ಇವತ್ತು, ಫೇಸ್ಬುಕ್, ವ್ಯಾಟ್ಸಪ್, ಟ್ವೀಟರ್.. ಮುಂತಾದ ಎಲ್ಲೆಡೆಯೂ ಗಾಝಾ ತುಂಬಿಕೊಂಡಿದೆ. ಇಸ್ರೇಲ್ನ ಕ್ರೌರ್ಯ ಮತ್ತು ಗಾಝಾದ ಮಂದಿಯ ಪ್ರತಿರೋಧದ ಹಿನ್ನೆಲೆ, ಇತಿಹಾಸಗಳುಳ್ಳ ಧಾರಾಳ ಬರಹಗಳು ಈ ಜಾಲ ತಾಣಗಳಲ್ಲಿ ಪ್ರಕಟವೂ ಆಗುತ್ತಿವೆ. ಇನ್ನೊಂದೆಡೆ, ರಮಝಾನ್ ವಿದಾಯ ಹೇಳುತ್ತಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಉಪವಾಸಿಗರ ಮುಖದಲ್ಲಿ ಗಾಢ ವಿಷಾದ, ನೋವು ವ್ಯಕ್ತವಾಗುತ್ತಿದೆ. ದುರ್ಬಲ ಸಮೂಹವೊಂದರ ಮೇಲೆ ಬರ್ಬರ ದಾಳಿಯನ್ನು ಪ್ರಾರ್ಥನೆಯ ವಿನಃ ಖಂಡಿಸಲು ಸಾಧ್ಯವಿಲ್ಲದ ಅಸಹಾಯಕ ಸ್ಥಿತಿಯೊಂದು ನಿರ್ಮಾಣವಾಗಿಬಿಟ್ಟಿದೆ. ಇಂಥ ಸ್ಥಿತಿಯಲ್ಲಿ, ಭಾವುಕತೆಯಿಂದಲ್ಲದೇ ರಮಝಾನ್ಗೆ ಖುಷಿಯಿಂದ ವಿದಾಯ ಕೋರಲು ಸಾಧ್ಯವಿಲ್ಲ. ಒಂದು ತಿಂಗಳ ಕಾಲ ರಮಝಾನ್ ಕೊಟ್ಟ ತರಬೇತಿಯನ್ನು ಹೃದಯವೆಂಬ ಚೀಲದಲ್ಲಿ ಭದ್ರವಾಗಿಟ್ಟುಕೊಳ್ಳುವ ಮತ್ತು ಎಂದೆಂದೂ ಆ ಚೀಲದ ಕಟ್ಟು ಸಡಿಲಗೊಳ್ಳದಂತೆ ಹಾಗೂ ಕೆಡುಕುಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವ ಖಾತರಿಯನ್ನು ನೀಡುವ ಮೂಲಕ ನಾವು ರಮಝಾನ್ಗೆ ವಿದಾಯ ಕೋರಬೇಕಾಗಿದೆ. ಆ ‘ಚೀಲ'ದೊಳಗೆ ಐಯಲ್ ಇಫ್ರಚ್ಗೂ ಮುಹಮ್ಮದ್ ಬಕರ್ಗೂ ಸಮಾನ ಪ್ರೀತಿಯಿದೆ. ರಾಶೆಲ್ ಫ್ರಾಂಕೆಲ್ಗೂ ರವಿೂಝ್ ಬಕರ್ಗೂ ಸಮಾನ ಸಾಂತ್ವನವಿದೆ. ಜಗತ್ತಿನ ಎಲ್ಲ ಮರ್ದಿತರಿಗೂ ವಿಜಯದ ಸುವಾರ್ತೆಯಿದೆ. ನಮ್ಮ ಈದುಲ್ ಫಿತ್ರ್ ಅನ್ನು ಗಿಲಾದ್ ಶಾರ್, ನಫ್ತಲಿ ಫ್ರಾಂಕೆಲ್, ಝಕರಿಯ ಬಕರ್, ಅಹದ್ ಬಕರ್ರಂಥ ಮುದ್ದು ಮಕ್ಕಳಿಗೆ; ನೋವುಂಡ ಮತ್ತು ಸಾವಿಗೀಡಾದ ಜನರಿಗೆ ಪ್ರೀತಿಯಿಂದ ಅರ್ಪಿಸೋಣ. ನಮ್ಮ ಹಬ್ಬದಲ್ಲಿ ಅವರ ನೋವುಗಳಿರಲಿ, ಭಾವುಕ ಪ್ರಾರ್ಥನೆಯಿರಲಿ.
Monday, 21 July 2014
ನಮ್ಮ ಹಬ್ಬದಲ್ಲಿ ಅವರ ನೋವುಗಳಿರಲಿ
ಇವತ್ತು, ಫೇಸ್ಬುಕ್, ವ್ಯಾಟ್ಸಪ್, ಟ್ವೀಟರ್.. ಮುಂತಾದ ಎಲ್ಲೆಡೆಯೂ ಗಾಝಾ ತುಂಬಿಕೊಂಡಿದೆ. ಇಸ್ರೇಲ್ನ ಕ್ರೌರ್ಯ ಮತ್ತು ಗಾಝಾದ ಮಂದಿಯ ಪ್ರತಿರೋಧದ ಹಿನ್ನೆಲೆ, ಇತಿಹಾಸಗಳುಳ್ಳ ಧಾರಾಳ ಬರಹಗಳು ಈ ಜಾಲ ತಾಣಗಳಲ್ಲಿ ಪ್ರಕಟವೂ ಆಗುತ್ತಿವೆ. ಇನ್ನೊಂದೆಡೆ, ರಮಝಾನ್ ವಿದಾಯ ಹೇಳುತ್ತಿದೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಉಪವಾಸಿಗರ ಮುಖದಲ್ಲಿ ಗಾಢ ವಿಷಾದ, ನೋವು ವ್ಯಕ್ತವಾಗುತ್ತಿದೆ. ದುರ್ಬಲ ಸಮೂಹವೊಂದರ ಮೇಲೆ ಬರ್ಬರ ದಾಳಿಯನ್ನು ಪ್ರಾರ್ಥನೆಯ ವಿನಃ ಖಂಡಿಸಲು ಸಾಧ್ಯವಿಲ್ಲದ ಅಸಹಾಯಕ ಸ್ಥಿತಿಯೊಂದು ನಿರ್ಮಾಣವಾಗಿಬಿಟ್ಟಿದೆ. ಇಂಥ ಸ್ಥಿತಿಯಲ್ಲಿ, ಭಾವುಕತೆಯಿಂದಲ್ಲದೇ ರಮಝಾನ್ಗೆ ಖುಷಿಯಿಂದ ವಿದಾಯ ಕೋರಲು ಸಾಧ್ಯವಿಲ್ಲ. ಒಂದು ತಿಂಗಳ ಕಾಲ ರಮಝಾನ್ ಕೊಟ್ಟ ತರಬೇತಿಯನ್ನು ಹೃದಯವೆಂಬ ಚೀಲದಲ್ಲಿ ಭದ್ರವಾಗಿಟ್ಟುಕೊಳ್ಳುವ ಮತ್ತು ಎಂದೆಂದೂ ಆ ಚೀಲದ ಕಟ್ಟು ಸಡಿಲಗೊಳ್ಳದಂತೆ ಹಾಗೂ ಕೆಡುಕುಗಳು ಒಳ ಪ್ರವೇಶಿಸದಂತೆ ನೋಡಿಕೊಳ್ಳುವ ಖಾತರಿಯನ್ನು ನೀಡುವ ಮೂಲಕ ನಾವು ರಮಝಾನ್ಗೆ ವಿದಾಯ ಕೋರಬೇಕಾಗಿದೆ. ಆ ‘ಚೀಲ'ದೊಳಗೆ ಐಯಲ್ ಇಫ್ರಚ್ಗೂ ಮುಹಮ್ಮದ್ ಬಕರ್ಗೂ ಸಮಾನ ಪ್ರೀತಿಯಿದೆ. ರಾಶೆಲ್ ಫ್ರಾಂಕೆಲ್ಗೂ ರವಿೂಝ್ ಬಕರ್ಗೂ ಸಮಾನ ಸಾಂತ್ವನವಿದೆ. ಜಗತ್ತಿನ ಎಲ್ಲ ಮರ್ದಿತರಿಗೂ ವಿಜಯದ ಸುವಾರ್ತೆಯಿದೆ. ನಮ್ಮ ಈದುಲ್ ಫಿತ್ರ್ ಅನ್ನು ಗಿಲಾದ್ ಶಾರ್, ನಫ್ತಲಿ ಫ್ರಾಂಕೆಲ್, ಝಕರಿಯ ಬಕರ್, ಅಹದ್ ಬಕರ್ರಂಥ ಮುದ್ದು ಮಕ್ಕಳಿಗೆ; ನೋವುಂಡ ಮತ್ತು ಸಾವಿಗೀಡಾದ ಜನರಿಗೆ ಪ್ರೀತಿಯಿಂದ ಅರ್ಪಿಸೋಣ. ನಮ್ಮ ಹಬ್ಬದಲ್ಲಿ ಅವರ ನೋವುಗಳಿರಲಿ, ಭಾವುಕ ಪ್ರಾರ್ಥನೆಯಿರಲಿ.
Subscribe to:
Post Comments (Atom)
No comments:
Post a Comment