಲಿಮರು. ಇದಲ್ಲದೇ ಜಿಲ್ಲಾ ಮಟ್ಟದಲ್ಲೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಇದೆ. ಅಲ್ಲದೆ  ಪದಾಧಿಕಾರಿಗಳು ಮತ್ತು ಕಾರ್ಯಕಾರಿ  ಸಮಿತಿ ಸದಸ್ಯರಾಗಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾ ಎಂಬ ವಿಭಾಗ  ಇದ್ದು, ಜಲಾಲ್ ಸಿದ್ದೀಖಿ ಅದರ ಅಧ್ಯಕ್ಷರಾಗಿದ್ದಾರೆ. ಒಂದುವೇಳೆ, ಮುಸ್ಲಿಮ್ ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಮತ್ತು ಅವರಿಗೆ  ಪರಿಹಾರ ಘೋಷಿಸುವುದು ಬಿಜೆಪಿಯ ಮತದಾರರನ್ನು ಅಸಂತೋಷಗೊಳಿಸುತ್ತದೆ ಎಂದಾದರೆ, ಬಿಜೆಪಿಯ ಈ ಅಲ್ಪಸಂಖ್ಯಾತ  ಮೋರ್ಚಾಗಳ ಬಗ್ಗೆ ಆ ಮತದಾರರ ನಿಲುವೇನು? ಇಂಥದ್ದೊಂದು ಮೋರ್ಚಾದ ಅಗತ್ಯ ಬಿಜೆಪಿಗೆ ಯಾಕಿದೆ ಎಂದವರು ಪ್ರಶ್ನಿಸುವು ದಿಲ್ಲವೇ? ಅಲ್ಪಸಂಖ್ಯಾತ ಮೋರ್ಚಾ ಎಂದು ಹೆಸರಿಟ್ಟು ಬರೇ ಮುಸ್ಲಿಮರನ್ನೇ ಅದರಲ್ಲಿ ತುಂಬಿಸುವುದು ಮತ್ತು ಅವರಿಗೆ ಅಧ್ಯಕ್ಷ ಸ್ಥಾ ನವನ್ನೂ ವಹಿಸಿ ಕೊಡುವುದು ಅವರಲ್ಲಿ ಅಸಂತೋಷ ತರಿಸುವುದಿಲ್ಲವೇ? ಈ ಮೋರ್ಚಾಗಳನ್ನು ಬರ್ಖಾಸ್ತು ಮಾಡದಿದ್ದರೆ ಮತ  ಚಲಾಯಿಸಲ್ಲ ಎಂದವರು ಬೆದರಿಕೆ ಹಾಕುವುದಿಲ್ಲವೇ? ನಿಜವಾಗಿ,

ಮಸೂದ್ ಮತ್ತು ಫಾಝಿಲ್‌ಗೆ ಪರಿಹಾರ ಘೋಷಿಸದೇ ಇರುವುದಕ್ಕೂ ಬಿಜೆಪಿ ಮತದಾರರಿಗೂ ಸಂಬಂಧ  ಇಲ್ಲ. ಬಿಜೆಪಿ ಮತದಾರರು  ಎಲ್ಲೇ  ಆಗಲಿ ಇಂಥದ್ದೊಂದು  ಒತ್ತಾಯ ಮಾಡಿಲ್ಲ. ಪರಿಹಾರ ಘೋಷಿಸದಂತೆ ಮತ್ತು ಮುಖ್ಯಮಂತ್ರಿಗಳು ಭೇಟಿ ಕೊಡದಂತೆ ರ‍್ಯಾಲಿ  ನಡೆಸಿಲ್ಲ. ಯಾಕೆಂದರೆ, ಬಿಜೆಪಿ ಮತದಾರರೆಂದರೆ, ಅನ್ಯಗೃಹದ ಜೀವಿಗಳಲ್ಲ. ಇದೇ ಮಣ್ಣಿನ ಮಕ್ಕಳು. ಅವರ ಅಕ್ಕಪಕ್ಕದಲ್ಲೇ   ಮುಸ್ಲಿಮರು ಬದುಕುತ್ತಾ ಇದ್ದಾರೆ. ಸುಖ, ದುಃಖ, ಸಡಗರ, ಸಂಭ್ರಮ, ಕಣ್ಣೀರು, ನಗು.. ಎಲ್ಲವೂ ಇವರಲ್ಲಿ ಸಮಾನವಾಗಿವೆ. ದುಡಿದರೆ  ಮಾತ್ರ ಇವರ ಮನೆಗಳಲ್ಲಿ ಅನ್ನ ಬೇಯುತ್ತೆ. ಶಾಲೆಗಳಲ್ಲಿ ಬಿಜೆಪಿ ಮತದಾರರಿಗೆ ಒಂದು, ಮುಸ್ಲಿಮರಿಗೆ ಒಂದು ಎಂಬ ಶುಲ್ಕ ನೀತಿ  ಇಲ್ಲ. ಆಸ್ಪತ್ರೆಗಳಲ್ಲೂ ಅಷ್ಟೇ. ಅಂಗಡಿ, ಮೆಡಿಕಲ್‌ಗಳಲ್ಲೂ ಅಷ್ಟೇ. ಸುಖ, ದುಃಖಗಳಲ್ಲಿ ಇವರಿಬ್ಬರೂ ಪಕ್ಷಾತೀತವಾಗಿ ಮತ್ತು  ಧರ್ಮಾತೀತವಾಗಿ ಸಮಾನರು. ಆದ್ದರಿಂದ ಮಸೂದ್‌ಗಾಗಲಿ ಫಾಝಿಲ್‌ಗಾಗಲಿ ಪರಿಹಾರ ಕೊಡಬೇಡಿ, ಆ ಮನೆಗೆ ಭೇಟಿ ಕೊಡಬೇಡಿ  ಎಂದು ಅವರು ಆಗ್ರಹಿಸುವುದಕ್ಕೆ ಸಾಧ್ಯವೇ ಇಲ್ಲ. ನಿಜ ಏನೆಂದರೆ, ಇದು ಬಿಜೆಪಿಯ ರಾಜಕೀಯ ನೀತಿ. ಮತದಾರರದ್ದಲ್ಲ. ಆದರೆ  ಬಿಜೆಪಿ ಈ ಅನ್ಯಾಯದ ನೀತಿಯನ್ನು ಬಹಳ ಜಾಣತನದಿಂದ ತನ್ನ ಮತದಾರರ ಬಯಕೆಯಾಗಿ ಬಿಂಬಿಸಲು ಮತ್ತು ಪರಿವರ್ತಿಸಲು  ಯತ್ನಿಸುತ್ತಿದೆ. ಸಾಲು ಸಾಲು ಅಲ್ಪಸಂಖ್ಯಾತ ಮೋರ್ಚಾವನ್ನು ರಚಿಸಿ ಮುಸ್ಲಿಮರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವಾಗ ಇಲ್ಲದ ಭಯ  ಸಂತ್ರಸ್ತರಿಗೆ ಪರಿಹಾರ ಘೋಷಿಸುವಾಗ ಎದುರಾಗಿರುವುದಕ್ಕೆ ಕಾರಣ ಇದುವೇ. ಅದು ತನ್ನ ರಾಜಕೀಯ ಉದ್ದೇಶವನ್ನು  ಈಡೇರಿಸಿಕೊಳ್ಳುವುದಕ್ಕೆ ತನ್ನದೇ ಮತದಾರರನ್ನು ಮುಸ್ಲಿಮ್ ವಿರೋಧಿಗಳಂತೆ ಬಿಂಬಿಸುತ್ತಿದೆ.

 ನಾವು ಪ್ರಶ್ನಿಸಬೇಕಾದದ್ದು ಬಿಜೆಪಿಯನ್ನು,  ಅದರ ಮತದಾರರನ್ನಲ್ಲ.

Monday 29 August 2022

ಬಿಲ್ಕಿಸ್ ಬಾನು: ಅತ್ಯಾಚಾರದ ಅಪರಾಧಿಗಳಿಗೆ ಸಿಹಿತಿನಿಸಿನ ಸ್ವಾಗತ ಕೋರಿದ ಭಾರತ

 


ಜಸ್ವಂತ್ ನೈ, ಗೋವಿಂದ್ ನೈ, ಶೈಲೇಶ್ ಭಟ್, ರಾಧೇಶ್ಯಾಂ ಭಗವಾನ್ ದಾಸ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರ್‌ಭಾಯ್  ವೊಹಾನಿಯಾ, ಪ್ರದೀಪ್ ಮೊರ್ಧಿಯಾ, ಬಕಭಾಯ್ ವೊಹಾನಿಯಾ, ರಾಜುಭಾಯ್  ಸೋನಿ, ಮಿತೇಶ್ ಭಟ್, ರಮೇಶ್ ಚಂದನ- ಇವೆಲ್ಲ  ಕಳೆದವಾರ ಮುಕ್ತಾಯಗೊಂಡ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಡೆದವರ ಹೆಸರುಗಳಲ್ಲ. ಈ ದೇಶ ಮಾತ್ರವಲ್ಲ, ಜಗತ್ತನ್ನೇ  ಬೆಚ್ಚಿಬೀಳಿಸಿದ ಅತ್ಯಾಚಾರ ಮತ್ತು ಹತ್ಯಾಕಾಂಡದ ಅಪರಾಧಿಗಳು ಇವರು. 2008ರಲ್ಲಿ ಬಾಂಬೆ ಹೈಕೋರ್ಟ್ ಇವರಿಗೆ ಜೀವಾವಧಿ ಶಿಕ್ಷೆ  ವಿಧಿಸಿತ್ತು. ಇದೀಗ ಗುಜರಾತ್‌ನ ಬಿಜೆಪಿ ಸರ್ಕಾರ ಇವರನ್ನೆಲ್ಲ ಬಿಡುಗಡೆಗೊಳಿಸಿದೆ. 15 ವರ್ಷಕ್ಕಿಂತಲೂ ಅಧಿಕ ಸಮಯದಿಂದ ಇವರು  ಜೈಲಲ್ಲಿದ್ದಾರೆ ಎಂಬುದು ಈ ಬಿಡುಗಡೆಗೆ ಕೊಟ್ಟಿರುವ ಕಾರಣ. ಇದಕ್ಕಿಂತಲೂ ಆಘಾತಕಾರೀ ಸಂಗತಿ ಏನೆಂದರೆ, ಇವರ ಹಣೆಗೆ ತಿಲಕ ಇರಿಸಿ, ಸಿಹಿತಿನಿಸು ತಿನ್ನಿಸಿ ಸ್ವಾಗತಿಸಲಾಗಿದೆ. ಹಾಗಂತ, ಇಂಥ ಸ್ವಾಗತ ಸಿಕ್ಕಿದ್ದು ಇವರ ಗ್ರಾಮದಲ್ಲೋ ಇನ್ನಾವುದೋ ಕುಗ್ರಾಮದಲ್ಲೋ ಅಲ್ಲ. ಗೋಧ್ರಾ ಜೈಲಿನ ಗೇಟಿನ  ಹೊರಗಡೆಯೇ ಈ ಬೆಳವಣಿಗೆ ನಡೆದಿದೆ. ಒಂದು ಪ್ರಭುತ್ವದ ಕಣ್ಣಿಗೆ ಧರ್ಮದ್ವೇಷದ ಪೊರೆ ಕವಿದು ಬಿಟ್ಟರೆ ಏನಾಗಬಹುದು ಎಂಬುದಕ್ಕೆ ಈ ಪ್ರಕರಣ ಒಂದು ಅತ್ಯುತ್ತಮ ಉದಾಹರಣೆ.

ಈ 11 ಮಂದಿಗೆ ಸಿಬಿಐ ವಿಚಾರಣಾ ನ್ಯಾಯಾಲಯವು ಜೀವಾವಿಧಿ ಶಿಕ್ಷೆಯನ್ನು ವಿಧಿಸಿದಾಗ ಈ ದೇಶದ ಸನ್ಮನಸ್ಸುಗಳು ಆ ಶಿಕ್ಷೆಯನ್ನು  ಒಪ್ಪಿರಲಿಲ್ಲ. ಈ ಅಪರಾಧಿಗಳಿಗೆ ಗಲ್ಲು ಶಿಕ್ಷೆಯೇ ಸರಿ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೇ, ಸ್ವತಃ ಸಿಬಿಐಯೇ ಇಂಥದ್ದೊಂದು  ನಿಲುವನ್ನು ಹೊಂದಿತ್ತು ಮಾತ್ರವಲ್ಲ, ಇವರನ್ನು ಗಲ್ಲಿಗೇರಿಸುವಂತೆ ಅದು ಬಾಂಬೆ ಹೈಕೋರ್ಟ್ ನ  ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್ ಈ ಮನವಿಯನ್ನು ಮಾನ್ಯ ಮಾಡಿರಲಿಲ್ಲ. ಅಷ್ಟಕ್ಕೂ, ಇವರ ಮೇಲೆ ಇಷ್ಟೊಂದು ತೀವ್ರವಾಗಿ ಆಕ್ರೋಶ ವ್ಯಕ್ತವಾಗಲು ಕಾರಣವೇನು ಎಂಬ ಪ್ರಶ್ನೆ  ಇರಬಹುದು. ಅದುವೇ ಬಿಲ್ಕೀಸ್ ಬಾನು ಪ್ರಕರಣ.

2002 ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ರೈಲು ದಹನ ಪ್ರಕರಣದಲ್ಲಿ 59 ಕರಸೇವಕರು ಬೆಂಕಿಗಾಹುತಿಯಾದರು. ಆ ಬಳಿಕ  ಗುಜರಾತ್‌ನಲ್ಲಿ ದಂಗೆ ಸ್ಫೋಟಗೊಂಡಿತು. ಜನರು ವಿಶೇಷವಾಗಿ ಮುಸ್ಲಿಮರು ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡತೊಡಗಿದರು. 2002  ಮಾರ್ಚ್ 3ರಂದು ಬಿಲ್ಕೀಸ್ ಬಾನು ಮತ್ತು ಆಕೆಯ ಕುಟುಂಬದವರೂ ಸೇರಿ 17 ಮಂದಿ ಟ್ರಕ್‌ನಲ್ಲಿ ಸುರಕ್ಷಿತ ಸ್ಥಳಕ್ಕೆಂದು  ಹೊರಟಿದ್ದರು. ಇವರಲ್ಲಿ 4 ಮಹಿಳೆಯರು ಮತ್ತು 4 ಮಕ್ಕಳು. ಬಿಲ್ಕೀಸ್ ಬಾನುಗೆ ಆಗ 21 ವರ್ಷ. 5 ತಿಂಗಳ ಗರ್ಭಿಣಿ. ಅವರನ್ನು  ಹೊತ್ತ ಟ್ರಕ್ಕು ದಹೋದ್ ಜಿಲ್ಲೆಯ ರಂಧಿಕ್‌ಪುರ್ ಎಂಬಲ್ಲಿಗೆ ತಲುಪಿದಾಗ ಸುಮಾರು 30-35 ಮಂದಿಯ ಗುಂಪು ಹಠಾತ್ ದಾಳಿ  ನಡೆಸಿತು. ಬಿಲ್ಕೀಸ್‌ಳ ಎರಡು ವರ್ಷದ ಮಗಳು ಸಹೇಲಾಳ ತಲೆಯನ್ನು ಆಕೆಯ ಕಣ್ಣೆದುರೇ ಜಜ್ಜಿ ಗುಂಪು ಸಾಯಿಸಿ ಬಿಟ್ಟಿತು. ಬಿ ಲ್ಕೀಸ್‌ಳ ಮೇಲೆ ಗ್ಯಾಂಗ್ ರೇಪ್ ನಡೆಯಿತು. ಆಕೆಯ ಕುಟುಂಬದ 7 ಮಂದಿಯೂ ಸೇರಿ 
ಒಟ್ಟು 14 ಮಂದಿಯ ಹತ್ಯೆಯೂ ನಡೆಯಿತು. ಬಿಲ್ಕಿಸ್  ಸತ್ತಿದ್ದಾರೆಂದು ಭಾವಿಸಿ ಈ ಗುಂಪು ಹೊರಟು ಹೋಯಿತು. ಎಷ್ಟೋ ಸಮಯದ ಬಳಿಕ ಪ್ರಜ್ಞೆ ಬಂದು ಎಚ್ಚೆತ್ತ ಬಿಲ್ಕಿಸ್ ನಗ್ನರಾಗಿದ್ದರು.  ಸುತ್ತಲೂ ತನ್ನ ಕುಟುಂಬದವರ ಶವಗಳು. ದೂರದಲ್ಲೆಲ್ಲೋ  ಬಿದ್ದಿದ್ದ ಪೆಟಿಕೋಟನ್ನು ಧರಿಸಿಕೊಂಡು ಬಿಲ್ಕಿಸ್ ಪಕ್ಕದ ಗುಡ್ಡ ಹತ್ತಿದರು.  ಅಲ್ಲಿನ ಬುಡಕಟ್ಟು ಜನರು ಆಕೆಗೆ ಆಶ್ರಯ ನೀಡಿದರು. ಇದು ಕ್ರೌರ್ಯದ ಒಂದು ಭಾಗ ಮಾತ್ರ. ಅಲ್ಲಿಗೇ ಆ ಹೆಣ್ಣು ಮಗಳ ಸಂಕಟ  ಕೊನೆಗೊಳ್ಳುವುದಿಲ್ಲ.

21 ವರ್ಷದ ಮತ್ತು ಜರ್ಜರಿತ ಅನುಭವಗಳುಳ್ಳ ಆ ತರುಣಿ ತನ್ನ ಮೇಲಾದ ಕ್ರೌರ್ಯವನ್ನು ಪೊಲೀಸರ ಮುಂದೆ ಹೇಳಿಕೊಳ್ಳುತ್ತಾರೆ.  ಇದಾದ ಒಂದು ವರ್ಷದ ಬಳಿಕ ಆ ಪ್ರಕರಣವನ್ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸುತ್ತದೆ. ಇದಕ್ಕೆ ಕಾರಣ ಪೊಲೀಸರ  ನಿಷ್ಕ್ರಿಯತೆ. ಅವರು ಆ ಘಟನೆಗೆ ಪೂರಕವಾದ ಯಾವ ಸಾಕ್ಷ್ಯಾಧಾರವನ್ನೂ ಸಂಗ್ರಹಿಸಿರಲೇ ಇಲ್ಲ. ಅಲ್ಲದೇ ಸಾಕ್ಷ್ಯಾಧಾರವನ್ನು ನಾಶ  ಮಾಡುವಲ್ಲಿ ಇಬ್ಬರು ಪೊಲೀಸರು ಮತ್ತು ಓರ್ವ ವೈದ್ಯ ಭಾಗಿಯಾಗಿರುವುದನ್ನು ಆ ಬಳಿಕ ಬಾಂಬೇ ಹೈಕೋರ್ಟ್ ಪತ್ತೆ ಮಾಡಿತ್ತು  ಮತ್ತು ಈ ಮೂವರಿಗೆ 3 ವರ್ಷಗಳ ಶಿಕ್ಷೆಯನ್ನೂ ವಿಧಿಸಿತ್ತು.

ಮ್ಯಾಜಿಸ್ಟ್ರೇಟ್ ಕೋರ್ಟ್ ನ  ತೀರ್ಪನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರು ಮತ್ತು  ಸುಪ್ರೀಮ್ ಕೋರ್ಟ್ ನ  ಬಾಗಿಲನ್ನು ತಟ್ಟಿದರು. ಸುಪ್ರೀಮ್ ಕೋರ್ಟ್ ಈ ಪ್ರಕರಣವನ್ನು 2003ರಲ್ಲಿ ಸಿಬಿಐಗೆ ವಹಿಸಿಕೊಟ್ಟಿತು. ಆ ಬಳಿಕ  ಪ್ರಕರಣದ ತನಿಖೆ ಚುರುಕು ಪಡೆಯಿತು. ಬಿಲ್ಕಿಸ್ ಬಾನು ಹೆಸರಿಸಿದ ಎಲ್ಲ 20 ಆರೋಪಿಗಳನ್ನೂ ಸಿಬಿಐ ಬಂಧಿಸಿತು ಮತ್ತು  ಹತ್ಯೆಗೊಳಗಾದವರ ಶವವನ್ನು ಮೇಲಕ್ಕೆತ್ತಿ ಪರಿಶೀಲನೆ ನಡೆಸಿತು. ಈ ನಡುವೆ ಬಿಲ್ಕಿಸ್ ಬಾನು ಬದುಕು ಸುಲಭದ್ದೇನೂ ಆಗಿರಲಿಲ್ಲ.  ಆಕೆಗೆ ಪದೇಪದೇ ಜೀವ ಬೆದರಿಕೆ ಬರುತ್ತಲೇ ಇತ್ತು. ಕೇವಲ ಎರಡೇ ವರ್ಷಗಳಲ್ಲಿ ಆಕೆ 20 ಬಾರಿ ತನ್ನ ನಿವಾಸವನ್ನು ಬದಲಿಸಿದ್ದರು.  ಈ ಬೆದರಿಕೆಯ ಮಧ್ಯೆ ವಿಚಾರಣೆಗೆ ಹಾಜರಾಗಲು ಕಷ್ಟ ಸಾಧ್ಯ ಎಂದು ಕಂಡುಕೊಂಡ  ಆಕೆ, ಇಡೀ ಪ್ರಕರಣವನ್ನು ಗುಜರಾತ್‌ನಿಂದ  ಬೇರೆಡೆಗೆ ವರ್ಗಾಯಿಸುವಂತೆ ಸುಪ್ರೀಮ್ ಕೋರ್ಟ್ ಗೆ  ಮನವಿ ಮಾಡಿಕೊಂಡರು. 2004ರಲ್ಲಿ ಈ ಪ್ರಕರಣವನ್ನು ಸುಪ್ರೀಮ್ ಕೋರ್ಟು  ಬಾಂಬೆಗೆ ವರ್ಗಾಯಿಸಿತು. ಇದಾಗಿ ನಾಲ್ಕು ವರ್ಷಗಳ ಬಳಿಕ ಸಿಬಿಐ  ವಿಚಾರಣಾ ನ್ಯಾಯಾಲಯ 20 ಆರೋಪಿಗಳ ಪೈಕಿ 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇದನ್ನು ಸಿಬಿಐ ಒಪ್ಪಿಕೊಳ್ಳಲಿಲ್ಲ. ವಿಶೇಷವಾಗಿ ಜಸ್ವಂತ್ ನೈ, ಗೋವಿಂದ್ ನೈ ಮತ್ತು ಶೈಲೇಶ್ ಭಟ್‌ರ ನ್ನು ಗಲ್ಲಿಗೇರಿಸಬೇಕು ಎಂದು ಕೋರಿ ಬಾಂಬೆ ಹೈಕೋರ್ಟ್ ನ  ಮೇಟ್ಟಲೇರಿತು. ಆದರೆ ಬಾಂಬೆ ಹೈಕೋರ್ಟ್ ಈ ಮನವಿಯನ್ನು  ಪುರಸ್ಕರಿಸಲಿಲ್ಲ ಮತ್ತು ಬಿಡುಗಡೆಗೊಳಿಸಲಾದ 7 ಮಂದಿ ಈಗಾಗಲೇ ಜೈಲಲ್ಲಿದ್ದುಕೊಂಡು ಅವರಿಗೆ ವಿಧಿಸಬೇಕಾದ ಶಿಕ್ಷಾ ಅವಧಿಯನ್ನು  ಅನುಭವಿಸಿದ್ದಾರೆ ಎಂದು ತೀರ್ಪಿತ್ತಿತು.

ಇದೀಗ ಈ ಭೀಭತ್ಸ ಕ್ರೂರಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದೆ. ಈ ಬಿಡುಗಡೆಯ ಹಿನ್ನಲೆಯಲ್ಲಿ ನಡೆದ ಬೆಳವಣಿಗೆಯನ್ನು  ನೋಡುವಾಗ ಸರ್ಕಾರಕ್ಕೆ ಸಂಬಂಧಿಸಿದವರೇ ಹೆಣೆದ ಚಿತ್ರಕತೆ ಇದಾಗಿರಬಹುದೇ ಎಂಬ ಸಂದೇಹ ಮೂಡುತ್ತದೆ. ಜೀವಾವಧಿ ಶಿಕ್ಷೆಗೆ  ಒಳಗಾಗಿದ್ದ ಅಪರಾಧಿಗಳ ಪೈಕಿ ರಾಧೇಶ್ಯಾಮ್ ಎಂಬವ  ಇತ್ತೀಚೆಗೆ ಸನ್ನಡತೆ ಆಧಾರದಲ್ಲಿ  ಬಿಡುಗಡೆಗಾಗಿ ಸುಪ್ರೀಮ್ ಕೋರ್ಟ್ ಗೆ  ಮನವಿ ಮಾಡಿದ್ದ. ಸುಪ್ರೀಮ್  ಕೋರ್ಟು ಸಹಜವಾಗಿಯೇ ಈ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿತ್ತು. ಕ್ಷಮಾದಾನ ನೀತಿಯಡಿ ಈ ಅರ್ಜಿಯನ್ನು  ಪರಿಶೀಲಿಸುವಂತೆಯೂ ಅದು ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನೇ ಕಾಯುತ್ತಿರುವಂತೆ ನಡಕೊಂಡ ಸರ್ಕಾರವು ಪಂಚಮಹಲ್  ಜಿಲ್ಲಾಧಿಕಾರಿ ಸುಜಲ್ ಮಾಯಾತ್ರ ಅವರ ನೇತೃತ್ವದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಿತು. ಆ ಸಮಿತಿಯು ಇವರ ಬಿಡುಗಡೆಗೆ ಶಿಫಾರಸು ಮಾಡಿತು. ಅದರ ಆಧಾರದಲ್ಲೇ  ಸರ್ಕಾರ ಇದೀಗ ಇವರನ್ನೆಲ್ಲಾ  ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ. ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯಿದೆ. ಅತ್ಯಾಚಾರಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಬಾರದೆಂದು ಕೇಂದ್ರ ಸರ್ಕಾರದ  ನಿಯಮವಿದೆ. ಆದ್ದರಿಂದ ಗುಜರಾತ್ ಸರ್ಕಾಯೆಯಾದ 1992 ರ ನಿಯಮದನ್ವಯ ಈ ಬಿಡುಗಡೆಯನ್ನು ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅಷ್ಟಕ್ಕೂ ಈ ನಿಯಮವನ್ನು ಗುಜರಾತ್ ಸರ್ಕಾರ 2014ರಲ್ಲಿ ತಿದ್ದುಪಡಿ ಮಾಡಿತ್ತು. ಆದರೆ, ಬಿಲ್ಕಿಸ್ ಪ್ರಕರಣ ನಡೆಯುವಾಗ 1992ರ ನಿಯಮವಿದ್ದುದರಿಂದ ಆ ನಿಯಮವನ್ನೇ ಇವರ ಬಿಡುಗಡೆಗೆ ಅನ್ವಯಿಸಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡಿದೆ.   ನಿಜವಾಗಿ,

ಬಿಲ್ಕೀಸ್ ಬಾನು ಪ್ರಕರಣವು ಸಾಮಾನ್ಯ ರೇಪ್ ಆ್ಯಂಡ್ ಮರ್ಡರ್ ಪಟ್ಟಿಯಲ್ಲಿ ಸೇರುವ ಕ್ರೌರ್ಯ ಅಲ್ಲ. ಜೀವಭಯದಿಂದ ಪಲಾಯನ  ಮಾಡುತ್ತಿದ್ದ ನಿಷ್ಪಾಪಿ ಜನರನ್ನು ಹತ್ಯೆ ಮಾಡಿದ ಮತ್ತು 5 ತಿಂಗಳ ಗರ್ಭಿಣಿಯನ್ನು ಸರದಿಯಲ್ಲಿ ನಿಂತು ಅತ್ಯಾಚಾರ ಮಾಡಿದ ಭೀಭತ್ಸ  ಪ್ರಕರಣ. ಈ ಕ್ರೌರ್ಯಕ್ಕೆ ಧರ್ಮದ್ವೇಷದ ಹೊರತು ಇನ್ನಾವ ಕಾರಣವೂ ಇರಲಿಲ್ಲ. ಅದರಲ್ಲೂ 5 ತಿಂಗಳ ಗರ್ಭಿಣಿಯನ್ನು ಅತ್ಯಾಚಾರ  ಮಾಡುತ್ತಾರೆಂದರೆ ಮತ್ತು 2 ವರ್ಷದ ಮಗುವಿನ ತಲೆಯನ್ನು ತಾಯಿಯ ಕಣ್ಣೆದುರೇ ನೆಲಕ್ಕಿ ಜಜ್ಜಿ ಹತ್ಯೆ ಮಾಡುತ್ತಾರೆಂದರೆ ಅವರು  ಮರಳಿ ನಾಗರಿಕ ಸಮಾಜದಲ್ಲಿ ಬದುಕಿ ಬಾಳುವುದಕ್ಕೆ ಎಷ್ಟು ಮಾತ್ರಕ್ಕೂ ಅನರ್ಹರು. ಸಾಮಾನ್ಯವಾಗಿ,

ಕೋಮು ಹತ್ಯಾಕಾಂಡದಲ್ಲಿ ಭಾಗಿಯಾದ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದೇ ಹೆಚ್ಚು. ಯಾಕೆಂದರೆ, ಸಂತ್ರಸ್ತರು ಮೊದಲೇ  ಭೀತಿಯ ಸ್ಮರಣೆಯಲ್ಲಿರುತ್ತಾರೆ. ತಮ್ಮವರನ್ನು ಕಳಕೊಂಡು ಅಧೀರರಾಗಿರುತ್ತಾರೆ. ಅಲ್ಲದೇ, ಪೊಲೀಸರಿಗೆ ದೂರು ಕೊಡದಂತೆ  ಬೆದರಿಕೆಯೂ ಬರುತ್ತಿರುತ್ತದೆ. ಕೋಮುಗಲಭೆ ಎಂಬುದು ಧರ್ಮದ ನೆಲೆಯಲ್ಲಿ ನಡೆಯುವ ಕ್ರೌರ್ಯವಾಗಿರುವುದರಿಂದ ಅಪರಾಧಿಗಳಿಗೆ  ಆಯಾ ಸಮುದಾಯದ ಪರೋಕ್ಷ ಬೆಂಬಲವೋ ಆಶ್ರಯವೋ ಲಭ್ಯವಾಗಿರುತ್ತದೆ. ಇಂಥ ಪ್ರತಿಕೂಲಕರ ಸ್ಥಿತಿಯಲ್ಲೂ ಬಿಲ್ಕೀಸ್ ಬಾನು  ಒಂಟಿ ಸಲಗದಂತೆ ನ್ಯಾಯಕ್ಕಾಗಿ ಹೋರಾಡಿದರು. ಇಲ್ಲಿನ ನ್ಯಾಯಾಲಯ ಆಕೆಯ ಬೆನ್ನಿಗೂ ನಿಂತಿತು. ಆದರೆ ಇದೀಗ ಸರ್ಕಾರ  ತೆಗೆದುಕೊಂಡ ನಿರ್ಧಾರವು ಧರ್ಮದ್ವೇಷದ ದಂಗೆಯಲ್ಲಿ ಭಾಗಿಯಾಗುವವರಿಗೆ ಪರೋಕ್ಷ  ಧೈರ್ಯ ತುಂಬುವಂತಿದೆ.  ಮಂದಿಯನ್ನು  ಕೊಂದ ಮತ್ತು ಓರ್ವ ಹೆಣ್ಮಗಳನ್ನು ಸಾಮೂಹಿಕ ಅತ್ಯಾಚಾರಗೈದ ಅಪರಾಧಿಗಳು ಜೈಲಿನಿಂದ ಹೊರಬಂದು ನಾಗರಿಕ ಸಮಾಜದಲ್ಲಿ  ಬದುಕುವ ಅವಕಾಶ ಪಡೆಯುತ್ತಾರೆಂದರೆ ಅದು ಸಾರುವ ಸಂದೇಶವೇನು? ಬಿಡುಗಡೆಗೆ ಅವರಿಗಿದ್ದ ಅರ್ಹತೆಯೇನು?

ಹೆಣ್ಣನ್ನು ಪೂಜಿಸುವ ದೇಶದಲ್ಲಿ ಬಿಲ್ಕೀಸ್ ಎಂಬ ಹೆಣ್ಮಗಳಿಗಿಂತ ಆ 11 ಅಪರಾಧಿಗಳೇ ಸರ್ಕಾರಕ್ಕೆ ಮುಖ್ಯವಾದುದು ದುರಂತ,  ವಿಷಾದನೀಯ.

Tuesday 14 June 2022

ನಿಜಕ್ಕೂ, ಈ ದೇಶದ ಶತ್ರು ಯಾರು?

 



ಈ ದೇಶದ ಶತ್ರು ಯಾರು ಎಂದು ಯಾರಲ್ಲಾದರೂ ಕೇಳಿದರೆ, ತಕ್ಷಣಕ್ಕೆ ಸಿಗಬಹುದಾದ ಉತ್ತರ- ಪಾಕಿಸ್ತಾನ. ಅದುಬಿಟ್ಟರೆ ಚೀನಾ. ಆದರೆ ಕೇಂದ್ರ ಗೃಹ ಇಲಾಖೆ ಪ್ರತಿವರ್ಷ ಬಿಡುಗಡೆಗೊಳಿಸುವ ವರದಿಯನ್ನು ಪರಿಶೀಲಿಸಿದರೆ, ಶತ್ರು ನಮ್ಮ ಬಗಲಲ್ಲೇ ಇದ್ದಾನೆ ಎಂಬುದು ಮನವರಿಕೆಯಾಗುತ್ತದೆ. ಈ ದೇಶದ ರಸ್ತೆಗಳೇ ಈ ದೇಶದ ಪಾಲಿಗೆ ಅತಿದೊಡ್ಡ ಶತ್ರು. ಈ ದೇಶ ಪಾಕ್ ಮತ್ತು ಚೀನಾಗಳ ಜೊತೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದ್ದರೂ ರಸ್ತೆ ಅಪಘಾತಕ್ಕೆ ಸಂಬಂಧಿಸಿ ವರ್ಷವೊಂದರಲ್ಲಿ ಆಗುತ್ತಿರುವ ಸಾವುಗಳಿಗೆ ಹೋ ಲಿಸಿದರೆ, ಯುದ್ಧದಲ್ಲಿನ ಸಾವಿನ ಪ್ರಮಾಣ ಕಡಿಮೆ.

ಈ ದೇಶದಲ್ಲಿ ಪ್ರತಿದಿನ 377 ಮಂದಿ ರಸ್ತೆ ಅಪಘಾತದಿಂದಾಗಿ ಸಾವಿಗೀಡಾಗುತ್ತಾರೆ ಎಂದು ಕೇಂದ್ರ ಗೃಹ ಇಲಾಖೆಯ 2021ರ ವರದಿ ಹೇಳುತ್ತದೆ. 2021ರಲ್ಲಿ ಒಟ್ಟು 4,43,110 ರಸ್ತೆ ಅಪಘಾತಗಳಾಗಿವೆ. ಅಂದರೆ ಪ್ರತಿದಿನ 1214 ರಸ್ತೆ ಅಪಘಾತಗಳು, ಸಾವಿನ ಪ್ರಮಾಣ 1,37,605. ಈ ಸಾವುಗಳ ಪೈಕಿ 25% ಸಾವುಗಳು ಕೂಡಾ ದ್ವಿಚಕ್ರ ವಾಹನ ಸವಾರರದ್ದು. ಪ್ರತಿದಿನ 14 ವರ್ಷಕ್ಕಿಂತ ಕೆಳಗಿನ 20 ಮಕ್ಕಳು ಸಾವಿಗೀಡಾಗುತ್ತಾರೆ ಎಂದು ವರದಿ ಹೇಳುತ್ತದೆ. ಪ್ರತಿ ಒಂದು ನಿಮಿಷಕ್ಕೆ ಒಂದು ಅತಿಗಂಭೀರ ಅಪಘಾತ ಸಂಭವಿಸುತ್ತದೆ. ಪ್ರತಿಗಂಟೆಗೆ 10 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಹಾಗಂತ,

ಈ ಅಂಕಿ ಅಂಶಗಳಲ್ಲಿ ಸಣ್ಣ-ಪುಟ್ಟ ಅಪಘಾತಗಳು, ರಾಜಿ ಪಂಚಾತಿಕೆಯಲ್ಲಿ ಇತ್ಯರ್ಥಗೊಂಡ ಅಪಘಾತ ಪ್ರಕರಣಗಳು ಸೇರಿಲ್ಲ. ಪೊ ಲೀಸು ಠಾಣೆಯಲ್ಲಿ ಅಧಿಕೃತವಾಗಿ ನೋಂದಣಿಯಾದ ಪ್ರಕರಣಗಳ ವಿವರವಷ್ಟೇ ಇಲ್ಲಿದೆ. ವಿಷಾದ ಏನೆಂದರೆ,

ಅಪಘಾತದಲ್ಲಿ ಸಾವಿಗೀಡಾಗುವವರು ಮತ್ತು ಗಾಯಗೊಳ್ಳುವವರಲ್ಲಿ ಯುವಕರೇ ಹೆಚ್ಚು ಎಂಬುದು. ಅದರಲ್ಲೂ ದ್ವಿಚಕ್ರ ವಾಹನ ಚಲಾಯಿಸುವ, ಚಿಗುರು ಮೀಸೆಯ ಪೋರರೇ ಹೆಚ್ಚು. ರಸ್ತೆ ಅಪಘಾತಕ್ಕೆ ಸಂಬAಧಿಸಿ ಬಿಡುಗಡೆಗೊಳಿಸಲಾದ ವರದಿಯಲ್ಲಿ, ಅದಕ್ಕೆ ಕಾರಣವಾದ ಅಂಶಗಳ ವಿವರಗಳೂ ಇವೆ. ಅದರಲ್ಲಿ ಅತೀವೇಗದ ಚಾಲನೆಗೆ ಮೊದಲ ಸ್ಥಾನ ಲಭ್ಯವಾಗಿದೆ. ಒಟ್ಟು ಅಪಘಾತ ಗಳ ಪೈಕಿ 60% ಅಪಘಾತಗಳಿಗೂ ಅತಿ ವೇಗದ ಚಾಲನೆಯೇ ಕಾರಣ ಎಂದು ವರದಿ ಹೇಳುತ್ತದೆ. 2020ರಲ್ಲಿ ನಡೆದ ಒಟ್ಟು 3,54,796 ಅ ಪಘಾತಗಳ ಪೈಕಿ 75,383 ಅಪಘಾತಗಳಿಗೆ ಅತಿ ವೇಗದ ಚಾಲನೆಯೇ ಕಾರಣ ಎಂಬುದು ಕೇಂದ್ರ ಸರ್ಕಾರದ ವರದಿಯಲ್ಲಿರುವ ಬಹುಮುಖ್ಯ ಅಂಶ. ಇದನ್ನು ಇನ್ನಷ್ಟು ಸರಳೀಕರಿಸಿ ಹೇಳುವುದಾದರೆ, ರಸ್ತೆ ಅಪಘಾತಕ್ಕೆ ಬಲಿಯಾದ ಒಟ್ಟು 1,33,201 ಮಂದಿಯ ಪೈಕಿ 75,333 ಮಂದಿಯ ಸಾವಿಗೂ ಅತಿವೇಗದ ಚಾಲನೆಯೇ ಕಾರಣ.

ಹಾಗೆಯೇ 3,35,201 ಮಂದಿಗಾದ ಗಾಯಗಳ ಪೈಕಿ 2,09,736 ಮಂದಿಯ ಗಾಯಕ್ಕೂ ಅತಿವೇಗದ ಚಾಲನೆಯೇ ಕಾರಣ.

ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ, ಸಂತ್ರಸ್ತರು. ಒಟ್ಟು ಸಂತ್ರಸ್ತರ ಪೈಕಿ 43.6% ಮಂದಿ ದ್ವಿಚಕ್ರ ವಾಹನ ಸವಾರರಾದರೆ, 13.2% ಸಂತ್ರಸ್ತರು ಕಾರು ಸವಾರರು. ಇನ್ನು ಓವರ್ ಟೇಕಿಂಗ್ ಮತ್ತು ಅತಿವೇಗವಾಗಿ ವಾಹನ ಚಲಾಯಿಸಿದ್ದರಿಂದಾಗಿ 24.3% ಅ ಪಘಾತಗಳಾಗಿದ್ದು, ಕೇವಲ ಈ ಕಾರಣದಿಂದಾಗಿಯೇ 35,219 ಮಂದಿ ಸಾವಿಗೀಡಾಗಿದ್ದಾರೆ. 77,067 ಮಂದಿ ಕೇವಲ ಈ ಓವರ್ ಟೇಕಿಂಗ್ ಚಲಾವಣೆಯಿಂದಾಗಿ ಗಾಯಗೊಂಡಿದ್ದಾರೆ. ಅಷ್ಟಕ್ಕೂ,
ಈ ವರೆಗಿನ ರಸ್ತೆ ಅಪಘಾತಗಳಿಗೆ ಕಾರಣವಾದ ಅಂಶಗಳ ಕೂಲಂಕಷ ಪರಿಶೀಲನೆ ನಡೆಸಿದಾಗ ಸಿಕ್ಕ ಫಲಿತಾಂಶ ಏನೆಂದರೆ, ಅತಿವೇಗ, ಕುಡಿತ, ರಸ್ತೆ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಧರಿಸದೇ ಇರುವುದು, ತಪ್ಪು ಕಡೆಯಿಂದ ಓವರ್ ಟೇಕಿಂಗ್ ಮತ್ತು ನಿರ್ಲಕ್ಷ್ಯ ಚಲಾವಣೆ- ಇತ್ಯಾದಿಗಳೇ ಅಪಘಾತಕ್ಕೆ ಕಾರಣ ಎಂಬುದು ಪತ್ತೆಯಾಗಿದೆ. ನಿಜವಾಗಿ,

ಯಾವುದೇ ಅಪಘಾತವು- ಅಪಘಾತ ಎಂಬ ನಾಲ್ಕಕ್ಷರಕ್ಕಿಂತ ಆಚೆಗಿನ ಹಲವು ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಪರಿಣಾಮಗಳ ನ್ನು ತಂದೊಡ್ಡುವ ಗಂಭೀರ ಸಮಸ್ಯೆಯಾಗಿದೆ. ಪ್ರತಿವರ್ಷ ಸರಾಸರಿ ಒಂದೂವರೆ ಲಕ್ಷದಷ್ಟು ಮಾನವ ಸಂಪನ್ಮೂಲವನ್ನು ಈ ದೇಶ ಕಳಕೊಳ್ಳುತ್ತಿದೆ ಎಂಬುದು ರಸ್ತೆ ಅಪಘಾತದ ಒಂದು ಮುಖವಾದರೆ, ಹೀಗೆ ಕಳಕೊಳ್ಳುವವರಲ್ಲಿ ದೊಡ್ಡ ಸಂಖ್ಯೆ ದುಡಿಯುವ ಪ್ರಾಯದ ಯುವಕರದ್ದು ಎಂಬುದು ಇನ್ನೊಂದು ಮುಖ ಮತ್ತು ಇದುವೇ ಅತ್ಯಂತ ಗಂಭೀರ ವಿಶ್ಲೇಷಣೆಗೆ ಒಳಗಾಗಬೇಕಾದ ಭಾಗ. ಈ ದೇಶದ ಜಿಡಿಪಿಗೆ ದುಡಿಯುವ ಪ್ರಾಯದ ಯುವಕರ ಕೊಡುಗೆ ಬಹಳ ದೊಡ್ಡದು. ದೇಶದ ಅಭಿವೃದ್ಧಿಯಲ್ಲಿ ಇವರು ಎಸಗುವ ಪಾತ್ರ ಬಹಳ ಮುಖ್ಯ. ದುಡಿಯುವ ಪ್ರಾಯದ ವ್ಯಕ್ತಿಯೋರ್ವ ರಸ್ತೆ ಅಪಘಾತಕ್ಕೆ ತುತ್ತಾಗುವುದರ ನೇರ ಪರಿಣಾಮ ಆತನನ್ನು ಅವಲಂಬಿಸಿದ ಕುಟುಂಬದ ಮೇಲಾಗುತ್ತದೆ. ಆವರೆಗೆ ಇತರರನ್ನು ಅವಲಂಬಿಸದೆ ಬದುಕುತ್ತಿದ್ದ ಕುಟುಂಬವೊಂದು ಆ ಬಳಿಕ ಅತಂತ್ರವಾಗುವುದಕ್ಕೆ ಅವಕಾಶ ಇರುತ್ತದೆ. ಆ ಕುಟುಂಬದ ಮಕ್ಕಳ ಕಲಿಕೆಯ ಮೇಲೆ ಅದು ಪರಿಣಾಮ ಬೀರುತ್ತದೆ. ಸಂತಸದ ಬದುಕು ಒಮ್ಮೆಲೇ ದುಃಖಸ್ಥಿತಿಗೆ ಜಾರುತ್ತದೆ. ಮನೆಯ ವರಮಾನದಲ್ಲಿ ಕುಸಿತವಾಗುವುದರ ಜೊತೆಗೇ ನಿತ್ಯದ ಬದುಕಿಗೆ ಸರ್ಕಾರವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದು ಸರ್ಕಾರಕ್ಕೂ ಹೊರೆ. ಒಟ್ಟು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಪಾಲು ಸುಮಾರು 25% ಎಂಬುದೇ ಪ್ರತಿವರ್ಷ ಈ ದೇಶದ ಯುವ ಸಮೂಹದ ಮೇಲೆ ಆಗುತ್ತಿರುವ ಆಘಾತಗಳನ್ನು ಹೇಳುತ್ತದೆ. ದ್ವಿಚಕ್ರ ಚಲಾಯಿಸುವವರಲ್ಲಿ ಹೆಚ್ಚಿನವರು ಯುವ ಪ್ರಾಯದವರು ಮತ್ತು 50 ವರ್ಷಕ್ಕಿಂತ ಒಳಗಿನವರು. ಈ ದೇಶದ ಪಾಲಿಗೆ ಈ ಪ್ರಾಯ ಬಹಳ ಮುಖ್ಯ. ದುಡಿಯುವ ಸಾಮರ್ಥ್ಯವಿರುವ ಇವರನ್ನು ಕಳಕೊಳ್ಳುವುದೆಂದರೆ, ದೇಶದಲ್ಲಿ ಪ್ರತಿ ವರ್ಷ ಬಹುದೊಡ್ಡ ಸಂತ್ರಸ್ತ ಪಡೆಯನ್ನು ತಯಾರಿಸುವುದೆಂದೇ ಅರ್ಥ. ಸ್ವಯಂ ದುಡಿಮೆಯಿಂದ ಬದುಕುತ್ತಿದ್ದ ಕುಟುಂಬಗಳು ದಿಢೀರನೆ ಪರಾವಲಂಬಿಯಾಗುವ ಈ ಸ್ಥಿತಿ ಅತ್ಯಂತ ಅಪಾಯಕಾರಿ. ಇದು ಸೃಷ್ಟಿಸುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಸಣ್ಣದಲ್ಲ. ಆದ್ದರಿಂದ,

ರಸ್ತೆ ಅಪಘಾತಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅಪಘಾತ ಸಂಖ್ಯೆಯನ್ನು ಕಡಿಮೆಗೊಳಿಸುವುದಕ್ಕೆ ಪೂರಕವಾದ ನಿಯಮಗಳನ್ನು ಕಠಿಣಗೊಳಿಸಬೇಕು. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಕ್ರಮಗಳನ್ನು ಜಾರಿಗೆ ತರಬೇಕು. ಅದೇವೇಳೆ, ಅಪಘಾತಗಳಿಗೆ ಅವೈಜ್ಞಾನಿಕ ರಸ್ತೆ ಉಬ್ಬುಗಳು ಮತ್ತು ಅತ್ಯಂತ ಕಳಪೆ ರಸ್ತೆಗಳ ಕೊಡುಗೆಯೇನೂ ಕಡಿಮೆಯಿಲ್ಲ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೂ ಪ್ರತಿದಿನ ಮಾನವ ಸಂಪನ್ಮೂಲವನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಇವನ್ನು ತಡೆಯುವುದಕ್ಕಾಗಿ ರಸ್ತೆ ಕ್ಯಾಮರಾಗಳನ್ನು ಅಳವಡಿಸಿ ವಾಹನಗಳ ಮೇಲೆ ನಿಗಾ ವಹಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ವಿದೇಶಗಳಲ್ಲಿ ಅದರಲ್ಲೂ ಯುಎಇಯಂಥ ಗಲ್ಫ್ ರಾಷ್ಟ್ರಗಳಲ್ಲಿ ರಸ್ತೆ ಕ್ಯಾಮರಾಗಳು ಅಪಘಾತಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರವನ್ನು ನಿಭಾಯಿಸುತ್ತಿವೆ ಎಂಬುದು ದೃಢವಾಗಿದೆ. ರಸ್ತೆ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಕಠಿಣ ದಂಡನೆಗೆ ಒಳಪಡಿಸಲು ಈ ಕ್ಯಾಮರಾಗಳು ಸಾಕಷ್ಟು ನೆರವು ನೀಡುತ್ತಿವೆ. ಅತಿವೇಗ, ಓವರ್ ಟೇಕಿಂಗ್, ಕೆಂಪು ದೀಪ ಉಲ್ಲಂಘನೆ ಇತ್ಯಾದಿಗಳ ಮೇಲೆ ನಿಗಾ ವಹಿಸುವುದಕ್ಕೆ ಈ ಕ್ಯಾಮರಾಗಳು ಸಹಕಾರಿಯಾಗಿವೆ. ಹಾಗೆಯೇ ತಪ್ಪಿತಸ್ಥರನ್ನು ಕಠಿಣ ದಂಡನೆಗೆ ಒಳಪಡಿಸುವುದೂ ಬಹಳ ಮುಖ್ಯ. ಇಂಥ ಕ್ರಮಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ತಮ್ಮನ್ನು ಸೆರೆಹಿಡಿಯಲು ಕ್ಯಾಮರಾಗಳಿವೆ ಎಂಬ ಪ್ರಜ್ಞೆಯು ವಾಹನ ಸವಾರರನ್ನು ಎಚ್ಚರಿಕೆಯಿಂದ ಚಲಾಯಿಸಲು ಪ್ರೇರೇಪಿಸುತ್ತದೆ. ಅಂದಹಾಗೆ,

ಪತ್ರಿಕೆಗಳು ಪ್ರತಿದಿನ ಪ್ರಕಟಿಸುವ ಅಪಘಾತಗಳ ಸಂಖ್ಯೆ ಮತ್ತು ಅದಕ್ಕೆ ತುತ್ತಾದವರ ಪ್ರಾಯವನ್ನು ನೀವೇ ಒಮ್ಮೆ ಗಮನವಿಟ್ಟು ಪರಿಶೀ ಲಿಸಿ. ದ್ವಿಚಕ್ರ ವಾಹನಗಳು ಮತ್ತು ಯುವಕರೇ ಇದರಲ್ಲಿ ಅಧಿಕ ಕಾಣಿಸುತ್ತಾರೆ. ಅಂದಹಾಗೆ, ರಸ್ತೆ ಉಬ್ಬುಗಳು ಮತ್ತು ಕಳಪೆ ರಸ್ತೆಗಳ ಮೇಲೆ ಆರೋಪ ಹೊರಿಸುವುದರಿಂದ ಈ ಜೀವಗಳು ಮರಳಿ ಬರಲಾರವು. ಪ್ರತಿ ಮನೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಯುವಕರನ್ನು ಕೂರಿಸಿ ಹೆತ್ತವರು ಪದೇಪದೇ ಎಚ್ಚರಿಕೆಯನ್ನು ನೀಡುತ್ತಿರಬೇಕು. ಪ್ರತಿಬಾರಿ ವಾಹನವೇರುವ ಮೊದಲು ಯುವಕರ ಕಿವಿಯಲ್ಲಿ ಗುಂಯ್‌ಗುಡುವಷ್ಟು ಈ ಎಚ್ಚರಿಕೆಯ ಪಾಠ ಪರಿಣಾಮಕಾರಿಯಾಗಿರಬೇಕು.

ಜ್ಞಾನವಾಪಿ ಮತ್ತು ಮಳಲಿ ಮಸೀದಿ: ತಮಾಷೆಯ ಪ್ರತಿಕ್ರಿಯೆಗಳಿಗೆ ಕಾರಣವೇನು?

 



ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರಕಿದೆ ಎನ್ನಲಾದ ಶಿವಲಿಂಗದ ಚಿತ್ರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿಯು ಮಂದಿರವಾಗಿತ್ತೇ ಎಂಬುದನ್ನು ಕಂಡುಕೊಳ್ಳಲು ನಡೆಸಲಾದ ತಾಂಬೂಲ ಪ್ರಶ್ನೆ- ಇವೆರಡಕ್ಕೂ ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಈ ಹಿಂದಿನ ಬಾಬರಿ ಮಸೀದಿ ವಿವಾದದ ಸಂದರ್ಭದ ಪ್ರತಿಕ್ರಿಯೆಗಳಿಗೆ ಹೋಲಿಸಿದರೆ, ಸಾಕಷ್ಟು ವ್ಯತ್ಯಾಸಗಳು ಕಾಣಸಿಗುತ್ತವೆ. ಸಾರ್ವಜನಿಕರಿಂದ ಎಷ್ಟು ಗಂಭೀರ ಪ್ರತಿಕ್ರಿಯೆಗಳು ಬಂದುವೋ ಅದಕ್ಕಿಂತಲೂ ಅಧಿಕ ಲಘುವಾದ ಪ್ರತಿಕ್ರಿಯೆಗಳು ವ್ಯಕ್ತವಾದುವು. ಜೋಕ್‌ಗಳೂ ಹಂಚಿಕೆಯಾದುವು. ಮಂದಿರ-ಮಸೀದಿ ನೆಪದಲ್ಲಿ ಉಂಟು ಮಾಡುವ ವಿವಾದವನ್ನು ಜನರು ಈ ಹಿಂದಿನಂತೆ ಭಾವನಾತ್ಮಕವಾಗಿ ನೋಡುವುದಕ್ಕಿಂತ ರಾಜಕೀಯವಾಗಿ ನೋಡುವುದಕ್ಕೆ ಒಲವು ವ್ಯಕ್ತಪಡಿಸಿದ್ದಾರೆ ಎಂಬುದಕ್ಕೆ ಈ ಪ್ರತಿಕ್ರಿಯೆಗಳು ಸಾಕ್ಷ್ಯ ಒದಗಿಸಿದುವು. ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವಿದೆಯೆಂದು ಒಂದು ಗುಂಪು ವಾದಿಸುವಾಗ, ಅದು ಶಿವ ಲಿಂಗವಲ್ಲ, ಕಾರಂಜಿ ಎಂದು ಇನ್ನೊಂದು ಗುಂಪು ವಾದಿಸಿತು. ಚಿತ್ರಗಳೂ ಪ್ರಕಟವಾದುವು. ಆ ಬಳಿಕ ತಮಾಷೆ, ವ್ಯಂಗ್ಯ, ಕುಚೋದ್ಯ, ಅಪಹಾಸ್ಯ.. ಇತ್ಯಾದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಧಾರಾಳ ಹಂಚಿಕೆಯಾದುವು. ಇದೇವೇಳೆ,

ಮಳಲಿ ಮಸೀದಿಯ ಬಗ್ಗೆ ತಾಂಬೂಲ ಪ್ರಶ್ನೆಯೂ ನಡೆಯಿತು. ಕೇರಳದ ಪಾಣಿಕ್ಕರ್ ಎಂಬವರನ್ನು ಕರೆದು ವೀಳ್ಯದೆಲೆಯಲ್ಲಿ ಸತ್ಯಾಸತ್ಯತೆಯನ್ನು ಹುಡುಕುವ ತಾಂಬೂಲ ಪ್ರಶ್ನೆ ನಡೆಸಲಾಯಿತು. ಇದು ಕೂಡಾ ಗಂಭೀರ ಪ್ರತಿಕ್ರಿಯೆಗಳಿಗಿಂತ ಹೆಚ್ಚು ಲಘುವಾದ ಪ್ರತಿಕ್ರಿಯೆಗಳಲ್ಲಿ ತೇಲಿ ಹೋಯಿತು. ಹಾಸ್ಯ, ತಮಾಷೆ, ಜೋಕ್‌ಗಳು ಈ ತಾಂಬೂಲ ಪ್ರಶ್ನೆಯ ಸುತ್ತ ಹರಿದಾಡಿದುವು. ನಿಜವಾಗಿ,

1990ರಲ್ಲಿ ಪರಾಕಾಷ್ಟೆಗೇರಿದ ಬಾಬರಿ ಮಸೀದಿ ವಿವಾದ ಮತ್ತು 2019 ನವೆಂಬರ್ 9ರಂದು ಈ ಬಗ್ಗೆ ಸುಪ್ರೀಮ್ ಕೋರ್ಟು ನೀಡಿದ ತೀರ್ಪು- ಇವೆರಡೂ ಭಾರತೀಯ ನಾಗರಿಕ ಸಮಾಜದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿವೆ. ಈ ಪ್ರಭಾವ ಎರಡು ಬಗೆಯದು. ಒಂದು- ಭಾವನಾತ್ಮಕವಾದರೆ ಇನ್ನೊಂದು- ರಾಜಕೀಯ ಸ್ವರೂಪದ್ದು.

ಬಾಬರಿ ಮಸೀದಿ ವಿವಾದ ಸ್ವತಂತ್ರಪೂರ್ವದಲ್ಲೇ ಹುಟ್ಟಿಕೊಂಡಿತ್ತು ಮತ್ತು ಅದನ್ನು ರಾಮ ಜನ್ಮಭೂಮಿ ಎಂದು ಬಿಂಬಿಸುವ ಪ್ರಯತ್ನಗಳು ಆ ಸಮಯದಲ್ಲೇ ನಡೆದಿದ್ದುವು. ಸ್ವಾತಂತ್ರ‍್ಯ ದೊರೆತು ಎರಡು ವರ್ಷಗಳಾಗುತ್ತಲೇ ಈ ವಿವಾದವನ್ನು ಬೆಚ್ಚಗಿಡುವ ಪ್ರಯತ್ನಗಳೂ ನಡೆದುವು. 1949ರಲ್ಲಿ ಅಯೋಧ್ಯೆ ಜಿಲ್ಲಾಧಿಕಾರಿಯ ಪರೋಕ್ಷ ನೆರವಿನೊಂದಿಗೆ ಮಸೀದಿಯ ಒಳಗೆ ವಿಗ್ರಹ ತಂದಿಟ್ಟ ಬೆಳವಣಿಗೆಯೂ ನಡೆಯಿತು. 1990ರಲ್ಲಿ ಬಿಜೆಪಿ ರಾಮ ರಥಯಾತ್ರೆ ನಡೆಸಿದಾಗಲೂ ಜನರು ಅದನ್ನು ರಾಜಕೀಯಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ನೋಡಿದರು. ಬಾಬರಿ ಮಸೀದಿ ಇರುವ ಕಟ್ಟಡವೇ ರಾಮ ಜನ್ಮಭೂಮಿ ಎಂಬುದಾಗಿ ಸ್ವಾತಂತ್ರ‍್ಯ ಪೂರ್ವ ಮತ್ತು ಸ್ವಾತಂತ್ರ‍್ಯ ಲಭ್ಯವಾದ ಬಳಿಕವೂ ನಡೆಸಿಕೊಂಡು ಬರಲಾದ ಪ್ರಚಾರವೇ ಇದಕ್ಕೆ ಕಾರಣವಾಗಿತ್ತು. ರಾಮ ರಥಯಾತ್ರೆ ನಡೆಸುವಾಗ ಬಿಜೆಪಿ ರಾಜಕೀಯವಾಗಿ ಇನ್ನೂ ಬಲಿತಿರಲಿಲ್ಲ. ಶಿಶುವಾಗಿದ್ದ ಬಿಜೆಪಿಗೆ ಅಂಥದ್ದೊಂದು ರಥಯಾತ್ರೆ ನಡೆಸಲು ಸಾಧ್ಯವಾದದ್ದು ಮತ್ತು ಅದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾದುದಕ್ಕೆ ತಲೆತಲಾಂತರದಿಂದ ಬಾಬರಿ ಮಸೀದಿ ಸುತ್ತ ಹರಡಲಾದ ಸುದ್ದಿಗಳೇ ಕಾರಣವಾಗಿದ್ದುವು. ಆದ್ದರಿಂದಲೇ,

ಬಾಬರಿ ವಿವಾದವನ್ನು ಜನರು ರಾಜಕೀಯಕ್ಕಿಂತ ಹೊರತಾಗಿ ಭಾವನಾತ್ಮಕವಾಗಿ ನೋಡಿದರು. ಮಾತ್ರವಲ್ಲ, ಬಾಬರಿ ವಿವಾದದ ಉದ್ದಕ್ಕೂ ಎಲ್ಲೂ ಜನರು ಲಘುವಾಗಿ ಪ್ರತಿಕ್ರಿಯಿಸಿದ್ದು ಬಹಳ ಬಹಳ ಕಡಿಮೆ. ಮೀಮ್‌ಗಳು, ಜೋಕ್‌ಗಳು, ತಮಾಷೆಗಳೆಲ್ಲ ಈ ವಿವಾದಕ್ಕೆ ಸಂಬಂಧಿಸಿ ವ್ಯಕ್ತವಾಗಿರಲಿಲ್ಲ. ಉತ್ಖನನಕ್ಕೆ ನ್ಯಾಯಾಲಯ ಆದೇಶಿಸಿದಾಗಲೂ ಇದನ್ನು ಲಘುವಾಗಿ ಎತ್ತಿಕೊಂಡು ಸಾರ್ವಜ ನಿಕರು ಆಡಿಕೊಂಡಿರಲಿಲ್ಲ. ಆದರೆ,

ಆ ಬಳಿಕದ ಜ್ಞಾನವಾಪಿ ಮಸೀದಿಯಾಗಲಿ, ಮಳಲಿಯ ಮಸೀದಿಯಾಗಲಿ ಆ ಬಗೆಯ ಗಂಭೀರತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣ- ಬಾಬರಿಗೆ ಸಂಬಂಧಿಸಿ ಸುಪ್ರೀಮ್ ತೀರ್ಪು ಮತ್ತು ಬಿಜೆಪಿಯ ರಾಜಕೀಯ ದುರುದ್ದೇಶಗಳ ಬಗ್ಗೆ ಸಾರ್ವಜನಿಕರಲ್ಲಾದ ತಿಳುವಳಿಕೆ. ಒಂದುಕಡೆ,

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಮಂಜೂರಾದ 60 ಲಕ್ಷಕ್ಕಿಂತಲೂ ಅಧಿಕ ಹುದ್ದೆಗಳು ಖಾಲಿ ಇವೆ ಎಂಬುದು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಅಧಿಕೃತ ಪಟ್ಟಿಯೇ ಹೇಳುತ್ತಿದೆ. ತೈಲ ಬೆಲೆ ನೂರರ ಗಡಿಯನ್ನು ದಾಟಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂಪಾಯಿಯನ್ನು ದಾಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ವಿಪರೀತ ಏರಿರುವುದರಿಂದ ಹೊಟೇಲು ತಿನಿಸುಗಳು ಸುಡುತ್ತಿವೆ. ತರಕಾರಿಗಳು ಮತ್ತು ದಿನನಿತ್ಯ ಬಳಕೆಯ ವಸ್ತುಗಳೂ ಗಗನಕ್ಕೇರಿ ಕೂತಿವೆ. ಕಳೆದ ಮೂರು ದಶಕದಲ್ಲೇ ನಿರುದ್ಯೋಗ ಪ್ರಮಾಣವು ಉತ್ತುಂಗದಲ್ಲಿದೆ. ವಿದೇಶಿ ಬಂಡವಾಳ ಕಂಪೆನಿಗಳು ದೇಶದಿಂದ ಕಾಲ್ಕೀಳುತ್ತಿವೆ. ಒಂದುಕಡೆ, ಬಂಡವಾಳ ಹೂಡುವಂತೆ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುವುದು ಮತ್ತು ಇನ್ನೊಂದೆಡೆ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸುತ್ತಾ ಬಿಗುವಿನ ವಾತಾವರಣ ಉಂಟು ಮಾಡುತ್ತಿರುವುದೂ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ಮಂದಿರ-ಮಸೀದಿ ಎಂದು ಬಿಜೆಪಿ ಮತ್ತು ಅದರ ಬೆಂಬಲಿಗ ಪಡೆಯು ಮಾತಾಡತೊಡಗಿದರೆ, ಜನರು ಅದನ್ನು ಲಘುವಾಗಿಯಲ್ಲದೇ ಮತ್ತೆ ಹೇಗೆ ಪರಿಗಣಿಸಬೇಕು?

ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಮ್ ನೀಡಿದ ತೀರ್ಪಿಗೆ ಜನಸಾಮಾನ್ಯರು ಬಿಡಿ, ಹಿರಿಯ ನ್ಯಾಯವಾದಿಗಳೇ ಅಚ್ಚರಿ ವ್ಯಕ್ತಪಡಿಸಿದ್ದರು. ಸಾಕ್ಷ್ಯಾಧಾರಕ್ಕಿಂತ ಬಹುಸಂಖ್ಯಾತ ಭಾವನೆಗಳಿಗೇ ಆದ್ಯತೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಕಾನೂನನ್ನು ಉಲ್ಲಂಘಿಸಿ ಬಾಬರಿ ಮಸೀದಿಯನ್ನು ಒಡೆದವರಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂದು ಮಾತ್ರವಲ್ಲ, ಆ ಕುರಿತಾಗಿರುವ ನ್ಯಾಯ ಪ್ರಕ್ರಿಯೆಯು ಇನ್ನೂ ಸ್ಥಳೀಯ ನ್ಯಾಯಾಲಯದಲ್ಲಿಯೇ ಶೈಶವಾವಸ್ಥೆಯಲ್ಲಿದೆ. ಬಹುಶಃ, ಅದರ ತೀರ್ಪು ಹೊರಬೀಳುವಾಗ ಆರೋಪಿಗಳಲ್ಲಿ ಯಾರಾದರೊಬ್ಬರು ಬದುಕಿ ಉಳಿದಿರುತ್ತಾರೆ ಎಂದು ಹೇಳಲಾಗದಷ್ಟು ವಿಚಾರಣಾ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಒಂದುಕಡೆ, ಬಾಬರಿ ಮಸೀದಿಯ 2.77 ಎಕರೆ ಜಮೀನು ಒಡೆತನದ ತಗಾದೆಯನ್ನು ಇತ್ಯರ್ಥಪಡಿಸಲು ಕೋರ್ಟು ತೋರಿದ ಮುತುವರ್ಜಿಯು ಆ ಜಮೀ ನಿನಲ್ಲಿದ್ದ ಮಸೀದಿಯನ್ನು ಉರುಳಿಸಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ತೋರಿಸುತ್ತಿಲ್ಲ ಎಂಬ ಅಸಮಾಧಾನವಾದರೆ, ಇ ನ್ನೊಂದೆಡೆ, ನ್ಯಾಯ ತಜ್ಞರನ್ನೇ ಅಚ್ಚರಿಯಲ್ಲಿ ಕೆಡವಿದ ತೀರ್ಪು- ಇವೆರಡೂ ಆ ಬಳಿಕದ ಮಂದಿರ-ಮಸೀದಿ ವಿವಾದಗಳ ಕುರಿತು ಜ ನರಲ್ಲಿ ಲಘುವಾದ ಭಾವನೆ ಹುಟ್ಟಿಸಲು ಕಾರಣವಾದುವು.

ಅಲ್ಲದೇ, ಮಂದಿರ-ಮಸೀದಿ ಹೊರತು ಬಿಜೆಪಿಗೆ ಅಸ್ತಿತ್ವವಿಲ್ಲ ಎಂಬುದೂ ದಿನೇದಿನೇ ಸ್ಪಷ್ಟವಾಗುತ್ತಿದೆ. ಆಡಳಿತಾತ್ಮಕವಾಗಿ ಬಿಜೆಪಿ ಒಂದು ವಿಫಲ ಪ್ರಯೋಗ. ನೋಟ್‌ಬ್ಯಾನ್ ಮೂಲಕ ಅದು ಈ ದೇಶದ ಆರ್ಥಿಕತೆಗೆ ನೀಡಿದ ಹೊಡೆತದ ಗಾಯ ಇನ್ನೂ ಮಾಸಿಲ್ಲ. ಹೊಸ 2000 ರೂಪಾಯಿ ನೋಟಿನ ಸುತ್ತ ಅದು ಭ್ರಮೆಯೊಂದನ್ನು ಸೃಷ್ಟಿಸಿತು. ನಕಲಿ ಹಣ ಮತ್ತು ಕಪ್ಪು ಹಣದ ಸಮಸ್ಯೆಗೆ ಈ ಹೊಸ ನೋಟು ಪರಿಹಾರ ಎಂದು ಅದು ಸಾಮಾಜಿಕ ಮಾಧ್ಯಮಗಳು ಮತ್ತು ಮುಖ್ಯವಾಹಿನಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿತು. ಎಲ್ಲಿಯವರೆಗೆಂದರೆ, 2000 ನೋಟಿನಲ್ಲಿ ಉಪಗ್ರಹ ಆಧಾರಿತ ಚಿಪ್ ಅನ್ನು ಅಳವಡಿಸಲಾಗಿದೆ ಎಂಬ ಪುಕಾರನ್ನೂ ಹಬ್ಬಿಸಿತು. ಆದರೆ, ಇದೀಗ ಆ 2000 ನೋಟನ್ನೇ ಮಾರುಕಟ್ಟೆಯಿಂದ ಸದ್ದಿಲ್ಲದೇ ಹಿಂಪಡೆಯುತ್ತಿರುವ ಸೂಚನೆಗಳು ಲಭ್ಯವಾಗುತ್ತಿವೆ. 2000ದ ಅಸಲಿ ನೋಟಿಗಿಂದ ನಕಲಿ ನೋಟುಗಳೇ ಮಾರುಕಟ್ಟೆಯಲ್ಲಿ ಹೆಚ್ಚಿವೆ ಎಂಬ ಮಾಹಿತಿಗಳಿವೆ. ಕಪ್ಪು ಹಣವನ್ನಂತೂ ನೋಟ್‌ಬ್ಯಾನ್‌ನಿಂದ ನಿ ಲ್ಲಿಸಲು ಸಾಧ್ಯವಾಗಿಲ್ಲ ಎಂಬುದು ಈ ಮೊದಲೇ ಸಾಬೀತಾಗಿದೆ. ಹೀಗಿರುತ್ತಾ, ಬಿಜೆಪಿ ಮಂದಿರ-ಮಸೀದಿಯ ಹೊರತು ಅಡಗಿಕೊಳ್ಳಲು ಬೇರೆ ಯಾವ ಜಾಗ ಇದೆ?

ಈ ಸತ್ಯವನ್ನು ಜನರೂ ಈಗ ಅರಿತುಕೊಳ್ಳುತ್ತಿದ್ದಾರೆ. ಬಹುಶಃ, ಈ ಕಾರಣದಿಂದಾಗಿಯೇ ಮಳಲಿ ಮಸೀ ದಿಯ ತಾಂಬೂಲ ಪ್ರಶ್ನೆಯಾಗಲಿ, ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾ ಮಸೀದಿ ವಿವಾದಗಳು ಗಂಭೀರತೆಯನ್ನು ಕಳಕೊಂಡು ಲಘು ಹಾಸ್ಯ ಪ್ರತಿಕ್ರಿಯೆಗೆ ತುತ್ತಾಗುತ್ತಿರಬೇಕು. ಜನರು ನಿತ್ಯದ ಬದುಕಿಗೆ ಪರದಾಡುತ್ತಿರುವಾಗ ಬಿಜೆಪಿ ಮತ್ತು ಪರಿವಾರವು ಮಸೀದಿಗಳಲ್ಲಿ ಮಂದಿರದ ಕುರುಹುಗಳಿವೆಯೇ ಎಂಬ ಪತ್ತೆ ಕಾರ್ಯದಲ್ಲಿ ನಿರತವಾಗಿವೆ. ಮುಂದಿನ ಲೋಕಸಭಾ ಚುನಾವಣೆಗೆ ಯಾವುದಾದರೊಂದು ಮಸೀದಿ ವಿವಾದವನ್ನು ಮುನ್ನೆಲೆಗೆ ತರುವುದೇ ಅದರ ಉದ್ದೇಶ. ಆದರೆ ಜನರು ಪ್ರಬುದ್ಧರಾಗುತ್ತಿದ್ದಾರೆ ಮತ್ತು ರಾಜಕೀಯ ದುರುದ್ದೇಶಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮಳಲಿ ಮಸೀದಿ ಮತ್ತು ಜ್ಞಾನವಾಪಿ ಮಸೀದಿ ವಿವಾದಗಳು ಸೂಚಿಸುತ್ತವೆ. ಇದು ಆಶಾದಾಯಕ ಬೆಳವಣಿಗೆ.

 

ಪುತ್ರಿ ರೇಶ್ಮಾಳನ್ನು ಕೊಂದ ತಾಯಿ ವಿಮಲಾ!

 



ಆತ್ಮಹತ್ಯೆಯೊಂದು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಬೇಕಾದರೆ ಒಂದೋ ಆತ್ಮಹತ್ಯೆ ಮಾಡಿದವರು ಕೆಫೆ ಕಾಫಿ ಡೇಯ ಸಿದ್ದಾರ್ಥ ಆಗಿರಬೇಕು ಅಥವಾ ಸುಶಾಂತ್ ಸಿಂಗ್ ರಾಜಪೂತ್‌ರಂಥ ಸಿನಿಮಾ ನಟರಾಗಿರಬೇಕು. ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಮುಂತಾದವರ ಆತ್ಮಹತ್ಯೆಗೂ ಒಂದು ಕಿಮ್ಮತ್ತು ಇರುತ್ತದೆ. ಅವರ ಆತ್ಮಹತ್ಯೆಯನ್ನು ಮುಖಪುಟದಲ್ಲಿಟ್ಟು ಪತ್ರಿಕೆಗಳು ಒಂದರ್ಧ ದಿನ ಚರ್ಚಿಸುವ ಆಸಕ್ತಿ ತೋರಿಸುವುದಿದೆ. ಆದರೆ, ಜನಸಾಮಾನ್ಯರ ಆತ್ಮಹತ್ಯೆಗೆ ಮುಖಪುಟ ಬಿಡಿ, ಒಳಪುಟದಲ್ಲಿ ತೀರಾ ಒಂದು ಕಾಲಮ್ ನೀಡುವುದಕ್ಕೂ ಪತ್ರಿಕೆಗಳು ಕಂಜೂಸ್‌ತನ ತೋರಿಸುತ್ತವೆ. ಕಳೆದವಾರ,

ಬಹುತೇಕ ಪತ್ರಿಕೆಗಳ ಒಳಪುಟದಲ್ಲಿ ಒಂದು ಕಾಲಮ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ನಾವೆಲ್ಲರೂ ತುಸು ಪುರುಸೊತ್ತು ಮಾಡಿಕೊಂಡು ಜಿಜ್ಞಾಸೆಗೊಳಪಡಿಸಬೇಕಾದಷ್ಟು ಮಹತ್ವದ್ದಾಗಿತ್ತು. ಕಾಸರಗೋಡು ಸಮೀಪದ 58 ವರ್ಷದ ವಿಮಲಾ ಎಂಬ ತಾಯಿ ತನ್ನ 28 ವರ್ಷದ ಪುತ್ರಿ ರೇಶ್ಮಾಳನ್ನು ಕತ್ತು ಹಿಸುಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡರು. ಈ ಸುದ್ದಿ ಪ್ರಕಟವಾದ ಎರಡು ದಿನಗಳ ಬಳಿಕ ಉಡುಪಿ ಜಿಲ್ಲೆಗೆ ಸಂಬಂಧಿಸಿ ಆತ್ಮಹತ್ಯೆಯ ಅಂಕಿ-ಅಂಶ ಪ್ರಕಟವಾಯಿತು. 2022 ಜನವರಿಯಿಂದ ಮೇ ತಿಂಗಳ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯೊಂದರಲ್ಲೇ ಒಟ್ಟು 281 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಘಾತಕಾರಿ ಸಂಗತಿ ಏನೆಂದರೆ, ಈ 281 ಮಂದಿಯ ಪೈಕಿ ಅರ್ಧದಷ್ಟು ಮಂದಿಯ ಪ್ರಾಯ 20ರಿಂದ 40. ಅಂದಹಾಗೆ, ಕೊರೋನಾ ಅತ್ಯಂತ ತೀವ್ರವಾಗಿ ಅಪ್ಪಳಿಸಿದ್ದ 2020ರ ಜನವರಿಯಿಂದ ಜೂನ್‌ವರೆಗಿನ 6 ತಿಂಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 100ರಷ್ಟಿತ್ತು. 2020ರ ಕೊನೆಯಲ್ಲಿ ಈ ಸಂಖ್ಯೆ 743ಕ್ಕೆ ಏರಿತ್ತು. 2021ರಲ್ಲಿ ಈ ಸಂಖ್ಯೆ 828ಕ್ಕೆ ನೆಗೆದಿತ್ತು. ಇದೀಗ 2022ರ ಆರಂಭಿಕ 5 ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿವರ ಸಂಖ್ಯೆ 281ಕ್ಕೆ ಮುಟ್ಟಿದೆ. ಇದೇವೇಳೆ,

ಪುತ್ರಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ವಿಮಲಾ ಎಂಬ ತಾಯಿಯ ಪ್ರಕರಣವನ್ನೂ ಇಲ್ಲಿ ಎತ್ತಿಕೊಳ್ಳಬಹುದು. ತಾಯಿ ವಿಮಲಾ ಆರೋಗ್ಯವಂತೆಯಾಗಿದ್ದರೂ ಪುತ್ರಿ ರೇಶ್ಮಾ ಎಂಡೋಸಲ್ಫಾನ್ ಪೀಡಿತೆ. ಅದೊಂದು ಮುಗಿಯದ ಕಾಯಿಲೆ. ಕರ್ನಾಟಕ-ಕೇರಳ ಗಡಿಭಾಗದಲ್ಲಿ ಈ ಎಂಡೋಸಲ್ಫಾನ್ ಮಾಡಿರುವ ಅನಾಹುತ ಸಣ್ಣದಲ್ಲ. ದೊಡ್ಡದೊಂದು ಸಂತ್ರಸ್ತ ಗುಂಪನ್ನೇ ಅದು ಸೃಷ್ಟಿಸಿಬಿಟ್ಟಿದೆ. ದ್ವಿತೀಯ ಮಹಾಯುದ್ಧದ ಅಣುಬಾಂಬ್‌ನ ವಿಕಿರಣಕ್ಕೆ ತುತ್ತಾದವರು ಮತ್ತು ಆನಂತರದ ಪೀಳಿಗೆ ಹೇಗೆ ವಿವಿಧ ಅಂಗವೈಕಲ್ಯಕ್ಕೆ ತುತ್ತಾಗಿ ನರಕಸದೃಶ ಬದುಕು ನಡೆಸಬೇಕಾಯಿತೋ ಅಂಥದ್ದೇ ಒಂದು ದುರಂತ ಬದುಕು ಈ ಎಂಡೋಸಲ್ಫಾನ್ ಪೀಡಿತರದ್ದು. ಗಡಿಪ್ರದೇಶದ ಸಾಕಷ್ಟು ಮನೆಗಳು ಇಂಥವರಿಂದ ತುಂಬಿಕೊಂಡಿದೆ. ಎಂಡೋಸಲ್ಫಾನ್‌ನಿಂದ ಅವರ ಮೇಲೆ ಆಗಿರುವ ದುಷ್ಪರಿಣಾಮಗಳಿಗೆ ಹೋಲಿಸಿದರೆ, ಸರ್ಕಾರದ ವತಿಯಿಂದ ಅವರಿಗೆ ಲಭಿಸಿರುವ ಪರಿಹಾರ ಸೌಲಭ್ಯಗಳು ಶೂನ್ಯ ಅನ್ನುವಷ್ಟು ಕಡಿಮೆ. ಕೆಲವು ವರ್ಷಗಳ ಹಿಂದೆ ಈ ಸಂತ್ರಸ್ತರು ವಿನೂತನ ಪ್ರತಿಭಟನೆಯನ್ನು ನಡೆಸಿದರು. ಸರ್ಕಾರದ ಗಮನ ಸೆಳೆಯಲೆಂದು ಬೆಂಗಳೂರಿಗೂ ಹೋದರು. ಅಂದಹಾಗೆ,

ತನ್ನದೇ ಪ್ರಜೆಗಳನ್ನು ಜೀವಚ್ಛವವಾಗಿ ಬದುಕುವಂತೆ ಮಾಡಿದ ಸರ್ಕಾರವು ಒಂದಿಷ್ಟು ಪುಡಿಗಾಸನ್ನು ಎಸೆದು ಕೈ ತೊಳೆದುಕೊಳ್ಳಬಹುದು. ಆದರೆ, ಎಂಡೋಸಲ್ಫಾನ್ ಎಂಬ ರಾಸಾಯನಿಕದ ಅಡ್ಡ ಪರಿಣಾಮವನ್ನು ಈ ಸರ್ಕಾರದ ಮಂದಿಗೆ ಅನುಭವಿಸಲು ಸಾಧ್ಯವಿಲ್ಲ. ಅದನ್ನು ಆ ಸಂತ್ರಸ್ತರೇ ಅನುಭವಿಸಬೇಕು. ಜೀವನಪೂರ್ತಿ ಇನ್ನೊಬ್ಬರನ್ನು ಅವಲಂಬಿಸಿಕೊAಡು ಬದುಕುವುದೆಂದರೆ, ಅದು ಕೊಡುವ ಮಾನಸಿಕ ಒತ್ತಡ ಸಣ್ಣದಲ್ಲ. ಇನ್ನು, ಈ ಎಂಡೋಸಲ್ಫಾನ್ ಅನೇಕ ಮನೆಗಳನ್ನು ಒಡೆದಿದೆ. ಎಂಡೋಪೀಡಿತ ಪತ್ನಿ-ಮಕ್ಕಳನ್ನು ಬಿಟ್ಟು ತೆರಳಿದ ಗಂಡಂದಿರಿದ್ದಾರೆ. ಒಂದು ಮನೆಯಲ್ಲಿ ಮಕ್ಕಳು ಮಾತ್ರ ಎಂಡೋ ಪೀಡಿತರಾದದ್ದಿದೆ. ಪತ್ನಿ ಮಾತ್ರ ಅಥವಾ ಪತಿ ಮಾತ್ರ ಎಂಡೋದ ದುಷ್ಪರಿಣಾಮಕ್ಕೆ ಒಳಗಾದದ್ದಿದೆ. ಕೆಲವೊಂದು ಮನೆಯಲ್ಲಿ ಎಲ್ಲರೂ ಅದರಿಂದ ಪೀಡಿತರಾದದ್ದೂ ಇದೆ. ಇದೊಂದು ಕರುಣಾಜನಕ ಕತೆ. ಇಂಥ ಸಂದರ್ಭ ಪೀಡಿತರಲ್ಲಿ ಧೈರ್ಯ ತುಂಬುವ ಮತ್ತು ಭರವಸೆ ಕಳಕೊಳ್ಳದಂತೆ ಮಾಡುವ ಕೆಲಸ ಸರ್ಕಾರದ ವತಿಯಿಂದ ಆಗಬೇಕು. ಅವರ ನೆಮ್ಮದಿಗೆ ಒತ್ತು ನೀಡುವ ಕೆಲಸಗಳಾಗಬೇಕು. 28 ವರ್ಷಗಳ ವರೆಗೆ ಎಂಡೋಪೀಡಿತ ಮಗಳನ್ನು ಸಾಕಿದ ಅಮ್ಮ, ಅಂತಿಮವಾಗಿ ಇನ್ನು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರಬೇಕಾದರೆ ಆ ತಾಯಿಯ ಎದೆಯೊಳಗೆ ನಡೆದಿರಬಹುದಾದ ಯುದ್ಧವಾದರೂ ಎಂಥದ್ದಿರಬಹುದು? ನನ್ನ ನಂತರ ಈ ಮಗಳ ಆರೈಕೆಗೆ ಇನ್ನಾರು ಎಂಬ ಪ್ರಶ್ನೆ ಬಾರಿಬಾರಿಗೂ ಕಾಡಿರಬಹುದೇ? ನಿಜವಾಗಿ,

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂಬುದು ಜೀವಂತ ಇರುವ ಎಲ್ಲರಿಗೂ ಗೊತ್ತಿದೆ. ಆತ್ಮಹತ್ಯೆಯಿಂದ ಅವರ ಅಸ್ತಿತ್ವ ಇಲ್ಲದಾಗುತ್ತದೆಯೇ ಹೊರತು ಸಮಸ್ಯೆಯಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಅವರು ತನ್ನ ತಂದೆಗೋ ತಾಯಿಗೋ ಸಹೋದರ, ಸಹೋದರಿಯರಿಗೋ ಅಥವಾ ಕುಟುಂಬಕ್ಕೋ ದುಪ್ಪಟ್ಟು ಪ್ರಮಾಣದಲ್ಲಿ ವರ್ಗಾಯಿಸುತ್ತಾರೆ. ಉಡುಪಿಯ ಅಂಕಿ-ಅಂಶಗಳನ್ನೇ ಎತ್ತಿಕೊಳ್ಳಿ. ಇಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಅರ್ಧದಷ್ಟು ಮಂದಿ 20 ರಿಂದ 40ರ ನಡುವಿನ ಪ್ರಾಯದವರು. ಯಾವುದೇ ಸಾಹಸಪೂರ್ಣ ಕೆಲಸಕ್ಕೆ ಧುಮುಕುವ ಪ್ರಾಯ ಇದು. ಹೊಟೇಲ್ ಬ್ಯುಸಿನೆಸ್, ವ್ಯಾಪಾರ, ಭೂವ್ಯವಹಾರ, ವಾಹನಗಳನ್ನು ಖರೀದಿಸಿ ಬಾಡಿಗೆಗೆ ಕೊಡುವುದು, ಹೊಸ ಉದ್ಯಮಕ್ಕೆ ಕೈ ಹಾಕುವುದು, ಬಟ್ಟೆ, ಆಟಿಕೆ, ದಿನಸಿ ಇತ್ಯಾದಿ ಅಂಗಡಿಗಳನ್ನು ತೆರೆಯುವುದೆಲ್ಲ ಬಹುತೇಕ ಈ ಪ್ರಾಯದಲ್ಲೆ. ಆದರೆ, ನೋಟು ನಿಷೇಧವು ಇಂಥ ಉತ್ಸಾಹಗಳನ್ನು ಒಮ್ಮೆಲೇ ನೆಲಕ್ಕೆ ಕೆಡವಿ ಬಿಟ್ಟಿತು.

ಆ ಬಳಿಕ ಕೊರೋನಾದ ದಾಳಿಯು ಇದ್ದಬದ್ದ ಆತ್ಮವಿಶ್ವಾಸವನ್ನು ಧರಾಶಾಹಿಗೊಳಿಸಿತು. ನೋಟು ನಿಷೇಧದ ಬಳಿಕ ಈ ದೇಶದಲ್ಲಿ ಯಾರದಾದರೂ ಆದಾಯ ಹೆಚ್ಚಾಗಿದ್ದರೆ ಅದು ಅಂಬಾನಿ ಮತ್ತು ಅದಾನಿಯದ್ದು ಮಾತ್ರ ಎಂಬ ಮಾತನ್ನು ಸಾಬೀತುಪಡಿಸುವುದಕ್ಕೆ ಈ ದೇಶದಲ್ಲಿ ಸಾವಿರಾರು ಉದಾಹರಣೆಗಳಿವೆ. ನೋಟು ನಿಷೇಧದ ಬಳಿಕ ವ್ಯಾಪಾರಿಗಳು ಬದುಕಿ ಉಳಿಯುವುದಕ್ಕಾಗಿ ಬ್ಯಾಂಕ್ ಮತ್ತು ಫೈನಾನ್ಸ್ಗಳಿಂದ ಸಾಲ ಎತ್ತಿಕೊಂಡರು. ಇನ್ನೇನು ತಮ್ಮ ವ್ಯಾಪಾರ ಚಿಗುರೊಡೆಯುತ್ತಿದೆ ಎಂಬಂತಾದಾಗ ಕೊರೋನಾ ವಕ್ಕರಿಸಿತು. 2020ರಿಂದ 22ರ ನಡುವೆ ಎರಡು ಬಾರಿ ಕೊರೋನಾ ಮಾಡಿದ ದಾಳಿಯು ಸಾಲ ಪಡಕೊಂಡವರ ಮುಂದೆ ಬರೀ ಕತ್ತಲೆಯನ್ನಷ್ಟೇ ತೆರೆದಿಟ್ಟಿತು. ಅಲ್ಲದೇ, ಸಾಲ ಪಡಕೊಂಡವರಿಗೆ ಬಡ್ಡಿ ಮನ್ನಾ, ಸಾಲ ಮರುಪಾವತಿಗೆ ಕನಿಷ್ಠ ಎರಡು ಆರ್ಥಿಕ ವರ್ಷದ ಕಾಲಾವಕಾಶ ಇತ್ಯಾದಿ ರಿಯಾಯಿತಿಗಳನ್ನು ರಿಸರ್ವ್ ಬ್ಯಾಂಕ್ ನೀಡಲಿಲ್ಲ. ಒಂದು ಕಡೆ,

ಪಡೆದ ಸಾಲದ ಮರುಪಾವತಿಯ ಚಿಂತೆ, ಇನ್ನೊಂದು ಕಡೆ ನೋಟು ನಿಷೇಧ ಮತ್ತು ಕೊರೋನಾ ದಾಳಿಯಿಂದ ಇನ್ನೂ ಚೇತರಿಸಿಕೊಳ್ಳದ ತನ್ನ ಉದ್ಯಮ- ಇವುಗಳು ಮತ್ತೆ ಮತ್ತೆ ಕಾಡುತ್ತಾ ಸಾಲಗಾರ ರನ್ನು ಖಿನ್ನತೆಗೆ ದೂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಇದರ ಜೊತೆಗೇ ಪ್ರೇಮ ವೈಫಲ್ಯ ಮತ್ತು ಮದ್ಯಪಾನ ಚಟಗಳು ಕೂಡ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಉಡುಪಿಯ 73 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 27 ಕೇಂದ್ರಗಳಿಗೆ ಖಾಸಗಿ ಆಸ್ಪತ್ರೆಯ ಮನೋರೋಗ ತಜ್ಞರು ನಿಯಮಿತವಾಗಿ ಭೇಟಿ ಕೊಟ್ಟು ಕೌನ್ಸೆಲಿಂಗ್ ನಡೆಸುತ್ತಿದ್ದಾರೆ ಎಂಬ ವರದಿಯೂ ಬಂದಿದೆ. ಈ ವರದಿಯೇ ಜನರ ಸದ್ಯದ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ. ಹೆಚ್ಚೆಚ್ಚು ಜನರು ಖಿನ್ನತೆಯಂಥ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆ ಖಿನ್ನತೆಯ ಹಿಂದೆ ದುರಂತ ಕತೆಗಳಿರುತ್ತವೆ. ಸಾಲ ಮಾಡಿ ಉದ್ಯಮ ಪ್ರಾರಂಭಿಸಿ ಅದು ಕೈ ಕೊಟ್ಟಾಗ ಮದ್ಯವ್ಯಸನಕ್ಕೆ ತುತ್ತಾಗಿ ತನ್ನ ಸಹಿತ ತನ್ನ ಕುಟುಂಬದ ನೆಮ್ಮದಿಯನ್ನು ಕೆಡಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ನಮಗೆ ಅವರ ಕುಡಿತವಷ್ಟೇ ಬಾಹ್ಯನೋಟಕ್ಕೆ ಕಾಣಿಸುತ್ತದೆ. ಆ ನೋಟದ ಆಧಾರದಲ್ಲಿ ನಾವು ಅವರ ಬಗ್ಗೆ ಕೆಟ್ಟ ಷರಾ ಬರೆದು ನಿರ್ಲಕ್ಷ್ಯ ಮಾಡುತ್ತೇವೆ.

ಆದರೆ, ಅವರ ಮದ್ಯಪಾನದ ಹಿಂದೆ ಸರ್ಕಾರದ ಕೆಟ್ಟ ಆಡಳಿತ ನೀತಿಗೂ ಪಾತ್ರ ಇರುತ್ತದೆ. ಆದ್ದರಿಂದ ಆತ್ಮಹತ್ಯೆ ಮಾಡುವ ಮತ್ತು ಮದ್ಯ ಸೇವಿಸುವವರನ್ನು ಬಾಹ್ಯನೋಟದ ಆಚೆಗೆ ವಿಶ್ಲೇಷಣೆಗೆ ಒಳಪಡಿಸಬೇಕು. ಆತ್ಮಹತ್ಯೆ ಪರಿಹಾರ ಅಲ್ಲದಿರಬಹುದು. ಆದರೆ ಅದನ್ನು ಅವರಿಗೆ ಅನಿವಾರ್ಯಗೊಳಿಸಿದವರು ಕಟಕಟೆಯಲ್ಲಿ ನಿಲ್ಲುವಂತೆ ಮಾಡಬೇಕು. ಅಧಿಕಾರದಲ್ಲಿರುವವರ ಮೇಲೆ ಅದರ ಜವಾಬ್ದಾರಿಯನ್ನು ಹೊರಿಸಿ, ಜನರು ಪಾಠ ಕಲಿಸಬೇಕು.

ಮುಸ್ಲಿಮರೇ, ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ

 



ಪ್ರವಾದಿ(ಸ)ಯವರನ್ನು ನಿಂದಿಸುವ ಮೂಲಕ ಮುಸ್ಲಿಮ್ ಸಮುದಾಯದ ಭಾವನೆಗೆ ಧಕ್ಕೆ ತಂದ ಬಿಜೆಪಿ ಮುಖಂಡರಾದ ನೂಪುರ್ ಶರ್ಮಾ ಮತ್ತು ಜಿಂದಾಲ್‌ರನ್ನು ಈವರೆಗೂ ಬಂಧಿಸಿಲ್ಲ. ಅವರ ಮನೆ ಮೇಲೆ ಬುಲ್ಡೋಜರ್ ಹರಿಸಲಾಗಿಲ್ಲ. ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ ಕೊಟ್ಟವರು ಮತ್ತು ದ್ವೇಷ ಭಾಷಣ ಮಾಡಿದವರ ಮನೆ ಮೇಲೆ ಬುಲ್ಡೋಜರ್ ಹರಿದಿಲ್ಲ. ಹಿಜಾಬ್ ವಿವಾದದ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ಕಲ್ಲೆಸೆದ ವಿದ್ಯಾರ್ಥಿಗಳ ಮನೆಯನ್ನೂ ಧ್ವಂಸಗೊಳಿಸಲಾಗಿಲ್ಲ. 2018ರ ಕೊನೆಯಲ್ಲಿ ಕೇರಳದಲ್ಲಿ 7 ಹರತಾಳ ಮತ್ತು ಒಂದು ರಾಜ್ಯ ಬಂದ್ ಕೂಡ ನಡೆಯಿತು. ಇದಕ್ಕೆ ಕಾರಣ, ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪು. ‘ಪ್ರಾಯ ಮಿತಿಯಿಲ್ಲದೇ ಎಲ್ಲ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಬಹುದು’ ಎಂದು ಅದು ತೀರ್ಪಿತ್ತಿತ್ತು. ಈ ತೀರ್ಪನ್ನು ಇವತ್ತು ಬುಲ್ಡೋಜರನ್ನು ಸಮರ್ಥಿಸುತ್ತಿರುವ ಇದೇ ಬಿಜೆಪಿ ಮತ್ತು ಸಂಘಪರಿವಾರ ತೀವ್ರವಾಗಿ ವಿರೋಧಿಸಿತ್ತು ಮತ್ತು ಹರತಾಳ ಮತ್ತು ಬಂದ್‌ಗಳನ್ನೂ ನಡೆಸಿತ್ತು. ಈ ಪ್ರತಿಭಟನೆಯಲ್ಲಿ 100ರಷ್ಟು ಸರ್ಕಾರಿ ಬಸ್‌ಗಳಿಗೆ ಹಾನಿಯಾಯಿತು. ಸರ್ಕಾರಿ ಕಚೇರಿ ಮತ್ತು ಲೈಬ್ರರಿಗಳು ಹಾನಿಗೊಂಡವು. 3000ದಷ್ಟು ಮಂದಿಯನ್ನು ಬಂಧಿಸಲಾಯಿತು. 500ಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾದುವು. 144 ಸೆಕ್ಷನ್ ಜಾರಿಗೊಳಿಸಲಾಯಿತು. ಆದರೆ, ಇವರಾರ ಮನೆಯ ಮೇಲೂ ಬುಲ್ಡೋಜರ್ ಹರಿದಿಲ್ಲ ಮತ್ತು ಬಿಜೆಪಿಯಾಗಲಿ ಸಂಘಪರಿವಾರವಾಗಲಿ, ಬುಲ್ಡೋಜರ್ ಹರಿಸುವಂತೆ ಆಗ್ರಹಿಸಿಯೂ ಇಲ್ಲ.

ಆದರೆ ಪ್ರವಾದಿ ನಿಂದನೆಯಿಂದ ಪ್ರಚೋದನೆಗೊಂಡು ಬೀದಿಗಿಳಿದ ಉತ್ತರ ಪ್ರದೇಶದ ಮುಸ್ಲಿಮರ ಮನೆಯನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಾಗುತ್ತಿದೆ. ಇದಕ್ಕಿಂತ ತಿಂಗಳ ಮೊದಲು ದೆಹಲಿಯಲ್ಲೂ ಇಂಥದ್ದೇ ಕ್ರೌರ್ಯ ಎಸಗಲಾಗಿತ್ತು. ಮುಸ್ಲಿಮ್ ಬಾಹುಳ್ಯದ ಪ್ರದೇಶದ ಮೇಲೆ ಬಿಜೆಪಿ ಆಡಳಿತದ ನಗರ ಪಾಲಿಕೆ ಬುಲ್ಡೋಜರ್ ಹರಿಸಿತ್ತು. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶಕ್ಕೂ ಈ ಕ್ರೌರ್ಯ ವಿಸ್ತರಿಸಿತ್ತು. ಅಷ್ಟಕ್ಕೂ,

ಹಿಂಸಾತ್ಮಕ ಪ್ರತಿಭಟನೆಯನ್ನು ತೋರಿಸಿ ಬುಲ್ಡೋಜರನ್ನು ಸಮರ್ಥಿಸುವವರು, ಶಾಲೆಗೆ ಕಲ್ಲೆಸೆದು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿದವರ ಮನೆಯನ್ನೂ ಧ್ವಂಸಗೊಳಿಸುವಂತೆ ಆಗ್ರಹಿಸಬೇಕಿತ್ತಲ್ಲ? ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ತೀರ್ಪನ್ನು ವಿರೋಧಿಸಿ ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾದವರ ಮನೆಯನ್ನೂ ಧ್ವಂಸಗೊಳಿಸಲು ಆಗ್ರಹಿಸಬೇಕಿತ್ತಲ್ಲ? ಅಂದರೆ,

ಇಲ್ಲಿನ ಉದ್ದೇಶ ಸ್ಪಷ್ಟ. ಈ ಬುಲ್ಡೋಜರ್ ಮುಸ್ಲಿಮರ ವಿರುದ್ಧ ಮಾತ್ರ ಹರಿಯುತ್ತದೆ. ಮಾತ್ರವಲ್ಲ, ಬಿಜೆಪಿ ಸರ್ಕಾರದ ವಿರುದ್ಧ ಯಾರೆಲ್ಲ ಮಾತಾಡುತ್ತಾರೋ ಮತ್ತು ಹೋರಾಡುತ್ತಾರೋ ಅವರನ್ನೇ ಈ ಬುಲ್ಡೋಜರ್ ಗುರಿಯಾಗಿಸಿಕೊಳ್ಳುತ್ತದೆ. ಇದಕ್ಕೆ ಉದಾಹರಣೆ,

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಜಾವೇದ್ ಅಹ್ಮದ್. ಇವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸ್ಥಳೀಯ ಮುಖಂಡರು. ಅದಕ್ಕಿಂತಲೂ ಮುಖ್ಯವಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಈಗಿನ ಚುನಾಯಿತ ಸದಸ್ಯೆ ಮತ್ತು ಅಲಿಘಡ್ ಮುಸ್ಲಿಮ್ ಮಹಿಳಾ ಯುನಿವರ್ಸಿಟಿಯ ಮಾಜಿ ಅಧ್ಯಕ್ಷೆ ಅಫ್ರೀನ್ ಫಾತಿಮಾರ ತಂದೆ. ಎನ್‌ಆರ್‌ಸಿ ಹೋರಾಟದಲ್ಲಿ ಈ ಅಫ್ರೀನ್ ಫಾತಿಮಾ, ಅವರ ತಂದೆ, ತಾಯಿ ಮತ್ತು ಸಹೋದರಿ ಸಕ್ರಿಯವಾಗಿ ಭಾಗವಹಿಸಿದ್ದರು. ಅನೇಕ ವೇದಿಕೆಗಳಲ್ಲಿ ಈ ಅಫ್ರೀನ್ ಫಾತಿಮಾ ಮಾತಾಡಿದ್ದರು. ಇದೀಗ ಇವರ ಮನೆಯನ್ನು ಬುಲ್ಡೋಜರ್ ಹರಿಸಿ ಧ್ವಂಸ ಮಾಡಲಾಗಿದೆ. ಈ ಧ್ವಂಸಕ್ಕಿಂತ ಒಂದು ದಿನ ಮೊದಲು ಪ್ರತಿಭಟನೆಯ ನೆಪದಲ್ಲಿ ಅಫ್ರೀನ್‌ರ ತಂದೆ, ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿತ್ತು. ಈ ಮನೆ ಅಕ್ರಮ ಎಂಬುದು ಬುಲ್ಡೋಜರ್ ಹರಿಸಿದವರ ಸಮರ್ಥನೆ. ಆದರೆ ಈ ಸಮರ್ಥನೆ ಪರಮ ಸುಳ್ಳು ಅನ್ನುವುದಕ್ಕೆ ಅವರ ಬಂಧನ ಮತ್ತು ಮರುದಿನದ ಬುಲ್ಡೋಜರೇ ಅತ್ಯುತ್ತಮ ಪುರಾವೆ. ಒಂದುವೇಳೆ ಆ ಮನೆ ಅಕ್ರಮವೇ ಆಗಿದ್ದರೆ ಇಷ್ಟು ಸಮಯ ತಡ ಮಾಡಿದ್ದೇಕೆ? ರಾತ್ರಿ ಹಗಲಾಗುವುದರ ನಡುವೆ ಆ ತಾರಸಿ ಮನೆಯನ್ನು ಕಟ್ಟಲು ಸಾಧ್ಯವೇ? ಕಳೆದ 25 ವರ್ಷಗಳಿಂದ ನಾವು ಆ ಮನೆಗೆ ತೆರಿಗೆ ಕಟ್ಟುತ್ತಿದ್ದೇವೆ ಎಂದು ಅಫ್ರೀನ್ ಫಾತಿಮಾ ಹೇಳಿದ್ದಾರೆ. ಕಟ್ಟಡ ಅಕ್ರಮ ವೆಂದಾದರೆ ತೆರಿಗೆ ಸಕ್ರಮ ಹೇಗಾಗುತ್ತದೆ? ಕಳೆದ 25 ವರ್ಷಗಳಿಂದ ಸರ್ಕಾರ ಯಾವ ಆಧಾರದಲ್ಲಿ ತೆರಿಗೆ ಸ್ವೀಕರಿಸಿದೆ? ಆ ತೆರಿಗೆಯೇ ಆ ಮನೆ ಸಕ್ರಮ ಎಂಬುದಕ್ಕೆ ಪುರಾವೆ ಅಲ್ಲವೇ? ಒಂದುವೇಳೆ ಅಕ್ರಮವೇ ಆಗಿದ್ದರೆ, 25 ವರ್ಷಗಳಿಂದ ತೆರಿಗೆ ಸ್ವೀಕರಿಸಿದ ಮತ್ತು ಆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕಿತ್ತಲ್ಲವೇ? ನಿಜವಾಗಿ,

ಪ್ರಭುತ್ವ ಜನಾಂಗ ವಿರೋಧಿಯಾದರೆ ಏನಾಗಬಹುದು ಎಂಬುದರ ಸೂಚನೆ ಇದು. ಜನಾಂಗ ವಿರೋಧಿ ಸರ್ಕಾರವು ಯಾವುದೇ ಪ್ರಕರಣವನ್ನು ಎರಡು ರೀತಿಯಾಗಿ ವಿಭಜಿಸುತ್ತದೆ. ಅವರದು ಮತ್ತು ನಮ್ಮದು. ನಮ್ಮದು ಸಹ್ಯ ಮತ್ತು ಅವರದು ಅಸಹ್ಯ ಎಂದು ಮರು ವಿಂಗಡನೆಯನ್ನೂ ಮಾಡುತ್ತದೆ. ಉತ್ತರ ಪ್ರದೇಶದ ಬುಲ್ಡೋಜರ್‌ನ ಹಿಂದಿರುವುದು ಇದೇ ಲೆಕ್ಕಾಚಾರ. ಅಂದಹಾಗೆ,

ಮುಸ್ಲಿಮರು ಹೀಗೇಕೆ ಎಂಬ ಪ್ರಶ್ನೆಯು ಪ್ರವಾದಿ ನಿಂದನೆಯನ್ನು ಖಂಡಿಸಿ ಮುಸ್ಲಿಮರು ನಡೆಸಿದ ಪ್ರತಿಭಟನೆಯ ಬಳಿಕ ಹುಟ್ಟಿಕೊಂಡಿದೆ. ಈ ಪ್ರಶ್ನೆ ಕುಚೋದ್ಯದ್ದಲ್ಲ, ನಿರ್ಲಕ್ಷಿಸಬೇಕಾದದ್ದೂ ಅಲ್ಲ. ಪ್ರತಿಭಟನೆ ಪ್ರತಿಯೋರ್ವರ ಹಕ್ಕು ಎಂದು ಹೇಳುವಾಗ, ಕಾನೂನು ಪಾ ಲಿಸಬೇಕಾದುದು ಪ್ರತಿಯೋ ರ್ವನ ಕರ್ತವ್ಯ ಎಂದೂ ಹೇಳಬೇಕಾಗುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳ ನಡುವೆ ಹೊಂದಾಣಿಕೆ ಆಗ ದಿದ್ದರೆ ಏನಾಗಬಹುದು ಎಂಬುದಕ್ಕೆ ಪ್ರವಾದಿ ನಿಂದನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯೇ ಸಾಕ್ಷಿ. ಈ ಪ್ರತಿಭಟನೆಗೆ ಯಾರು ಕರೆ ಕೊಟ್ಟಿದ್ದಾರೆ ಎಂಬುದೇ ಸ್ಪಷ್ಟವಿಲ್ಲ. ಆದರೆ ಈ ಪ್ರತಿಭಟನೆಯಲ್ಲಿ ಎಸೆಯಲಾದ ಕಲ್ಲು ದೇಶದಾದ್ಯಂತ ಚರ್ಚೆಗೊಳಗಾಗಿದೆ. ಮುಸ್ಲಿಮರು ಹಿಂಸಾಪ್ರಿಯರು ಎಂದು ಮುದ್ರೆಯೊತ್ತಲು ಕಾದಿರುವವರಿಗೆ ಬೇಕಾದ ಪುರಾವೆಗಳನ್ನು ಸ್ವತಃ ಮುಸ್ಲಿಮರೇ ಚಿನ್ನದ ತಟ್ಟೆಯಲ್ಲಿಟ್ಟು ಕೊಟ್ಟು ಬಿಟ್ಟಿದ್ದಾರೆ. ಈ ಪ್ರತಿಭಟನೆಗಿಂತ ಮೊದಲು ಸುಮಾರು 17 ರಾಷ್ಟ್ರಗಳು ಭಾರತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದುವು. ನೂಪುರ್ ಮತ್ತು ಜಿಂದಾಲ್‌ರಿಂದಾಗಿ ಪ್ರಭುತ್ವ ತೀವ್ರ ಮುಜುಗರವನ್ನು ಎದುರಿಸುತ್ತಿತ್ತು.

ಆದರೆ ಮುಸ್ಲಿಮರು ನಡೆಸಿದ ಪ್ರತಿಭಟನೆ ಸರ್ಕಾರವನ್ನು ಮುಜುಗರಿಂದ ಪಾರು ಮಾಡಿತು. ಮುಸ್ಲಿಮರು ಪ್ರತಿಭಟನೆ ನಡೆಸಬೇಕು ಎಂದು ಬಯಸುವ ಪ್ರಭುತ್ವ ಇವತ್ತು ಅಧಿಕಾರದಲ್ಲಿದೆ ಮತ್ತು ಮುಸ್ಲಿಮರ ಪ್ರತಿಭಟನೆಯನ್ನು ಹೇಗೆ ಹಿಂದೂ ವಿರೋಧಿ ಮತ್ತು ದೇಶವಿರೋಧಿಯಾಗಿ ಚಿತ್ರಿಸಬೇಕೆಂದೂ ಅದಕ್ಕೆ ಗೊತ್ತಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಮರ ಪ್ರತಿ ಹೆಜ್ಜೆಯೂ ಲೆಕ್ಕಾಚಾರದ್ದಾಗಿರಬೇಕು. ಪ್ರತಿಭಟನೆ ಮಾಡಲೇಬೇಕೆಂದಿದ್ದರೆ ಆ ಪ್ರತಿಭಟನೆಯನ್ನು ಸಮಾಜದ್ರೋಹಿಗಳು ಕೈವಶ ಮಾಡಿಕೊಳ್ಳದಂತೆ ಸರ್ವ ಪೂರ್ವ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು. ಪ್ರತಿಭಟನೆಯನ್ನು ಆಯೋಜಿಸುವಷ್ಟೇ ಆ ಪ್ರತಿಭಟನೆ ಹೇಗೆ ಅಂತ್ಯಗೊಳ್ಳುತ್ತದೆ ಎಂಬುದೂ ಮುಖ್ಯ. ಮಾಧ್ಯಮಗಳ ಕ್ಯಾಮರಾಗಳು ದೇಶಪ್ರೇಮಿ ಘೋಷಣೆ, ನ್ಯಾಯಯುತ ಹಕ್ಕುಗಳ ಬೇಡಿಕೆಯತ್ತ ತಿರುಗುವುದಿಲ್ಲ. ಎಲ್ಲಿ ಕಾನೂನು ವಿರೋಧಿ ಕೃತ್ಯಗಳಾಗುತ್ತೆ ಎಂಬುದನ್ನು ಹುಡುಕುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಪ್ರತಿಭಟನೆಗಿಳಿದವರು ಮೈಯೆಲ್ಲ ಕಣ್ಣಾಗಿರಬೇಕಾದುದು ತೀರಾ ಅಗತ್ಯ. ಯಾವ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗುವ ವರ್ತನೆ ಖಂಡನಾರ್ಹ.

ಪ್ರವಾದಿ ನಿಂದನೆಯನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆಯು ಮುಸ್ಲಿಮರ ಪರ ಅನುಕಂಪದ ಬದಲು ಅಸಮಾಧಾನವನ್ನು ಹೆಚ್ಚಿಸಿದೆ. ಈ ವಿಷಯದಲ್ಲಿ ಮುಸ್ಲಿಮರ ಪರ ಧ್ವನಿಯೆತ್ತುತ್ತಿದ್ದವರ ಧ್ವನಿಯನ್ನೂ ಮೌನವಾಗಿಸಿದೆ. ಇದು ಮುಸ್ಲಿಮ್ ಸಮುದಾಯದ ಸ್ವಯಂಕೃತಾ ಪರಾಧ. ಕಾನೂನನ್ನು ಪಾಲಿಸದ ಯಾವ ಸಮುದಾಯವೂ ಸಾರ್ವಜನಿಕರಿಂದಾಗಲಿ, ನ್ಯಾಯಾಂಗದಿಂದಾಗಲಿ ಅಥವಾ ನ್ಯಾಯದ ಪರ ಧ್ವನಿಯೆತ್ತುವ ಮನುಷ್ಯ ಪ್ರೇಮಿಗಳಿಂದಾಗಲಿ ಬೆಂಬಲ ಗಿಟ್ಟಿಸಲು ಸಾಧ್ಯವಿಲ್ಲ. ಅನ್ಯಾಯವನ್ನು ಪ್ರಶ್ನಿಸುವುದಕ್ಕೆ ನ್ಯಾಯಯುತವಾದ ಮಾರ್ಗವನ್ನೇ ಆಯ್ದುಕೊಳ್ಳಬೇಕು. ಪ್ರವಾದಿ ನಿಂದನೆಗೆ ಸಂಬಂಧಿಸಿದ ಪ್ರತಿಭಟನೆಯಿಂದ ಮುಸ್ಲಿಮರಿಗೆ ಏನು ದಕ್ಕಿದೆ ಎಂದು ಅವಲೋಕಿಸಿದರೆ, ಲಾಠಿ ಏಟು, ಜೀವ ಹಾನಿ, ಜೈಲು, ಆಸ್ತಿ-ಪಾಸ್ತಿ ನಷ್ಟ ಇತ್ಯಾದಿಗಳು ಮಾತ್ರ. ಜೈಲಲ್ಲಿರಬೇಕಾಗಿದ್ದು ನೂಪುರ್ ಶರ್ಮ ಮತ್ತು ಜಿಂದಾಲ್. ಆದರೆ, ಇವತ್ತು ಮುಸ್ಲಿಮರು ಜೈಲಲ್ಲಿದ್ದಾರೆ. ಲಾಠಿಯೇಟಿಗೆ ಗುರಿಯಾಗಿದ್ದಾರೆ. ಆದರೆ, ಜೈಲಲ್ಲಿರಬೇಕಾದವರು ಹೊರಗಡೆಯಿದ್ದಾರೆ. ಇದಕ್ಕೆ ಪ್ರಭುತ್ವವನ್ನಷ್ಟೇ ದೂರಿ ಪ್ರಯೋಜನವಿಲ್ಲ. ಮುಸ್ಲಿಮರ ಪಾಲೂ ಇದರಲ್ಲಿದೆ. ತಮ್ಮ ಮಾತು, ವರ್ತನೆಗಳಿಂದ ಈ ದೇಶದ ಜನರ ಹೃದಯದಲ್ಲಿ ಜಾಗ ಗಿಟ್ಟಿಸಿಕೊಳ್ಳಬೇಕಿದ್ದ ಮುಸ್ಲಿಮರು, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಅಪಾಯಕಾರಿ. ಇದು ಬದಲಾಗಲಿ.

ಧರ್ಮ ದಂಗಲ್ ಎನ್ನುತ್ತಾ ರಂಗಭೂಮಿಗೆ ಕನ್ನ ಕೊರೆದ ಟಿವಿ ಚಾನೆಲ್ ಗಳು

 



ಮುಸ್ಲಿಮರನ್ನೇ ಕೇಂದ್ರೀಕರಿಸಿ ‘ಧರ್ಮ ದಂಗಲ್’ ಎಂಬಂಥ  ಪ್ರಚೋದಕ ಶೀರ್ಷಿಕೆಗಳನ್ನು ಕೊಟ್ಟು ಟಿ.ವಿ. ಚಾನೆಲ್‌ಗಳು ನಡೆಸುತ್ತಿದ್ದ  ಚರ್ಚೆಯಿಂದ ರೋಮಾಂಚನಗೊಂಡವರಂತೆ  ವರ್ತಿಸುತ್ತಿದ್ದವರ ಮಾತಿನ ವರಸೆ ಬದಲಾಗುತ್ತಿದೆ.

`ರಾತ್ರಿ 10ರಿಂದ ಮುಂಜಾನೆ 6ರ ವರೆಗೆ ಮೈಕ್ ಬಳಸಬಾರದು ಎಂಬ ಸುಪ್ರೀಮ್ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಿ...'  ಎಂದು ಒತ್ತಾಯಿಸಿ ಅಭಿಯಾನ ನಡೆಸಿದವರ ಧ್ವನಿ ತಗ್ಗಿದೆ. ಮೌನವಾಗಿದ್ದವರಿಗೆ ಧ್ವನಿ ಬಂದಿದೆ. ಯಕ್ಷಗಾನ ಕ್ಷೇತ್ರದ ಕಲಾವಿದರು ಮೈಕ್  ನಿಷೇಧದಿಂದಾಗುವ ಪರಿಣಾಮಗಳ ಬಗ್ಗೆ ಮೊದಲ ಬಾರಿ ಮಾತಾನಾಡಿದ್ದಾರೆ. ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ  ಚಂದ್ರಶೇಖರ ಮುಂಡಾಜೆ, ವಿಶ್ವನಾಥ ನಾಯಕ್ ಕಾರಿಂಜೆ ಮುಂತಾದವರು ಮೈಕ್ ನಿಷೇಧಕ್ಕೆ ಅಸಮಾಧಾನವನ್ನು ಮಾಧ್ಯಮಗಳ  ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಸಂಜೆ 6ರಿಂದ ಬೆಳಿಗ್ಗೆ 6ರ ವರೆಗೆ ನಡೆಯುವ ಸಂಪ್ರದಾಯವಿದ್ದು, ಇದು  ಬಹುತೇಕ ಮೈಕನ್ನೇ ಅವಲಂಬಿಸಿದೆ. ಮೈಕ್ ಇಲ್ಲದ ಯಕ್ಷಗಾನವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲದ ಕಾರಣ, ನಿಯಮದಿಂದ  ಯಕ್ಷಗಾನಕ್ಕೆ ವಿನಾಯಿತಿ ನೀಡಬೇಕು ಎಂದು ಪಟ್ಲ ಸತೀಶ್ ಶೆಟ್ಟಿ ಸರ್ಕಾರವನ್ನು ಕೋರಿದ್ದಾರೆ. ಹಾಗಂತ,

ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಮೈಕ್ ಬಳಕೆಯನ್ನು ನಿರ್ಬಂಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದ್ದು ದಿಢೀರ್ ಆಗಿ ಅಲ್ಲ.

ಮೈಕನ್ನು ಕೇಂದ್ರೀಕರಿಸಿ ಚರ್ಚೆ ನಡೆಯುವುದಕ್ಕಿಂತ ಮರ‍್ನಾಲ್ಕು ತಿಂಗಳುಗಳ ಮೊದಲೇ ರಾಜ್ಯದಲ್ಲಿ ಮುಸ್ಲಿಮರನ್ನು ಗುರಿ ಮಾಡಿ  ಚರ್ಚೆ ಪ್ರಾರಂಭವಾಗಿತ್ತು. ಮುಸ್ಲಿಮ್ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್ ಈ ಚರ್ಚೆಗೆ ಮುನ್ನುಡಿ ಬರೆಯಿತು. ಈ ಚರ್ಚೆಯನ್ನು ಎಷ್ಟು ಏಕಮುಖ ಗೊಳಿಸಲಾಯಿತೆಂದರೆ, ಬಿಂದಿ, ಕಾಲುಂಗುರ, ರುದ್ರಾಕ್ಷಿ ಮಾಲೆ, ನಾಮ, ಸಿಕ್ಖರ ಟರ್ಬನ್... ಎಲ್ಲವನ್ನೂ ಸಂಸ್ಕೃತಿಯ  ಹೆಸರಲ್ಲಿ ಸಮರ್ಥಿಸುತ್ತಾ, ಹಿಜಾಬನ್ನು ಮಾತ್ರ ಧಾರ್ಮಿಕ ಉಡುಪು ಎಂದು ವಿಭಜಿಸಲಾಯಿತು. ಹಿಜಾಬ್‌ಧಾರಿ ವಿದ್ಯಾರ್ಥಿನಿಯರನ್ನು ಇದೇ ಮೊದಲ ಬಾರಿ ನೋಡುವಂತೆ ಮಾಧ್ಯಮ ಕ್ಯಾಮರಾಗಳು ಬೆರಗಿನಿಂದ ಸೆರೆ ಹಿಡಿದುವು. ಆವರೆಗೆ ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತು ಪಾಠ ಕೇಳಲು ಅನುಮತಿಯಿತ್ತಿದ್ದ ಕಾಲೇಜುಗಳೇ ಹಿಜಾಬ್ ವಿರೋಧಿ ಅಬ್ಬರಕ್ಕೆ ಮಣಿದು ಅನುಮತಿ ನಿರಾಕರಿಸಿದುವು. ಸರ್ಕಾರವೇ ತನ್ನ ಈ ಹಿಂದಿನ ಸುತ್ತೋಲೆಯನ್ನು ತಿದ್ದಿ ಹೊಸ ಸುತ್ತೋಲೆಯನ್ನು ಹೊರಡಿಸಿತು.  ಹಿಜಾಬ್‌ನ ವಿರುದ್ಧ ಕೇಸರಿ ಶಾಲು ರಂಗಪ್ರವೇಶಿಸಿತು. ನಿಜವಾಗಿ,

ಹಿಜಾಬ್ ಎಂಬುದು ವಿದ್ಯಾರ್ಥಿನಿಯರು ಮತ್ತು ಶಾಲಾಡಳಿತದ ನಡುವಿನ ವಿಷಯವೇ ಹೊರತು ಹಿಂದೂಗಳು ಮತ್ತು  ಮುಸ್ಲಿಮರ ನಡುವಿನದ್ದಲ್ಲ. ಆದರೆ, ಸಚಿವರು, ಆಳುವ ಪಕ್ಷದ ಜನಪ್ರತಿನಿಧಿಗಳು ಮತ್ತು ಮಾಧ್ಯಮಗಳು ಇಡೀ ವಿಷಯವನ್ನು ಹಿಂದೂ- ಮುಸ್ಲಿಮ್ ಆಗಿ ಪರಿವರ್ತಿಸಿದುವು. ಸರ್ಕಾರ ಹೈಕೋರ್ಟ್ನಲ್ಲಿ ಹಿಜಾಬ್‌ನ ವಿರುದ್ಧ ವಾದಿಸಿತು. ವಿದ್ಯಾರ್ಥಿನಿಯರ  ಶಿಕ್ಷಣ ಮೊಟಕುಗೊಳ್ಳದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಾದ ಸರಕಾರವು ಅಚ್ಚರಿಯೆಂಬಂತೆ  ಅದಕ್ಕೆ ವಿರುದ್ಧವಾಗಿ ವರ್ತಿಸಿತು.  ಗೇಟು ಹಾಕಿ ವಿದ್ಯಾರ್ಥಿನಿಯರು ಕ್ಯಾಂಪಸ್ ಪ್ರವೇಶಿಸದಂತೆ ತಡೆಯುವುದಕ್ಕೆ ತಾನೇ ನೇತೃತ್ವ ನೀಡಿತು. ಮುಸ್ಲಿಮರನ್ನು ಖಳರಂತೆ,  ಕರ್ಮಠರಂತೆ, ಮತ್ತು ಹಿಂದೂ ವಿರೋಧಿಗಳಂತೆ ಬಿಂಬಿಸುವ ಶ್ರಮ ಸರ್ಕಾರದಿಂದ ಹಿಡಿದು ಮಾಧ್ಯಮಗಳ ವರೆಗೆ ಬಿರುಸಾಗಿ  ನಡೆಯಿತು. ಇದರ ಬೆನ್ನಿಗೇ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹೇರುವ ಕೂಗು ಕೇಳಿ ಬಂತು. ಜಾತ್ರೆಗಳಲ್ಲಿ ಮುಸ್ಲಿಮ್ ವರ್ತಕರು  ಅಂಗಡಿ ಇಡುವಂತಿಲ್ಲ ಎಂಬುದನ್ನು ಘಂಟಾಘೋಷವಾಗಿ ಸಾರಲಾಯಿತು. ಸಚಿವರೇ ಇಂಥ ಪ್ರಕ್ರಿಯೆಯನ್ನು ಕಾನೂನಿನ ನೆಪದಲ್ಲಿ  ಸಮರ್ಥಿಸಿದರು. ದೇವಾಲಯದ ಸಮೀಪ ಕಲ್ಲಂಗಡಿ ಇಟ್ಟಿದ್ದ ನಬಿಸಾಬ್ ಎಂಬ ವಯೋವೃದ್ಧನ ಕಲ್ಲಂಗಡಿ ಹಣ್ಣುಗಳನ್ನು ನೆಲಕ್ಕೆ  ಚೆಲ್ಲಲಾಯಿತು. ಆ ಬಳಿಕ ಹಲಾಲ್ ಆಹಾರದ ಬಗ್ಗೆ ಚರ್ಚೆ ಶುರುವಾಯಿತು. ಹಲಾಲ್‌ಗೆ ವಿರುದ್ಧವಾಗಿ ಜಟ್ಕಾ ಕಟ್ ಅನ್ನು ಮುನ್ನೆಲೆಗೆ  ತರಲಾಯಿತು. ಜಟ್ಕಾ ಕಟ್ ಅಂಗಡಿಗಳು ತೆರೆದುವು. ಹಲಾಲ್ ಪದ್ಧತಿಯನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ, ಅದರ ಸುತ್ತ ಹಲವು ಕಲ್ಪಿತ ಕತೆಗಳನ್ನು ಹುಟ್ಟು ಹಾಕಿ ಸಮಾಜವನ್ನು ಹಿಂದೂ ಮುಸ್ಲಿಮ್ ಆಗಿ ಒಡೆಯುವ ಪ್ರಯತ್ನ ನಡೆಯಿತು. ಹಲಾಲ್  ಮಾಂಸೋದ್ಯಮದಿಂದ  ಬರುವ ಹಣವು ಭಯೋತ್ಪಾದನೆಗೆ ಬಳಕೆಯಾಗುತ್ತಿದೆ ಎಂಬ ವದಂತಿಯನ್ನು ಹಬ್ಬಲಾಯಿತು. ಇದರ  ಜೊತೆಜೊತೆಗೇ ಮುಸ್ಲಿಮ್ ವ್ಯಾಪಾರಿಗಳಿಗೆ ಮಾವು ಮಾರಬೇಡಿ, ಕುರಿ, ಆಡುಗಳನ್ನು ಮಾರಬೇಡಿ ಎಂದೆಲ್ಲಾ ಕರೆ ಕೊಡಲಾಯಿತು.  ಇದೇವೇಳೆ,
`ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಖರೀದಿಸುವವರು ಹಿಂದೂಗಳ ಮಳಿಗೆಗಳನ್ನೇ  ಆಯ್ಕೆ ಮಾಡಿಕೊಳ್ಳಿ' ಎಂಬ ಪ್ರಚಾರವೂ  ನಡೆಯಿತು. ಆ ಬಳಿಕದ್ದೇ  ಮೈಕ್ ಚರ್ಚೆ.

ಮೈಕ್ ಬಳಕೆಯ ಬಗ್ಗೆ ಸುಪ್ರೀಮ್ ತೀರ್ಪನ್ನು ಎತ್ತಿಕೊಂಡು ಇಲ್ಲಿನ ಮಾಧ್ಯಮಗಳು ಮತ್ತು ಕೆಲವು ಹರಕು ಬಾಯಿಗಳು ಎಷ್ಟು ಪಕ್ಷಪಾತಿತನದಿಂದ ಚರ್ಚೆ ಹುಟ್ಟು ಹಾಕಿದುವೆಂದರೆ, ಈ ರಾಜ್ಯದಲ್ಲಿ ಮುಸ್ಲಿಮರು ಮಾತ್ರ ಮೈಕ್ ಬಳಸುತ್ತಿದ್ದಾರೆ ಎಂದೇ ನಂಬುವಷ್ಟು.  ಸುಪ್ರೀಮ್ ತೀರ್ಪಿನಂತೆ ಸರ್ಕಾರ ನಡೆದುಕೊಂಡರೆ ಮುಂಜಾನೆಯ ಅಝಾನ್ ಸ್ಥಗಿತಗೊಳ್ಳುತ್ತದೆ ಎಂಬ ವಾದವನ್ನು ತೇಲಿಬಿಟ್ಟು ಟಿ.ವಿ.  ಆ್ಯಂಕರ್‌ಗಳು ಜನಸಾಮಾನ್ಯರನ್ನು ರೋಮಾಂಚಿತಗೊಳಿಸಿದರು. ಸರ್ಕಾರದ ಹೊಣೆಗಾರರು ಪರೋಕ್ಷವಾಗಿ ಇದಕ್ಕೆ ದನಿಗೂಡಿಸಿದರು.  ರಾಜ್ಯದಲ್ಲಿ ಎಷ್ಟೆಷ್ಟು ಮಸೀದಿಗಳಿವೆ ಮತ್ತು ಅವುಗಳಲ್ಲಿ ಎಷ್ಟೆಷ್ಟು ಮೈಕ್‌ಗಳಿವೆ ಎಂಬಲ್ಲಿಂದ ತೊಡಗಿ ಅಝಾನ್‌ನಿಂದಾಗುವ ಮಾನಸಿಕ  ಕಿರಿಕಿರಿ, ನಿದ್ರಾಭಂಗಗಳ ವರೆಗೆ ಚರ್ಚೆ ರಸವತ್ತಾಗಿ ನಡೆಯತೊಡಗಿತು. ಅಷ್ಟಕ್ಕೂ,

ಸುಪ್ರೀಮ್‌ನ ಆದೇಶದಲ್ಲಿ ಮಸೀದಿಯ ಮೈಕ್‌ಗಳು ಎಂಬ ಉಲ್ಲೇಖವೇ ಇರಲಿಲ್ಲ. ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಯಾವ  ಮೈಕ್‌ಗಳೂ ಮಾತಾಡಬಾರದು ಎಂದಷ್ಟೇ ಸುಪ್ರೀಮ್ ಹೇಳಿದೆ. ಆದ್ದರಿಂದ ಮೈಕ್ ಕುರಿತಾದ ಯಾವುದೇ ಚರ್ಚೆ ಮತ್ತು ಹೇಳಿಕೆಯು,  ಮೈಕ್ ಬಳಸಿ ಮಾಡಲಾಗುವ ಯಕ್ಷಗಾನ, ರಸಮಂಜರಿ, ಜಾತ್ರೆ, ಕೋಲ, ಉರೂಸ್, ಮೆಹಂದಿ, ಗಣಪತಿ ಮೆಂಡಾಲ್, ಅಯ್ಯಪ್ಪ ಭಜನೆ,  ಸುಪ್ರಭಾತ... ಇತ್ಯಾದಿಗಳನ್ನು ಒಳಗೊಂಡದ್ದಾಗಿರಬೇಕಿತ್ತೇ ಹೊರತು ಅಝಾನ್ ಕೇಂದ್ರಿತವಾಗಿ ಅಲ್ಲ. ಆದರೆ ಚರ್ಚೆ ನಡೆದದ್ದು ಕೇವಲ  ಅಝಾನ್ ಸುತ್ತ ಮಾತ್ರ. `ಮಸೀದಿಯಿಂದ ಮೈಕ್‌ಗಳನ್ನು ಕಿತ್ತು ಹಾಕುತ್ತೇವೆ, ಮುಂಜಾನೆಯ ಅಝಾನ್ ವೇಳೆ ಮೈಕ್‌ನಲ್ಲಿ ಭಜನೆ  ಹಾಕುತ್ತೇವೆ, ಹನುಮಾನ್ ಚಾಲೀಸ ಪಠಿಸುತ್ತೇವೆ...' ಎಂಬಂಥ  ಪ್ರಚೋದಕ ಮಾತುಗಳ ಭರಾಟೆಯಲ್ಲಿ ನಿಜಕ್ಕೂ ಮೈಕ್ ನಿಷೇಧದಿಂದ  ಆಗುವ ಒಟ್ಟು ಸಾಮಾಜಿಕ ಸಮಸ್ಯೆಗಳು ಸಾರ್ವಜನಿಕರ ಗಮನಕ್ಕೇ ಬಾರದಂತೆ ನೋಡಿಕೊಳ್ಳಲಾಯಿತು. ಪ್ರತಿಯೊಂದನ್ನೂ ಹಿಂದೂ- ಮುಸ್ಲಿಮ್ ಆಗಿ ವಿಭಜಿಸುವುದು ಮತ್ತು ಆ ಮುಖಾಂತರ ರಾಜಕೀಯ ಲಾಭವನ್ನು ಕೊಯ್ಯುವುದು- ಎಂಬ ತಂತ್ರಕ್ಕೆ ಸುಪ್ರೀಮ್ ತೀ ರ್ಪನ್ನು ಬಳಸಿಕೊಳ್ಳಲಾಯಿತು. ಸರ್ಕಾರ ಮೈಕ್ ನಿಷೇಧಿಸಿ ಸುತ್ತೋಲೆಯನ್ನು ಹೊರಡಿಸಿತು. ಇದೀಗ,

ಸಾರ್ವಜನಿಕ ಭ್ರಮೆ ಕಳಚತೊಡಗಿದೆ. ಮೈಕ್ ನಿಷೇಧದಿಂದಾಗಿ ಮುಸ್ಲಿಮರು ಕಳಕೊಳ್ಳುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನದನ್ನು  ಯಕ್ಷಗಾನ, ಕೋಲ, ಜಾತ್ರೆ, ರಸಮಂಜರಿ, ಅಯ್ಯಪ್ಪ, ಗಣಪತಿ... ಇತ್ಯಾದಿಗಳಿಗಾಗಿ ಕಳಕೊಳ್ಳಬೇಕಾಗುತ್ತದೆ ಎಂಬ ಅರಿವು ಸಾಮಾನ್ಯ  ನಾಗರಿಕರಿಗೆ ಆಗತೊಡಗಿದೆ. ಮುಸ್ಲಿಮರು ಹೆಚ್ಚೆಂದರೆ, ಒಂದೂವರೆ ನಿಮಿಷದ ಅಝಾನನ್ನಷ್ಟೇ ಕಳಕೊಳ್ಳಬಲ್ಲರು. ಆದರೆ, ಮೈಕ್  ಬಳಸದೆಯೇ ಯಕ್ಷಗಾನ, ಕೋಲ, ಜಾತ್ರೆ, ಸುಪ್ರಭಾತ ಇತ್ಯಾದಿಗಳು ನಡೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಆಯಾ ಕ್ಷೇತ್ರದವರೇ  ಕೇಳತೊಡಗಿದ್ದಾರೆ. ನಿಜವಾಗಿ,

ಪ್ರಭುತ್ವ ಮತ್ತು ಮಾದ್ಯಮ ಹುಟ್ಟು ಹಾಕಿದ ಮುಸ್ಲಿಮ್ ದ್ವೇಷದಿಂದಾದ ಪರಿಣಾಮ ಇದು. ಧರ್ಮದ ಆಧಾರದಲ್ಲಿ ಪೋಷಿಸಿ ಬೆಳೆಸುವ  ದ್ವೇಷ ಎಷ್ಟು ಅಪಾಯಕಾರಿ ಎಂದರೆ, ಅದು ಕಣ್ಣಿದ್ದೂ ಕುರುಡಾಗಿರುತ್ತದೆ. ಕಿವಿಯಿದ್ದೂ ಕಿವುಡಾಗಿರುತ್ತದೆ ಮತ್ತು ಹೃದಯದ ಭಾಷೆಯನ್ನೇ ಮರೆತಿರುತ್ತದೆ. ಹಿಜಾಬ್‌ನಿಂದ ಮೈಕ್‌ವರೆಗಿನ ಬೆಳವಣಿಗೆ ಇದನ್ನೇ ಸ್ಪಷ್ಟಪಡಿಸುತ್ತಿದೆ.